ಧರ್ಮಸ್ಥಳ ಬಗ್ಗೆ ಅಪಪ್ರಚಾರ.. ಗುಡುಗಿದ ದೇವೇಗೌಡ Video

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಧರ್ಮಸ್ಥಳದ ಪವಿತ್ರತೆಗೆ ಭಂಗ ತರಬೇಕು ಎಂದು ಈ ಕೆಲಸ ಮಾಡಿದ್ದಾರೆ. ಆದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.

author-image
Ganesh Kerekuli
Advertisment

ಶ್ರೀ ಕ್ಷೇತ್ರ ಧರ್ಮಸ್ಥಳ ಬಗ್ಗೆ ಅಪಪ್ರಚಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ (HD Deve Gowda) ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಧರ್ಮಸ್ಥಳದ ಪವಿತ್ರತೆಗೆ ಭಂಗ ತರಬೇಕು ಎಂದು ಈ ಕೆಲಸ ಮಾಡಿದ್ದಾರೆ. ಆದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ದೇಶದಲ್ಲಿ ಇಂತಹ ಘಟನೆಗಳು ತುಂಬಾ ನಡೆದಿವೆ. ನಾನಂತು ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ಕೊಡೋದಕ್ಕೆ ಹೋಗೋದಿಲ್ಲ. ಇದರ ಹಿಂದೆ ಯಾರಿದ್ದಾರೆ? ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಗೆ ಲಕ್ಷಾಂತರ ಜನ ಬರ್ತಾರೆ. ಅದರ ಪವಿತ್ರತೆಗೆ ಭಂಗ ತರಬೇಕು ಅಂತ ಕೆಲವರು ಕೆಲಸ ಮಾಡಿದ್ದಾರೆ. ಆದರೆ ಸತ್ಯವನ್ನು ಮುಚ್ಚಿಡಲಿಕ್ಕೆ ಆಗೋದಿಲ್ಲ. ಸರ್ಕಾರ ಇನ್ನೂ ತನಿಖೆ ಮಾಡ್ತಿದೆ. ಸತ್ಯ ಹೊರ ಬರಲಿದೆ ಎಂದಿದ್ದಾರೆ. 

ಇದನ್ನೂ ಓದಿ: ಈ ಹರಕೆ ತೀರಿಸದಕ್ಕೆ ದರ್ಶನ್​ಗೆ ಸಂಕಷ್ಟ? ಅರ್ಚಕ ಬಿಚ್ಚಿಟ್ಟ ಸತ್ಯವೇನು..?

hd devegowda on dharmasthala case

ಎಲ್ಲಾ ಕಾಲದಲ್ಲೂ ಒಂದಲ್ಲ ಒಂದು ರೀತಿಯ ಘಟನೆಗಳು ನಡೆದಿವೆ. ಅವರು ಒಂದಲ್ಲ ಒಂದು ದಿನ ಅದರ ಪ್ರತಿಫಲ ಊಟ ಮಾಡಬೇಕು. ನನಗೆ ದೈವದಲ್ಲಿ ನಂಬಿಕೆ ಇದೆ. ಯಾವ ಉದ್ದೇಶದಿಂದ ಯಾರೇ ಆಗಲಿ, ಅದು ಗೊತ್ತಾಗಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ:ದೂರು ವಾಪಸ್ ಪಡೆಯುತ್ತೇನೆ ಅಂದ್ರಂತೆ ಸುಜಾತ ಭಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Deve Gowda news HD Deve Gowda on Dharmasthala case
Advertisment