/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ಕಾಂತಾರ ಸಿನಿಮಾ ನೋಡಿದವರ ವಿಮರ್ಶೆ : ಕಾಂತಾರ ದೈವದ ದರ್ಶನ, ಥಿಯೇಟರ್ ನಲ್ಲೇ ಕೈ ಮುಗಿದ ಜನರು
ಮೇಷ
- ಸಣ್ಣ ವಿಚಾರಗಳಿಗೆ ಕೋಪ ಮಾಡಿಕೊಳ್ಳಬೇಡಿ
- ಕಾಲು ನೋವಿನ ಸಮಸ್ಯೆ ಉಂಟಾಗಬಹುದು
- ಮನಸ್ಸಿನಲ್ಲಿ ಋಣಾತ್ಮಕ ಯೋಚನೆ ಬೇಡ
- ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ ಬೇಸರ ಆಗಬಹುದು
- ಪ್ಲಾನ್ ಮಾಡಿ ಎಲ್ಲಾ ಕೆಲಸಕ್ಕೆ ಮುಂದಾಗಿ
- ಉದ್ಯೋಗ ಸ್ಥಳದಲ್ಲಿ ವೈಮನಸ್ಯ ಉಂಟಾಗಬಹುದು
- ಗೋಮಾತೆಯನ್ನು ಪೂಜಿಸಿ
ವೃಷಭ
- ಬೇರೆಯವರನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಅಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ
- ನಿರೀಕ್ಷಿತ ಕೆಲಸಗಳಾಗುವ ಸಾಧ್ಯತೆ ಇದೆ
- ವಿದೇಶ ಪ್ರಯಾಣಕ್ಕೆ ಪ್ರಯತ್ನಿಸಬಹುದು
- ಮೇಲಾಧಿಕಾರಿಗಳಿಂದ ಸಹಾಯನುಕೂಲವಿದೆ
- ತಾಯಿಯವರಿಗೆ ದಿಢೀರ್ ಅನಾರೋಗ್ಯ ಕಾಡಬಹುದು
- ಧನ್ವಂತರಿಯನ್ನು ಪ್ರಾರ್ಥಿಸಿ
ಮಿಥುನ
- ಬೆಲೆ ಬಾಳುವ ವಸ್ತು ಖರೀದಿಯಲ್ಲಿ ಮೋಸ ಆಗಬಹುದು
- ಅನುಭವಿಗಳ ಮಾತು ವ್ಯರ್ಥ ಆಗಲಿದೆ
- ಹೊಸ ಆಸ್ತಿಯನ್ನು ಖರೀದಿಸುತ್ತೀರಿ
- ಅನಗತ್ಯ ಖರ್ಚಿನಿಂದ ಕೋಪ ಅನಾನುಕೂಲದ ವಾತಾವರಣ
- ವಿದೇಶದಲ್ಲಿರುವವರಿಗೆ ಶುಭ ಸುದ್ದಿ
- ಕುಟುಂಬದಲ್ಲಿ ಸಂತಸದ ವಾತಾವರಣ
- ತಾಪಸ ಮನ್ಯುವನ್ನು ಆರಾಧಿಸಿ
ಕಟಕ
- ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ ಆಗಲಿದೆ
- ಖಾಸಗಿ ಉದ್ಯೋಗಿಗಳಲ್ಲಿ ಹೆಚ್ಚುವ ಆದಾಯ
- ಆತ್ಮವಿಶ್ವಾಸ ಹೆಚ್ಚಾಗಬಹುದಾದ ದಿನ
- ವ್ಯಾವಹಾರಿಕ ಪ್ರಗತಿ ಕಾಣುತ್ತೀರಿ
- ಮಾರ್ಕೆಟಿಂಗ್ ಕೆಲಸದಲ್ಲಿ ಶುಭ ಲಾಭವಿದೆ
- ಕುಟುಂಬದವರೊಂದಿಗೆ ವಿದೇಶ ಪ್ರಯಾಣ ಮಾಡುತ್ತೀರಿ
- ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ
ಸಿಂಹ
- ನಕಾರಾತ್ಮಕ ಅಶುಭ ಸುದ್ದಿಯಿಂದ ಬೇಸರ ಆಗಬಹುದು
- ಪ್ರಯತ್ನಪೂರ್ವಕ ಕೆಲಸಗಳಿಗೆ ಯಶಸ್ಸಿದೆ
- ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
- ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಇರಲಿದೆ
- ಸಂಬಂಧಿಕರು ಆತಂಕದಲ್ಲಿರಬಹುದು
- ಇಂದು ತುಂಬಾ ತಾಳ್ಮೆ ಇರಬೇಕಾದ ದಿನ
- ಚೌಡೇಶ್ವರಿಯನ್ನು ಪೂಜಿಸಿ
ಕನ್ಯಾ
- ಕಾರ್ಯಕ್ಷೇತ್ರದಲ್ಲಿ ನಿಮ್ಮ ಶ್ರಮದಿಂದ ಬಡ್ತಿ ಸಿಗಲಿದೆ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಸಮಾಧಾನ ಉಂಟಾಗಬಹುದು
- ಪ್ರೀತಿ - ಪ್ರೇಮದ ವಿಚಾರ ಮನೆಯಲ್ಲಿ ಇತ್ಯರ್ಥ ಆಗಬಹುದು
- ಧನಾತ್ಮಕ ಶಕ್ತಿ ನಿಮ್ಮದಾಗುವ ದಿನ
- ಕುಟುಂಬದಲ್ಲಿ ಸಂತೋಷದ ವಾತಾವರಣ
- ಆರ್ಥಿಕ ಅಭಿವೃದ್ದಿ ಸಮಾಧಾನ ತರಲಿದೆ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಮಂಗಳ ಗ್ರಹ ಆರಾಧನೆ ಮಾಡಿ
ತುಲಾ
- ಮಹಿಳೆಯರಿಗೆ ಹೊಟ್ಟೆ ನೋವಿನ ಸಮಸ್ಯೆ ಕಾಡಬಹುದು
- ಈ ದಿನ ಶಾರೀರಿಕ ಸಮಸ್ಯೆ ಉಂಟಾಗಬಹುದು
- ಆಧುನಿಕ ಪ್ರಪಂಚಕ್ಕೆ ಅವಲಂಬಿತವಾಗಿರುವವರಿಗೆ ಸಮಸ್ಯೆ ಆಗಬಹುದು
- ನಿಮ್ಮ ವ್ಯಕ್ತಿತ್ವದ ಬಗ್ಗೆ ಜನಕ್ರೋಶವಿದೆ
- ಆಸ್ತಿ ವಿಚಾರಕ್ಕೆ ವಿವಾದ ಸಮಸ್ಯೆ ಆಗಬಹುದು
- ಅನಗತ್ಯ ಖರ್ಚಿನಿಂದ ಬೇಸರ ಉಂಟಾಗಬಹುದು
- ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ
- ಭೂವರಾಹ ಸ್ವಾಮಿಯನ್ನು ಪ್ರಾರ್ಥಿಸಿ
ವೃಶ್ಚಿಕ
- ಜವಾಬ್ದಾರಿಯಿಂದ ವರ್ತಿಸದಿದ್ದರೆ ನಷ್ಟ ಉಂಟಾಗಬಹುದು
- ಹಳೆಯ ಸಂಬಂಧಗಳು ಪುನಃ ಒಂದಾಗಬಹುದು
- ಇಂದು ಪ್ರೇಮಿಗಳಿಗೆ ಶುಭದಿನ
- ನೀವು ಭಾಗವಹಿಸುವ ಸಂದರ್ಶನಗಳಲ್ಲಿ ಯಶಸ್ಸಿದೆ
- ಅಣ್ಣ ತಮ್ಮಂದಿರೊಂದಿಗೆ ಕಲಹ ಆಗಬಹುದು
- ಹೊಸ ಗುರಿಗಳಿಗೆ ಅದ್ಧುತವಾದ ದಿನ
- ಇಷ್ಟದೇವತೆಯನ್ನು ಪ್ರಾರ್ಥಿಸಿ
ಧನುಸ್
- ಹೆಂಡತಿಯ ಮನೆಯವರ ಕಡೆಯವರಿಂದ ಕಲಹ ಉಂಟಾಗಬಹುದು
- ಹಿಂದೆ ಹೂಡಿಕೆ ಮಾಡಿದ್ದ ಆಸ್ತಿಯ ವಿಚಾರದಲ್ಲಿ ಗೊಂದಲ
- ದುರಾಸೆ ಇಲ್ಲದ ಕೆಲಸಗಳಿಂದ ಸಂತೋಷವಿದೆ
- ನಿಮ್ಮ ಸ್ವಭಾವದಿಂದ ಸ್ನೇಹಿತರಿಗೆ ಬೇಸರ ಆಗಬಹುದು
- ನಿಮ್ಮಷ್ಟಕ್ಕೆ ನೀವು ಸಂತೋಷವಾಗಿರಲು ಆಗದ ದಿನ
- ಇಂದು ಹೆಚ್ಚು ಹಣ ಹೂಡಿಕೆ ಮಾಡಬೇಡಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ
ಮಕರ
- ಮನೆಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಜಗಳ
- ಕಾರ್ಯಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
- ಮನೆಯವರನ್ನು ಸಮಾಧಾನ ಮಾಡುವುದರಲ್ಲಿ ದಿನ ಕಳೆಯುತ್ತದೆ
- ಸಂಜೆಗೆ ಹೆಚ್ಚು ಖರ್ಚು ಆಗುವುದರಿಂದ ಆತಂಕ ಆಗಬಹುದು
- ನಿಮ್ಮ ಸ್ನೇಹಿತರ ವೈಯಕ್ತಿಕ ಸಮಸ್ಯೆ ನಿಮಗೂ ತೊಂದರೆಯಾಗಬಹುದು
- ಸಂಜೆಗೆ ಹೆಚ್ಚು ಖರ್ಚು ಆಗುವುದರಿಂದ ಆತಂಕ ಆಗಬಹುದು
- ಈ ದಿನದ ಆರಂಭ ಸಂತೋಷವಾಗಿರುತ್ತದೆ
- ಆಂಜನೇಯ ಸ್ವಾಮಿಯ ಆರಾಧನೆ ಮಾಡಿ
ಕುಂಭ
- ಕುಟುಂಬದವರ ಹೊಗಳಿಕೆ ನಿಮಗೆ ಸ್ಫೂರ್ತಿ
- ದಿನದ ವಾತಾವರಣವನ್ನು ಉತ್ತಮಗೊಳಿಸಿ
- ತಂದೆಯವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು
- ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿ
- ನಿಮ್ಮ ಮುಗ್ಧ ಮನಸ್ಸು ಬೇರೆಯವರಿಗೆ ಸಹಾಯವಾಗಬಹುದು
- ನಿಮ್ಮ ದೇಹದಲ್ಲಿ ಕಾಂತಿ ಹೆಚ್ಚಾಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಮೀನ
- ತಂದೆಯವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆಯಾಗಬಹುದು
- ಅನಗತ್ಯ ಕೆಲಸಗಳಿಂದ ನಿಮಗೆ ಮಾರಕವಾಗಬಹುದು
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ದೈನಂದಿನ ಕಾರ್ಯಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ
- ಸ್ನೇಹಿತರ ಮನೆಯಿಂದ ಅಶುಭ ವಾರ್ತೆ
- ಆತ್ಮೀಯರೊಂದಿಗೆ ಮನಸ್ತಾಪ ಬೇಸರ ಆಗಬಹುದು
- ಮೌನಕ್ಕೆ ಶರಣು ಹೋಗಿ
- ಬಾಲಗಣಪತಿಯನ್ನು ಆರಾಧಿಸಿ
ಇದನ್ನೂ ಓದಿ: ಮೈಸೂರಿನ ಜಂಬೂಸವಾರಿಯ ಅಂಬಾರಿಯೂ 750 ಕೆಜಿ ಚಿನ್ನದಿಂದ ಮಾಡಿಲ್ಲ! ಅಂಬಾರಿಯಲ್ಲಿ ಇರೋ ಚಿನ್ನ ಎಷ್ಟು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ