ಕುಟುಂಬದಲ್ಲಿ ಪ್ರಗತಿ, ಈ ರಾಶಿಗೆ ಆರ್ಥಿಕ ಲಾಭ -ಇವತ್ತಿನ ನಿಮ್ಮ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್; ಬುರುಡೆ ಇಟ್ಕೊಂಡು ಸುಪ್ರೀಂಗೆ ಹೋಗಿದ್ದ ಫೋಟೋ ರಿವೀಲ್..!

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಶುಕ್ಲ ಪಕ್ಷ,  ನವಮಿ ತಿಥಿ, ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ. 

ಮೇಷ 


  • ರಿಯಲ್​ ಎಸ್ಟೇಟ್, ಭೂ ವ್ಯವಹಾರ ಮಾಡುವವರಿಗೆ ಈ ದಿನ ಲಾಭವಿದೆ
  • ಧಾರ್ಮಿಕ - ಆಧ್ಯಾತ್ಮ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಶುಭ
  • ಈ ದಿನ ಆರ್ಥಿಕವಾಗಿ ಕೊರತೆ ಇರುವುದಿಲ್ಲ
  • ಏಜೆಂಟ್ಸ್​ಗಳಿಗೆ ಕಮೀಷನ್ ಮೂಲಕ ಲಾಭವಾಗುವ ಸಾಧ್ಯತೆಗಳಿವೆ 
  • ಕಳ್ಳತನದ ಆಪಾದನೆ ನಿಮ್ಮ ಮೇಲೆ ಬರುವ ಸಾಧ್ಯತೆಗಳಿವೆ ಎಚ್ಚರ
  • ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ
  • ರಾಜಕೀಯ ವ್ಯಕ್ತಿಗಳು ಈ ದಿನ ಗೌಪ್ಯವಾದ ಸ್ಥಳದಲ್ಲಿ ಕಳೆಯುವ ಯೋಗವಿದೆ
  • ಉತ್ತಮವಾದ ಶಿಸ್ತನ್ನು ಬೆಳೆಸಿಕೊಂಡರೆ ಬೇರೆ ಅವಕಾಶಗಳು ಲಭಿಸುತ್ತದೆ
  • ಬೆಟ್ಟದ ಮೇಲಿರುವ ದೇವಿಗೆ ಕಾಲ್ನಡಿಗೆಯಲ್ಲಿ ಹೋಗಿ ಸೇವೆ ಮಾಡಿ 

ವೃಷಭ 

  • ಬರಬೇಕಾದ ಹಣ ಸಕಾಲದಲ್ಲಿ ಕೈ ಸೇರದೆ ತೊಂದರೆಯಾಗಬಹುದು
  • ಇವತ್ತಿನ ನಷ್ಟ ಮುಂದೆ ವ್ಯಾವಹಾರಿಕವಾಗಿ ಅನುಕೂಲವಾಗಲಿದೆ
  • ಅನಿಲ ವ್ಯಾಪಾರಿಗಳಿಗೆ​ ಸ್ವಲ್ಪ ನಷ್ಟ ಉಂಟಾಗಬಹುದು 
  • ಆರ್ಥಿಕವಾದ ಮುಗ್ಗಟ್ಟು ತುಂಬಾ ಕಾಡಬಹುದು
  • ಇಂದು ಕೆಲಸದಲ್ಲಿ ವ್ಯತ್ಯಯ ಆಗಲಿದೆ 
  • ಕೆಲಸದ ಬದಲಾವಣೆ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಕೈಬಿಡಿ
  • ಈ ದಿನ ಮನಸ್ಸನ್ನು ಸ್ಥಿಮಿತವಾಗಿಟ್ಟುಕೊಳ್ಳಿ 
  • ಮುಂದಿನ ದಿನಗಳಲ್ಲಿ ಲಾಭದ ಸೂಚನೆಗಳಿರುತ್ತವೆ 
  • ಮೇಲಾಧಿಕಾರಿಗಳಿಂದ ಸಿಗುವ ಮಾರ್ಗದರ್ಶನದಿಂದ ನಷ್ಟವನ್ನು ಭರಿಸಬಹುದು
  • ಶನಿಶಾಂತಿಯನ್ನು ಮಾಡಿಸಿ

ಮಿಥುನ  

  • ಕಾರ್ಯದೊತ್ತಡ ಬದಿಗಿಟ್ಟು ಈ ದಿನ ಆನಂದವಾಗಿರುತ್ತೀರಿ
  • ತಾಯಿಗೆ ಅನಾರೋಗ್ಯ ಕಾಡಬಹುದು ಎಚ್ಚರಿಕೆವಹಿಸಿ
  • ಈ ದಿನ ಹಣವನ್ನು ಮಿತವಾಗಿ ಖರ್ಚು ಮಾಡಿ
  • ಇಂದು ಅವಿವಾಹಿತರಿಗೆ ಶುಭ ಸುದ್ದಿ
  • ಭೂ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ
  • ಹಣ ನಿರ್ವಹಣೆಯನ್ನು ನೀವು ಚೆನ್ನಾಗಿ ನಿರ್ವಹಿಸುತ್ತೀರಿ ಶುಭಫಲ
  • ಪಶುಸಂಗೋಪನೆ ಮಾಡುವವರಿಗೆ ಒಳ್ಳೆಯ ದಿನ
  • ಒಡಹುಟ್ಟಿದವರಿಗೆ ಸಹಾಯವನ್ನು ಮಾಡುವ ಯೋಗ ನಿಮ್ಮದಾಗುತ್ತದೆ
  • ಹಳೆಯ ಹೂಡಿಕೆಯ ಬಗ್ಗೆ ಹೆಚ್ಚು ಚಿಂತನೆ ಮಾಡಿದರೆ ಅನುಕೂಲವಾಗುತ್ತದೆ
  • ಗಾಯಿತ್ರಿದೇವಿಯನ್ನು ಆರಾಧಿಸಿ

ಕಟಕ 

  • ಎಲೆಕ್ಟ್ರಿಕಲ್​ ಮತ್ತು ವಾಹನ ರಿಪೇರಿ ಮಾಡುವವರಿಗೆ ಧನಲಾಭ 
  • ಬ್ಯಾಂಕ್​, ಫೈನಾನ್ಸ್ ಕೆಲಸ ಮಾಡುವವರಿಗೆ ತುಂಬಾ ಕಿರಿಕಿರಿ ಉಂಟಾಗುವ ದಿನ
  • ಹಣದ ಮತ್ತು ವ್ಯಾವಹಾರಿಕ ಲೆಕ್ಕಾಚಾರದಿಂದ ಒದ್ದಾಡಬೇಕಾಗುವ ಪರಿಸ್ಥಿತಿ
  • ಇಂದು ಪರೀಕ್ಷಾ ಸ್ಪರ್ಧಿಗಳಿಗೆ ಶುಭದಿನ
  • ಇಂದಿನ ಕೆಲಸವನ್ನು ನಾಳೆಗೆ ಮುಂದೂಡಬೇಡಿ
  • ದೂರದೂರಿಗೆ ಪ್ರವಾಸ ಹೋಗಲು ಇಂದು ಪ್ಲಾನ್​ ಮಾಡುತ್ತೀರಿ
  • ಗುರುದತ್ತಾತ್ರೇಯರನ್ನು ಆರಾಧಿಸಿ  

ಸಿಂಹ 

  • ಸರ್ಕಾರಿ ಗುತ್ತಿಗೆ ಕೆಲಸಗಳು ಹೇರಳವಾಗಿ ಬರಬಹುದು
  • ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ ಉಂಟಾಗಬಹುದು
  • ಮಾನಸಿಕವಾಗಿ, ದೈಹಿಕವಾಗಿ ಹೆಚ್ಚು ಸಂತೋಷದಿಂದಿರುತ್ತೀರಿ
  • ನೌಕರಿಯಲ್ಲಿ ಉತ್ತಮ ಪದವಿಯನ್ನು ಪಡೆಯುತ್ತೀರಿ
  • ಅಧಿಕಾರ, ಪ್ರೋತ್ಸಾಹ ದೊರಕುವುದರಿಂದ ಮನಸ್ಸಿಗೆ ಹೆಚ್ಚು ಆನಂದ ಉಂಟಾಗುವ ದಿನ
  • ಬರಹಗಾರರಿಗೆ, ಸಂಶೋಧಕರಿಗೆ ಸಿಹಿ ಸುದ್ದಿ ಸಿಗುವ ದಿನ
  • ಉಪಕರಣಗಳು ನಷ್ಟವಾಗುವುದರಿಂದ ನಷ್ಟವನ್ನು ತುಂಬ ಬೇಕಾಗಬಹುದು
  • ಚಿತ್ರೀಕರಣ ಮಾಡುವ ವ್ಯಕ್ತಿಗಳಿಗೆ ಲಾಭವಿದೆ 
  • ಕುಲದೇವತಾ ಹೋಮವನ್ನು ಮಾಡಿಸಿ

ಕನ್ಯಾ 

  • ನೌಕರರಿಗೆ ಶುಭಫಲಗಳು ಹೆಚ್ಚಾಗಿರುತ್ತದೆ
  • ಆತ್ಮೀಯರಿಂದ ಸುಖ-ಸಂತೋಷ ಸಿಗುವ ದಿನ
  • ಇಂದು ಕುಟುಂಬದಲ್ಲಿ ಪ್ರಗತಿ ಕಾಣುತ್ತೀರಿ
  • ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ಚಾಲಕರಿಗೆ ವಿಶೇಷವಾದ ಲಾಭವಿದೆ 
  • ಹಿನ್ನಡೆಯಾದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಮಗ್ನರಾದರೆ ಒಳಿತು
  • ವಿಶೇಷ ವ್ಯಕ್ತಿಯ ಸಹಕಾರ ದೊರಕುವ ದಿವಸ 
  • ಈ ರಾಶಿಯ ವಿದ್ಯಾರ್ಥಿಗಳಿಗೆ ಅಶುಭ  
  • ನೌಕರಿಯಲ್ಲಿರುವ ಸ್ತ್ರೀಯರಿಗೆ ವಿಶೇಷವಾದ ಸ್ಥಾನಮಾನಗಳು, ಲಾಭಗಳು ದೊರೆಯಲಿದೆ
  • ಲಲಿತ ಪರಮೇಶ್ವರಿಯನ್ನು ಪ್ರಾರ್ಥಿಸಿ

ತುಲಾ

  • ಹೊಸ ನಿಯಮಗಳನ್ನು ಅನ್ವಯಿಸದೆ ವ್ಯಾಪಾರ ಮಾಡುತ್ತಿದ್ದರೆ ದಂಡ ಕಟ್ಟಬೇಕಾಗಬಹುದು
  • ನಿಮ್ಮ ಉದ್ಯೋಗ ಬದಲಾವಣೆಯ ವಿಚಾರವನ್ನು ಮೇಲಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ  
  • ಹಳೆಯ ನಿಯಮಗಳಿಗೆ ಅನುಸಾರವಾಗಿ ನಿಮ್ಮ ವ್ಯಾಪಾರದಲ್ಲಿ ಮುಂದುವರೆಯಬಹುದು
  • ತೈಲ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ
  • ಇಂದು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಉಂಟಾಗಬಹುದು
  • ಲೇವಾದೇವಿ ವ್ಯವಹಾರ ಮಾಡುವವರಿಗೆ ವಿಶೇಷ ಲಾಭವಿದೆ
  • ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಿ
  • ಚಂಡಿಕಾ ಪಾರಾಯಣ ಮಾಡಿಸಿ 

ವೃಶ್ಚಿಕ 

  • ಸಾಮಾಜಿಕ ದೃಷ್ಟಿಯಲ್ಲಿ ನಿಮಗೆ ಉತ್ತಮವಾದ ಸ್ಥಾನ ಸಿಗಲಿದೆ
  • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ
  • ಸಾಮಾಜಿಕವಾಗಿ ಪ್ರೋತ್ಸಾಹ ಸಿಗಲಿದೆ
  • ಇಂದು ಖರ್ಚಿಗೆ ಹೆಚ್ಚಿನ ಕಡಿವಾಣ ಹಾಕಬೇಕು
  • ವಿರೋಧಿಗಳಿಂದ ಕೆಲವು ಕೆಲಸಕ್ಕೆ ಅಡ್ಡಿಯಾಗಬಹುದು
  • ಯಾವುದೇ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ
  • ತೆಂಗು ಬೆಳೆಗಾರರಿಗೆ, ಕಾರ್ಮಿಕರಿಗೆ ಲಾಭವಾಗುವ ದಿನ
  • ನಿರೀಕ್ಷಿತ ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಾಗಿದೆ
  • ಬಹಳ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ 
  • ಕಾಶಿ ಬಿಂದುಮಾಧವನನ್ನು ಪೂಜಿಸಿ

ಧನಸ್ಸು 


  • ಸರ್ಕಾರಿ ನೌಕರರಿಗೆ ಒತ್ತಡ ಹೆಚ್ಚಾಗುವ ದಿನ
  • ಈ ದಿನ ಹಿತಶತ್ರುಗಳ ಕಾಟ ಹೆಚ್ಚಾಗಬಹುದು
  • ಈ ದಿನ ಧಾರ್ಮಿಕ ವೃತ್ತಿಯವರಿಗೆ , ಪುರೋಹಿತರಿಗೆ,ಅರ್ಚಕರಿಗೆ ಧನಲಾಭ
  • ಇಂದು ಮನೆ ಬದಲಾಯಿಸುವವರಿಗೆ ಸರಿಯಾದ ಮಾರ್ಗದರ್ಶನ ಸಿಗಲಿದೆ
  • ಸಾಹಿತ್ಯ - ಸಂಗೀತ ಕ್ಷೇತ್ರದಲ್ಲಿರುವವರಿಗೆ ವಿಶೇಷ ಪುರಸ್ಕಾರ,ಗೌರವ ಸಿಗುತ್ತದೆ
  • ತುಂಬಾ ಶ್ರಮ ಪಡಬೇಕಾದ ದಿನವಾಗಿರುತ್ತದೆ
  • ಸ್ವಂತ ವ್ಯವಹಾರ ಮಾಡುವವರಿಗೆ ತುಂಬಾ ಅನುಕೂಲವಾಗುವ ದಿನ
  • ಸುದರ್ಶನ ಹೋಮ ಮಾಡಿಸಿ

ಮಕರ 

  • ಜವಾಬ್ದಾರಿಗಳನ್ನು ತುಂಬಾ ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ 
  • ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ
  • ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಶುಭಫಲ
  • ತೈಲ ವ್ಯಾಪಾರಿಗಳಿಗೆ ಶುಭಫಲ, ಧನಲಾಭವೂ ಇದೆ
  • ಚಲನಚಿತ್ರ ನಿರ್ಮಾಪಕರಿಗೆ ಲಾಭವಿದೆ ಅಷ್ಟೇ ಅವಮಾನವೂ ಅಗಬಹುದು ಜಾಗ್ರತೆವಹಿಸಿ
  • ಈ ರಾಶಿಯವರು ಮುದ್ರಣಾ ಕ್ಷೇತ್ರದಲ್ಲಿದ್ದರೆ ನಷ್ಟವನ್ನು ಅನುಭವಿಸುವ ದಿನವಾಗಿದೆ 
  • ಕಟ್ಟಡ ಮಾಲೀಕರು,ಕಾರ್ಮಿಕರು ಎಚ್ಚರಿಕೆಯಿಂದಿರಬೇಕು
  • ಕೈಗಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಬೆಂಕಿಯ ಅವಘಡ ಸಂಭವಿಸಬಹುದು ಜಾಗ್ರತೆವಹಿಸಿ
  • ಅಗ್ನಿದುರ್ಗೆಯನ್ನು ಆರಾಧಿಸಿ 

ಕುಂಭ  

  • ಜನರ ಮಧ್ಯದಲ್ಲಿ ಸಮಾಜಸೇವೆ ಮಾಡುವ ಯೋಗವು ಒದಗಿಬರುವ ದಿನ
  • ಇಂದು ಅನಿರೀಕ್ಷಿತ ಧನಲಾಭ ಉಂಟಾಗಬಹುದು
  • ನಾಯಕತ್ವದ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿವೆ
  • ಕಾರ್ಮಿಕ ವರ್ಗದವರಿಗೆ ಮೋಸವಾಗುವ ಸಾಧ್ಯತೆಗಳಿವೆ ಎಚ್ಚರಿಕೆ 
  • ಕಲಾವಿದರಿಗೆ ಉತ್ತಮ ಪುರಸ್ಕಾರ ಸಿಗುವ ದಿನ
  • ವಿವಾಹದ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಚ್ಚರಿಕೆ 
  • ವೈಯಕ್ತಿಕ ವಿಚಾರಗಳನ್ನು ಸ್ನೇಹಿತರಲ್ಲಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರವಾಗಬಹುದು 
  • ಕಠಿಣ ಶ್ರಮವನ್ನು ಪಡಬೇಕಾಗುವಂತಹ ದಿನ
  • ಇಂದು ವೃತ್ತಿಯಲ್ಲಿ ಪ್ರಗತಿ ಕಾಣುತ್ತೀರ
  • ರೇಣುಕಾ ದೇವಿಯನ್ನು ಆರಾಧಿಸಿ

ಮೀನಾ

  • ಅನುಮಾನಾಸ್ಪದ ಕೆಲಸಗಳನ್ನು ಮಾಡಬೇಡಿ ಶೋಭೆ ತರೋಲ್ಲ
  • ಈ ದಿನ ಮಾತು ಮಿತವಾಗಿದ್ದರೆ ತುಂಬಾ ಒಳ್ಳೆಯದು
  • ಕೃಷಿ ಕಾರ್ಮಿಕರಿಗೆ ಹೆಚ್ಚು ಆದಾಯ ಸಿಗುವ ದಿನವಾಗಿದೆ
  • ಮನೋರಂಜನೆಗಾಗಿ ಹಣವ್ಯಯ ಮಾಡುವ ಸಾಧ್ಯತೆ 
  • ಸಹೋದರ-ಸಹೋದರಿ ವರ್ಗದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ ಅನರ್ಥವಾಗುವ ಸಾಧ್ಯತೆ  
  • ಇಂದು ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಕಾಡಬಹುದು
  •  ನೀವು ಮಾಡಬೇಕಾದ ಕೆಲಸಗಳನ್ನು ರಹಸ್ಯವಾಗಿಡಿ
  • ಕೂಲಿ ಕಾರ್ಮಿಕರಿಗೆ ಹೆಚ್ಚು ಸಂಬಳ ಸಿಗುವ ದಿನ
  • ಮಧುಮತಿ ದೇವಿಯನ್ನು ಆರಾಧಿಸಿ

ಇದನ್ನೂ ಓದಿ: ಮಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೂ ಹೀಗೆಯೇ ಇರಲಿ -ವೀರೇಂದ್ರ ಹೆಗ್ಗಡೆ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment