/newsfirstlive-kannada/media/media_files/2025/08/03/rahul-gandhi-lok-sabha-election-2025-08-03-07-01-16.jpg)
ರಾಹುಲ್ ಗಾಂಧಿ
ಬಿಹಾರ ಕದನದ ಕಿಚ್ಚಿಗೆ ಕರ್ನಾಟಕದ ಹೋರಾಟ ತುಪ್ಪ ಸುರಿಯಲಿದೆ.. 2024ರ ಲೋಕಸಭಾ ಎಲೆಕ್ಷನ್ನಲ್ಲಿ ಹಸ್ತ ಸೋತ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಮಾತ್ನಾಡಿದ ರಾಹುಲ್ ಗಾಂಧಿ 70 ರಿಂದ 100 ಕ್ಷೇತ್ರಗಳಲ್ಲಿ ಅಕ್ರಮ ಆಗಿದೆ ಅಂತ ಆರೋಪಿಸಿದ್ದಾರೆ.
ಲೋಕಸಭಾ ಎಲೆಕ್ಷನ್ ವೇಳೆ 70-100 ಕ್ಷೇತ್ರಗಳಲ್ಲಿ ಮತಕಳ್ಳತನ!
2014ರ ಮೋದಿ ತವರು ಗುಜರಾತ್ನ ಚುನಾವಣೆಯಲ್ಲಿ ನೀಡಿದ ಪ್ರಬಲ ಪೈಪೋಟಿ ನೆನೆದ ರಾಹುಲ್, ಚುನಾವಣೆಯ ಪ್ರಕ್ರಿಯೆಯಲ್ಲಿ ತಪ್ಪಾಗಿದೆ ಅನ್ನೋ ಅನುಮಾನ ಇತ್ತು. ಪುರಾವೆಗಳು ಸಿಕ್ಕಿರಲಿಲ್ಲ.. ಆದ್ರೀಗ 100 ಪರ್ಸೆಂಟ್ ಸಾಕ್ಷಿ ಇದೆ.. ಅದು ಬಹಿರಂಗವಾದ್ರೆ ಅಣು ಬಾಂಬ್ ಬೀಳಿಸಿದಂತೆ.. 2024ರ ಎಲೆಕ್ಷನ್ನಲ್ಲಿ ಅಕ್ರಮ ನಡೆದ ಕ್ಷೇತ್ರಗಳು 70-80-100ಕ್ಕೆ ಹತ್ತಿರವಿದೆ ಅಂತ ಸಂಶಯಿಸಿದ್ದಾರೆ.
10-15 ಕ್ಷೇತ್ರಗಳು ರಿಗ್ ಆಗಿರದೇ ಹೋಗಿದ್ರೆ ಭಾರತದ ಪ್ರಧಾನಿ ಅತ್ಯಂತ ಕಡಿಮೆ ಬಹುಮತ ಹೊಂದಿದ ಪ್ರಧಾನಿ ಆಗ್ತಿದ್ರು. ನನ್ನ ಅಂದಾಜಿನ ಪ್ರಕಾರ ಆ ಸಂಖ್ಯೆ 70, 80, 100 ಹತ್ತಿರವಾಗಿದೆ. ಈ 15 ಕ್ಷೇತ್ರಗಳು ರಿಗ್ ಆಗಿದ್ದರೂ ಅವರು ಈ ದೇಶದ ಪ್ರಧಾನಿ ಆಗ್ತಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹೇಗೆಲ್ಲಾ ಅಕ್ರಮ ನಡೆದಿದೆ ಅನ್ನೋದಕ್ಕೆ ಇದರಲ್ಲಿ ಯಾವುದೇ ಸಂಶಯವೇ ಬೇಡ - ರಾಹುಲ್ ಗಾಂಧಿ, ಲೋಕಸಭಾ ವಿಪಕ್ಷ ನಾಯಕ
ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ಕೊಟ್ಟಿದ್ದು, ರಾಹುಲ್ ಗಾಂಧಿ ಬಳಿ ಆಟಂ ಬಾಂಬ್ ಇದ್ದರೆ ಈ ಕೂಡಲೇ ಸ್ಫೋಟಿಸಲಿ ಅಂತ ಟಾಂಗ್ ಕೊಟ್ಟಿದ್ದಾರೆ..
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ಎಷ್ಟು ಸಾಕ್ಷ್ಯಗಳಿದ್ದವು.. ಸರ್ಕಾರಿ ಅಭಿಯೋಜಕರು, ವಕೀಲರು ಯಾರು ಯಾರು?
ರಾಹುಲ್ ಗಾಂಧಿ ಅವರಿಗೆ ವಿನಮ್ರತೆಯಿಂದ ಹೇಳಲು ಬಯಸೋದು ಒಂದೆ. ಒಂದ್ವೇಳೆ ನಿಮ್ಮ ಹತ್ತಿರ ಸಾಕ್ಷಿಗಳ ಅಟಂ ಬಾಂಬ್ ಇದೆ ಅಂದ್ರೆ ಅದರ ಪರೀಕ್ಷೆ ಕೂಡಲೇ ಆಗಬೇಕು. ಟೆಸ್ಟ್ ಶೀಘ್ರ ಆಗಬೇಕು. ಎಲ್ಲಾ ಸಾಕ್ಷಿಗಳನ್ನ ಜನರ ಮುಂದಿಡಬೇಕು. ಆದ್ರೆ ಸತ್ಯ ಏನೆಂದರೆ ಅವರ ಬಳಿ ಯಾವುದೇ ಸಾಕ್ಷ್ಯ ಇಲ್ಲ. ಜವಾಬ್ದಾರಿ ಇಲ್ಲದ ಹೇಳಿಕೆ ನೀಡೋದು ಅವರ ಹಳೆಯ ಅಭ್ಯಾಸವಾಗಿದೆ- ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಸಚಿವ
ಚುನಾವಣೆಯಲ್ಲಿ ಹೀನಾಯ ಸೋಲನ್ನು ಮರೆಮಾಚಲು ರಾಹುಲ್ ಗಾಂಧಿ ಹತಾಶ ಯತ್ನ ಮಾಡ್ತಿದ್ದಾರೆ ಅಂತ ಬಿಜೆಪಿ ಟೀಕಿಸಿದೆ.. ಚುನಾವಣಾ ಅಕ್ರಮದ ಆರೋಪಗಳಿಗೆ 100% ಪುರಾವೆ ಇದ್ದರೆ, ಬೀದಿ ನಾಟಕದ ಬದಲು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ. ನಾಡಿದ್ದು ಬೆಂಗಳೂರಿಗೆ ಆಗಮಿಸ್ತಿರುವ ರಾಹುಲ್, ಸಾಕ್ಷಿಗಳನ್ನ ನೀಡ್ತಾರ ಅನ್ನೋದು ಕಾದು ನೋಡಬೇಕಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಶಿಕ್ಷೆ; BSY, ಅಶೋಕ್, ಸಿಟಿ ರವಿ ಯಾಕೆ ಮಾತಾಡ್ತಿಲ್ಲ?- ಡಿ.ಕೆ ಶಿವಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ