/newsfirstlive-kannada/media/media_files/2025/10/21/happy-deepavali-2025-10-21-17-29-13.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ: ಕನ್ನಡಿಗನ ಕಡೆಗಣಿಸಿ ಹರ್ಷಿತ್ ರಾಣಾಗೆ ಚಾನ್ಸ್​.. ಏನಿದು ವಿವಾದ..?
ಮೇಷ
- ಕೆಲಸದ ಒತ್ತಡ ತಾಳ್ಮೆ ಪರೀಕ್ಷೆಯ ದಿನ
- ವ್ಯಾಪಾರದಲ್ಲಿ ಹಾನಿಯಾಗುವುದರಿಂದ ಪರ್ಯಾಯ ವ್ಯವಸ್ಥೆಗೆ ಚಿಂತನೆ
- ಸಂಬಂಧಿಕರಿಂದ ಹಣಕ್ಕಾಗಿ ಒತ್ತಾಯ
- ಪ್ರೇಮಿಗಳಿಗೆ ಉತ್ತಮ ದಿನ
- ಮಾನಸಿಕ ನೆಮ್ಮದಿಯಿಲ್ಲ ಜಿಗುಪ್ಸೆ
- ತಂದೆಯವರಿಂದ ಉತ್ತಮ ಸಲಹೆ ಹಣ ಸಹಾಯ ಸಿಗಲಿದೆ
- 12 ಸಲ ಅಶ್ವತ್ಥ ಪ್ರದಕ್ಷಿಣೆ ಮಾಡಿ
ವೃಷಭ
- ಹಳೆಯ ಸ್ನೇಹಿತರ ಭೇಟಿ ಉತ್ಸಾಹ
- ಹೆಚ್ಚು ವ್ಯಯ ಕುಟುಂಬದಲ್ಲಿ ಕಲಹ
- ಅನಗತ್ಯ ಕೆಲಸದಿಂದ ಸಮಯ ವ್ಯರ್ಥ ಆಗಬಹುದು
- ಅನುಮಾನದ ಸಮಯ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು
- ಜೀವನ ಶೈಲಿ ಬದಲಿಸಲು ಪ್ರಯತ್ನ ಆಗುವುದಿಲ್ಲ
- ಆಲಸ್ಯ ದೂರ ಮಾಡಿ ಆನಂದವಾಗಿರಿ
- ಕುಲದೇವತಾ ಆರಾಧನೆ ಮಾಡಿ
ಮಿಥುನ
- ಜೀವನದ ನಿರಾಸೆಗಳನ್ನು ದೂರಮಾಡಿ ಆಶಾದಾಯಕರಾಗಿರಿ
- ಆತ್ಮವಿಶ್ವಾಸ ಬೆಳೆದಷ್ಟು ಅನುಕೂಲವಿರುತ್ತದೆ
- ಆರ್ಥಿಕ ಹಿನ್ನಡೆ ಆದ್ರೂ ಸಮಾಧಾನವಿರಲಿ
- ಅಚ್ಚರಿಯ ಘಟನೆ ನಡೆಯಬಹುದು
- ವಿದ್ಯಾರ್ಥಿಗಳಿಗೆ ಅನುಕೂಲವಿದೆ - ಸಹಾಯಧನ
- ಮಕ್ಕಳ ಚಿಂತೆಯಿಂದ ಹೊರಬನ್ನಿ
- ಕಲಿಯುವ ಮಕ್ಕಳಿಗೆ ಅಧ್ಯಯನ ಸಾಮಾಗ್ರಿ ಕೊಡಿಸಿ
ಕಟಕ
- ಕ್ರೀಡಾರಂಗದಲ್ಲಿರುವವರಿಗೆ ಹೆಚ್ಚಿನ ಅನುಕೂಲ
- ರಸ್ತೆ ದಾಟುವಾಗ ವಾಹನ ಚಾಲನೆಯಲ್ಲಿ ಜಾಗ್ರತೆ ತೊಂದರೆಯಿದೆ
- ಮನೆಯ ವಾತಾವರಣ ಚೆನ್ನಾಗಿರುತ್ತದೆ
- ಮಾನಸಿಕ ದ್ವೇಷ ಅಸೂಯೆಗಳನ್ನು ದೂರಮಾಡಿ
- ಸ್ನೇಹಿತರು ಅಭಯ ನಿಮ್ಮ ಧೈರ್ಯ ಹೆಚ್ಚಿಸುತ್ತದೆ
- ಸೋದರಮಾವನ ಸಂಬಂಧದಲ್ಲಿ ಘರ್ಷಣೆಯಾಗಬಹುದು
- ದುರ್ಗಾರಾಧನೆ ಮಾಡಿ
ಸಿಂಹ
- ದೀರ್ಘಕಾಲದ ಸಮಸ್ಯೆಗೆ ಪರಿಹಾರ
- ಆರೋಗ್ಯದ ಬಗ್ಗೆ ತಾತ್ಸಾರ ಬೇಡ
- ದೂರದ ಬಂಧುಗಳು ಸ್ನೇಹಿತರು ಮನೆಗೆ ಬರಬಹುದು
- ನಿಮ್ಮ ವರ್ತನೆ ಮನೆಯವರಿಗೆ ಬೇಸರ ತರಬಹುದು
- ಕೆಲಸದ ಒತ್ತಡದಿಂದ ಕೋಪ ಉಂಟಾಗಬಹುದು
- ಮನೆ ಕೆಲಸದ ಬಗ್ಗೆ ಕಾಳಜಿ ವಹಿಸಿ ಗೌರವವಿದೆ
- ನರಸಿಂಹನನ್ನು ಆರಾಧಿಸಿ
ಕನ್ಯಾ
- ನಿಮ್ಮ ಏಕಾಗ್ರತೆಗೆ ತೊಂದರೆಯಿದೆ
- ವ್ಯಾಪಾರಕ್ಕಾಗಿ ಹಣ ಹೂಡಿಕೆ ಬೇಡ
- ನಿಮ್ಮ ಉದ್ದೇಶದ ಬಗ್ಗೆ ಮುಕ್ತವಾಗಿ ಚರ್ಚಿಸಿ
- ನಿಮ್ಮ ವೈಯಕ್ತಿಕ ಜೀವನಕ್ಕಾಗಿ ಸಮಯ ನೀಡಿ
- ಮಕ್ಕಳಿಂದ ಶುಭ ವಾರ್ತೆ ಸಂತೋಷ
- ಹಳೆಯ ನೆನಪುಗಳಿಂದ ನೋವು ಬೇಸರ ಆಗಬಹುದು
- ಆಂಜನೇಯನ ಸ್ಮರಣೆ ಮಾಡಿ
ತುಲಾ
- ನಷ್ಟವಾಗಿದ್ದ ವಸ್ತು ಹಣ ಸಿಗಬಹುದು
- ಸಾಮಾಜಿಕ ಕಾರ್ಯಕ್ರಮದಲ್ಲಿ ಸ್ಥಾನಮಾನವಿರುತ್ತದೆ
- ಹಿರಿಯರ ಗುರುಗಳ ಆಶೀರ್ವಾದ ಲಭಿಸುತ್ತದೆ
- ಪ್ರಾಣಿ ವ್ಯಾಪಾರಿಗಳಿಗೆ ಲಾಭವಿದೆ
- ಮನೆಯ ಅಲಂಕಾರಕ್ಕಾಗಿ ವಸ್ತು ಖರೀದಿಗೆ ಖರ್ಚು
- ದಿನವಿಡೀ ಶ್ರಮದಾಯಕ ಕೆಲಸದ ತೃಪ್ತಿಯಿರುತ್ತದೆ
- ಕಾರ್ತವೀಱರ್ಜುನನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಅನಗತ್ಯ ಆಲೋಚನೆಗಳಿಂದ ಮಾನಸಿಕ ಬೇಸರ
- ಯಾವ ವಿಚಾರದಲ್ಲೂ ಸರಿಯಾದ ನಿರ್ಧಾರವಿಲ್ಲ
- ಸ್ನೇಹಿತರು ಬಂಧುಗಳು ನಿಮ್ಮ ಉಪಯೋಗ ಪಡೆಯುತ್ತಾರೆ
- ಉದ್ಯೋಗದ ದೃಷ್ಟಿಯಿಂದ ಹಿನ್ನಡೆ
- ಗರ್ಭಿಣಿಯರಿಗೆ ಕಾಲುನೋವಿನಿಂದ ಸಮಸ್ಯೆಯಾಗಬಹುದು
- ಸಾಯಂಕಾಲ ಹೊತ್ತಿಗೆ ಶುಭವಾರ್ತೆ
- ಗಣಪತಿಯನ್ನು ಬಿಳೀ ಎಕ್ಕದ ಹೂವಿನಿಂದ ಪೂಜಿಸಿ
ಧನುಸ್​
- ರಸ್ತೆ ಅಪಘಾತದ ಸೂಚನೆ ಎಚ್ಚರವಹಿಸಿ
- ಈ ದಿನ ಚಿನ್ನ ಬೆಳ್ಳಿ ಹಣ ಕಳೆದುಕೊಳ್ಳಬಹುದು
- ಮನೆಯವರಲ್ಲಿ ಭಿನ್ನಾಭಿಪ್ರಾಯ ನಿಮ್ಮದೇ ಮೇಲುಗೈ
- ವಿದ್ಯಾರ್ಥಿಗಳಿಗೆ ಅನುಕೂಲವಲ್ಲದ ದಿನ
- ಸುಳ್ಳಿನಿಂದ ವಿಷಯವಾದ್ರೂ ತುಂಬಾ ಎಚ್ಚರಿಕೆ ವಹಿಸಿ
- ಮೃತ್ಯುಂಜಯನನ್ನು ಪೂಜಿಸಿ
ಮಕರ
- ವಿರೋಧಗಳಿಮದ ಸಮಸ್ಯೆ ಕಾಡಬಹುದು
- ಭೂ ಸಂಬಂಧೀ ವ್ಯವಹಾರಕ್ಕೆ ಅನುಕೂಲವಿದೆ ಸಮಾಧಾನವಿಲ್ಲ
- ಪರರ ವಸ್ತು ನಿಮ್ಮ ಕೈಯಲ್ಲಿದ್ದು ಸಮಸ್ಯೆಯಾಗಬಹುದು
- ಕಾರ್ಯ ನಿಮಿತ್ತ ಪ್ರಯಾಣ ಮಾಡುತ್ತೀರಿ
- ಮಕ್ಕಳಿಗೆ ತೊಂದರೆ ಕಾಣಬಹುದು
- ಕುಟುಂಬದಲ್ಲಿ ಆಸ್ತಿ ವಿಚಾರಕ್ಕೆ ಮಾತುಕತೆ
- ಭೂವಹಾರ ಮಂತ್ರ ಪಠನೆ ಮಾಡಿ
ಕುಂಭ
- ಆತ್ಮವಿಶ್ವಾಸದಿಂದ ನಿಮ್ಮ ಜೀವನ ಹಸನಾಗುತ್ತದೆ
- ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ನಷ್ಟ ಆಗಬಹುದು
- ನಿಮ್ಮ ಕೋಪದಿಂದ ನಿಷ್ಠೂರರಾಗುತ್ತೀರಿ
- ಹಳೆಯ ಶರೀರದ ನೋವು ಮರುಕಳಿಸಬಹುದು
- ದೂರದ ಊರಿನಿಂದ ಸಿಹಿ ಸುದ್ದಿ
- ಬಂಧುಗಳ ಭೇಟಿಯಿಂದ ಸಮಾಧಾನ
- ನವಗ್ರಹರಾಧನೆಯಿಂದ ಅನುಕೂಲ
ಮೀನ
- ಆರೋಗ್ಯದಲ್ಲಿ ಗಮನವಿರಲಿ ಆರೈಕೆ ಮಾಡಿಕೊಳ್ಳಿ
- ಉತ್ತಮ ಜ್ಞಾನ ಸಂವೇದನೆಗೆ ಅವಕಾಶ
- ಒಳ್ಳೆ ಹಾಸ್ಯ ಮಾಡುವವರಿಂದ ಆಕರ್ಷಿತರಾಗಬಹುದು
- ಕುಟುಂಬದಲ್ಲಿ ಅನಿರೀಕ್ಷಿತ ಸಮಾಚಾರವಿರುತ್ತದೆ
- ನಿಮ್ಮ ಪ್ರೀತಿ ಮಿತ್ರರು ನಿಮಗೆ ಕೈ ಕೊಡಬಹುದು
- ಇಂದು ಹಿರಿಯರನ್ನು ನಿರ್ಲಕ್ಷಿಸಬೇಡಿ
- ಉಮಾಮಹೇಶ್ವರರನ್ನು ಪ್ರಾರ್ಥಿಸಿ
ಇದನ್ನೂ ಓದಿ: ರಾಶಿಕಾ ಕಡೆಗೆ ವಾಲಿದ ರಕ್ಷಿತಾ ಶೆಟ್ಟಿ ಕಿತ್ತಾಟ.. ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಕಿಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ