/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಭಾದ್ರಪದ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಭರಣಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಇದನ್ನೂ ಓದಿ:ಹನಿಮೂನ್ಗೆ ಹೋದ ಹೆಂಡತಿಗೆ ಕಾದಿತ್ತು ಶಾಕ್.. ಮಧುಚಂದ್ರದಲ್ಲಿ ಗಂಡಂದಿರು ನಾಪತ್ತೆ! ಗಂಡ ಮಾಡಿದ್ದೇನು ಗೊತ್ತಾ?
ಮೇಷ
- ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುವ ದಿನ
- ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
- ನಿಮ್ಮ ಮಹತ್ತರವಾದ ಆಲೋಚನೆಗಳನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
- ಜನರು ನಿಮ್ಮ ವ್ಯವಹಾರವನ್ನು ಗೇಲಿ ಮಾಡಬಹುದು
- ಆರೋಗ್ಯವನ್ನು ತಾತ್ಸಾರ ಮಾಡಬೇಡಿ
- ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
- ಪ್ರೇಮದ ವಿಷಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ
- ಮುತ್ತುರಾಯ ಸ್ವಾಮಿಯನ್ನು ಪ್ರಾರ್ಥಿಸಿ
ವೃಷಭ
- ಸಂಬಂಧಿಕರ ಭೇಟಿ ಮಾಡಿ ವಿವಾಹ ವಿಚಾರ ಪ್ರಸ್ತಾಪ ಮಾಡಬಹುದು
- ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
- ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
- ಕಬ್ಬಿಣ ವ್ಯಾಪಾರಿಗಳಿಗೆ, ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಶುಭವಿದೆ
- ಕಣ್ಣಿನ ತೊಂದರೆಯಾಗಬಹುದು ಜಾಗ್ರತೆ ವಹಿಸಿ
- ದೇವಿಯ ಆರಾಧನೆ ಮಾಡಿ
ಮಿಥುನ
- ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
- ಹಿರಿಯರ ಅನಾರೋಗ್ಯ ನಿಮ್ಮನ್ನು ಕಾಡಲಿದೆ
- ಹೆಚ್ಚು ಪರಿಶ್ರಮ ಪಡುತ್ತೀರಿ ಅದರಿಂದ ಶುಭಫಲವಾಗುತ್ತದೆ
- ಸಾಯಂಕಾಲದ ವೇಳೆ ಮನೆಯಲ್ಲಿ ಅಶಾಂತಿ ವಾತಾವರಣ ಇರಲಿದೆ
- ನೀವು ಮಾಡಿದ ಕೆಲಸ ನಿಮಗೆ ತೃಪ್ತಿಯಾಗುವುದಿಲ್ಲ
- ಮನಸ್ಸಿನಲ್ಲಿ ಹಲವಾರು ಗೊಂದಲಗಳಿರುತ್ತವೆ
- ಕುಲದೇವತಾ ಸ್ಮರಣೆ ಮಾಡಿ
ಕಟಕ
- ಹೊಸ ಮನೆ ಖರೀದಿ ಮಾಡುವುದರಿಂದ ಮನೆಯಲ್ಲಿ ಸಂತಸದ ವಾತಾವರಣ
- ಮನೆಯಲ್ಲಿ ಜಟಿಲ ಸಮಸ್ಯೆಗಳಿದ್ದರು ನೀವು ಮಾತ್ರ ತಲೆ ಕೆಡಿಸಿಕೊಳ್ಳುವುದಿಲ್ಲ
- ಮನೆಯವರು ನಿಮಗೆ ಏನೇ ಹೇಳಿದ್ರೂ ನಿಮ್ಮ ತಲೆಗೆ ಹೋಗುವುದಿಲ್ಲ
- ಆದರೆ ನೀವು ನಿಮ್ಮದೆ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
- ಮಾಂತ್ರಿಕ ವಿಚಾರಗಳಿಂದ ದೂರ ಉಳಿಯಬೇಕು
- ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗಿರುತ್ತದೆ
- ಆಸೆಗೆ ಕಟ್ಟು ಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಕಾಗಬಹುದು
- ರಕ್ಷಾ ಸುದರ್ಶನನನ್ನು ಪ್ರಾರ್ಥಿಸಿ
ಸಿಂಹ
- ಜೀವನದಲ್ಲಿ ಜಿಗುಪ್ಸೆ ಅಥವಾ ವೈರಾಗ್ಯ ಕಾಡಲು ಆರಂಭವಾಗಬಹುದು
- ಯಾವುದೇ ಅಪೇಕ್ಷೆಯಿಲ್ಲದ ಸಹಾಯ ಮಾಡುವ ಸ್ವಭಾವ ನಿಮ್ಮದಾಗಬೇಕು
- ಅಂಗಡಿಗಳಲ್ಲಿ ಬೆಂಕಿ ಅವಘಡ ಸಂಭವಿಸಬಹುದು
- ಜಗತ್ತಿನ ಒಳಿತಿಗೆ ಯಾವುದು ಬೇಕು ಬೇಡದ ಬಗ್ಗೆ ಚರ್ಚಿಸುತ್ತೀರಿ
- ಪುಸ್ತಕದ ಪ್ರಭಾವ ನಿಮ್ಮನ್ನು ಪೂರ್ಣವಾಗಿ ಬೀರಲಿದೆ
- ಪುಸ್ತಕ ಪ್ರೇಮಿಗಳಿಗೆ ಇಂದು ಶುಭ ದಿನ
- ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥಿಸಿ
ಕನ್ಯಾ
- ಪಿತ್ರಾರ್ಜಿತ ಆಸ್ತಿ ಇಂದು ನಿಮ್ಮ ಕೈ ಸೇರಲಿದೆ
- ಮಕ್ಕಳ ವಿಚಾರದಲ್ಲಿ ತಾತ್ಸಾರ ಬೇಡ
- ನೆರೆಹೊರೆಯವರು ನಿಮಗೆ ಮೋಸ ಮಾಡಬಹುದು
- ಆಕಸ್ಮಿಕವಾಗಿ ಕಾಲಿಗೆ ಪೆಟ್ಟು ಬೀಳಬಹುದು
- ಎರಡನೇ ಮದುವೆಯಾದವರಲ್ಲಿ ಅನುಮಾನ ಕಾಡಬಹುದು
- ಈ ದಿನ ನವವಿವಾಹಿತರಿಗೆ ಶುಭದಿನ
- ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ
ತುಲಾ
- ಪದವೀಧರ ವಿದ್ಯಾರ್ಥಿಗಳಿಗೆ ಓದಲು ಬರೆಯಲು ಸಮಯ ಇರುವುದಿಲ್ಲ
- ಮಾನಸಿಕವಾಗಿ ಭಯ ಹೆಚ್ಚಾಗುವ ಸಂದರ್ಭ
- ಕೆಟ್ಟ ಶಕುನಗಳು ನಿಮ್ಮ ಧೈರ್ಯವನ್ನು ಕಡಿಮೆ ಮಾಡುತ್ತದೆ
- ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇದ್ದಾಗ ನಿಮ್ಮ ಆಲೋಚನೆಗಳು ಬೇರೆ ಇರಲಿದೆ
- ಇಡೀ ಕುಟುಂಬ ಮತ್ತು ಭವಿಷ್ಯದ ಕೆಲವು ಅಂಶಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ
- ನಿಮ್ಮ ಆಲೋಚನೆಯೇ ಬೇರೆ, ಕಾರ್ಯಕ್ಷೇತ್ರದಲ್ಲಿ ನಡೆಯೋದೆ ಬೇರೆ ಆಗಿರುತ್ತದೆ
- ಆರ್ಥಿಕ ಮತ್ತು ಹಣಕಾಸಿನ ವಿಚಾರದಿಂದ ಈ ದಿನ ಚೆನ್ನಾಗಿರುವುದಿಲ್ಲ
- ನೀಲಿ ಹೂವಿನಿಂದ ಶನೇಶ್ವರನ ಪೂಜಿಸಿ
ವೃಶ್ಚಿಕ
- ನ್ಯಾಯಾಲಯದಲ್ಲಿದ ಕೇಸ್ಗಳು ಇತ್ಯರ್ಥವಾಗದೆ ಸಮಸ್ಯೆ ಹೆಚ್ಚಾಗಬಹುದು
- ತಮ್ಮ ಶಕ್ತಿ, ಸಾಮರ್ಥ್ಯ, ಹಣವನ್ನು ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ
- ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
- ಹಾವಿನಿಂದ ತೊಂದರೆಯಾಗಬಹುದು ಜಾಗ್ರತೆ ವಹಿಸಿ
- ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯವಿರುತ್ತದೆ
- ಆಧುನಿಕ ತಂತ್ರಜ್ಞಾನದಲ್ಲಿ ಮೊರೆ ಹೋಗುತ್ತೀರಿ
- ಅಷ್ಟಕುಲ ನಾಗೇಂದ್ರನ ಸ್ಮರಿಸಿ
ಧನುಸ್
- ಮನಸ್ಸು, ಶರೀರದ ಮೇಲೆ ಪ್ರಭಾವ ಬೀರುವ ಯಾವುದೇ ಆಲೋಚನೆ ಮಾಡಬೇಡಿ
- ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ದಿನ
- ಸಾಯಂಕಾಲ ಸುಖವಾದ ಭೋಜನಕ್ಕೆ ಅವಕಾಶವಿದೆ
- ಮಾತೆಯರು ಬೆನ್ನು ನೋವಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ
- ಸಗಟು ವ್ಯಾಪಾರಿಗಳಿಗೆ ಅಧಿಕಾರಿಗಳು ದಂಡ ವಿಧಿಸುವ ಸಾಧ್ಯತೆಯಿದೆ
- ನರಸಿಂಹನನ್ನು ಆರಾಧಿಸಿ
ಮಕರ
- ನೀವು ತೆಗೆದುಕೊಳ್ಳುವ ನಿರ್ಧಾರ, ನಿಮ್ಮ ನಡವಳಿಕೆ ತೊಂದರೆಯನ್ನುಂಟು ಮಾಡಬಹುದು
- ಸುಳ್ಳು ಹೇಳಬೇಡಿ, ಸತ್ಯವನ್ನೇ ಹೇಳಿ ಜಯಶೀಲರಾಗಿ
- ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿಸದ ಕಾರಣ ತೊಂದರೆಯಾಗಬಹುದು
- ನಿಮ್ಮ ಕೆಟ್ಟ ನಡವಳಿಕೆಯಿಂದ ನೀವು ಪೊಲೀಸರ ಅತಿಥಿಯಾಗಬಹುದು
- ಈ ದಿನ ಪ್ರೇಮಿಗಳಿಗೆ ಅಪಘಾತ ಆಗುವ ಸಾಧ್ಯತೆ ಎಚ್ಚರವಹಿಸಿ
- ಈ ರಾಶಿಯವರಿಗೆ ಈ ದಿನ ಶುಭವಿಲ್ಲ
- ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ಅರ್ಪಣೆ ಮಾಡಿ
ಕುಂಭ
- ನಿಮ್ಮ ಸ್ನೇಹಿತರ ಜೊತೆ ಜಗಳ ಆಗುವ ಸಾಧ್ಯತೆ
- ಏಕಾಗ್ರತೆಯಿಂದ ಮಾತ್ರ ಜಯಶೀಲರಾಗುತ್ತೀರಿ
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಅಥವಾ ಮೋಸ ಆಗುವ ಸಾಧ್ಯತೆಯಿದೆ
- ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಅನಗತ್ಯ ಹಣ ಖರ್ಚಾಗುವ ಸಾಧ್ಯತೆಯಿದೆ
- ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
- ಕಾಲು ನೋವಿನಿಂದ ಬಳಲುತ್ತಿರುವವರಿಗೆ ಈ ದಿನ ಪರಿಹಾರ ಸಿಗಬಹುದು
- ನಿಮ್ಮ ಆತುರದ ನಿರ್ಧಾರಗಳಿಂದ ತುಂಬಾ ನಷ್ಟವನ್ನು ಹೊಂದುವ ಸಾಧ್ಯತೆಯಿದೆ
- ನವಗ್ರಹರ ಸ್ತೋತ್ರ ಪಠಿಸಿ
ಮೀನಾ
- ಇಂದು ಮದುವೆಯ ವಿಚಾರ ಪ್ರಸ್ತಾಪ ಆಗಲಿದೆ
- ವಿದ್ಯಾರ್ಥಿಗಳು ಮತ್ತು ಮಕ್ಕಳು ತುಂಬಾ ತಾಳ್ಮೆಯಿಂದ ವರ್ತಿಸಬೇಕಾದ ದಿನ
- ನಿಮ್ಮ ಮನಸ್ಸಿಗೆ ಮಾನಸಿಕವಾಗಿ ನೋವುಂಟಾಗಬಹುದು
- ರಸ್ತೆಬದಿ ವ್ಯಾಪಾರ ಮಾಡುವವರಿಗೆ ಲಾಭದ ದಿನ
- ಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ಶುಭ ದಿನ
- ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ
- ಸ್ವಲ್ಪ ವಿರಾಮ ಪಡೆಯುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ
- ಈಶ್ವರನನ್ನು ಆರಾಧನೆ ಮಾಡಿ
ಇದನ್ನೂ ಓದಿ:ಸ್ನೇಹಿತರ ಜೊತೆಯಲ್ಲಿದ್ದಾಗ ಸುಂದರವಾಗಿ ಕಾಣಬೇಕೆ.. ಹಾಗಾದ್ರೆ ನೀವು ಹೀಗೆ ಮಾಡಲೇಬೇಕು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ