newsfirstkannada.com

RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!

Share :

Published September 4, 2024 at 8:57am

    ಮೆಗಾ ಹರಾಜಿನಲ್ಲಿ ಕೋಟಿ ಶೂರರಾದರೂ ಅಚ್ಚರಿ ಇಲ್ಲ

    ಜಾಕ್​ಪಾಟ್​ ನಿರೀಕ್ಷೆಯಲ್ಲಿ ಕನ್ನಡಿಗರು, ಅದೃಷ್ಟ ಯಾರಿಗೆ?

    ಬ್ಯಾಟಿಂಗ್​​-ಬೌಲಿಂಗ್​ನಲ್ಲಿ ಇವರದ್ದೇ ದರ್ಬಾರ್​​​.. ಹೆಂಗಿದೆ?

ಐಪಿಎಲ್​ ಮೆಗಾ ಆಕ್ಷನ್​​​​ಗೆ ಹೆಚ್ಚೇನು ತಿಂಗಳು ಬಾಕಿ ಉಳಿದಿಲ್ಲ. ಈಗಾಗಲೇ ಗೆಲ್ಲೋ ಕುದುರೆಗಳಿಗೆ ಗಾಳ ಹಾಕಲು ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಮುಂಬರೋ ಹರಾಜಿನಲ್ಲಿ ಕನ್ನಡಿಗರೇ ಹಾಟ್ ಪಿಕ್​​ ಆಗಲಿದ್ದಾರೆ. ಅದಕ್ಕೆ ಕಾರಣ ಮಹಾರಾಜ ಟಿ20 ಟೂರ್ನಿ.

ಮಹಾರಾಜ ಟ್ರೋಫಿಯಲ್ಲಿ ರನ್ ಧಮಾಕ..!
ಮಹಾರಾಜ ಟ್ರೋಫಿ ಅಂತ್ಯ ಕಂಡಿದೆ. ಮೈಸೂರು ವಾರಿಯರ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಟೂರ್ನಿಯಲ್ಲಿ ಕೆಲ ಆಟಗಾರರು ಮಾತ್ರ, ಐಪಿಎಲ್​ ಫ್ರಾಂಚೈಸಿಗಳ ಮನ ಗೆದ್ದಿದ್ದಾರೆ. ಟೂರ್ನಿಯುದ್ದಕ್ಕೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್​ ನೀಡಿರುವ ಇವರು, ವರ್ಷಾಂತ್ಯದಲ್ಲಿ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:Me Too ಕೇಸ್​ನಲ್ಲಿ ಪ್ರೇಮಂ ನಟ ನಿವಿನ್ ಪೌಲಿ; 40 ವರ್ಷದ ಮಹಿಳೆಯಿಂದ ಗಂಭೀರ ಆರೋಪ

ಅನ್​ಸೋಲ್ಡ್​ ಕರುಣ್​ಗೆ ಈ ಸಲ ಜಾಕ್​​​​ಪಾಟ್​
ಮೈಸೂರು ವಾರಿಯರ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕರುಣ್​ ನಾಯರ್, ಮಹಾರಾಜ ಟೂರ್ನಿಯಲ್ಲಿ ಆಕ್ಷರಶಃ ನೆಕ್ಸ್ಟ್​ ಲೆವೆಲ್ ಆಟವಾಡಿದ್ರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದ ಕರುಣ್, ಮೈಸೂರಿಗೆ ಮಹಾರಾಜ ಪಟ್ಟ ತೊಡಿಸುವಲ್ಲಿ ನಿಜಕ್ಕೂ ಪ್ರಮುಖ ಪಾತ್ರವನ್ನೇ ವಹಿಸಿದ್ದರು.

ಮಹಾರಾಜ ಟೂರ್ನಿಯಲ್ಲಿ ಕರುಣ್ ನಾಯರ್
12 ಪಂದ್ಯಗಳನ್ನಾಡಿದ ಕರುಣ್, 56ರ ಸರಾಸರಿಯಲ್ಲಿ ಬರೋಬ್ಬರಿ 560 ರನ್ ಕೊಳ್ಳೆ ಹೊಡೆದರು. 5 ಅರ್ಧಶತಕ, 1 ಶತಕ ಸಿಡಿಸಿದ್ದ ನಾಯರ್, 181.22ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಮಿಡಲ್ ಆರ್ಡರ್​ನ ಬಲವಾಗಿರುವ ಕರುಣ್​​​​​​​​ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಹೀಗಾಗಿ ಕಳೆದ ಬಾರಿ ಅನ್​ಸೋಲ್ಡ್​ ಆಗಿದ್ದ ಕರುಣ್, ಈ ಸಲ ಬಿಗ್ ಅಮೌಂಟ್​​ಗೆ ಸೇಲ್ ಆಗೋದು ಶತಸಿದ್ಧ..

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ಬಿಗ್​​ ಹಿಟ್ಟರ್​​ ಮನೋಹರ್​​​​ಗೆ ಅದೃಷ್ಟ ಖುಲಾಯಿಸುತ್ತಾ?
ಮಹಾರಾಜದಲ್ಲಿ ನಿಜಕ್ಕೂ ಅಭಿನವ್ ಮನೋಹರ್​ನ ಮನಮೋಹಕ ಆಟ ಕಣ್ಣಿಗೆ ಹಬ್ಬವೇ ಆಗಿತ್ತು. ಸಿಕ್ಸರ್​ಗಳ ಬೋರ್ಗರೆತದಿಂದ ಸದ್ದು ಮಾಡಿದ ಮನೋಹರ್, ತಾನೆಂತ ಬಿಗ್ ಹಿಟ್ಟರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಮಹಾರಾಜ ಟೂರ್ನಿಯಲ್ಲಿ ಅಭಿನವ್​
10 ಪಂದ್ಯಗಳನ್ನಾಡಿದ ಮನೋಹರ್​, 507 ರನ್ ಸಿಡಿಸಿದ್ದಾರೆ. 6 ಅರ್ಧಶತಕ ಬಾರಿಸಿರುವ ಅಭಿನವ್, 196.51ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈತನ ಸ್ಫೋಟಕ ಬ್ಯಾಟಿಂಗ್​ನಿಂದಲೇ ಫ್ರಾಂಚೈಸಿಗಳ ದಿಲ್ ಗೆದ್ದಿರುವ ಮನೋಹರ್​​ಗೆ, ಗುಜರಾತ್ ಟೈಟನ್ಸ್​​​ ತಂಡದಲ್ಲೇ ಉಳಿಸಿಕೊಂಡರು ಅಚ್ಚರಿ ಇಲ್ಲ. ಅಕಸ್ಮಾತ್​ ಕೈಬಿಟ್ಟರೆ ಕೋಟಿ ಕೋಟಿ ಜೇಬಿಗಿಳಿಸಿಕೊಳ್ಳೋದು ಪಕ್ಕಾ.

12 ಮ್ಯಾಚ್.. 292 ರನ್​..
ಮನೋಜ್ ಬಾಂಡಗೆ, ಮೈಸೂರು ವಾರಿಯರ್ಸ್ ತಂಡದ ದಿ ರಿಯಲ್ ವಾರಿಯರ್ಸ್​.. ಮೈಸೂರಿಗೆ ಮಹಾರಾಜ ಒಲಿಯಲು ಈತನೇ ಪ್ರಮುಖ ಕಾರಣ. ಈತನ ಕ್ಲೀನ್ ಹಿಟ್​ ಬ್ಯಾಟಿಂಗ್​ಗೆ ಮಾರು ಹೋಗುವ ಕ್ರಿಕೆಟ್ ಅಭಿಮಾನಿಗಳಿಲ್ಲ. ಮನೋಜ್ ಭಾಂಡಗೆಯ ವಿನಾಶಕಾರಿಯ ಬ್ಯಾಟಿಂಗ್ ಹಂಗಿತ್ತು. 12 ಪಂದ್ಯಗಳಿಂದ 292 ರನ್ ಸಿಡಿಸಿದ್ದ ಬಾಂಡಗೆ, ಬೌಲಿಂಗ್​ನಲ್ಲೂ 8 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಮೆಗಾ ಹರಾಜಿಗೆ ಬಂದ್ರೆ ಧೂಳೆಬ್ಬಿಸೋದು ಪಕ್ಕಾ.

ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

ಲವಿಶ್‌ ಕೌಶಲ್‌, ಎಲ್​.ಆರ್​.ಕುಮಾರ್​ಗೆ ಬಂಪರ್ ಫಿಕ್ಸ್
ಮಹಾರಾಜ ಲೀಗ್​ನಲ್ಲಿ ಕರಾರುವಾಕ್​ ಬೌಲಿಂಗ್​ನಿಂದ ಗಮನ ಸೆಳೆದ ಆಟಗಾರರ ಅಂದ್ರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಎಡಗೈ ವೇಗಿ ಲವಿಶ್ ಕೌಶಲ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಎಲ್​​.ಆರ್.ಕುಮಾರ್​. ಬೆಂಗಳೂರು ಬ್ಲಾಸ್ಟರ್ಸ್ ಪರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದ ಲವಿಶ್ ಕೌಶಲ್, 10 ಪಂದ್ಯಗಳಿಂದ 16 ವಿಕೆಟ್ ಪಡೆದ್ರೆ, 7.92ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಹುಬ್ಳಿ ಟೈಗರ್ಸ್ ತಂಡದ ವೇಗಿ ಎಲ್.ಆರ್.ಕುಮಾರ್ 9 ಪಂದ್ಯಗಳಿಂದ 17 ವಿಕೆಟ್ ಉರುಳಿಸಿ, 9.15ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.

ಆಲ್​ರೌಂಡರ್​ ಜೆ ಸುಚಿತ್​​, ಬ್ಯಾಟಿಂಗ್, ಬೌಲಿಂಗ್​​​​​​​​​, ಫೀಲ್ಡಿಂಗ್​ನಿಂದಲೂ ಗಮನ ಸೆಳೆದಿದ್ರೆ. ಸ್ವಿಂಗ್​​​, ಪೇಸ್ ಹಾಗೂ ವೇರಿಯೇಷನ್​ ಎಸೆತಗಳಿಂದ ವಿಧ್ವತ್ ಕಾವೇರಪ್ಪ ಕಮಾಲ್ ಮಾಡಿದ್ದಾರೆ. ಇವ್ರೇ ಅಲ್ಲ. ವಿಧ್ಯಾದರ್ ಪಾಟೀಲ್​ ಮಿಂಚಿನ ದಾಳಿಯನ್ನೇ ನಡೆಸಿದ್ದಾರೆ. ಈ ಯಂಗ್​ ಬೌಲರ್​​ಗಳ ಪರ್ಪಾಮೆನ್ಸ್​ ಐಪಿಎಲ್​​​ ಫ್ರಾಂಚೈಸಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಮೆಗಾ​ ಹರಾಜಿನಲ್ಲಿ ಕೋಟಿ ಶೂರರಾದರು ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!

https://newsfirstlive.com/wp-content/uploads/2024/09/KARNATAKA-PLAYERS.jpg

    ಮೆಗಾ ಹರಾಜಿನಲ್ಲಿ ಕೋಟಿ ಶೂರರಾದರೂ ಅಚ್ಚರಿ ಇಲ್ಲ

    ಜಾಕ್​ಪಾಟ್​ ನಿರೀಕ್ಷೆಯಲ್ಲಿ ಕನ್ನಡಿಗರು, ಅದೃಷ್ಟ ಯಾರಿಗೆ?

    ಬ್ಯಾಟಿಂಗ್​​-ಬೌಲಿಂಗ್​ನಲ್ಲಿ ಇವರದ್ದೇ ದರ್ಬಾರ್​​​.. ಹೆಂಗಿದೆ?

ಐಪಿಎಲ್​ ಮೆಗಾ ಆಕ್ಷನ್​​​​ಗೆ ಹೆಚ್ಚೇನು ತಿಂಗಳು ಬಾಕಿ ಉಳಿದಿಲ್ಲ. ಈಗಾಗಲೇ ಗೆಲ್ಲೋ ಕುದುರೆಗಳಿಗೆ ಗಾಳ ಹಾಕಲು ಎಲ್ಲಾ ಫ್ರಾಂಚೈಸಿಗಳು ಸಿದ್ಧತೆ ಆರಂಭಿಸಿವೆ. ಖುಷಿಯ ವಿಚಾರ ಏನಪ್ಪಾ ಅಂದ್ರೆ ಮುಂಬರೋ ಹರಾಜಿನಲ್ಲಿ ಕನ್ನಡಿಗರೇ ಹಾಟ್ ಪಿಕ್​​ ಆಗಲಿದ್ದಾರೆ. ಅದಕ್ಕೆ ಕಾರಣ ಮಹಾರಾಜ ಟಿ20 ಟೂರ್ನಿ.

ಮಹಾರಾಜ ಟ್ರೋಫಿಯಲ್ಲಿ ರನ್ ಧಮಾಕ..!
ಮಹಾರಾಜ ಟ್ರೋಫಿ ಅಂತ್ಯ ಕಂಡಿದೆ. ಮೈಸೂರು ವಾರಿಯರ್ಸ್ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೇ ಟೂರ್ನಿಯಲ್ಲಿ ಕೆಲ ಆಟಗಾರರು ಮಾತ್ರ, ಐಪಿಎಲ್​ ಫ್ರಾಂಚೈಸಿಗಳ ಮನ ಗೆದ್ದಿದ್ದಾರೆ. ಟೂರ್ನಿಯುದ್ದಕ್ಕೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್​ ನೀಡಿರುವ ಇವರು, ವರ್ಷಾಂತ್ಯದಲ್ಲಿ ಮೆಗಾ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:Me Too ಕೇಸ್​ನಲ್ಲಿ ಪ್ರೇಮಂ ನಟ ನಿವಿನ್ ಪೌಲಿ; 40 ವರ್ಷದ ಮಹಿಳೆಯಿಂದ ಗಂಭೀರ ಆರೋಪ

ಅನ್​ಸೋಲ್ಡ್​ ಕರುಣ್​ಗೆ ಈ ಸಲ ಜಾಕ್​​​​ಪಾಟ್​
ಮೈಸೂರು ವಾರಿಯರ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಕರುಣ್​ ನಾಯರ್, ಮಹಾರಾಜ ಟೂರ್ನಿಯಲ್ಲಿ ಆಕ್ಷರಶಃ ನೆಕ್ಸ್ಟ್​ ಲೆವೆಲ್ ಆಟವಾಡಿದ್ರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದ ಕರುಣ್, ಮೈಸೂರಿಗೆ ಮಹಾರಾಜ ಪಟ್ಟ ತೊಡಿಸುವಲ್ಲಿ ನಿಜಕ್ಕೂ ಪ್ರಮುಖ ಪಾತ್ರವನ್ನೇ ವಹಿಸಿದ್ದರು.

ಮಹಾರಾಜ ಟೂರ್ನಿಯಲ್ಲಿ ಕರುಣ್ ನಾಯರ್
12 ಪಂದ್ಯಗಳನ್ನಾಡಿದ ಕರುಣ್, 56ರ ಸರಾಸರಿಯಲ್ಲಿ ಬರೋಬ್ಬರಿ 560 ರನ್ ಕೊಳ್ಳೆ ಹೊಡೆದರು. 5 ಅರ್ಧಶತಕ, 1 ಶತಕ ಸಿಡಿಸಿದ್ದ ನಾಯರ್, 181.22ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಮಿಡಲ್ ಆರ್ಡರ್​ನ ಬಲವಾಗಿರುವ ಕರುಣ್​​​​​​​​ ಮೇಲೆ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಹೀಗಾಗಿ ಕಳೆದ ಬಾರಿ ಅನ್​ಸೋಲ್ಡ್​ ಆಗಿದ್ದ ಕರುಣ್, ಈ ಸಲ ಬಿಗ್ ಅಮೌಂಟ್​​ಗೆ ಸೇಲ್ ಆಗೋದು ಶತಸಿದ್ಧ..

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ಬಿಗ್​​ ಹಿಟ್ಟರ್​​ ಮನೋಹರ್​​​​ಗೆ ಅದೃಷ್ಟ ಖುಲಾಯಿಸುತ್ತಾ?
ಮಹಾರಾಜದಲ್ಲಿ ನಿಜಕ್ಕೂ ಅಭಿನವ್ ಮನೋಹರ್​ನ ಮನಮೋಹಕ ಆಟ ಕಣ್ಣಿಗೆ ಹಬ್ಬವೇ ಆಗಿತ್ತು. ಸಿಕ್ಸರ್​ಗಳ ಬೋರ್ಗರೆತದಿಂದ ಸದ್ದು ಮಾಡಿದ ಮನೋಹರ್, ತಾನೆಂತ ಬಿಗ್ ಹಿಟ್ಟರ್ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಮಹಾರಾಜ ಟೂರ್ನಿಯಲ್ಲಿ ಅಭಿನವ್​
10 ಪಂದ್ಯಗಳನ್ನಾಡಿದ ಮನೋಹರ್​, 507 ರನ್ ಸಿಡಿಸಿದ್ದಾರೆ. 6 ಅರ್ಧಶತಕ ಬಾರಿಸಿರುವ ಅಭಿನವ್, 196.51ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈತನ ಸ್ಫೋಟಕ ಬ್ಯಾಟಿಂಗ್​ನಿಂದಲೇ ಫ್ರಾಂಚೈಸಿಗಳ ದಿಲ್ ಗೆದ್ದಿರುವ ಮನೋಹರ್​​ಗೆ, ಗುಜರಾತ್ ಟೈಟನ್ಸ್​​​ ತಂಡದಲ್ಲೇ ಉಳಿಸಿಕೊಂಡರು ಅಚ್ಚರಿ ಇಲ್ಲ. ಅಕಸ್ಮಾತ್​ ಕೈಬಿಟ್ಟರೆ ಕೋಟಿ ಕೋಟಿ ಜೇಬಿಗಿಳಿಸಿಕೊಳ್ಳೋದು ಪಕ್ಕಾ.

12 ಮ್ಯಾಚ್.. 292 ರನ್​..
ಮನೋಜ್ ಬಾಂಡಗೆ, ಮೈಸೂರು ವಾರಿಯರ್ಸ್ ತಂಡದ ದಿ ರಿಯಲ್ ವಾರಿಯರ್ಸ್​.. ಮೈಸೂರಿಗೆ ಮಹಾರಾಜ ಒಲಿಯಲು ಈತನೇ ಪ್ರಮುಖ ಕಾರಣ. ಈತನ ಕ್ಲೀನ್ ಹಿಟ್​ ಬ್ಯಾಟಿಂಗ್​ಗೆ ಮಾರು ಹೋಗುವ ಕ್ರಿಕೆಟ್ ಅಭಿಮಾನಿಗಳಿಲ್ಲ. ಮನೋಜ್ ಭಾಂಡಗೆಯ ವಿನಾಶಕಾರಿಯ ಬ್ಯಾಟಿಂಗ್ ಹಂಗಿತ್ತು. 12 ಪಂದ್ಯಗಳಿಂದ 292 ರನ್ ಸಿಡಿಸಿದ್ದ ಬಾಂಡಗೆ, ಬೌಲಿಂಗ್​ನಲ್ಲೂ 8 ವಿಕೆಟ್ ಪಡೆದು ಮಿಂಚಿದ್ದರು. ಹೀಗಾಗಿ ಮೆಗಾ ಹರಾಜಿಗೆ ಬಂದ್ರೆ ಧೂಳೆಬ್ಬಿಸೋದು ಪಕ್ಕಾ.

ಇದನ್ನೂ ಓದಿ:ದ್ರಾವಿಡ್ ಪುತ್ರ ಅಂಡರ್​​-19 ತಂಡಕ್ಕೆ ಆಯ್ಕೆ; ಆದರೆ ಸಮಿತ್​ಗೆ ವಿಶ್ವಕಪ್ ಆಡಲು ಸಾಧ್ಯವಾಗುವುದಿಲ್ಲ..

ಲವಿಶ್‌ ಕೌಶಲ್‌, ಎಲ್​.ಆರ್​.ಕುಮಾರ್​ಗೆ ಬಂಪರ್ ಫಿಕ್ಸ್
ಮಹಾರಾಜ ಲೀಗ್​ನಲ್ಲಿ ಕರಾರುವಾಕ್​ ಬೌಲಿಂಗ್​ನಿಂದ ಗಮನ ಸೆಳೆದ ಆಟಗಾರರ ಅಂದ್ರೆ, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಎಡಗೈ ವೇಗಿ ಲವಿಶ್ ಕೌಶಲ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡದ ಎಲ್​​.ಆರ್.ಕುಮಾರ್​. ಬೆಂಗಳೂರು ಬ್ಲಾಸ್ಟರ್ಸ್ ಪರ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದ ಲವಿಶ್ ಕೌಶಲ್, 10 ಪಂದ್ಯಗಳಿಂದ 16 ವಿಕೆಟ್ ಪಡೆದ್ರೆ, 7.92ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ. ಹುಬ್ಳಿ ಟೈಗರ್ಸ್ ತಂಡದ ವೇಗಿ ಎಲ್.ಆರ್.ಕುಮಾರ್ 9 ಪಂದ್ಯಗಳಿಂದ 17 ವಿಕೆಟ್ ಉರುಳಿಸಿ, 9.15ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.

ಆಲ್​ರೌಂಡರ್​ ಜೆ ಸುಚಿತ್​​, ಬ್ಯಾಟಿಂಗ್, ಬೌಲಿಂಗ್​​​​​​​​​, ಫೀಲ್ಡಿಂಗ್​ನಿಂದಲೂ ಗಮನ ಸೆಳೆದಿದ್ರೆ. ಸ್ವಿಂಗ್​​​, ಪೇಸ್ ಹಾಗೂ ವೇರಿಯೇಷನ್​ ಎಸೆತಗಳಿಂದ ವಿಧ್ವತ್ ಕಾವೇರಪ್ಪ ಕಮಾಲ್ ಮಾಡಿದ್ದಾರೆ. ಇವ್ರೇ ಅಲ್ಲ. ವಿಧ್ಯಾದರ್ ಪಾಟೀಲ್​ ಮಿಂಚಿನ ದಾಳಿಯನ್ನೇ ನಡೆಸಿದ್ದಾರೆ. ಈ ಯಂಗ್​ ಬೌಲರ್​​ಗಳ ಪರ್ಪಾಮೆನ್ಸ್​ ಐಪಿಎಲ್​​​ ಫ್ರಾಂಚೈಸಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಮೆಗಾ​ ಹರಾಜಿನಲ್ಲಿ ಕೋಟಿ ಶೂರರಾದರು ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More