Advertisment

ಮಾಜಿ ಕೇಂದ್ರ ಸಚಿವ ಖೂಬಾಗೆ ಬಿಗ್ ಶಾಕ್.. 25.30 ಕೋಟಿ ದಂಡ ಕಟ್ಟುವಂತೆ ನೋಟಿಸ್

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ 25.30 ಕೋಟಿ ದಂಡ ಪಾವತಿ ಮಾಡುವಂತೆ ಖೂಬಾಗೆ ಹಲವು ಭಾರೀ ನೋಟಿಸ್​ ನೀಡಿದ್ರು ಪ್ರಯೋಜನವಾಗಿಲ್ಲ.

author-image
Ganesh Kerekuli
Bhagwanth Khuba
Advertisment

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾಗೆ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಗಣಿಗಾರಿಕೆ ಸಂಬಂಧ 25.30 ಕೋಟಿ ದಂಡ ಪಾವತಿ ಮಾಡುವಂತೆ ಖೂಬಾಗೆ ಹಲವು ಭಾರೀ ನೋಟಿಸ್​ ನೀಡಿದ್ರು ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಕಾಳಗಿ ತಹಶೀಲ್ದಾರ್​, ಮಾಜಿ ಕೇಂದ್ರ ಸಚಿವರಿಗೆ ನೋಟಿಸ್​ ನೀಡಿದ್ದಾರೆ.

Advertisment

ಇದನ್ನೂ ಓದಿ: ಜಿಎಸ್‌ಟಿ ದರ ಇಳಿಕೆಯಿಂದ ಎಲ್ಲ ಉತ್ಪನ್ನಗಳ ಮಾರಾಟ ಹೆಚ್ಚಳ : ಕೇಂದ್ರದ ಮೂವರು ಸಚಿವರು ಹೇಳಿದ್ದೇನು?

ಭಗವಂತ್​ ಖೂಬಾ.. ಮಾಜಿ ಕೇಂದ್ರ ಸಚಿವರು.. ಇವರ ವಿರುದ್ಧ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಆರೋಪ ಇದ್ದು, ಈ ಆರೋಪ ಸಾಬೀತಾಗಿದೆ. ಅಕ್ರಮವಾಗಿ ರಾಜ್ಯ ಸಂಪತ್ತು ಲೂಟಿ ಮಾಡಿದ್ದು,  ₹25.30 ಕೋಟಿ ದಂಡ ಪಾವತಿಗೆ ಕಲಬುಗರಿ ಜಿಲ್ಲಾಡಳಿತ ಸೂಚನೆ ನೀಡಿತ್ತು. ಅಧಿಕಾರಿಗಳು ಎರಡು ಮೂರು ಬಾರಿ ನೋಟಿಸ್​ ನೀಡಿದ್ರೂ ಭಗವಂತ್​ ಖೂಬಾ ದಂಡವನ್ನು ಪಾವತಿ ಮಾಡಿಲ್ಲ.. ಹೀಗಾಗಿ ಕಲಬುಗರಿ ಜಿಲ್ಲಾಡಳಿತ ಫೈನಲ್​ ನೋಟಿಸ್​ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದರ ಬೆನ್ನಲ್ಲೇ ಕಾಳಗಿ ತಹಶೀಲ್ದಾರ್​​ ಮಾಜಿ ಕೇಂದ್ರ ಸಚಿವರ ಬಳಿ ದಂಡ ವಸೂಲಾತಿಗೆ ಮುಂದಾಗಿದ್ದಾರೆ.

₹25.30 ಕೋಟಿ ದಂಡ ಪಾವತಿಗೆ ನೋಟಿಸ್

  • ಚಿತ್ತಾಪುರ ತಾ. ವಚ್ಚಾ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ
  • ವಚ್ಚಾ ಗ್ರಾಮದ 24/4 ರಲ್ಲಿ 5 ವರ್ಷಗಳ ಅವಧಿಗೆ ಗಣಿಗಾರಿಕೆಗೆ ಅನುಮತಿ
  • 24/5, 24/3, 24/7, 24/8 ಸೇರಿ ಪಕ್ಕದ ಸರ್ವೆ ನಂಬರ್‌ಗಳಲ್ಲಿ ಅಕ್ರಮ
  • 2014 ಜುಲೈ 19ರಿಂದ 2019ರ ಜುಲೈ 18ರವರೆಗೆ ಅಕ್ರಮ ಗಣಿಗಾರಿಕೆ
  • ಸಂಜೀವಕುಮಾರ್ ತಿಪ್ಪಣ್ಣ ಜವಕರ್​​​ರ ದೂರಿನ ಆಧಾರದಡಿ ಪರಿಶೀಲನೆ
  • ಗಣಿ ಇಲಾಖೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ಜಂಟಿ ಸರ್ವೇ
  • ಜಂಟಿ ಸರ್ವೆ ಬಳಿಕ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ವರದಿ ಸಲ್ಲಿಕೆ
  • ಅಕ್ರಮ ಗಣಿಗಾರಿಕೆ ಸಂಬಂಧ ₹25.30 ಕೋಟಿ ದಂಡ ಪಾವತಿಸಲು ಸೂಚನೆ
  • ದಂಡ ಪಾವತಿಸುವಂತೆ ಮೂರು ಬಾರಿ ನೊಟೀಸ್ ನೀಡಿರುವ ಅಧಿಕಾರಿಗಳು
Advertisment

ಭಗವಂತ ಖೂಬಾ ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ವೇದಿಕೆ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವ ಈಶ್ವರ್​ ಖಂಡ್ರೆ, ಅಕ್ರಮ ಗಣಿಕಾರಿಗೆ ನಡೆದಿದ್ದು, ನಾವು ಸತ್ಯವನ್ನೇ ಹೇಳ್ತೇವೆ.. ಇದಕ್ಕೆ ಖೂಬಾರವರೇ ಉತ್ತರ ನೀಡಲಿ ಎಂದಿದ್ದಾರೆ.

ಇದನ್ನೂ ಓದಿ:ಆಲ್​ರೌಂಡರ್​ ರವೀಂದ್ರ ಜಡೇಜಾ ಪತ್ನಿ ಈಗ ಸಚಿವೆ.. ರಿವಾಬಾ ಅವರಿಗೆ ಕೊಟ್ಟ ಸ್ಥಾನ ಯಾವುದು..?

ಒಟ್ಟಾರೆ.. ಅಕ್ರಮ ಗಣಿಕಾರಿಕೆ ಸಂಬಂಧ ದಂಡ ವಸೂಲಿಗೆ ಜಿಲ್ಲಾಡಳಿತ ಮುಂದಾಗಿದ್ದು, ಈ ಬಗ್ಗೆ ಮಾಜಿ ಕೇಂದ್ರ ಸಚಿವ ಭಗವಂತ್​ ಖೂಬಾ ಸದ್ಯ ಮೌನವಾಗಿದ್ದಾರೆ. ಖುಬಾ ಅವರು ದಂಡ ವಾಪತಿಸುತ್ತಾರಾ.. ಅಥವಾ ಜಿಲ್ಲಾಡಳಿತ ಅವರ ಚಿರಾಸ್ಥಿ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bhagwanth Khuba
Advertisment
Advertisment
Advertisment