/newsfirstlive-kannada/media/media_files/2025/11/11/delhi-incident-3-2025-11-11-07-46-36.jpg)
ಅದು ಎಲ್ಲರೂ ಕೆಲಸಗಳನ್ನ ಮುಗಿಸಿ ಮನೆ ಕಡೆಗೆ ಹೊರಟಿದ್ದ ಸಮಯ.. ಗಿಜಿ ಗಿಜಿ ಟ್ರಾಫಿಕ್​.. ವಾಹನ ಹಾರನ್.. ಎಲ್ಲಾ ನಾರ್ಮಲ್​ ಆಗಿತ್ತು. 7 ಗಂಟೆಗೆ 8 ನಿಮಿಷ ಇರಬೇಕಾದ್ರೆ ಭಯಾನಕ ಸ್ಫೋ*ದ ಶಬ್ಧ.. ದೆಹಲಿ ಜನರ ಎದೆ ಬಡಿತ ಭಯದಲ್ಲಿ ಡಬಲ್​ ಆಗಿ ನಡುಗಿ ಹೋಗಿದ್ದಾರೆ. ಈ ಪ್ರಕರಣ ಬರಿ ದೆಹಲಿ ಮಾತ್ರ ಅಲ್ಲ.. ಇಡೀ ದೇಶವನ್ನ ಬೆಚ್ಚಿ ಬೀಳಿಸಿದೆ..
ಮೆಟ್ರೋ ಸ್ಟೇಷನ್ ಗ್ಲಾಸ್ ಪುಡಿ ಪುಡಿ
ಐತಿಹಾಸಿಕ ಕೆಂಪುಕೋಟೆ.. ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ಸ್ಫೋ*​ ಅನ್ನೋ ಬೆಂಕಿ ಬಿದ್ದಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಜಮ್ಮು ಕಾಶ್ಮೀರ ಕಣಿವೆ ದಾಟಿ ನಡೆದ ಮೊದಲ ಸ್ಫೋ* ಇದು. ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಬಳಿ ಸಂಭವಿಸಿದ ಭೀಕರ ಸ್ಫೋ*ದಲ್ಲಿ 8 ಜನ ಬಲಿ ಆಗಿದ್ದಾರೆ. 26ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಲೋಕ್​ ನಾಯಕ್​ ಜಯಪ್ರಕಾಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!
/filters:format(webp)/newsfirstlive-kannada/media/media_files/2025/11/11/delhi-incident-2025-11-11-07-29-54.jpg)
ಕಾರು.. ಗೂಡ್ಸ್ ಗಾಡಿ.. ಆಟೋ.. ಹಲವು ವಾಹನ ಧಗಧಗ
ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರಲ್ಲಿ ನಿಂತಿದ್ದ ಕಾರು.. 6.52ರ ಸಮಯಕ್ಕೆ ಏಕಾಏಕಿ ಸ್ಫೋ*ವಾಗಿತ್ತು. ಸ್ಫೋ*ದ ತೀವ್ರತೆಗೆ ಹಲವು ವಾಹನಗಳು ಹೊತ್ತಿ ಉರಿದಿವೆ. ಕಾರು.. ಗೂಡ್ಸ್ ವಾಹನ.. ಆಟೋ.. ಹಲವು ವಾಹನಗಳು ಧಗಧಗಿಸಿವೆ.
ಸ್ಥಳಕ್ಕೆ 7 ಅಗ್ನಿಶಾಮಕ ದೌಡು, ಬೆಂಕಿ ನಂದಿಸುವ ಕಾರ್ಯ
2 ಕಾರು ಸ್ಫೋ*ದಿಂದ ಪಕ್ಕದಲ್ಲಿದ್ದ ಹಲವು ಕಾರುಗಳಿಗೂ ಬೆಂಕಿ ಹೊತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 7 ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಕಾರಣ ನಂದಿಸಲು ಕೆಲ ಸಮಯವೇ ಬೇಕಾಗಿತ್ತು. ಐ20 ಕಾರಿನಲ್ಲಿ ಬ್ಲಾ*​ ಆಗಿದೆ ಎನ್ನಲಾಗ್ತಿದೆ. ಐ20 ಕಾರ್ನಲ್ಲಿ ಸ್ಫೋ*ಕಗಳನ್ನ ಸಾಗಿಸುವಾಗ ಸಂಭವಿಸಿರಬಹುದು ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಓರ್ವ ಸೈಲೆಂಟ್ ಸ್ಟಾರ್​.. ಒಂದು ಅವಕಾಶಕ್ಕಾಗಿ ಕಾಯ್ತಿದ್ದಾನೆ ಈತ..!
/filters:format(webp)/newsfirstlive-kannada/media/media_files/2025/11/11/delhi-incident-2025-11-11-07-29-54.jpg)
ಈ ಭಯಾನಕ ಸ್ಫೋ*ದಲ್ಲಿ 9 ಮಂದಿ ಸಾ*ನ್ನಪ್ಪಿದ್ದಾರೆ. ಪ್ರಕರಣದಲ್ಲಿ ಮೃತಪಟ್ಟವರ ಗುರುತುಗಳನ್ನ ಪತ್ತೆ ಹಚ್ಚಲು ತನಿಖಾ ದಳ ಕಾರ್ಯಾಚರಣೆ ನಡೆಸುತ್ತಿದೆ. ಅಷ್ಟೂ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸತ್ತ 9 ಜನರ ಪೈಕಿ ಒಬ್ಬರ ಹೆಸರು ಅಶೋಕ್​ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿ ಧರ್ಮೇಂದ್ರ ಕಾರಿನ ಚಲನ ವಲನ ಬಗ್ಗೆ ಇಂಚಿಂಚಾಗಿ ಬಿಚ್ಚಿದ್ದಾರೆ. ಜೊತೆಗೆ ಬ್ಲಾ* ವೇಳೆ ಆದ ಅನುಭವ ಹಂಚಿಕೊಂಡಿದ್ದಾರೆ.
ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋ*ದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್​ ಶಾ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us