Advertisment

ಕೋಪ ಬೇಡ, ಇಷ್ಟಾರ್ಥ ನೆರವೇರುವ ದಿನ -ಶುಕ್ರವಾರ ನಿಮ್ಮ ಭವಿಷ್ಯ

ಶ್ರೀ ವಿಶ್ವಾವಸುನಾಮ ಸಂವತ್ಸರ ದಕ್ಷಿಣಾಯಣ ಶರದೃತು. ಆಶ್ವಯುಜ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ ನಂತರ ಧನಿಷ್ಠಾ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

Advertisment

ಇದನ್ನೂ ಓದಿ:ಕಾಂತಾರ ಸಿನಿಮಾ ನೋಡಿದವರ ವಿಮರ್ಶೆ : ಕಾಂತಾರ ದೈವದ ದರ್ಶನ, ಥಿಯೇಟರ್ ನಲ್ಲೇ ಕೈ ಮುಗಿದ ಜನರು

ಮೇಷ  

  • ಸಣ್ಣ ವಿಚಾರಗಳಿಗೆ ಕೋಪ ಮಾಡಿಕೊಳ್ಳಬೇಡಿ
  • ಕಾಲು ನೋವಿನ ಸಮಸ್ಯೆ ಉಂಟಾಗಬಹುದು
  • ಮನಸ್ಸಿನಲ್ಲಿ ಋಣಾತ್ಮಕ ಯೋಚನೆ ಬೇಡ 
  • ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ ಬೇಸರ ಆಗಬಹುದು 
  • ಪ್ಲಾನ್ ಮಾಡಿ ಎಲ್ಲಾ ಕೆಲಸಕ್ಕೆ ಮುಂದಾಗಿ 
  • ಉದ್ಯೋಗ ಸ್ಥಳದಲ್ಲಿ ವೈಮನಸ್ಯ ಉಂಟಾಗಬಹುದು
  • ಗೋಮಾತೆಯನ್ನು ಪೂಜಿಸಿ 

ವೃಷಭ 

  • ಬೇರೆಯವರನ್ನು ಪೂರ್ಣವಾಗಿ ಅವಲಂಬಿಸಬೇಡಿ
  • ಅಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ
  • ನಿರೀಕ್ಷಿತ ಕೆಲಸಗಳಾಗುವ ಸಾಧ್ಯತೆ ಇದೆ
  • ವಿದೇಶ ಪ್ರಯಾಣಕ್ಕೆ ಪ್ರಯತ್ನಿಸಬಹುದು 
  • ಮೇಲಾಧಿಕಾರಿಗಳಿಂದ ಸಹಾಯನುಕೂಲವಿದೆ
  • ತಾಯಿಯವರಿಗೆ ದಿಢೀರ್ ಅನಾರೋಗ್ಯ ಕಾಡಬಹುದು
  • ಧನ್ವಂತರಿಯನ್ನು ಪ್ರಾರ್ಥಿಸಿ
Advertisment

ಮಿಥುನ 

  • ಬೆಲೆ ಬಾಳುವ ವಸ್ತು ಖರೀದಿಯಲ್ಲಿ ಮೋಸ ಆಗಬಹುದು
  • ಅನುಭವಿಗಳ ಮಾತು ವ್ಯರ್ಥ ಆಗಲಿದೆ
  • ಹೊಸ ಆಸ್ತಿಯನ್ನು ಖರೀದಿಸುತ್ತೀರಿ
  • ಅನಗತ್ಯ ಖರ್ಚಿನಿಂದ ಕೋಪ ಅನಾನುಕೂಲದ ವಾತಾವರಣ 
  • ವಿದೇಶದಲ್ಲಿರುವವರಿಗೆ ಶುಭ ಸುದ್ದಿ 
  • ಕುಟುಂಬದಲ್ಲಿ ಸಂತಸದ ವಾತಾವರಣ
  • ತಾಪಸ ಮನ್ಯುವನ್ನು ಆರಾಧಿಸಿ 

ಕಟಕ 

  • ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಆಗಲಿದೆ
  • ಖಾಸಗಿ ಉದ್ಯೋಗಿಗಳಲ್ಲಿ ಹೆಚ್ಚುವ ಆದಾಯ 
  • ಆತ್ಮವಿಶ್ವಾಸ ಹೆಚ್ಚಾಗಬಹುದಾದ ದಿನ 
  • ವ್ಯಾವಹಾರಿಕ ಪ್ರಗತಿ ಕಾಣುತ್ತೀರಿ
  • ಮಾರ್ಕೆಟಿಂಗ್ ಕೆಲಸದಲ್ಲಿ ಶುಭ ಲಾಭವಿದೆ
  • ಕುಟುಂಬದವರೊಂದಿಗೆ ವಿದೇಶ ಪ್ರಯಾಣ ಮಾಡುತ್ತೀರಿ
  • ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ 

ಸಿಂಹ

  • ನಕಾರಾತ್ಮಕ ಅಶುಭ ಸುದ್ದಿಯಿಂದ ಬೇಸರ ಆಗಬಹುದು
  • ಪ್ರಯತ್ನಪೂರ್ವಕ ಕೆಲಸಗಳಿಗೆ ಯಶಸ್ಸಿದೆ
  • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
  • ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಇರಲಿದೆ
  • ಸಂಬಂಧಿಕರು ಆತಂಕದಲ್ಲಿರಬಹುದು 
  • ಇಂದು ತುಂಬಾ ತಾಳ್ಮೆ ಇರಬೇಕಾದ ದಿನ 
  • ಚೌಡೇಶ್ವರಿಯನ್ನು ಪೂಜಿಸಿ 
Advertisment

ಕನ್ಯಾ 

  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಶ್ರಮದಿಂದ ಬಡ್ತಿ ಸಿಗಲಿದೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಸಮಾಧಾನ ಉಂಟಾಗಬಹುದು
  • ಪ್ರೀತಿ - ಪ್ರೇಮದ ವಿಚಾರ ಮನೆಯಲ್ಲಿ ಇತ್ಯರ್ಥ ಆಗಬಹುದು
  • ಧನಾತ್ಮಕ ಶಕ್ತಿ ನಿಮ್ಮದಾಗುವ ದಿನ
  • ಕುಟುಂಬದಲ್ಲಿ ಸಂತೋಷದ ವಾತಾವರಣ
  • ಆರ್ಥಿಕ ಅಭಿವೃದ್ದಿ ಸಮಾಧಾನ ತರಲಿದೆ
  • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಮಂಗಳ ಗ್ರಹ ಆರಾಧನೆ ಮಾಡಿ

ತುಲಾ 

  • ಮಹಿಳೆಯರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು
  • ಈ ದಿನ ಶಾರೀರಿಕ ಸಮಸ್ಯೆ ಉಂಟಾಗಬಹುದು
  • ಆಧುನಿಕ ಪ್ರಪಂಚಕ್ಕೆ ಅವಲಂಬಿತವಾಗಿರುವವರಿಗೆ ಸಮಸ್ಯೆ ಆಗಬಹುದು
  • ನಿಮ್ಮ ವ್ಯಕ್ತಿತ್ವದ ಬಗ್ಗೆ ಜನಕ್ರೋಶವಿದೆ
  • ಆಸ್ತಿ ವಿಚಾರಕ್ಕೆ ವಿವಾದ ಸಮಸ್ಯೆ ಆಗಬಹುದು
  • ಅನಗತ್ಯ ಖರ್ಚಿನಿಂದ ಬೇಸರ ಉಂಟಾಗಬಹುದು
  • ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
  • ಭೂವರಾಹ ಸ್ವಾಮಿಯನ್ನು ಪ್ರಾರ್ಥಿಸಿ  

ವೃಶ್ಚಿಕ 

  • ಜವಾಬ್ದಾರಿಯಿಂದ ವರ್ತಿಸದಿದ್ದರೆ ನಷ್ಟ ಉಂಟಾಗಬಹುದು
  • ಹಳೆಯ ಸಂಬಂಧಗಳು ಪುನಃ ಒಂದಾಗಬಹುದು 
  • ಇಂದು ಪ್ರೇಮಿಗಳಿಗೆ ಶುಭದಿನ 
  • ನೀವು ಭಾಗವಹಿಸುವ ಸಂದರ್ಶನಗಳಲ್ಲಿ ಯಶಸ್ಸಿದೆ
  • ಅಣ್ಣ ತಮ್ಮಂದಿರೊಂದಿಗೆ ಕಲಹ ಆಗಬಹುದು
  • ಹೊಸ ಗುರಿಗಳಿಗೆ ಅದ್ಧುತವಾದ ದಿನ 
  • ಇಷ್ಟದೇವತೆಯನ್ನು ಪ್ರಾರ್ಥಿಸಿ
Advertisment

ಧನುಸ್ 

  • ಹೆಂಡತಿಯ ಮನೆಯವರ ಕಡೆಯವರಿಂದ ಕಲಹ ಉಂಟಾಗಬಹುದು
  • ಹಿಂದೆ ಹೂಡಿಕೆ ಮಾಡಿದ್ದ ಆಸ್ತಿಯ ವಿಚಾರದಲ್ಲಿ ಗೊಂದಲ 
  • ದುರಾಸೆ ಇಲ್ಲದ ಕೆಲಸಗಳಿಂದ ಸಂತೋಷವಿದೆ
  • ನಿಮ್ಮ ಸ್ವಭಾವದಿಂದ ಸ್ನೇಹಿತರಿಗೆ ಬೇಸರ ಆಗಬಹುದು
  • ನಿಮ್ಮಷ್ಟಕ್ಕೆ ನೀವು ಸಂತೋಷವಾಗಿರಲು ಆಗದ ದಿನ 
  • ಇಂದು ಹೆಚ್ಚು ಹಣ ಹೂಡಿಕೆ ಮಾಡಬೇಡಿ 
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ 

ಮಕರ 

  • ಮನೆಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಜಗಳ 
  • ಕಾರ್ಯಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
  • ಮನೆಯವರನ್ನು ಸಮಾಧಾನ ಮಾಡುವುದರಲ್ಲಿ ದಿನ ಕಳೆಯುತ್ತದೆ
  • ಸಂಜೆಗೆ ಹೆಚ್ಚು ಖರ್ಚು ಆಗುವುದರಿಂದ ಆತಂಕ ಆಗಬಹುದು 
  • ನಿಮ್ಮ ಸ್ನೇಹಿತರ ವೈಯಕ್ತಿಕ ಸಮಸ್ಯೆ ನಿಮಗೂ ತೊಂದರೆಯಾಗಬಹುದು 
  • ಸಂಜೆಗೆ ಹೆಚ್ಚು ಖರ್ಚು ಆಗುವುದರಿಂದ ಆತಂಕ ಆಗಬಹುದು
  • ಈ ದಿನದ ಆರಂಭ ಸಂತೋಷವಾಗಿರುತ್ತದೆ
  • ಆಂಜನೇಯ ಸ್ವಾಮಿಯ ಆರಾಧನೆ ಮಾಡಿ 

ಕುಂಭ 

  • ಕುಟುಂಬದವರ ಹೊಗಳಿಕೆ ನಿಮಗೆ ಸ್ಫೂರ್ತಿ  
  • ದಿನದ ವಾತಾವರಣವನ್ನು ಉತ್ತಮಗೊಳಿಸಿ 
  • ತಂದೆಯವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು 
  • ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿ 
  • ನಿಮ್ಮ ಮುಗ್ಧ ಮನಸ್ಸು ಬೇರೆಯವರಿಗೆ ಸಹಾಯವಾಗಬಹುದು 
  • ನಿಮ್ಮ ದೇಹದಲ್ಲಿ ಕಾಂತಿ ಹೆಚ್ಚಾಗಬಹುದು 
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ 
Advertisment

ಮೀನ 

  • ತಂದೆಯವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆಯಾಗಬಹುದು 
  • ಅನಗತ್ಯ ಕೆಲಸಗಳಿಂದ ನಿಮಗೆ ಮಾರಕವಾಗಬಹುದು 
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ 
  • ದೈನಂದಿನ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ
  • ಸ್ನೇಹಿತರ ಮನೆಯಿಂದ ಅಶುಭ ವಾರ್ತೆ 
  • ಆತ್ಮೀಯರೊಂದಿಗೆ ಮನಸ್ತಾಪ ಬೇಸರ ಆಗಬಹುದು
  • ಮೌನಕ್ಕೆ ಶರಣು ಹೋಗಿ 
  • ಬಾಲಗಣಪತಿಯನ್ನು ಆರಾಧಿಸಿ 

ಇದನ್ನೂ ಓದಿ: ಮೈಸೂರಿನ ಜಂಬೂಸವಾರಿಯ ಅಂಬಾರಿಯೂ 750 ಕೆಜಿ ಚಿನ್ನದಿಂದ ಮಾಡಿಲ್ಲ! ಅಂಬಾರಿಯಲ್ಲಿ ಇರೋ ಚಿನ್ನ ಎಷ್ಟು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment
Advertisment
Advertisment