newsfirstkannada.com

ಲವ್​ ಫೇಲ್ಯೂರ್​.. ಚಲಿಸುತ್ತಿದ್ದ ಬಸ್​ನಿಂದ ಹಾರಿ ಯುವಕ ಸಾವು

Share :

Published June 10, 2024 at 11:30am

Update June 10, 2024 at 11:32am

    ಪ್ರೇಮ ವೈಫಲ್ಯ.. ಬಸ್​ನಿಂದ ಹಾರಿ ಯುವಕ ಸಾವು

    ಫೋನ್​ನಲ್ಲಿ ಮಾತನಾಡುತ್ತಿದ್ದಂತೆಯೇ ಬಸ್​ನಿಂದ ಹಾರಿದ

    ಇಪ್ಪತ್ತೆರಡು ವರ್ಷದ ಯುವಕ ರಸ್ತೆಗೆಸೆದು ಅಲ್ಲೇ ಸಾವನ್ನಪ್ಪಿದ

ಫೋನ್​ನಲ್ಲಿ ಮಾತನಾಡುತ್ತಾ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್​ ಕುಮಾರ್​ (22) ಎಂದು ಗುರುತಿಸಲಾಗಿದೆ.

ವಿನೋದ್​ ಕುಮಾರ್​ ತಿರುಚ್ಚಿಯ ತುರೈಯೂರ್​ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್​ ಏರಿದ್ದಾನೆ. ಬಸ್​ ಏರುವಾಗ ಆತ ಫೋನ್​ನಲ್ಲಿ ಮಾತನಾಡುತ್ತಿದ್ದನು ಎಂದು ಪ್ರಯಾಣಿಕರು ಗಮನಿಸಿದ್ದಾನೆ.

ಪೆರಂಬೂರ್​ನ ಆಲತ್ತೂರ್​ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್​ ಏರಿದ್ದ ವಿನೋದ್​ ಫೋನ್​ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್​ನ ಫುಟ್​​ಬೋರ್ಡ್​​ಗೆ ಹೋಗಿ ಹೊರ ಜಿಗಿದಿದ್ದಾನೆ.

ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ

ಕೂಡಲೇ ವಿನೋದ್​ ಆತ್ಮಹತ್ಯೆ ಮಾಡಿರೋದನ್ನು ಕಂಡು ಚಾಲಕ ಬಸ್​ ನಿಲ್ಲಿಸಿದ್ದಾನೆ. ಆತನ ಬಳಿಕ ಓಡಿ ಹೋಗಿ ನೋಡಿದಾಗ ವಿನೋದ್​ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?

ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತನ ಫೋನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಯುವಕ ಪ್ರೇಮ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲವ್​ ಫೇಲ್ಯೂರ್​.. ಚಲಿಸುತ್ತಿದ್ದ ಬಸ್​ನಿಂದ ಹಾರಿ ಯುವಕ ಸಾವು

https://newsfirstlive.com/wp-content/uploads/2024/06/Chennai.jpg

    ಪ್ರೇಮ ವೈಫಲ್ಯ.. ಬಸ್​ನಿಂದ ಹಾರಿ ಯುವಕ ಸಾವು

    ಫೋನ್​ನಲ್ಲಿ ಮಾತನಾಡುತ್ತಿದ್ದಂತೆಯೇ ಬಸ್​ನಿಂದ ಹಾರಿದ

    ಇಪ್ಪತ್ತೆರಡು ವರ್ಷದ ಯುವಕ ರಸ್ತೆಗೆಸೆದು ಅಲ್ಲೇ ಸಾವನ್ನಪ್ಪಿದ

ಫೋನ್​ನಲ್ಲಿ ಮಾತನಾಡುತ್ತಾ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್​ ಕುಮಾರ್​ (22) ಎಂದು ಗುರುತಿಸಲಾಗಿದೆ.

ವಿನೋದ್​ ಕುಮಾರ್​ ತಿರುಚ್ಚಿಯ ತುರೈಯೂರ್​ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್​ ಏರಿದ್ದಾನೆ. ಬಸ್​ ಏರುವಾಗ ಆತ ಫೋನ್​ನಲ್ಲಿ ಮಾತನಾಡುತ್ತಿದ್ದನು ಎಂದು ಪ್ರಯಾಣಿಕರು ಗಮನಿಸಿದ್ದಾನೆ.

ಪೆರಂಬೂರ್​ನ ಆಲತ್ತೂರ್​ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್​ ಏರಿದ್ದ ವಿನೋದ್​ ಫೋನ್​ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್​ನ ಫುಟ್​​ಬೋರ್ಡ್​​ಗೆ ಹೋಗಿ ಹೊರ ಜಿಗಿದಿದ್ದಾನೆ.

ಇದನ್ನೂ ಓದಿ: ಡಿವೋರ್ಸ್​ ನೀಡಲು ಮುಂದಾದ ಪತಿ.. ಫ್ಲೈಓವರ್​ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ

ಕೂಡಲೇ ವಿನೋದ್​ ಆತ್ಮಹತ್ಯೆ ಮಾಡಿರೋದನ್ನು ಕಂಡು ಚಾಲಕ ಬಸ್​ ನಿಲ್ಲಿಸಿದ್ದಾನೆ. ಆತನ ಬಳಿಕ ಓಡಿ ಹೋಗಿ ನೋಡಿದಾಗ ವಿನೋದ್​ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?

ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತನ ಫೋನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಯುವಕ ಪ್ರೇಮ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More