ಪ್ರೇಮ ವೈಫಲ್ಯ.. ಬಸ್ನಿಂದ ಹಾರಿ ಯುವಕ ಸಾವು
ಫೋನ್ನಲ್ಲಿ ಮಾತನಾಡುತ್ತಿದ್ದಂತೆಯೇ ಬಸ್ನಿಂದ ಹಾರಿದ
ಇಪ್ಪತ್ತೆರಡು ವರ್ಷದ ಯುವಕ ರಸ್ತೆಗೆಸೆದು ಅಲ್ಲೇ ಸಾವನ್ನಪ್ಪಿದ
ಫೋನ್ನಲ್ಲಿ ಮಾತನಾಡುತ್ತಾ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್ ಕುಮಾರ್ (22) ಎಂದು ಗುರುತಿಸಲಾಗಿದೆ.
ವಿನೋದ್ ಕುಮಾರ್ ತಿರುಚ್ಚಿಯ ತುರೈಯೂರ್ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್ ಏರಿದ್ದಾನೆ. ಬಸ್ ಏರುವಾಗ ಆತ ಫೋನ್ನಲ್ಲಿ ಮಾತನಾಡುತ್ತಿದ್ದನು ಎಂದು ಪ್ರಯಾಣಿಕರು ಗಮನಿಸಿದ್ದಾನೆ.
ಪೆರಂಬೂರ್ನ ಆಲತ್ತೂರ್ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್ ಏರಿದ್ದ ವಿನೋದ್ ಫೋನ್ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್ನ ಫುಟ್ಬೋರ್ಡ್ಗೆ ಹೋಗಿ ಹೊರ ಜಿಗಿದಿದ್ದಾನೆ.
ಇದನ್ನೂ ಓದಿ: ಡಿವೋರ್ಸ್ ನೀಡಲು ಮುಂದಾದ ಪತಿ.. ಫ್ಲೈಓವರ್ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ
ಕೂಡಲೇ ವಿನೋದ್ ಆತ್ಮಹತ್ಯೆ ಮಾಡಿರೋದನ್ನು ಕಂಡು ಚಾಲಕ ಬಸ್ ನಿಲ್ಲಿಸಿದ್ದಾನೆ. ಆತನ ಬಳಿಕ ಓಡಿ ಹೋಗಿ ನೋಡಿದಾಗ ವಿನೋದ್ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?
ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತನ ಫೋನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಯುವಕ ಪ್ರೇಮ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರೇಮ ವೈಫಲ್ಯ.. ಬಸ್ನಿಂದ ಹಾರಿ ಯುವಕ ಸಾವು
ಫೋನ್ನಲ್ಲಿ ಮಾತನಾಡುತ್ತಿದ್ದಂತೆಯೇ ಬಸ್ನಿಂದ ಹಾರಿದ
ಇಪ್ಪತ್ತೆರಡು ವರ್ಷದ ಯುವಕ ರಸ್ತೆಗೆಸೆದು ಅಲ್ಲೇ ಸಾವನ್ನಪ್ಪಿದ
ಫೋನ್ನಲ್ಲಿ ಮಾತನಾಡುತ್ತಾ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್ ಕುಮಾರ್ (22) ಎಂದು ಗುರುತಿಸಲಾಗಿದೆ.
ವಿನೋದ್ ಕುಮಾರ್ ತಿರುಚ್ಚಿಯ ತುರೈಯೂರ್ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್ ಏರಿದ್ದಾನೆ. ಬಸ್ ಏರುವಾಗ ಆತ ಫೋನ್ನಲ್ಲಿ ಮಾತನಾಡುತ್ತಿದ್ದನು ಎಂದು ಪ್ರಯಾಣಿಕರು ಗಮನಿಸಿದ್ದಾನೆ.
ಪೆರಂಬೂರ್ನ ಆಲತ್ತೂರ್ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್ ಏರಿದ್ದ ವಿನೋದ್ ಫೋನ್ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್ನ ಫುಟ್ಬೋರ್ಡ್ಗೆ ಹೋಗಿ ಹೊರ ಜಿಗಿದಿದ್ದಾನೆ.
ಇದನ್ನೂ ಓದಿ: ಡಿವೋರ್ಸ್ ನೀಡಲು ಮುಂದಾದ ಪತಿ.. ಫ್ಲೈಓವರ್ನಿಂದ ಜಿಗಿದು ಹೆಂಡತಿ ಆತ್ಮಹತ್ಯೆ
ಕೂಡಲೇ ವಿನೋದ್ ಆತ್ಮಹತ್ಯೆ ಮಾಡಿರೋದನ್ನು ಕಂಡು ಚಾಲಕ ಬಸ್ ನಿಲ್ಲಿಸಿದ್ದಾನೆ. ಆತನ ಬಳಿಕ ಓಡಿ ಹೋಗಿ ನೋಡಿದಾಗ ವಿನೋದ್ ತಲೆಗೆ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಬಾರೋ ಬಾರೋ ಮಳೆರಾಯ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ! ಇಂದು ಎಷ್ಟಿದೆ?
ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆತನ ಫೋನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಯುವಕ ಪ್ರೇಮ ವೈಫಲ್ಯದಿಂದ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ