Advertisment

ಪುಣ್ಯಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ 43 ಮಂದಿ ನಾಪತ್ತೆ.. 37 ಮಕ್ಕಳು ಮಿಸ್ಸಿಂಗ್​

author-image
AS Harshith
Updated On
ಪುಣ್ಯಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ 43 ಮಂದಿ ನಾಪತ್ತೆ.. 37 ಮಕ್ಕಳು ಮಿಸ್ಸಿಂಗ್​
Advertisment
  • ಪುಣ್ಯಸ್ನಾನಕ್ಕೆಂದು ನೀರಿಗೆ ಇಳಿದ ತಾಯಿ, ಮಕ್ಕಳು
  • ನದಿ, ಕೊಳಗಳಿಗೆ ಇಳಿದು ಸುಮಾರು 43 ಮಂದಿ ನಾಪತ್ತೆ
  • ಬೇಸರ ವ್ಯಕ್ತಪಡಿಸಿದ ಸಿಎಂ.. ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ

ಪುಣ್ಯಸ್ನಾನಕ್ಕೆಂದು ನೀರಿನಲ್ಲಿ ಮುಳುಗಿ ಸುಮಾರು 37 ಮಕ್ಕಳು ಸೇರಿದಂತೆ 43 ಜನರು ನಾಪತ್ತೆಯಾದ ಘಟನೆ ಬಿಹಾರದಲ್ಲಿ ನಡೆದಿದೆ. ಜೀವಿತ್ಪುತ್ರಿಕಾ ಹಬ್ಬದ ಆಚರಣೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.

Advertisment

ಬಿಹಾರದಲ್ಲಿ ಜೀವಿತ್ಪುತ್ರಿಕಾ ಹಬ್ಬದ ಆಚರಣೆ ನಡೆಯುತ್ತಿದೆ. ಈ ಸಮಯದಲ್ಲಿ ಭಕ್ತರು ನದಿ ಮತ್ತು ಕೊಳದಲ್ಲಿ ಮುಳುಗಿ ಪುಣ್ಯಸ್ನಾನ ಮಾಡುತ್ತಾರೆ. ಹೀಗೆ ನೀರಿಗಿಳಿದವರ ಪೈಕಿ ಸುಮಾರು 43 ಮಂದಿ ಕಾಣೆಯಾಗಿದ್ದಾರೆ ಎಂದು ಬಿಹಾರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Sleep Internship: ನಿದ್ದೆ ಮಾಡಿ 9 ಲಕ್ಷ ರೂಪಾಯಿ ಗೆದ್ದ ಬೆಂಗಳೂರಿನ ಯುವತಿ!

ಜೀವಿತ್ಪುತ್ರಿಕಾ ಬಿಹಾರ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಮಹಿಳೆಯರು ತಮ್ಮ ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿ ಬಯಸಲು ಉಪವಾಸ ಆಚರಿಸುತ್ತಾರೆ. ಬಳಿಕ ಮಕ್ಕಳ ಜೊತೆಗೆ ನದಿಯಲ್ಲಿ ಅಥವಾ ಕೊಳದಲ್ಲಿ ಮುಳುಗಿ ಸ್ನಾನ ಮಾಡುತ್ತಾರೆ. ಇದನ್ನು ಪವಿತ್ರ ಸ್ನಾನ ಎಂದು ನಂಬಿದ್ದಾರೆ. ಹೀಗೆ ಮುಳುಗಿದವರಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಸಾವು-ನೋವುಗಳು ವರದಿಯಾಗಿವೆ.

Advertisment

ಇದನ್ನೂ ಓದಿ: ದರ್ಶನ್​ಗೆ ಜೈಲಿನಲ್ಲೇ IT ಅಧಿಕಾರಿಗಳಿಂದ ಡ್ರಿಲ್, ಇಂದು ಕೂಡ ವಿಚಾರಣೆ.. ನಟನಿಗೆ ಬೇಲ್ ಸಿಗುತ್ತಾ?

ಇನ್ನು ಈ ಘಟನೆ ತಿಳಿದು ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment