/newsfirstlive-kannada/media/post_attachments/wp-content/uploads/2024/06/Pavitra-Gowda-3-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟಿ ಪವಿತ್ರಾ ಗೌಡ ಅರೆಸ್ಟ್​ ಆಗಿದ್ದಾರೆ. ಈ ಕುರಿತಾಗಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್​ ಸಿಂಗ್​ ನ್ಯೂಸ್​ ಫಸ್ಟ್ ಕನ್ನಡದ​ ಜೊತೆಗೆ ಮಾತನಾಡಿದ್ದಾರೆ. ಪವಿತ್ರಾ ಪರಿಚಯ ಹೇಗಾಯ್ತು? ಮದುವೆ, ಡಿವೋರ್ಸ್​ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಪವಿತ್ರಾ ಅವರದ್ದು ಏನು ತಪ್ಪಿಲ್ಲ
ಪವಿತ್ರಾ ಅರೆಸ್ಟ್​ ಆಗಿರುವ ಕುರಿತಂತೆ ಮಾತನಾಡಿದ ಸಂಜಯ್​ ಸಿಂಗ್​, ‘ಇದರಲ್ಲಿ ನನ್ನ ಪ್ರಕಾರ, ವಿಶ್ವಾಸದ ಪ್ರಕಾರ ಪವಿತ್ರಾ ಅವರದ್ದು ಏನು ತಪ್ಪಿಲ್ಲ ಅನ್ಸುತ್ತೆ. ತುಂಬಾ ನಂಬಿಕಸ್ತಾ, ಸಭ್ಯ ಮಹಿಳೆ. ಅವ್ರು ಇಂತಹ ಚಿಲ್ಲರೆ ಕೆಳ್ಸಾ ಮಾಡಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್​ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ
ಇಬ್ಬರು ಬೇರೇ ಬೇರೆಯಾಗಿ ಎಷ್ಟು ವರ್ಷ ಆಯ್ತು?
ಸುಮಾರು 10, 11 ವರ್ಷದಿಂದ ನಾವು ದೂರ ಆಗಿದ್ದೇವೆ. ನನ್ನದು ಲವ್​ ಮತ್ತು ಅರೇಂಜ್​ ಮ್ಯಾರೇಜ್ ಎಂದು ಹೇಳಿದ್ದಾರೆ. ​
ಪ್ರೀತಿ ಹೇಗೆ ಆಯ್ತು?
ನಾನು ಬೆಂಗಳೂರಿಗೆ ಬಂದಿದ್ದೆ ಐಟಿ ಇಂಡಸ್ಟ್ರೀಗೆ. ಒಂದೇ ಲೊಕಾಲಿಟಿಯಲ್ಲಿ ಇದ್ದ ಕಾರಣ ಇಬ್ಬರಿಗ್ರೂ ಇಷ್ಟವಾಯ್ತು. ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡ್ವಿ ಎಂದು​ ಮಾಜಿ ಪತಿ ಸಂಜಯ್ ಹೇಳಿದ್ದಾರೆ.
ಕೊನೆಯ ಬಾರಿಗೆ ಮಾತನಾಡಿದೆ
ನಾನು ಪವಿತ್ರಾ ಅವರನ್ನು ನೋಡಿದ್ದು ಮಾತನಾಡಿದ್ದು ಕೋರ್ಟ್​ನಲ್ಲಿ. ಕೋರ್ಟ್​ನಲ್ಲಿ ಸಹಿ ಮಾಡ್ತೇವೆ ಅಲ್ವಾ ಅಲ್ಲೇ ಮಾತನಾಡಿದ್ದು ಎಂದಿದ್ದಾರೆ
ಇಂಥಾ ಕೆಲ್ಸ ಮಾಡಲ್ಲ
ನನಗನಿಸಿದ ಪ್ರಕಾರ ಪವಿತ್ರಾ ಗೌಡ ಅವರು ಇಂತಹ ಕೆಲಸ ಮಾಡಲಿಕ್ಕಿಲ್ಲ. ಯಾಕಂದ್ರೆ ಅವರಿಗೆ ಟೈಂ ಎಲ್ಲಿದೆ ಸರ್​. ಅವಳಿಗೆ ಬೆಳಿಯಬೇಕು. ಕೆರಿಯರ್​ ಬೆಳೆಸಬೇಕು. ದೊಡ್ಡ ಬ್ಯುಸಿನೆಸ್​ ಮ್ಯಾನ್​ ಆಗಬೇಕು ಅವಳಿಗೆ. ಅದಕೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ನಾನು ಕೂಡ ಆಕೆ ಚೆನ್ನಾಗಿರಬೇಕು ಎಂದು ದೂರವಾದೆವು. ಸಕ್ಸಸ್​ ಕಾಣಬೇಕು. ಒಂದು ಸಾಧನೆ ಮಾಡಬೇಕು.ವಿಭಿನ್ನವಾಗಿ ಯೋಚಿಸಿದ್ದಾಳೆ. ಬೇರೆಯವರ ಹಾಗೆ ಯೋಚಿಸಿಲ್ಲ.
ಮಗಳ ಬಗ್ಗೆ ಏನಂದ್ರು?
ನಾನು ಹೇಳೋದು ಏನಂದ್ರೆ ಇದು ಕೆಟ್ಟ ಘಳಿಗೆ. ಆ ಸಂದರ್ಭದಲ್ಲಿ ಏನೋ ಆಗಿದೆ. ಇನ್ನು ಮಗಳ ಜೊತೆಗೆ ಒಂದು ಸಾರಿ ಭೇಟಿಯಾದೆ. ಎರಡು ಬಾರಿ ಕಾಲ್​ ಮಾಡಿ ಮಾತನಾಡಿದ್ದೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ