ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು
ಪ್ರವೀನ್ ನೆಟ್ಟಾರು ಹತ್ಯೆ ಮಾಡಿದ ಎ4 ಆರೋಪಿಗಾಗಿ ಬಲೆ ಬೀಸಿದ್ದ ಎನ್ಐಎ ತಂಡ
ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ. ತಲೆ ಮರೆಸಿ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮುಸ್ತಫಾ ಪೈಚಾರ್ನ ಬಂಧನವಾಗಿದೆ.
ಮುಸ್ತಫಾ ಪೈಚಾರ್ ಸುಳ್ಯದ ಶಾಂತಿ ನಗರ ನಿವಾಸಿಯಾಗಿದ್ದು, ಪಿಎಫ್ಐ ಮುಖಂಡನಾಗಿದ್ದನು. ಪ್ರವೀಣ್ ಹತ್ಯೆ ಬಳಿಕ ತಲೆಮರೆಸಿಕೊಂಡ ಈತನನ್ನು ಹಾಸನದ ಸಕಲೇಶಪುರ ಬಳಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ದೊಡ್ಡಪ್ಪನ ಮಗನನ್ನೇ ಬರ್ಬರವಾಗಿ ಕೊಂದ ತಮ್ಮ
ಎನ್ಐಎ ಅಧಿಕಾರಿಗಳು ಮುಸ್ತಫಾ ಪೈಚಾರ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಆತ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಅಧಿಕಾರಿಗಳು ಘೋಷಿಸಿದ್ದರು.
ಇದನ್ನೂ ಓದಿ: ಅಮೃತ್ ಪೌಲ್ ಇದ್ದ ಸೆಲ್ನಲ್ಲಿ H D ರೇವಣ್ಣ.. ಸಿಂಗಲ್ ಕೊಠಡಿ, 6 ಮಂದಿ ಎಸ್ಕಾರ್ಟ್.. ಜೈಲಿನಲ್ಲಿ ವ್ಯವಸ್ಥೆ ಹೇಗಿದೆ?
ಕೊನೆಗೆ ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಡಗಿದ್ದನು. NIA ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಮುಸ್ತಫಾ ಪೈಚಾರ್ನ ಬಂಧನವಾಗಿದೆ. ಆರೋಪಿಯನ್ನು ಅಧಿಕಾರಿಗಳು ಬೆಂಗಳೂರು ಎನ್.ಐ.ಎ ಕಚೇರಿಗೆಯತ್ತ ಕೊಂಡೊಯ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳ್ಳಾರೆಯಲ್ಲಿ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು
ಪ್ರವೀನ್ ನೆಟ್ಟಾರು ಹತ್ಯೆ ಮಾಡಿದ ಎ4 ಆರೋಪಿಗಾಗಿ ಬಲೆ ಬೀಸಿದ್ದ ಎನ್ಐಎ ತಂಡ
ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಎನ್ಐಎ ಬಂಧಿಸಿದೆ. ತಲೆ ಮರೆಸಿ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮುಸ್ತಫಾ ಪೈಚಾರ್ನ ಬಂಧನವಾಗಿದೆ.
ಮುಸ್ತಫಾ ಪೈಚಾರ್ ಸುಳ್ಯದ ಶಾಂತಿ ನಗರ ನಿವಾಸಿಯಾಗಿದ್ದು, ಪಿಎಫ್ಐ ಮುಖಂಡನಾಗಿದ್ದನು. ಪ್ರವೀಣ್ ಹತ್ಯೆ ಬಳಿಕ ತಲೆಮರೆಸಿಕೊಂಡ ಈತನನ್ನು ಹಾಸನದ ಸಕಲೇಶಪುರ ಬಳಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ದೊಡ್ಡಪ್ಪನ ಮಗನನ್ನೇ ಬರ್ಬರವಾಗಿ ಕೊಂದ ತಮ್ಮ
ಎನ್ಐಎ ಅಧಿಕಾರಿಗಳು ಮುಸ್ತಫಾ ಪೈಚಾರ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಆತ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಅಧಿಕಾರಿಗಳು ಘೋಷಿಸಿದ್ದರು.
ಇದನ್ನೂ ಓದಿ: ಅಮೃತ್ ಪೌಲ್ ಇದ್ದ ಸೆಲ್ನಲ್ಲಿ H D ರೇವಣ್ಣ.. ಸಿಂಗಲ್ ಕೊಠಡಿ, 6 ಮಂದಿ ಎಸ್ಕಾರ್ಟ್.. ಜೈಲಿನಲ್ಲಿ ವ್ಯವಸ್ಥೆ ಹೇಗಿದೆ?
ಕೊನೆಗೆ ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಡಗಿದ್ದನು. NIA ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಮುಸ್ತಫಾ ಪೈಚಾರ್ನ ಬಂಧನವಾಗಿದೆ. ಆರೋಪಿಯನ್ನು ಅಧಿಕಾರಿಗಳು ಬೆಂಗಳೂರು ಎನ್.ಐ.ಎ ಕಚೇರಿಗೆಯತ್ತ ಕೊಂಡೊಯ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ