Advertisment

ದೀಪಾವಳಿ ಅಮವಾಸ್ಯೆ.. ಇವತ್ತು ನಿಮಗೆ ಶುಭ ದಿನ ಕಾದಿದೆ.. ಯಾರಿಗೆ ಲಾಭ? ಯಾರಿಗೆ ಅಶುಭ?

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಆಶ್ವಯುಜ ಮಾಸ, ಕೃಷ್ಣಪಕ್ಷ, ಅಮಾವಾಸ್ಯೆ ತಿಥಿ, ಚಿತ್ತಾ ನಕ್ಷತ್ರ. ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ..

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ: ಈ ಕಂದನ ಪಾಲಿಗೆ ರಕ್ಕಸನಾದ ಪ್ರಿನ್ಸಿಪಾಲ್.. ಬೆಂಗಳೂರಲ್ಲಿ ರಕ್ಕಸೀ ಕೃತ್ಯ..!

ಮೇಷ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ಸೇವೆ ಸಾಮಾಜಿಕ ಸಹಾಯಕ್ಕಾಗಿ ಜನ ಮನ್ನಣೆ ಸಿಗುವ ದಿನ
  • ಬೆಲೆ ಬಾಳುವ ವಸ್ತು ಖರೀದಿ ಮಾಡುವ ವಿಚಾರದಲ್ಲಿ ಚರ್ಚೆ ಸಾಧ್ಯತೆ
  • ನಿಮ್ಮ ಬಗ್ಗೆಯೇ ಹೆಚ್ಚು ಗಮನ ಕೊಡಬೇಕಾದ ದಿನ ಭದ್ರತೆ ಕೂಡ ಇರಲಿ
  • ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಆಸಕ್ತಿ ಅವಕಾಶ ಇರಬಹುದು
  • ಯಶಸ್ಸಿನ್ನ ಬಗ್ಗೆ ನಿರ್ದಿಷ್ಟವಾದ ಗುರಿಯಿರಲಿ
  • ಪ್ರೀತಿ-ಪ್ರೇಮ ವಿಚಾರದಲ್ಲಿ ಗೊಂದಲ ಬೇಸರ ಸಾಧ್ಯತೆ
  • ಅದೃಷ್ಟ ಚೆನ್ನಾಗಿದೆ ಅನ್ನುವಷ್ಟರಲ್ಲಿ ದಿನ ಕಳೆದು ಹೋಗಬಹುದು
  • ಕುಲದೇವತಾರಾಧನೆ ಮಾಡಿ

ವೃಷಭ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಇಂದು ತಾಳ್ಮೆಯಿಂದ ಆತ್ಮಾವಲೋಕನ ಮಾಡಿಕೊಳ್ಳಿ
  • ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ಸಿಗಲಿದೆ
  • ಹಣದ ವಿಚಾರದಲ್ಲಿ ನಿರಾಸೆ ಸಾಧ್ಯತೆಯಿದೆ
  • ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥ ಸಾಧ್ಯತೆ
  • ವಾದ-ವಿವಾದಗಳಲ್ಲಿ ತಲೆ ಹಾಕದೆ ಇದ್ದರೆ ಒಳ್ಳೆಯದು
  • ಆತಂಕ ಬೇಡ ಸಮಾಧಾನದಿಂದ ಎಲ್ಲ ಕೆಲಸಗಳನ್ನು ನಿಭಾಯಿಸಿ
  • ಈಶ್ವರಾಧನೆ ಮಾಡಿ
Advertisment

ಮಿಥುನ

RASHI_BHAVISHA_MITHUNA

  • ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ
  • ಕುಟುಂಬದಲ್ಲಿ ನೆಮ್ಮದಿಯ ಶಾಂತಿಯ ವಾತಾವರಣ ಕಾಪಾಡಿಕೊಳ್ಳಿ
  • ಜನರು ನಿಮ್ಮ ಸಲಹೆಯನ್ನು ಸ್ವೀಕರಿಸಬಹುದು ಅಥವಾ ಬಿಡಬಹುದು
  • ಇಂದು ಸಂತೋಷದ ದಿನ ನಿಮ್ಮದಾಗಲಿದೆ
  • ಕಠಿಣ ಪರಿಶ್ರಮಕ್ಕೆ ತಕ್ಕ ಫಲವಿದೆ
  • ಕೋಪದಿಂದ ಗಾಯವಾಗುವ ಸಾಧ್ಯತೆಯಿದೆ ಎಚ್ಚರಿಕೆ
  • ತುಳಸಿಯಿಂದ ವಿಷ್ಣುವಿನ ಅರ್ಚನೆ ಮಾಡಿ

ಕಟಕ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಹಳೆಯ ವಿಚಾರಗಳನ್ನು ದೂರಮಾಡಿ ಬೇಸರ ಕಡಿಮೆ ಮಾಡಿಕೊಳ್ಳಿ
  • ಅನುಕೂಲದ ಸಮಯವನ್ನು ವಿನಿಯೋಗಿಸಿಕೊಳ್ಳಿ
  • ಹೊಸ ಹೂಡಿಕೆಗೆ ಇಂದು ಅನುಕೂಲ
  • ಯಾವುದೇ ಬದಲಾವಣೆಯ ಬಗ್ಗೆ ಚಿಂತೆ ಬೇಡ
  • ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಮನ್ನಣೆ ಸಿಗಲಿದೆ
  • ಸುಬ್ರಹ್ಮಣ್ಯನಿಗೆ ಕ್ಷೀರಾಭಿಷೇಕ ಮಾಡಿಸಿ

ಸಿಂಹ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ಧಾರ್ಮಿಕ ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ
  • ಸಮಾರಂಭಗಳಿಗೆ ಹಾಜರಾಗಬಹುದು
  • ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಬರಬಹುದು
  • ಹೊಸ ಉದ್ಯಮಕ್ಕೆ ಬೇರೆಯವರ ಪರಿಚಯವಾಗಬಹುದು
  • ನಿಮ್ಮ ಕೆಲಸಕ್ಕೆ  ಸಾಧನೆಗೆ ಪ್ರಶಂಸೆಯಿದೆ
  • ಆರ್ಥಿಕ ಬಿಕ್ಕಟ್ಟು ಕಾಡಬಹುದು
  • ಕುಬೇರ ಲಕ್ಷ್ಮೀಯನ್ನು ಪ್ರಾರ್ಥಿಸಿ
Advertisment

ಕನ್ಯಾ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ
  • ತಾಳ್ಮೆ ತುಂಬಾ ಮುಖ್ಯವಾದದ್ದು
  • ವಿರೋಧಕ್ಕೆ ಅವಕಾಶವಾಗುವ ಪರಿಸ್ಥಿತಿ ಎದುರಿಸಬೇಕಾಗಬಹುದು
  • ಜವಾಬ್ದಾರಿಗಳಿಂದ ಹೊರಬರಬೇಕಾಗಲಿದೆ
  • ಜನ ಸಂದಣಿಯಲ್ಲಿ ನಿಮಗೆ ತೊಂದರೆ ಕಾಣಬಹುದು
  • ಮಕ್ಕಳ ವರ್ತನೆ ಹಿರಿಯರಿಗೆ ಬೇಸರ ತರುತ್ತದೆ
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ತುಲಾ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ವೃತ್ತಿಯಲ್ಲಿ ಅನುಕೂಲವಿದೆ ಆದರೆ ತುಂಬಾ ಶ್ರಮ ವಹಿಸಬೇಕು
  • ಪ್ರೇಮಿಗಳಿಗೆ ಶುಭ ಉತ್ತಮ ನಿರ್ಧಾರ ಮಾಡ್ತೀರಿ..
  • ರಾಜಕೀಯ ಪ್ರಭಾವ ಕೆಲಸ ಮಾಡಬಹುದು
  • ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆ ವಹಿಸಿ
  • ಮಾತಿಗೆ ಬೆಲೆ ಸಿಗುವುದು ಕಷ್ಟ ಸಾಧ್ಯ
  • ಆರೋಗ್ಯದ ಬಗ್ಗೆ ಸುಧಾರಣೆ ಇದೆ
  • ವಿಕಲ ಚೇತನರಿಗೆ ಸಹಾಯ ಮಾಡಿ

ವೃಶ್ಚಿಕ

ಯಾವುದೇ ಕಾರಣಕ್ಕೂ ಸಾಲ ಕೊಡಬೇಡಿ, ವಿದ್ಯಾರ್ಥಿಗಳಿಗೆ ಶುಭವಿದೆ; ಇಲ್ಲಿದೆ ಇಂದಿನ ಭವಿಷ್ಯ

  • ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು
  • ವ್ಯವಹಾರದಲ್ಲಿ ಉತ್ತಮ ಲಾಭ ಶುಭವೂ ಇದೆ
  • ಯಾರನ್ನಾದರು ಕ್ಷಮಿಸುವ ಪ್ರಸಂಗವಿದ್ದರೆ ಕ್ಷಮಿಸಿಬಿಡಿ
  • ಮನೆಯ ಅಗತ್ಯತೆಗೆ ಆದ್ಯತೆ ಕೊಡಿ
  • ಏಕಾಗ್ರತೆಯು ಉತ್ತಮ ಫಲಿತಾಂಶ ನೀಡಬಹುದು
  • ಜೀವನ ಶೈಲಿಯಲ್ಲಿ ಸುಧಾರಣೆ ಕಾಣುವ ದಿನವಾಗಿದೆ
  • ವಿದ್ಯಾ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
Advertisment

ಧನುಸ್

RASHI_BHAVISHA_DHANASU

  • ಬೆನ್ನು ನೋವಿನ ಬಗ್ಗೆ ಕಾಳಜಿ ವಹಿಸಿ
  • ಮನೆಯ ಜವಾಬ್ದಾರಿಯ ಬಗ್ಗೆ ಪೂರ್ಣ ಜವಾಬ್ದಾರಿ ವಹಿಸಿ
  • ಏನೋ ಬದಲಾವಣೆಯ ಆಲೋಚನೆ ಬರುತ್ತದೆ ಆದರೆ ಸದ್ಯಕ್ಕಿಲ್ಲ
  • ಮದುವೆ ವಿಚಾರದಲ್ಲಿ ತಲೆ ಕೆಡಸಿಕೊಳ್ಳಬಹುದು ಉಪಯೋಗವಿಲ್ಲ
  • ಆನಂದವಾಗಿರುತ್ತೀರಿ ಮನಸ್ಸಿನಲ್ಲಿ ಕಳವಳ ಬೇಡ
  • ಆಹಾರದ ಬಗ್ಗೆ ಗಮನಿಸಿ ಸಾಯಂಕಾಲ ಚರ್ಚೆಯಿರಬಹುದು
  • ವೆಂಕಟರಮಣನನ್ನು ಆರಾಧಿಸಿ

ಮಕರ

ಹೊಸ ಮನೆ ಖರೀದಿಗೆ ಒಳ್ಳೆಯ ದಿನ, ವಿದ್ಯಾರ್ಥಿಗಳು ಕೊಂಚ ಎಚ್ಚರ ವಹಿಸಿ; ಇಲ್ಲಿದೆ ಇಂದಿನ ಭವಿಷ್ಯ

  • ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿದೆ
  • ನಿಮ್ಮ ಪ್ರಗತಿಯ ಬಗ್ಗೆ  ಭಯವಿದೆ
  • ಒಳ್ಳೆಯ ಸ್ನೇಹಿತರ ಹಿತೈಷಿಗಳ ಮಾರ್ಗದರ್ಶನ ಪಡೆಯಿರಿನಿಮ್ಮ ನೈತಿಕತೆ ಚೆನ್ನಾಗಿರುತ್ತದೆ
  • ವೃತ್ತಿ ಉದ್ಯೋಗದ ಒತ್ತಡ ತೊಂದರೆಗೆ ಕಾರಣವಾಗಬಹುದು
  • ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ
  • ಶಿವನನ್ನು ಬಿಲ್ವ ಪತ್ರೆಯಿಂದ ಅರ್ಚಿಸಿ

ಕುಂಭ 

RASHI_BHAVISHA_KUMBHA

  • ಮಕ್ಕಳ ಪ್ರಗತಿ ವಿದ್ಯಾಭ್ಯಾಸದಿಂದ  ಸಂತೋಷ
  • ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ದಿನ
  • ವ್ಯಾಪಾರ ವ್ಯವಹಾರದ ಪ್ರಗತಿ ಆರ್ಥಿಕ ಲಾಭ
  • ಸಂಬಂಧಿಕರ ಆಗಮನ  ಖುಷಿ ಸಿಗಲಿದೆ
  • ಬರಬೇಕಾದ ಬಾಕಿ ಹಣ ಬರಲಿದೆ
  • ಆರೋಗ್ಯದಲ್ಲಿ ಸಮಾಧಾನ ಸಿಗಲಿದೆ
  • ಸ್ನೇಹಿತರಿಂದ ಸಿಹಿ ಸುದ್ದಿ ಕೇಳುತ್ತೀರಿ
  • ಮಹಾಲಕ್ಷ್ಮೀಯನ್ನು ಮಲ್ಲಿಗೆ ಹೂವಿನಿಂದ ಅರ್ಚಿಸಿ
Advertisment

ಮೀನ

RASHI_BHAVISHA_MEENA

  • ಕುಟುಂಬದಲ್ಲಿ ಶುಭಕಾರ್ಯದ ಚಿಂತನೆ ಇರಬಹುದು
  • ಮಿತ್ರರ ಭೇಟಿ- ವಿರೋಧಿಗಳ ಬಗ್ಗೆ ಚರ್ಚೆ
  • ಮೂಲ ಉದ್ದೇಶ ಮರೆತು ಕಾರ್ಯ ಪ್ರವೃತ್ತಿರಾಗುತ್ತೀರಿ
  • ಸಮಯಕ್ಕೆ ಆದ್ಯತೆ ನೀಡಿ ಧನಾತ್ಮಕ ಫಲಿತಾಂಶ ನಿಮ್ಮದಾಗುತ್ತದೆ
  • ಮಾನಸಿಕ ನೆಮ್ಮದಿ ಕಡಿಮೆಯಾಗಬಹುದು
  • ಕೋಪ- ಆತಂಕಗಳು ಮನೆಮಾಡಿರುವ ದಿನ
  • ರಾಜರಾಜೇಶ್ವರಿಯನ್ನು ಪೂಜಿಸಿ

ಇದನ್ನೂ ಓದಿ:ಸೂರಜ್​ ಮೈಮಾಟಕ್ಕೆ ಕಳೆದುಹೋದ ಹೆಣ್ಣೈಕ್ಳು.. ನಾಚಿ ನೀರಾದ ವಿಡಿಯೋ ಇಲ್ಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment