ನಗರದ ರಸ್ತೆಗಳು ಕಸದಿಂದ ತುಂಬಿರುವ ದ್ಯಶ್ಯಗಳಿರುವ ವಿಡಿಯೋ ವೈರಲ್
ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ
ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲ, ಅದು ಗಾರ್ಬೆಜ್ ಸಿಟಿ ಅಂತಾ ಟೀಕೆ
ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಹಾಗೂ ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಿಲಿಕಾನ್ ಸಿಟಿಯ ಸ್ವಚ್ಛತೆ ಬಗ್ಗೆ ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಮಾಡಿದ ಟ್ವೀಟ್ನಿಂದ ಉದ್ಯಾನನಗರಿ ಸ್ಮಾರ್ಟ್ ಸಿಟಿಯಲ್ಲ, ಗಾರ್ಬೇಜ್ ಸಿಟಿ ಆಗುತ್ತಿದೆಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಸದ್ಯ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ವಿಶ್ವನಾಥ್ ನಾಗರಾಜ್ ಎನ್ನುವರು ನಗರದ ಔಟರ್ ರಿಂಗ್ ರೋಡ್ ಉದ್ದಕ್ಕೂ ಬಿದ್ದಿರುವ ರಾಶಿ ರಾಶಿ ಕಸ ಇರುವಂತಹ ವಿಡಿಯೋವನ್ನು ಎಕ್ಸ್ನಲ್ಲಿ ಶೇರ್ ಮಾಡಿದ್ದರು. ಬೆಳಗ್ಗೆ ಬೆಂಗಳೂರಿನ ದೃಶ್ಯವಿದು ಎಂದು ಬರೆದು ಕಿರಣ್ ಮಜುಂದಾರ್ ಶಾ ಸೇರಿ ಇನ್ನು ಕೆಲವರಿಗೆ ಎಕ್ಸ್ ಅನ್ನು ಟ್ಯಾಗ್ ಮಾಡಿದ್ದರು. ಇದೇ ಪೋಸ್ಟ್ ಅನ್ನು ಕಿರಣ್ ಮಜುಂದಾರ್ ಶಾ ರೀ ಟ್ವೀಟ್ ಮಾಡಿದ್ದಾರೆ.
Fresh this morning in Bangalore …14th May. Right on outer ring toad @TVMohandasPai @kiranshaw @ndtv @TimesNow. Total collapse of governance@BBMPCOMM dengue outbreak guaranteed & govt / bbmp responsible pic.twitter.com/31Eni199lj
— Vishwanath Nagaraja (@Vishwa0507) May 14, 2024
ಇದನ್ನೂ ಓದಿ: ಮುಂಬೈ ಹೋರ್ಡಿಂಗ್ ಬಿದ್ದ ಕೇಸ್ಗೆ ಹೊಸ ಟ್ವಿಸ್ಟ್.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್ ಶೋ
ಕಿರಣ್ ಮಜುಂದಾರ್ ಶಾ ಅವರು, ಇದು ಅಸಹ್ಯಕರ ದೃಶ್ಯ. ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಬರೆದು ಬಿಬಿಎಂಪಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಅನ್ನು ರೀ ಟ್ವೀಟ್ ಮಾಡಿದ್ದರು. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿಬಿಎಂಪಿ ವಿರುದ್ಧ ವ್ಯಾಪಕವಾಗಿ ಕಿಡಿ ಕಾರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಗರದ ರಸ್ತೆಗಳು ಕಸದಿಂದ ತುಂಬಿರುವ ದ್ಯಶ್ಯಗಳಿರುವ ವಿಡಿಯೋ ವೈರಲ್
ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ನೆಟ್ಟಿಗರು ಭಾರೀ ಆಕ್ರೋಶ
ಬೆಂಗಳೂರು ಸ್ಮಾರ್ಟ್ ಸಿಟಿಯಲ್ಲ, ಅದು ಗಾರ್ಬೆಜ್ ಸಿಟಿ ಅಂತಾ ಟೀಕೆ
ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಹಾಗೂ ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಿಲಿಕಾನ್ ಸಿಟಿಯ ಸ್ವಚ್ಛತೆ ಬಗ್ಗೆ ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ಮಹಿಳಾ ಬಿಲಿಯನೇರ್ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಮಾಡಿದ ಟ್ವೀಟ್ನಿಂದ ಉದ್ಯಾನನಗರಿ ಸ್ಮಾರ್ಟ್ ಸಿಟಿಯಲ್ಲ, ಗಾರ್ಬೇಜ್ ಸಿಟಿ ಆಗುತ್ತಿದೆಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿವೆ. ಸದ್ಯ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ವಿಶ್ವನಾಥ್ ನಾಗರಾಜ್ ಎನ್ನುವರು ನಗರದ ಔಟರ್ ರಿಂಗ್ ರೋಡ್ ಉದ್ದಕ್ಕೂ ಬಿದ್ದಿರುವ ರಾಶಿ ರಾಶಿ ಕಸ ಇರುವಂತಹ ವಿಡಿಯೋವನ್ನು ಎಕ್ಸ್ನಲ್ಲಿ ಶೇರ್ ಮಾಡಿದ್ದರು. ಬೆಳಗ್ಗೆ ಬೆಂಗಳೂರಿನ ದೃಶ್ಯವಿದು ಎಂದು ಬರೆದು ಕಿರಣ್ ಮಜುಂದಾರ್ ಶಾ ಸೇರಿ ಇನ್ನು ಕೆಲವರಿಗೆ ಎಕ್ಸ್ ಅನ್ನು ಟ್ಯಾಗ್ ಮಾಡಿದ್ದರು. ಇದೇ ಪೋಸ್ಟ್ ಅನ್ನು ಕಿರಣ್ ಮಜುಂದಾರ್ ಶಾ ರೀ ಟ್ವೀಟ್ ಮಾಡಿದ್ದಾರೆ.
Fresh this morning in Bangalore …14th May. Right on outer ring toad @TVMohandasPai @kiranshaw @ndtv @TimesNow. Total collapse of governance@BBMPCOMM dengue outbreak guaranteed & govt / bbmp responsible pic.twitter.com/31Eni199lj
— Vishwanath Nagaraja (@Vishwa0507) May 14, 2024
ಇದನ್ನೂ ಓದಿ: ಮುಂಬೈ ಹೋರ್ಡಿಂಗ್ ಬಿದ್ದ ಕೇಸ್ಗೆ ಹೊಸ ಟ್ವಿಸ್ಟ್.. ದುರಂತದ ಸ್ಥಳದಲ್ಲಿಂದು ಮೋದಿ ರೋಡ್ ಶೋ
ಕಿರಣ್ ಮಜುಂದಾರ್ ಶಾ ಅವರು, ಇದು ಅಸಹ್ಯಕರ ದೃಶ್ಯ. ಈ ಕೊಳಕು ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಬರೆದು ಬಿಬಿಎಂಪಿ ಅಧಿಕಾರಿಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಅನ್ನು ರೀ ಟ್ವೀಟ್ ಮಾಡಿದ್ದರು. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಬಿಬಿಎಂಪಿ ವಿರುದ್ಧ ವ್ಯಾಪಕವಾಗಿ ಕಿಡಿ ಕಾರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ