newsfirstkannada.com

ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ

Share :

Published May 16, 2024 at 10:43am

    ಇದೆಂಥಾ ವಿಚಿತ್ರ.. ಸೇದುವ ಬೀಡಿಗಾಗಿ ನಡೆಯಿತು ಕೊಲೆ

    ಒಂದು ಬೀಡಿ ಕೊಟ್ಟ, ಎರಡನೇ ಬೀಡಿ ಕೊಡಲು ನಿರಾಕರಿಸಿದ

    ಬೀಡಿ ಕೊಡಲು ನಿರಾಕರಿಸಿದ್ದಕ್ಕೆ ಶುರುವಾಯ್ತು ಜಗಳ.. ಆಮೇಲೆ?

ಸೇದಲು ಬೀಡಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸರಿಯಾಗಿ ಥಳಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶ ಛೋಟಿ ಗ್ವಾಲ್ಟೋಲಿ ಪೊಲೀಸ್​ ವೃತ್ತದಲ್ಲಿ ಬೆಳಕಿಗೆ ಬಂದಿದೆ. ಮೇ13ರಂದು ರಾತ್ರಿ ಈ ಘಟನೆ ನಡೆದಿದೆ.

ಬೀಡಿ ಕೊಡಲು ನಿರಾಕರಿಸಿದ

ಮನೋಹರ್​ ಎಂಬಾತ ಸಾವನ್ನಪ್ಪಿದ್ದಾನೆ. ಈತ ಆ ಪ್ರದೇಶದಲ್ಲೇ ಓಡಾಡಿಕೊಂಡು ಪುಟ್​ಪಾತ್​ ಮೇಲೆ ಮಲಗುತ್ತಿದ್ದ. ಆತನ ಬಳಿ ಬಂದ ಕರಣ್​ ಎಂಬಾತ ಸೇದಲು ಬೀಡಿ ಕೇಳಿದ್ದಾನೆ. ಮೊದಲಿಗೆ ಆತನಿಗೆ ಬೀಡಿ ನೀಡಿದ್ದಾನೆ. ಎರಡನೇ ಬೀಡಿ ಕೇಳಿದಾಗ ಮನೋಹರ್​ ಕೊಡಲು ನಿರಾಕರಿಸಿದ್ದಾನೆ.

ಇದನ್ನೂ ಓದಿ:90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

ಮರದ ಕೋಲಿನಿಂದ ಹೊಡೆದ

ಈ ವೇಳೆ ಕರಣ್​ ಮತ್ತು ಮನೋಹರ್​ ನಡುವೆ ವಾಗ್ವಾದವಾಗಿದೆ. ಕೊನೆಗೆ ಕರಣ್​ ಅಲ್ಲಿದ್ದ ಮರದ ಕೋಲಿನಿಂದ ಮನೋಹರ್​ ತಲೆಯ ಮೇಲೆ ಹೊಡೆದಿದ್ದಾನೆ. ಜೋರಾಗಿ ಹೊಡೆದ ಪರಿಣಾಮ ಮನೋಹರ್​ಗೆ ರಕ್ತಸ್ರಾವವಾಗಿದೆ.

ಇದನ್ನೂ ಓದಿ: RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇಲ್ಲಿವರೆಗೆ ಆಡಿರುವ ಎಲ್ಲಾ ಪಂದ್ಯ ಬೆಂಗಳೂರು ಪಾಲು

ಚಿಕಿತ್ಸೆ ಫಲಿಸಲಿಲ್ಲ

ಇದನ್ನು ಕಂಡು ಮನೋಹರ್​ ಪರಿಚಯಸ್ಥರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅದೇ ದಿನ ರಾತ್ರಿ ಚಿಕಿತ್ಸೆ ಫಲಿಸದೆ ಮನೋಹರ್​ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸದ್ಯ ಕೊಲೆಗಾರ ಕರಣ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೀಡಿಗಾಗಿ ಮನೋಹರ್​ನನ್ನು ಕೊಲೆ ಮಾಡಿದವನನ್ನು ಬಂಧಿಸಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ

https://newsfirstlive.com/wp-content/uploads/2024/05/Beedi.jpg

    ಇದೆಂಥಾ ವಿಚಿತ್ರ.. ಸೇದುವ ಬೀಡಿಗಾಗಿ ನಡೆಯಿತು ಕೊಲೆ

    ಒಂದು ಬೀಡಿ ಕೊಟ್ಟ, ಎರಡನೇ ಬೀಡಿ ಕೊಡಲು ನಿರಾಕರಿಸಿದ

    ಬೀಡಿ ಕೊಡಲು ನಿರಾಕರಿಸಿದ್ದಕ್ಕೆ ಶುರುವಾಯ್ತು ಜಗಳ.. ಆಮೇಲೆ?

ಸೇದಲು ಬೀಡಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸರಿಯಾಗಿ ಥಳಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶ ಛೋಟಿ ಗ್ವಾಲ್ಟೋಲಿ ಪೊಲೀಸ್​ ವೃತ್ತದಲ್ಲಿ ಬೆಳಕಿಗೆ ಬಂದಿದೆ. ಮೇ13ರಂದು ರಾತ್ರಿ ಈ ಘಟನೆ ನಡೆದಿದೆ.

ಬೀಡಿ ಕೊಡಲು ನಿರಾಕರಿಸಿದ

ಮನೋಹರ್​ ಎಂಬಾತ ಸಾವನ್ನಪ್ಪಿದ್ದಾನೆ. ಈತ ಆ ಪ್ರದೇಶದಲ್ಲೇ ಓಡಾಡಿಕೊಂಡು ಪುಟ್​ಪಾತ್​ ಮೇಲೆ ಮಲಗುತ್ತಿದ್ದ. ಆತನ ಬಳಿ ಬಂದ ಕರಣ್​ ಎಂಬಾತ ಸೇದಲು ಬೀಡಿ ಕೇಳಿದ್ದಾನೆ. ಮೊದಲಿಗೆ ಆತನಿಗೆ ಬೀಡಿ ನೀಡಿದ್ದಾನೆ. ಎರಡನೇ ಬೀಡಿ ಕೇಳಿದಾಗ ಮನೋಹರ್​ ಕೊಡಲು ನಿರಾಕರಿಸಿದ್ದಾನೆ.

ಇದನ್ನೂ ಓದಿ:90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock​’ ಎಂದ ಕಂಪನಿ!

ಮರದ ಕೋಲಿನಿಂದ ಹೊಡೆದ

ಈ ವೇಳೆ ಕರಣ್​ ಮತ್ತು ಮನೋಹರ್​ ನಡುವೆ ವಾಗ್ವಾದವಾಗಿದೆ. ಕೊನೆಗೆ ಕರಣ್​ ಅಲ್ಲಿದ್ದ ಮರದ ಕೋಲಿನಿಂದ ಮನೋಹರ್​ ತಲೆಯ ಮೇಲೆ ಹೊಡೆದಿದ್ದಾನೆ. ಜೋರಾಗಿ ಹೊಡೆದ ಪರಿಣಾಮ ಮನೋಹರ್​ಗೆ ರಕ್ತಸ್ರಾವವಾಗಿದೆ.

ಇದನ್ನೂ ಓದಿ: RCBvsCSK: ಮೇ18 ಆರ್​ಸಿಬಿಗೆ ಅದೃಷ್ಟದ ದಿನ.. ಯಾಕಂದ್ರೆ ಇಲ್ಲಿವರೆಗೆ ಆಡಿರುವ ಎಲ್ಲಾ ಪಂದ್ಯ ಬೆಂಗಳೂರು ಪಾಲು

ಚಿಕಿತ್ಸೆ ಫಲಿಸಲಿಲ್ಲ

ಇದನ್ನು ಕಂಡು ಮನೋಹರ್​ ಪರಿಚಯಸ್ಥರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಅದೇ ದಿನ ರಾತ್ರಿ ಚಿಕಿತ್ಸೆ ಫಲಿಸದೆ ಮನೋಹರ್​ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ಕುರಿತಂತೆ ತನಿಖೆ ಆರಂಭಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸದ್ಯ ಕೊಲೆಗಾರ ಕರಣ್​​ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬೀಡಿಗಾಗಿ ಮನೋಹರ್​ನನ್ನು ಕೊಲೆ ಮಾಡಿದವನನ್ನು ಬಂಧಿಸಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More