/newsfirstlive-kannada/media/media_files/2025/08/31/dharmasthala-jayant-2025-08-31-13-03-41.jpg)
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಜಯಂತ್ ಟಿ. ಸುಪ್ರೀಂ ಕೋರ್ಟ್ಗೆ ತೆರಳಿದ್ದ ಫೋಟೋ ಲಭ್ಯವಾಗಿದೆ. ಬ್ಯಾಗ್ನಲ್ಲಿ ಬುರುಡೆ ಇಟ್ಕೊಂಡೇ ದೂರುದಾರ ಸುಪ್ರೀಂ ಕದ ತಟ್ಟಿದ್ದ. ಪ್ಲಾನ್ ರೂಪಿಸಿ ವಕೀಲರನ್ನೂ ನಂಬಿಸಿ ರೈಲಲ್ಲಿ ಬುರುಡೆ ಹಿಡಿದುಕೊಂಡು ದೆಹಲಿಗೆ ಪ್ರಯಾಣ ಬೆಳೆಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಎಚ್ಚರ, ಎಚ್ಚರ! ಈಗ eSIM ಸಿಮ್ ಹಗರಣ ಜೋರು.. ಏನಿದು..?
ಸುಪ್ರೀಂ ಮೂಲಕ ಶವ ಹೂತ ಕೇಸ್ ತನಿಖೆ ಆದೇಶಕ್ಕೆ ಬುರುಡೆ ಗ್ಯಾಂಗ್ ಪ್ಲಾನ್ ಮಾಡಿಕೊಂಡಿತ್ತು. ಈ ವೇಳೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಲು ಸುಪ್ರೀಂ ಕೋರ್ಟ್ ಹೇಳಿತ್ತು. ಅದರಂತೆ ಬುರುಡೆ ಗ್ಯಾಂಗ್ ಧರ್ಮಸ್ಥಳ ಠಾಣೆಗೆ ದೂರು ನೀಡಿದೆ ಅನ್ನೋದು ಗೊತ್ತಾಗಿದೆ.
ಮಹಜರ್ ಪ್ರಕ್ರಿಯೆ ಮುಕ್ತಾಯ
ಇತ್ತ ಬುರುಡೆ ಚೆನ್ನಯ್ಯನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ಪ್ರಕ್ರಿಯೆ ಮುಕ್ತಾಯಗೊಂಡಿದೆ. ನೆನ್ನೆ ತಡರಾತ್ರಿಯಿಂದ ಇಂದು ಮಧ್ಯಾಹ್ನದವರೆಗೆ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಎಸ್ ಬಿ ಮ್ಯಾನ್ಷನ್ ಹೆಸರಿನ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ, ಚಿನ್ನಯ್ಯ ಜೊತೆಗೆ ಮಟ್ಟಣ್ಣವರ್ ಸೇರಿದಂತೆ ಹಲವರು ಭೇಟಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ ಈ ಅಪಾರ್ಟ್ಮೆಂಟ್ನಲ್ಲಿ ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದು, ಆರು ಬ್ಯಾಗ್ಗಳಲ್ಲಿ ದಾಖಲಾತಿಗಳನ್ನ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ:ಮೋದಿ, ಜಿನ್ಪಿಂಗ್ ಭೇಟಿ -ಚೀನಾಗೆ 3 ಪದಗಳಲ್ಲಿ ಸಂದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ