ವಿಶೇಷ ಯೋಜನೆ ರೂಪಿಸಿದ್ದೇವೆ ಎಂದ ಬೌಲಿಂಗ್ ಕೋಚ್
ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ
ಕೆಲವು ಪ್ಲೇಯರ್ಸ್ ಇಂಜುರಿಯಿಂದ 2 ತಂಡದಲ್ಲಿ ಆಡುತ್ತಿಲ್ಲ!
17ನೇ ಐಪಿಎಲ್ನಲ್ಲಿ 4ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿಕೊಡೋ ಟೀಮ್ ಯಾವುದು?. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ರಾಜಸ್ಥಾನ್, ಕೆಕೆಆರ್ ಹಾಗೂ ಹೈದ್ರಾಬಾದ್ ಜೊತೆ ಸೆಣಸಾಡಲು ಬದ್ಧವೈರಿ ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಚಿನ್ನಸ್ವಾಮಿಯಲ್ಲಿ ದಂಗಲ್ ಏರ್ಪಟ್ಟಿದೆ. ಇಲ್ಲಿ ಇರೋದೊಂದೇ ಚಾನ್ಸ್.
ಆರ್ಸಿಬಿ ಹಾಗೂ ಚೆನ್ನೈ ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ. ಹಾಗಾಗಿ MUST WIN GAMEನಲ್ಲಿ ಯಾರು ಗೆಲ್ತಾರೆ ಅನ್ನೋದು ಸಾಕಷ್ಟು ಕೌತುಕತೆ ಹೆಚ್ಚಿಸಿದೆ. ಬೆಂಗಳೂರನ್ನು ಖೆಡ್ಡಾಗೆ ಕೆಡವಲು ಚೆನ್ನೈ ಬಳಿ ಸ್ಪೆಷಲ್ ಪ್ಲಾನ್ಗಳನ್ನ ಮಾಡಬಹುದು.
ಇದನ್ನೂ ಓದಿ: ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?
ಆರ್ಸಿಬಿ ಡಿಫರೆಂಟ್ ಸ್ಟ್ರಾರ್ಟಜಿ ರೂಪಿಸಿ ಚೆನ್ನೈಗೆ ಸೋಲಿನ ಬರೆ ಮುಟ್ಟಿಸಲು ಚಿಂತಿಸ್ತಿದೆ. ಆದ್ರೆ ಅತ್ತ ಬಲಾಢ್ಯ ಸಿಎಸ್ಕೆ ತಂಡ ಆರ್ಸಿಬಿಗೆ ಸ್ಪೆಷಲ್ ಯೋಜನೆ ರೂಪಿಸಿ ಅವರ ನೆಲದಲ್ಲಿ ಖೆಡ್ಡಾಗೆ ಕೆಡವಲು ಹವಣಿಸ್ತಿದೆ. ಆರ್ಸಿಬಿ ತಂಡವನ್ನ ನಾವು ಗೌರವಿಸುತ್ತೇವೆ. ಫಲಿತಾಂಶ ನಮ್ಮ ನಿಯಂತ್ರಣದಲ್ಲಿಲ್ಲ. ಉತ್ತಮ ಸಿದ್ಧತೆ ನಡೆಸಿದ್ದು ವಿಶೇಷ ಯೋಜನೆ ರೂಪಿಸಿದ್ದೇವೆ. ಆರ್ಸಿಬಿ ನಮ್ಮನ್ನ ಸೋಲಿಸಲು ಪ್ರಯತ್ನಿಸಲಿದೆ. ನಾವು ಚೆನ್ನಾಗಿ ಆಡುತ್ತೇವೆ ಎಂದು ಚೆನ್ನೈ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ಸಿಎಸ್ಕೆ ಕಾಡಲಿದ್ಯಾ ಸ್ಟಾರ್ ಬೌಲರ್ಸ್ ಅಲಭ್ಯತೆ..?
ಡು ಆರ್ ಡೈ ಕದನದಲ್ಲಿ ಸಿಎಸ್ಕೆಗೆ ಸ್ಟಾರ್ಸ್ ಬೌಲರ್ಸ್ ಗೈರು ದೊಡ್ಡ ಸೆಟ್ಬ್ಯಾಕ್ ಆಗಿದೆ. ಮಥೀಶ ಪತಿರಣ, ದೀಪಕ್ ಚಹರ್ ಹಾಗೂ ಮುಸ್ತಾಫಿಜುರ್ ರೆಹಮಾನ್ ಅಲಭ್ಯತೆ ಕಾಡ್ತಿದೆ. ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲ ಬೌಲರ್ಗಳನ್ನ ಸಿದ್ಧಗೊಳಿಸಿದ್ದೇವೆ. ಪ್ರತಿಯೊಬ್ಬರೂ ಸಾಮರ್ಥ್ಯ ಹೊಂದಿದ್ದು, ಎದುರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಬೌಲರ್ಗಳು ಸೀಸನ್ ಪೂರ್ತಿ ಆಡದಿರೋದಕ್ಕೆ ಬೇಸರವಿದೆ. ಕೆಲವರು ಇಂಜುರಿಯಿಂದ ಆಡುತ್ತಿಲ್ಲ. ಅವರ ಸ್ಥಾನ ತುಂಬಬಲ್ಲ ಆಟಗಾರರರು ಇದ್ದಾರೆ ಎಂದು ಬ್ರಾವೋ ಹೇಳಿದ್ದಾರೆ.
ಇದನ್ನೂ ಓದಿ: ನಂ-18 ಅಂದ್ರೆ ವಿರಾಟ್ ಧಗಧಗ ಉರಿತಾರೆ.. ಮೇ 18ರಂದೇ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?
ಈ ಕದನಕ್ಕೂ ಮುನ್ನ ಯೆಲ್ಲೋ ಆರ್ಮಿ ಹಾಗೂ ರೆಡ್ ಆರ್ಮಿ ತಂತ್ರ-ಪ್ರತಿತಂತ್ರ ಭಾರಿ ಸದ್ದು ಮಾಡ್ತಿದೆ. ಆದ್ರೆ ಆನ್ಫೀಲ್ಡ್ನಲ್ಲಿ ಯಾರ ಪ್ಲಾನ್ ವರ್ಕ್ ಆಗುತ್ತೆ, ಆರ್ಸಿಬಿಯದ್ದಾ, ಸಿಎಸ್ಕೆಯದ್ದಾ ಎನ್ನುವುದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶೇಷ ಯೋಜನೆ ರೂಪಿಸಿದ್ದೇವೆ ಎಂದ ಬೌಲಿಂಗ್ ಕೋಚ್
ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ
ಕೆಲವು ಪ್ಲೇಯರ್ಸ್ ಇಂಜುರಿಯಿಂದ 2 ತಂಡದಲ್ಲಿ ಆಡುತ್ತಿಲ್ಲ!
17ನೇ ಐಪಿಎಲ್ನಲ್ಲಿ 4ನೇ ತಂಡವಾಗಿ ಪ್ಲೇ ಆಫ್ಗೆ ಎಂಟ್ರಿಕೊಡೋ ಟೀಮ್ ಯಾವುದು?. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ರಾಜಸ್ಥಾನ್, ಕೆಕೆಆರ್ ಹಾಗೂ ಹೈದ್ರಾಬಾದ್ ಜೊತೆ ಸೆಣಸಾಡಲು ಬದ್ಧವೈರಿ ಸಿಎಸ್ಕೆ ಹಾಗೂ ಆರ್ಸಿಬಿ ನಡುವೆ ಚಿನ್ನಸ್ವಾಮಿಯಲ್ಲಿ ದಂಗಲ್ ಏರ್ಪಟ್ಟಿದೆ. ಇಲ್ಲಿ ಇರೋದೊಂದೇ ಚಾನ್ಸ್.
ಆರ್ಸಿಬಿ ಹಾಗೂ ಚೆನ್ನೈ ಎರಡೂ ತಂಡಗಳು ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲ್ಲ. ಹಾಗಾಗಿ MUST WIN GAMEನಲ್ಲಿ ಯಾರು ಗೆಲ್ತಾರೆ ಅನ್ನೋದು ಸಾಕಷ್ಟು ಕೌತುಕತೆ ಹೆಚ್ಚಿಸಿದೆ. ಬೆಂಗಳೂರನ್ನು ಖೆಡ್ಡಾಗೆ ಕೆಡವಲು ಚೆನ್ನೈ ಬಳಿ ಸ್ಪೆಷಲ್ ಪ್ಲಾನ್ಗಳನ್ನ ಮಾಡಬಹುದು.
ಇದನ್ನೂ ಓದಿ: ಪ್ರತಿಷ್ಠೆಯ ಕಣವಾದ RCB vs CSK ಪಂದ್ಯ.. ದಾಖಲೆ ಬರೆಯಲು ರೆಡಿಯಾದ ಕೊಹ್ಲಿ, MS ಧೋನಿ; ಏನೇನು?
ಆರ್ಸಿಬಿ ಡಿಫರೆಂಟ್ ಸ್ಟ್ರಾರ್ಟಜಿ ರೂಪಿಸಿ ಚೆನ್ನೈಗೆ ಸೋಲಿನ ಬರೆ ಮುಟ್ಟಿಸಲು ಚಿಂತಿಸ್ತಿದೆ. ಆದ್ರೆ ಅತ್ತ ಬಲಾಢ್ಯ ಸಿಎಸ್ಕೆ ತಂಡ ಆರ್ಸಿಬಿಗೆ ಸ್ಪೆಷಲ್ ಯೋಜನೆ ರೂಪಿಸಿ ಅವರ ನೆಲದಲ್ಲಿ ಖೆಡ್ಡಾಗೆ ಕೆಡವಲು ಹವಣಿಸ್ತಿದೆ. ಆರ್ಸಿಬಿ ತಂಡವನ್ನ ನಾವು ಗೌರವಿಸುತ್ತೇವೆ. ಫಲಿತಾಂಶ ನಮ್ಮ ನಿಯಂತ್ರಣದಲ್ಲಿಲ್ಲ. ಉತ್ತಮ ಸಿದ್ಧತೆ ನಡೆಸಿದ್ದು ವಿಶೇಷ ಯೋಜನೆ ರೂಪಿಸಿದ್ದೇವೆ. ಆರ್ಸಿಬಿ ನಮ್ಮನ್ನ ಸೋಲಿಸಲು ಪ್ರಯತ್ನಿಸಲಿದೆ. ನಾವು ಚೆನ್ನಾಗಿ ಆಡುತ್ತೇವೆ ಎಂದು ಚೆನ್ನೈ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಹೇಳಿದ್ದಾರೆ.
ಸಿಎಸ್ಕೆ ಕಾಡಲಿದ್ಯಾ ಸ್ಟಾರ್ ಬೌಲರ್ಸ್ ಅಲಭ್ಯತೆ..?
ಡು ಆರ್ ಡೈ ಕದನದಲ್ಲಿ ಸಿಎಸ್ಕೆಗೆ ಸ್ಟಾರ್ಸ್ ಬೌಲರ್ಸ್ ಗೈರು ದೊಡ್ಡ ಸೆಟ್ಬ್ಯಾಕ್ ಆಗಿದೆ. ಮಥೀಶ ಪತಿರಣ, ದೀಪಕ್ ಚಹರ್ ಹಾಗೂ ಮುಸ್ತಾಫಿಜುರ್ ರೆಹಮಾನ್ ಅಲಭ್ಯತೆ ಕಾಡ್ತಿದೆ. ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲ ಬೌಲರ್ಗಳನ್ನ ಸಿದ್ಧಗೊಳಿಸಿದ್ದೇವೆ. ಪ್ರತಿಯೊಬ್ಬರೂ ಸಾಮರ್ಥ್ಯ ಹೊಂದಿದ್ದು, ಎದುರಿಸಲು ಸಜ್ಜಾಗಿದ್ದಾರೆ. ಸ್ಟಾರ್ ಬೌಲರ್ಗಳು ಸೀಸನ್ ಪೂರ್ತಿ ಆಡದಿರೋದಕ್ಕೆ ಬೇಸರವಿದೆ. ಕೆಲವರು ಇಂಜುರಿಯಿಂದ ಆಡುತ್ತಿಲ್ಲ. ಅವರ ಸ್ಥಾನ ತುಂಬಬಲ್ಲ ಆಟಗಾರರರು ಇದ್ದಾರೆ ಎಂದು ಬ್ರಾವೋ ಹೇಳಿದ್ದಾರೆ.
ಇದನ್ನೂ ಓದಿ: ನಂ-18 ಅಂದ್ರೆ ವಿರಾಟ್ ಧಗಧಗ ಉರಿತಾರೆ.. ಮೇ 18ರಂದೇ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಹೇಗಿರುತ್ತೆ?
ಈ ಕದನಕ್ಕೂ ಮುನ್ನ ಯೆಲ್ಲೋ ಆರ್ಮಿ ಹಾಗೂ ರೆಡ್ ಆರ್ಮಿ ತಂತ್ರ-ಪ್ರತಿತಂತ್ರ ಭಾರಿ ಸದ್ದು ಮಾಡ್ತಿದೆ. ಆದ್ರೆ ಆನ್ಫೀಲ್ಡ್ನಲ್ಲಿ ಯಾರ ಪ್ಲಾನ್ ವರ್ಕ್ ಆಗುತ್ತೆ, ಆರ್ಸಿಬಿಯದ್ದಾ, ಸಿಎಸ್ಕೆಯದ್ದಾ ಎನ್ನುವುದು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ