/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ
- ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುವ ದಿನ
 - ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
 - ನಿಮ್ಮ ಮಹತ್ತರವಾದ ಆಲೋಚನೆಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
 - ಜನರು ನಿಮ್ಮ ವ್ಯವಹಾರವನ್ನು ಗೇಲಿ ಮಾಡಬಹುದು
 - ಆರೋಗ್ಯವನ್ನು ತಾತ್ಸಾರ ಮಾಡಬೇಡಿ
 - ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
 - ಪ್ರೇಮದ ವಿಷಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ
 - ಮುತ್ತುರಾಯ ಸ್ವಾಮಿಯನ್ನು ಪ್ರಾರ್ಥಿಸಿ
 
ವೃಷಭ
- ಸಂಬಂಧಿಕರ ಭೇಟಿ ಮಾಡಿ ವಿವಾಹ ವಿಚಾರ ಪ್ರಸ್ತಾಪ ಮಾಡಬಹುದು
 - ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
 - ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
 - ಕಬ್ಬಿಣ ವ್ಯಾಪಾರಿಗಳಿಗೆ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಶುಭವಿದೆ
 - ಕಣ್ಣಿನ ತೊಂದರೆಯಾಗಬಹುದು ಜಾಗ್ರತೆ ವಹಿಸಿ
 - ದೇವಿಯ ಆರಾಧನೆ ಮಾಡಿ
 
ಮಿಥುನ
- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
 - ಹಿರಿಯರ ಅನಾರೋಗ್ಯ ನಿಮ್ಮನ್ನು ಕಾಡಲಿದೆ
 - ಹೆಚ್ಚು ಪರಿಶ್ರಮ ಪಡುತ್ತೀರಿ ಅದರಿಂದ ಶುಭಫಲವಾಗುತ್ತದೆ
 - ಸಾಯಂಕಾಲದ ವೇಳೆ ಮನೆಯಲ್ಲಿ ಅಶಾಂತಿ ವಾತಾವರಣ ಇರಲಿದೆ
 - ನೀವು ಮಾಡಿದ ಕೆಲಸ ನಿಮಗೆ ತೃಪ್ತಿಯಾಗುವುದಿಲ್ಲ
 - ಮನಸ್ಸಿನಲ್ಲಿ ಹಲವಾರು ಗೊಂದಲಗಳಿರುತ್ತವೆ
 - ಕುಲದೇವತಾ ಸ್ಮರಣೆ ಮಾಡಿ
 
ಕಟಕ
- ಹೊಸ ಮನೆ ಖರೀದಿ ಮಾಡುವುದರಿಂದ ಮನೆಯಲ್ಲಿ ಸಂತಸದ ವಾತಾವರಣ
 - ಮನೆಯಲ್ಲಿ ಜಟಿಲ ಸಮಸ್ಯೆಗಳಿದ್ದರು ನೀವು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ
 - ಮನೆಯವರು ನಿಮಗೆ ಏನೇ ಹೇಳಿದ್ರೂ ನಿಮ್ಮ ತಲೆಗೆ ಹೋಗುವುದಿಲ್ಲ
 - ಆದರೆ ನೀವು ನಿಮ್ಮದೆ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
 - ಮಾಂತ್ರಿಕ ವಿಚಾರಗಳಿಂದ ದೂರ ಉಳಿಯಬೇಕು
 - ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ
 - ಆಸೆಗೆ ಕಟ್ಟು ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಗಬಹುದು
 - ರಕ್ಷಾ ಸುದರ್ಶನನನ್ನು ಪ್ರಾರ್ಥಿಸಿ
 
ಸಿಂಹ
- ಜೀವನದಲ್ಲಿ ಜಿಗುಪ್ಸೆ ಅಥವಾ ವೈರಾಗ್ಯ ಕಾಡಲು ಆರಂಭವಾಗಬಹುದು
 - ಯಾವುದೇ ಅಪೇಕ್ಷೆಯಿಲ್ಲದ ಸಹಾಯ ಮಾಡುವ ಸ್ವಭಾವ ನಿಮ್ಮದಾಗಬೇಕು
 - ಅಂಗಡಿಗಳಲ್ಲಿ ಬೆಂಕಿ ಅವಘಡ ಸಂಭವಿಸಬಹುದು
 - ಜಗತ್ತಿನ ಒಳಿತಿಗೆ ಯಾವುದು ಬೇಕು ಬೇಡದ ಬಗ್ಗೆ ಚರ್ಚಿಸುತ್ತೀರಿ
 - ಪುಸ್ತಕದ ಪ್ರಭಾವ ನಿಮ್ಮನ್ನು ಪೂರ್ಣವಾಗಿ ಬೀರಲಿದೆ
 - ಪುಸ್ತಕ ಪ್ರೇಮಿಗಳಿಗೆ ಇಂದು ಶುಭ ದಿನ
 - ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥಿಸಿ
 
ಕನ್ಯಾ
- ಪಿತ್ರಾರ್ಜಿತ ಆಸ್ತಿ ಇಂದು ನಿಮ್ಮ ಕೈ ಸೇರಲಿದೆ
 - ಮಕ್ಕಳ ವಿಚಾರದಲ್ಲಿ ತಾತ್ಸಾರ ಬೇಡ
 - ನೆರೆಹೊರೆಯವರು ನಿಮಗೆ ಮೋಸ ಮಾಡಬಹುದು
 - ಆಕಸ್ಮಿಕವಾಗಿ ಕಾಲಿಗೆ ಪೆಟ್ಟು ಬೀಳಬಹುದು
 - ಎರಡನೇ ಮದುವೆಯಾದವರಲ್ಲಿ ಅನುಮಾನ ಕಾಡಬಹುದು
 - ಈ ದಿನ ನವವಿವಾಹಿತರಿಗೆ ಶುಭದಿನ
 - ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
 
ತುಲಾ
- ಪದವೀಧರ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಸಮಯ ಇರುವುದಿಲ್ಲ
 - ಮಾನಸಿಕವಾಗಿ ಭಯ ಹೆಚ್ಚಾಗುವ ಸಂದರ್ಭ
 - ಕೆಟ್ಟ ಶಕುನಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ
 - ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇದ್ದಾಗ ನಿಮ್ಮ ಆಲೋಚನೆಗಳು ಬೇರೆ ಇರಲಿದೆ
 - ಇಡೀ ಕುಟುಂಬ ಮತ್ತು ಭವಿಷ್ಯದ ಕೆಲವು ಅಂಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
 - ನಿಮ್ಮ ಆಲೋಚನೆಯೇ ಬೇರೆ, ಕಾರ್ಯಕ್ಷೇತ್ರದಲ್ಲಿ ನಡೆಯೋದೆ ಬೇರೆ ಆಗಿರುತ್ತದೆ
 - ಆರ್ಥಿಕ ಮತ್ತು ಹಣಕಾಸಿನ ವಿಚಾರದಿಂದ ಈ ದಿನ ಚೆನ್ನಾಗಿರುವುದಿಲ್ಲ
 - ನೀಲಿ ಹೂವಿನಿಂದ ಶನೇಶ್ವರನ ಪೂಜಿಸಿ
 
ವೃಶ್ಚಿಕ
- ನ್ಯಾಯಾಲಯದಲ್ಲಿದ ಕೇಸ್​ಗಳು ಇತ್ಯರ್ಥವಾಗದೆ ಸಮಸ್ಯೆ ಹೆಚ್ಚಾಗಬಹುದು
 - ತಮ್ಮ ಶಕ್ತಿ, ಸಾಮರ್ಥ್ಯ, ಹಣವನ್ನು ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ
 - ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
 - ಹಾವಿನಿಂದ ತೊಂದರೆಯಾಗಬಹುದು ಜಾಗ್ರತೆ ವಹಿಸಿ
 - ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
 - ಆಧುನಿಕ ತಂತ್ರಜ್ಞಾನದಲ್ಲಿ ಮೊರೆ ಹೋಗುತ್ತೀರಿ
 - ಅಷ್ಟಕುಲ ನಾಗೇಂದ್ರನ ಸ್ಮರಿಸಿ
 
ಧನುಸ್
- ಮನಸ್ಸು, ಶರೀರದ ಮೇಲೆ ಪ್ರಭಾವ ಬೀರುವ ಯಾವುದೇ ಆಲೋಚನೆ ಮಾಡಬೇಡಿ
 - ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ದಿನ
 - ಸಾಯಂಕಾಲ ಸುಖವಾದ ಭೋಜನಕ್ಕೆ ಅವಕಾಶವಿದೆ
 - ಮಾತೆಯರು ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ
 - ಸಗಟು ವ್ಯಾಪಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ
 - ನರಸಿಂಹನನ್ನು ಆರಾಧಿಸಿ
 
ಮಕರ
- ನೀವು ತೆಗೆದುಕೊಳ್ಳುವ ನಿರ್ಧಾರ, ನಿಮ್ಮ ನಡವಳಿಕೆ ತೊಂದರೆಯನ್ನುಂಟು ಮಾಡಬಹುದು
 - ಸುಳ್ಳು ಹೇಳಬೇಡಿ, ಸತ್ಯವನ್ನೇ ಹೇಳಿ ಜಯಶೀಲರಾಗಿ
 - ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿಸದ ಕಾರಣ ತೊಂದರೆಯಾಗಬಹುದು
 - ನಿಮ್ಮ ಕೆಟ್ಟ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
 - ಈ ದಿನ ಪ್ರೇಮಿಗಳಿಗೆ ಅಪಘಾತ ಆಗುವ ಸಾಧ್ಯತೆ ಎಚ್ಚರವಹಿಸಿ
 - ಈ ರಾಶಿಯವರಿಗೆ ಈ ದಿನ ಶುಭವಿಲ್ಲ
 - ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ಅರ್ಪಣೆ ಮಾಡಿ
 
ಕುಂಭ
- ನಿಮ್ಮ ಸ್ನೇಹಿತರ ಜೊತೆ ಜಗಳ ಆಗುವ ಸಾಧ್ಯತೆ
 - ಏಕಾಗ್ರತೆಯಿಂದ ಮಾತ್ರ ಜಯಶೀಲರಾಗುತ್ತೀರಿ
 - ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆಯಿದೆ
 - ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಹಣ ಖರ್ಚಾಗುವ ಸಾಧ್ಯತೆಯಿದೆ
 - ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
 - ಕಾಲು ನೋವಿನಿಂದ ಬಳಲುತ್ತಿರುವವರಿಗೆ ಈ ದಿನ ಪರಿಹಾರ ಸಿಗಬಹುದು
 - ನಿಮ್ಮ ಆತುರದ ನಿರ್ಧಾರಗಳಿಂದ ತುಂಬಾ ನಷ್ಟವನ್ನು ಹೊಂದುವ ಸಾಧ್ಯತೆಯಿದೆ
 - ನವಗ್ರಹರ ಸ್ತೋತ್ರ ಪಠಿಸಿ
 
ಮೀನಾ
- ಇಂದು ಮದುವೆಯ ವಿಚಾರ ಪ್ರಸ್ತಾಪ ಆಗಲಿದೆ
 - ವಿದ್ಯಾರ್ಥಿಗಳು ಮತ್ತು ಮಕ್ಕಳು ತುಂಬಾ ತಾಳ್ಮೆಯಿಂದ ವರ್ತಿಸಬೇಕಾದ ದಿನ
 - ನಿಮ್ಮ ಮನಸ್ಸಿಗೆ ಮಾನಸಿಕವಾಗಿ ನೋವುಂಟಾಗಬಹುದು
 - ರಸ್ತೆಬದಿ ವ್ಯಾಪಾರ ಮಾಡುವವರಿಗೆ ಲಾಭದ ದಿನ
 - ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ
 - ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ
 - ಸ್ವಲ್ಪ ವಿರಾಮ ಪಡೆಯುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
 - ಈಶ್ವರನನ್ನು ಆರಾಧನೆ ಮಾಡಿ
 
ಇದನ್ನೂ ಓದಿ:ಸ್ನೇಹಿತರ ಜೊತೆಯಲ್ಲಿದ್ದಾಗ ಸುಂದರವಾಗಿ ಕಾಣಬೇಕೆ.. ಹಾಗಾದ್ರೆ ನೀವು ಹೀಗೆ ಮಾಡಲೇಬೇಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us