ಅನನ್ಯ ಭಟ್​ ಕೇಸ್​ಗೆ ಬಿಗ್ ಟ್ವಿಸ್ಟ್​.. ದೂರು ವಾಪಸ್ ಪಡೆಯುತ್ತೇನೆ ಅಂದ್ರಂತೆ ಸುಜಾತ ಭಟ್..!

ಅನನ್ಯ ಭಟ್ ನಾಪತ್ತೆ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳಿಗೆ ನೀಡಿರುವ ದೂರನ್ನ ವಾಪಸ್ ಪಡೆಯೋದಾಗಿ ಸುಜಾತಾ ಭಟ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

author-image
Ganesh Kerekuli
SUJATHA_BHAT (1)
Advertisment

ಮಂಗಳೂರು: ಅನನ್ಯ ಭಟ್ ನಾಪತ್ತೆ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅನನ್ಯ ಭಟ್ ನಾಪತ್ತೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳಿಗೆ ನೀಡಿರುವ ದೂರನ್ನ ವಾಪಸ್ ಪಡೆಯೋದಾಗಿ ಸುಜಾತಾ ಭಟ್ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ದೂರು ವಾಪಸ್ ಪಡೆಯುವ ಸಂಬಂಧ ಸುಜಾತ ಭಟ್ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ಎಸ್​ಐಟಿ ಅಧಿಕಾರಿಗಳು ಸುಜಾತ ಭಟ್​ರನ್ನು ವಿಚಾರಣೆ ನಡೆಸ್ತಿದ್ದಾರೆ. 

ಇದನ್ನೂ ಓದಿ: SIT ವಿಚಾರಣೆಯಲ್ಲಿ ಸುಜಾತಾ ಭಟ್​; ಪ್ರಶ್ನೆಗಳ ಸುರಿಮಳೆ..

Dharmasthala Sujata bhat
ಸುಜಾತಾ ಭಟ್

ಎರಡು ದಿನಗಳ ವಿಚಾರಣೆ ಬಳಿಕ ತಪ್ಪಾಯಿತು ನನ್ನನ್ನು ಬಿಟ್ಟು ಬಿಡಿ ಎಂದು ಕಣ್ಣೀರು ಇಟ್ಟಿದ್ದಾರೆ. ಅಲ್ಲದೇ ಅನನ್ಯ ಭಟ್ ಪ್ರಕರಣದ ರಹಸ್ಯ ಹಾಗೂ ಅದರ ಹಿಂದಿರೋರ ಹೆಸರುಗಳನ್ನು ಸುಜಾತಾ ಭಟ್ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಅನನ್ಯ ಕೇಸ್ ಹಿಂದಿರೋರಿಗೆ ಭಯ ಶುರುವಾಗಿದೆ. ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್​ಐಟಿ ರಚಿಸಿತ್ತು. ಎಸ್​ಐಟಿ ರಚನೆ ಬೆನ್ನಲ್ಲೇ ಪ್ರಕರಣದ ತನಿಖೆ ಬಿರುಸುಗೊಂಡಿತ್ತು. ಇದರ ಮಧ್ಯೆ ಸುಜಾತ ಭಟ್ ಗಂಭೀರ ಆರೋಪವೊಂದನ್ನು ಮಾಡಿದ್ದರು.

ಇದನ್ನೂ ಓದಿ:ಈ ಹರಕೆ ತೀರಿಸದಕ್ಕೆ ದರ್ಶನ್​ಗೆ ಸಂಕಷ್ಟ? ಅರ್ಚಕ ಬಿಚ್ಚಿಟ್ಟ ಸತ್ಯವೇನು..?

Sujata Bhatt

ನನ್ನ ಮಗಳು 20 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಳು ಎಂದು ಸುಜಾತಾ ಭಟ್ ಆರೋಪಿಸಿದ್ದಳು. ಅಲ್ಲದೇ ಈ ಸಂಬಂಧ ಧರ್ಮಸ್ಥಳ ಕೇಸ್​ ತನಿಖೆ ನಡೆಸ್ತಿದ್ದ ಎಸ್​ಐಟಿ ಅಧಿಕಾರಿಗಳಿಗೆ ಮಗಳು ನಾಪತ್ತೆ ಸಂಬಂಧ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಎಸ್​ಐಟಿ ತೀವ್ರ ವಿಚಾರಣೆ ಆರಂಭಿಸಿತ್ತು. ಇದೀಗ ಕೇಸ್ ವಾಪಸ್ ಪಡೆಯುವುದಾಗಿ ಹೇಳಿರೋದ್ರಿಂದ ಹೊಸ ತಿರುವು ಪಡೆದುಕೊಂಡಿದೆ.  

ಇದನ್ನೂ ಓದಿ:ಧರ್ಮಸ್ಥಳ ಬುರುಡೆ ರಹಸ್ಯ ಬೇಧಿಸಲು ಎಸ್​​ಐಟಿ ಖರ್ಚು ಮಾಡಿದ್ದು ಎಷ್ಟು ಲಕ್ಷ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Dharmasthala case dharmasthala Chenna Dharmasthala Sujata bhat
Advertisment