newsfirstkannada.com

ಊಟದ ವಿಚಾರಕ್ಕೆ ಜಗಳ.. ಹೆಂಡತಿಗೆ ಚಾಕುವಿನಿಂದ ಚುಚ್ಚಿಚುಚ್ಚಿ ಕೊಂದ ಪಾಪಿ ಗಂಡ

Share :

Published May 6, 2024 at 6:03am

    ಹಿರಿಯ ಮಗನ ಮುಂದೆ ನಡೆಯಿತು ಹೆತ್ತ ತಾಯಿಯ ಭೀಕರ ಕೊಲೆ

    ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ ಮಹಿಳೆ ಕುಟುಂಬಸ್ಥರು

    ಮನೆಯಲ್ಲಿ ಊಟದ ವಿಚಾರಕ್ಕೆ ಪತಿ, ಪತ್ನಿ ನಡುವೆ ನಡೆದ ಜಗಳ

ಮುಂಬೈ: ಊಟದ ವಿಚಾರದಲ್ಲಿ ಗಲಾಟೆ ಆಗಿದ್ದರಿಂದ ಕುಡಿದ ಮತ್ತಿನಲ್ಲಿ ಗಂಡನು ತನ್ನ ಹೆಂಡತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮುಂಬೈನ ಮಲಬಾರ್ ಹಿಲ್ ಪ್ರದೇಶದ ಶಿಮ್ಲಾ ನಗರದ ಮನೆಯೊಂದರಲ್ಲಿ ನಡೆದಿದೆ.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಶಿಮ್ಲಾ ನಗರದ ನಿವಾಸಿ ಪತ್ನಿ ಅಂಜಲಿ ಅಜಯ್ ವರ್ಧಮ್ (36) ಕೊಲೆಯಾದ ದುರ್ದೈವಿ. ಅಜಯ್ ವರ್ಧಮ್ (38) ಹೆಂಡತಿಯನ್ನು ಹತ್ಯೆ ಮಾಡಿದವನು. ದಂಪತಿ ಇಬ್ಬರು ರಾತ್ರಿ 10 ರಿಂದ 10:30ರ ಸುಮಾರಿಗೆ ಮನೆಯಲ್ಲಿ ಊಟ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಯು ಮದ್ಯಪಾನ ಸೇವಿಸಿದ್ದರಿಂದ ನಿನಗೆ ಇನ್ನೊಬ್ಬರ ಜೊತೆ ಸಂಬಂಧವಿದೆ ಎಂದು ಜಗಳ ತೆಗೆದಿದ್ದಾನೆ. ಈ ಜಗಳ ಅತಿರೇಕಕ್ಕೆ ಹೋಗಿದೆ. ಆಗ ಗಂಡ ಮದ್ಯದ ಅಮಲಿನಲ್ಲಿ ಕೈಗೆ ಚಾಕು ತೆಗೆದುಕೊಂಡು ಹೆಂಡತಿಯ ಶೀಲ ಶಂಕಿಸಿ ಮನ ಬಂದಂತೆ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

ಕೊಲೆಯಾದ ತಕ್ಷಣ ಅಂಜಲಿಯ ಹಿರಿಯ ಮಗ ತನ್ನ ಮಾವ ಅಶೋಕ ನಲವಾಡೆ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಅಶೋಕ ಧಾವಿಸಿದಾಗ ಅಂಜಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣ ಭಾಟಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮಹಿಳೆ ಆವಾಗಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಸಂಬಂಧ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು ಮಹಿಳೆಯ ಅತ್ತೆ ಹಾಗೂ ಗಂಡನನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಊಟದ ವಿಚಾರಕ್ಕೆ ಜಗಳ.. ಹೆಂಡತಿಗೆ ಚಾಕುವಿನಿಂದ ಚುಚ್ಚಿಚುಚ್ಚಿ ಕೊಂದ ಪಾಪಿ ಗಂಡ

https://newsfirstlive.com/wp-content/uploads/2024/05/MUMBAI_WIFE.jpg

    ಹಿರಿಯ ಮಗನ ಮುಂದೆ ನಡೆಯಿತು ಹೆತ್ತ ತಾಯಿಯ ಭೀಕರ ಕೊಲೆ

    ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ ಮಹಿಳೆ ಕುಟುಂಬಸ್ಥರು

    ಮನೆಯಲ್ಲಿ ಊಟದ ವಿಚಾರಕ್ಕೆ ಪತಿ, ಪತ್ನಿ ನಡುವೆ ನಡೆದ ಜಗಳ

ಮುಂಬೈ: ಊಟದ ವಿಚಾರದಲ್ಲಿ ಗಲಾಟೆ ಆಗಿದ್ದರಿಂದ ಕುಡಿದ ಮತ್ತಿನಲ್ಲಿ ಗಂಡನು ತನ್ನ ಹೆಂಡತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮುಂಬೈನ ಮಲಬಾರ್ ಹಿಲ್ ಪ್ರದೇಶದ ಶಿಮ್ಲಾ ನಗರದ ಮನೆಯೊಂದರಲ್ಲಿ ನಡೆದಿದೆ.

ಇದನ್ನೂ ಓದಿ: ಕೊಹ್ಲಿ ಕ್ರಿಕೆಟರ್​ ಆಗದಿದ್ರೆ, ಏನಾಗ್ತಿದ್ರು.. ಈ ಕುತೂಹಲದ ಪ್ರಶ್ನೆಗೆ ವಿರಾಟ್​ ಹೇಳಿದ್ದೇನು?

ಶಿಮ್ಲಾ ನಗರದ ನಿವಾಸಿ ಪತ್ನಿ ಅಂಜಲಿ ಅಜಯ್ ವರ್ಧಮ್ (36) ಕೊಲೆಯಾದ ದುರ್ದೈವಿ. ಅಜಯ್ ವರ್ಧಮ್ (38) ಹೆಂಡತಿಯನ್ನು ಹತ್ಯೆ ಮಾಡಿದವನು. ದಂಪತಿ ಇಬ್ಬರು ರಾತ್ರಿ 10 ರಿಂದ 10:30ರ ಸುಮಾರಿಗೆ ಮನೆಯಲ್ಲಿ ಊಟ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಯು ಮದ್ಯಪಾನ ಸೇವಿಸಿದ್ದರಿಂದ ನಿನಗೆ ಇನ್ನೊಬ್ಬರ ಜೊತೆ ಸಂಬಂಧವಿದೆ ಎಂದು ಜಗಳ ತೆಗೆದಿದ್ದಾನೆ. ಈ ಜಗಳ ಅತಿರೇಕಕ್ಕೆ ಹೋಗಿದೆ. ಆಗ ಗಂಡ ಮದ್ಯದ ಅಮಲಿನಲ್ಲಿ ಕೈಗೆ ಚಾಕು ತೆಗೆದುಕೊಂಡು ಹೆಂಡತಿಯ ಶೀಲ ಶಂಕಿಸಿ ಮನ ಬಂದಂತೆ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಧೋನಿ ಡಕೌಟ್​.. CSKಯನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಪಂಜಾಬ್ ಬೌಲರ್ಸ್; ಎಷ್ಟು ಟಾರ್ಗೆಟ್?

ಕೊಲೆಯಾದ ತಕ್ಷಣ ಅಂಜಲಿಯ ಹಿರಿಯ ಮಗ ತನ್ನ ಮಾವ ಅಶೋಕ ನಲವಾಡೆ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಅಶೋಕ ಧಾವಿಸಿದಾಗ ಅಂಜಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣ ಭಾಟಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಮಹಿಳೆ ಆವಾಗಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಸಂಬಂಧ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು ಮಹಿಳೆಯ ಅತ್ತೆ ಹಾಗೂ ಗಂಡನನ್ನ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More