ಈಡನ್ ಗಾರ್ಡನ್ಸ್ನಲ್ಲಿ ಗೋ ಗ್ರೀನ್ ಅಡಿ ಗ್ರೀನ್ ಜರ್ಸಿಯಲ್ಲಿ RCB ಕಣಕ್ಕೆ
ಇದು ಆರ್ಸಿಬಿ ಬೌಲರ್ಸ್- ಕೆಕೆಆರ್ ಬ್ಯಾಟರ್ಸ್ ನಡುವೆ ಬಿಗ್ ಬ್ಯಾಟಲ್
ಸಾಲಿಡ್ ಫಾರ್ಮ್ನಲ್ಲಿ ಘರ್ಜಿಸುತ್ತಿರುವ ಕೋಲ್ಕತ್ತಾ ಬ್ಯಾಟ್ಸ್ಮನ್ಗಳು
ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ. ಆರ್ಸಿಬಿ ಪ್ಲೇ ಆಫ್ಗೆ ತಲುಪುತ್ತಾ.? ಇಲ್ವಾ.? ಅನ್ನೋ ಪ್ರಶ್ನೆಗೆ ಇಂದೇ ಉತ್ತರ ಸಿಗಲಿದೆ. ಕೆಕೆಆರ್ ತಂಡವನ್ನ ಮಣಿಸಿದ್ರೆ, ಆರ್ಸಿಬಿ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ. ಆದ್ರೆ, ಆರ್ಸಿಬಿ ಗೆಲ್ಲುತ್ತಾ ಅನ್ನೋದೆ ಎಲ್ಲರನ್ನ ಕಾಡ್ತಿರೋ ಪ್ರಶ್ನೆಯಾಗಿದೆ.
ಐಪಿಎಲ್ ಟೂರ್ನಿಯ ಮತ್ತೊಂದು ಮೆಗಾಫೈಟ್ಗೆ ವೇದಿಕೆ ಸಜ್ಜಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿಂದು ಆರ್ಸಿಬಿ- ಕೆಕೆಆರ್ ಮುಖಾಮುಖಿಯಾಗ್ತಿವೆ. ಕಳೆದ ಪಂದ್ಯದಲ್ಲಿ ಸೋತಿದ್ರೂ ಕೂಡ ಟೂರ್ನಿಯಲ್ಲಿ ಧಮ್ದಾರ್ ಪರ್ಫಾಮೆನ್ಸ್ ನೀಡ್ತಿರುವ ಕೆಕೆಆರ್, ಗೆಲುವಿನ ಟ್ರ್ಯಾಕ್ಗೆ ವಾಪಾಸ್ಸಾಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಆರ್ಸಿಬಿ ಕಥೆ ಅಯೋಮಯವಾಗಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಫಾಫ್ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದು ಎಲ್ಲಿ..? ಅದಕ್ಕೆ ಇಲ್ಲಿವೆ ಆ 5 ರೀಸನ್ಸ್!
ಡು ಆರ್ ಡೈ ಕದನ, ಇಂದೂ ಸೋತ್ರೆ ಆರ್ಸಿಬಿ ಖೇಲ್ ಖತಂ.!
ಹೊಸ ಅಧ್ಯಾಯ ಅಂತ ಐಪಿಎಲ್ ಸೀಸನ್ ಸ್ಟಾರ್ಟ್ ಮಾಡಿದ ಆರ್ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿರೋ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ರನ್ರೇಟ್ ಕೂಡ ಪಾತಾಳಕ್ಕೆ ಕುಸಿದಿದ್ದು, ಇಂದಿನ ಪಂದ್ಯ ಡು ಆರ್ ಡೈ ಆಗಿ ಮಾಡರ್ಪಟ್ಟಿದೆ. ಇಂದು ಸೋತ್ರೆ, ಫ್ಲೇ ಆಫ್ ಡೋರ್ ಬಹುತೇಕ ಮುಚ್ಚಲಿದೆ.
RCB ಬೌಲರ್ಸ್ VS KKR ಬ್ಯಾಟರ್ಸ್.. ಬಿಗ್ ಬ್ಯಾಟಲ್.!
ಇಂದಿನ ಪಂದ್ಯದಲ್ಲಿ ಆರ್ಸಿಬಿ ಬೌಲರ್ಸ್ ಹಾಗೂ ಕೆಕೆಆರ್ ಬ್ಯಾಟರ್ಸ್ ನಡುವೆ ಬಿಗ್ ಬ್ಯಾಟಲ್ ನಡೆಯೋದು ಕನ್ಫರ್ಮ್. ಆರ್ಸಿಬಿ ಬೌಲರ್ಸ್ ಕಳಪೆ ಫಾರ್ಮ್ನಿಂದ ನೊಂದು ಬೆಂದಿದ್ರೆ, ಕೆಕೆಆರ್ನ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿ ಘರ್ಜಿಸ್ತಿದ್ದಾರೆ. ಕೊಲ್ಕತ್ತಾ ಈಡನ್ ಗಾರ್ಡನ್ ಮೈದಾನ ಕೂಡ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗ್ತಿದೆ. ಹೀಗಾಗಿ ಇಂದಿನ ಪಂದ್ಯದ ಸೋಲು-ಗೆಲುವು ಆರ್ಸಿಬಿ ಬೌಲರ್ಸ್ ಪರ್ಫಾಮೆನ್ಸ್ ಮೇಲೆ ನಿಂತಿದೆ.
ಚಿನ್ನಸ್ವಾಮಿಯಲ್ಲಿ ಸಿದ್ಧವಾಗಿದೆ ರಣತಂತ್ರ, ವರ್ಕೌಟ್ ಆಗುತ್ತಾ.?
ಸನ್ರೈಸರ್ಸ್ ಹೈದ್ರಾಬಾದ್ ಎದುರು ಹೀನಾಯ ಮುಖಭಂಗ ಅನುಭವಿಸಿದ ಆರ್ಸಿಬಿ, ಮೊನ್ನೆಯವರೆಗೆ ಚಿನ್ನಸ್ವಾಮಿಯಲ್ಲಿ ಕಠಿಣ ಅಭ್ಯಾಸ ನಡೆಸಿತು. ತಪ್ಪುಗಳ ಮೇಲೆ ಪ್ಲೇಯರ್ಸ್ ವರ್ಕೌಟ್ ಮಾಡಿದ್ರೆ, ಕ್ಯಾಪ್ಟನ್ ಫಾಫ್ ಡುಪ್ಲೆಸಿ, ಕೋಚ್ ಆ್ಯಂಡಿ ಪ್ಲವರ್ ರಣತಂತ್ರ ಹೆಣೆಯೋದ್ರಲ್ಲಿ ಬ್ಯುಸಿಯಾಗಿದ್ರು. ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಯಾಗೋದು ಬಹುತೇಕ ಕನ್ಫರ್ಮ್ ಆಗಿದೆ. ಮೊಹಮ್ಮದ್ ಸಿರಾಜ್ ಕಮ್ಬ್ಯಾಕ್ ಮಾಡೋ ಸಾಧ್ಯತೆಯಿದೆ. ಆದ್ರೆ, ಗ್ಲೆನ್ ಮ್ಯಾಕ್ಸ್ವೆಲ್ ಕಣಕ್ಕಿಳಿಯೋದು ಅನುಮಾನವೇ.
ಕೊಹ್ಲಿ VS ಗಂಭೀರ್ ಮುಖಾಮುಖಿ.. ಕದನ ಕುತೂಹಲ.!
ವಿರಾಟ್ ಕೊಹ್ಲಿ -ಗೌತಮ್ ಗಂಭೀರ್.. ಈ ಡೆಲ್ಲಿ ಬಾಯ್ಸ್ ಮುಖಾಮುಖಿ ಕ್ರಿಕೆಟ್ ಲೋಕದ ಕುತೂಹಲ ಹೆಚ್ಚಿಸಿದೆ. ಕಳೆದ ಕೆಲ ಸೀಸನ್ಗಳಿಂದ ಇವರಿಬ್ರ ನಡುವಿನ ಸ್ಲೆಡ್ಜಿಂಗ್ ವಾರ್ ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ನೀಡ್ತಿತ್ತು. ಆದ್ರೆ, ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಇಬ್ಬರು ಹಗ್ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ರು. ಹೀಗಾಗಿ ಇಂದಿನ ಮುಖಾಮುಖಿಯಲ್ಲಿ ಏನ್ ಆಗುತ್ತೆ ಅನ್ನೋ ಸಹಜವಾದ ಕುತೂಹಲವಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್ನಲ್ಲಿ ವಿರಾಟ್ ವಿಶ್ವರೂಪದ ರೆಕಾರ್ಡ್ ಹೇಗಿದೆ?
Knight & Day!
Dressed in green for our first day game. We’re ready for the #KKR Challenge. 🏰
Watch it live on @JioCinema 📺#PlayBold #ನಮ್ಮRCB #IPL2024 #KKRvRCB pic.twitter.com/3YWbpuRsCm
— Royal Challengers Bengaluru (@RCBTweets) April 21, 2024
2019ಕ್ಕೆ ಕೊನೆ.. ಈಡನ್ ಗಾರ್ಡನ್ನಲ್ಲಿ ಗೆದ್ದಿಲ್ಲ RCB.!
ಈವರೆಗೆ ಈಡನ್ ಗಾರ್ಡನ್ನಲ್ಲಿ 11 ಬಾರಿ ಆರ್ಸಿಬಿ -ಕೆಕೆಆರ್ ಮುಖಾಮುಖಿಯಾಗಿವೆ. ಈ ಪೈಕಿ ಆರ್ಸಿಬಿ ಗೆದ್ದಿರೋದು 4 ಬಾರಿ ಮಾತ್ರ. 7 ಪಂದ್ಯಗಳಲ್ಲಿ ಸೋಲುಂಡಿದೆ. 2019ರ ಬಳಿಕವಂತೂ ಈಡನ್ ಗಾರ್ಡನ್ನಲ್ಲಿ ಗೆಲುವು ಅನ್ನೋದನ್ನ ಆರ್ಸಿಬಿ ನೋಡೆ ಇಲ್ಲ.
ಬದಲಾಗಲಿದೆ ಜೆರ್ಸಿ.. ಅದೃಷ್ಟ ಖುಲಾಯಿಸುತ್ತಾ.?
ಇಂದಿನ ಪಂದ್ಯದಲ್ಲಿ ಆರ್ಸಿಬಿ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದೆ. ಗೋ ಗ್ರೀನ್ ಅಭಿಯಾನದಡಿಯಲ್ಲಿ ಗ್ರೀನ್ ಜೆರ್ಸಿ ತೊಟ್ಟು ಆರ್ಸಿಬಿ ಕಣಕ್ಕಿಳಿಯಲಿದೆ. ಬದಲಾದ ಜೆರ್ಸಿಯಿಂದ ಅದೃಷ್ಟ ಖುಲಾಯಿಸಿ ಸೋಲಿನ ಸರಪಳಿಗೆ ಫುಲ್ ಸ್ಟಾಫ್ ಬೀಳುತ್ತಾ ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಈಡನ್ ಗಾರ್ಡನ್ಸ್ನಲ್ಲಿ ಗೋ ಗ್ರೀನ್ ಅಡಿ ಗ್ರೀನ್ ಜರ್ಸಿಯಲ್ಲಿ RCB ಕಣಕ್ಕೆ
ಇದು ಆರ್ಸಿಬಿ ಬೌಲರ್ಸ್- ಕೆಕೆಆರ್ ಬ್ಯಾಟರ್ಸ್ ನಡುವೆ ಬಿಗ್ ಬ್ಯಾಟಲ್
ಸಾಲಿಡ್ ಫಾರ್ಮ್ನಲ್ಲಿ ಘರ್ಜಿಸುತ್ತಿರುವ ಕೋಲ್ಕತ್ತಾ ಬ್ಯಾಟ್ಸ್ಮನ್ಗಳು
ಸೋಲಿನಿಂದ ಕಂಗೆಟ್ಟಿರೋ ಆರ್ಸಿಬಿ ಇಂದು ಮತ್ತೊಂದು ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ. ಆರ್ಸಿಬಿ ಪ್ಲೇ ಆಫ್ಗೆ ತಲುಪುತ್ತಾ.? ಇಲ್ವಾ.? ಅನ್ನೋ ಪ್ರಶ್ನೆಗೆ ಇಂದೇ ಉತ್ತರ ಸಿಗಲಿದೆ. ಕೆಕೆಆರ್ ತಂಡವನ್ನ ಮಣಿಸಿದ್ರೆ, ಆರ್ಸಿಬಿ ಪ್ಲೇ ಆಫ್ ಆಸೆ ಜೀವಂತವಾಗಿರಲಿದೆ. ಆದ್ರೆ, ಆರ್ಸಿಬಿ ಗೆಲ್ಲುತ್ತಾ ಅನ್ನೋದೆ ಎಲ್ಲರನ್ನ ಕಾಡ್ತಿರೋ ಪ್ರಶ್ನೆಯಾಗಿದೆ.
ಐಪಿಎಲ್ ಟೂರ್ನಿಯ ಮತ್ತೊಂದು ಮೆಗಾಫೈಟ್ಗೆ ವೇದಿಕೆ ಸಜ್ಜಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿಂದು ಆರ್ಸಿಬಿ- ಕೆಕೆಆರ್ ಮುಖಾಮುಖಿಯಾಗ್ತಿವೆ. ಕಳೆದ ಪಂದ್ಯದಲ್ಲಿ ಸೋತಿದ್ರೂ ಕೂಡ ಟೂರ್ನಿಯಲ್ಲಿ ಧಮ್ದಾರ್ ಪರ್ಫಾಮೆನ್ಸ್ ನೀಡ್ತಿರುವ ಕೆಕೆಆರ್, ಗೆಲುವಿನ ಟ್ರ್ಯಾಕ್ಗೆ ವಾಪಾಸ್ಸಾಗೋ ಆತ್ಮವಿಶ್ವಾಸದಲ್ಲಿದೆ. ಆದ್ರೆ, ಆರ್ಸಿಬಿ ಕಥೆ ಅಯೋಮಯವಾಗಿದೆ.
ಇದನ್ನೂ ಓದಿ: RCB ಕ್ಯಾಪ್ಟನ್ ಫಾಫ್ ಡುಪ್ಲೆಸಿ ಫೇಲ್ಯೂರ್ ಆಗ್ತಿರೋದು ಎಲ್ಲಿ..? ಅದಕ್ಕೆ ಇಲ್ಲಿವೆ ಆ 5 ರೀಸನ್ಸ್!
ಡು ಆರ್ ಡೈ ಕದನ, ಇಂದೂ ಸೋತ್ರೆ ಆರ್ಸಿಬಿ ಖೇಲ್ ಖತಂ.!
ಹೊಸ ಅಧ್ಯಾಯ ಅಂತ ಐಪಿಎಲ್ ಸೀಸನ್ ಸ್ಟಾರ್ಟ್ ಮಾಡಿದ ಆರ್ಸಿಬಿ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿದ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿರೋ ಆರ್ಸಿಬಿ, ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದೆ. ರನ್ರೇಟ್ ಕೂಡ ಪಾತಾಳಕ್ಕೆ ಕುಸಿದಿದ್ದು, ಇಂದಿನ ಪಂದ್ಯ ಡು ಆರ್ ಡೈ ಆಗಿ ಮಾಡರ್ಪಟ್ಟಿದೆ. ಇಂದು ಸೋತ್ರೆ, ಫ್ಲೇ ಆಫ್ ಡೋರ್ ಬಹುತೇಕ ಮುಚ್ಚಲಿದೆ.
RCB ಬೌಲರ್ಸ್ VS KKR ಬ್ಯಾಟರ್ಸ್.. ಬಿಗ್ ಬ್ಯಾಟಲ್.!
ಇಂದಿನ ಪಂದ್ಯದಲ್ಲಿ ಆರ್ಸಿಬಿ ಬೌಲರ್ಸ್ ಹಾಗೂ ಕೆಕೆಆರ್ ಬ್ಯಾಟರ್ಸ್ ನಡುವೆ ಬಿಗ್ ಬ್ಯಾಟಲ್ ನಡೆಯೋದು ಕನ್ಫರ್ಮ್. ಆರ್ಸಿಬಿ ಬೌಲರ್ಸ್ ಕಳಪೆ ಫಾರ್ಮ್ನಿಂದ ನೊಂದು ಬೆಂದಿದ್ರೆ, ಕೆಕೆಆರ್ನ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿ ಘರ್ಜಿಸ್ತಿದ್ದಾರೆ. ಕೊಲ್ಕತ್ತಾ ಈಡನ್ ಗಾರ್ಡನ್ ಮೈದಾನ ಕೂಡ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗ್ತಿದೆ. ಹೀಗಾಗಿ ಇಂದಿನ ಪಂದ್ಯದ ಸೋಲು-ಗೆಲುವು ಆರ್ಸಿಬಿ ಬೌಲರ್ಸ್ ಪರ್ಫಾಮೆನ್ಸ್ ಮೇಲೆ ನಿಂತಿದೆ.
ಚಿನ್ನಸ್ವಾಮಿಯಲ್ಲಿ ಸಿದ್ಧವಾಗಿದೆ ರಣತಂತ್ರ, ವರ್ಕೌಟ್ ಆಗುತ್ತಾ.?
ಸನ್ರೈಸರ್ಸ್ ಹೈದ್ರಾಬಾದ್ ಎದುರು ಹೀನಾಯ ಮುಖಭಂಗ ಅನುಭವಿಸಿದ ಆರ್ಸಿಬಿ, ಮೊನ್ನೆಯವರೆಗೆ ಚಿನ್ನಸ್ವಾಮಿಯಲ್ಲಿ ಕಠಿಣ ಅಭ್ಯಾಸ ನಡೆಸಿತು. ತಪ್ಪುಗಳ ಮೇಲೆ ಪ್ಲೇಯರ್ಸ್ ವರ್ಕೌಟ್ ಮಾಡಿದ್ರೆ, ಕ್ಯಾಪ್ಟನ್ ಫಾಫ್ ಡುಪ್ಲೆಸಿ, ಕೋಚ್ ಆ್ಯಂಡಿ ಪ್ಲವರ್ ರಣತಂತ್ರ ಹೆಣೆಯೋದ್ರಲ್ಲಿ ಬ್ಯುಸಿಯಾಗಿದ್ರು. ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಯಾಗೋದು ಬಹುತೇಕ ಕನ್ಫರ್ಮ್ ಆಗಿದೆ. ಮೊಹಮ್ಮದ್ ಸಿರಾಜ್ ಕಮ್ಬ್ಯಾಕ್ ಮಾಡೋ ಸಾಧ್ಯತೆಯಿದೆ. ಆದ್ರೆ, ಗ್ಲೆನ್ ಮ್ಯಾಕ್ಸ್ವೆಲ್ ಕಣಕ್ಕಿಳಿಯೋದು ಅನುಮಾನವೇ.
ಕೊಹ್ಲಿ VS ಗಂಭೀರ್ ಮುಖಾಮುಖಿ.. ಕದನ ಕುತೂಹಲ.!
ವಿರಾಟ್ ಕೊಹ್ಲಿ -ಗೌತಮ್ ಗಂಭೀರ್.. ಈ ಡೆಲ್ಲಿ ಬಾಯ್ಸ್ ಮುಖಾಮುಖಿ ಕ್ರಿಕೆಟ್ ಲೋಕದ ಕುತೂಹಲ ಹೆಚ್ಚಿಸಿದೆ. ಕಳೆದ ಕೆಲ ಸೀಸನ್ಗಳಿಂದ ಇವರಿಬ್ರ ನಡುವಿನ ಸ್ಲೆಡ್ಜಿಂಗ್ ವಾರ್ ಪಂದ್ಯಕ್ಕೆ ಹೈವೋಲ್ಟೆಜ್ ಟಚ್ ನೀಡ್ತಿತ್ತು. ಆದ್ರೆ, ಈ ಸೀಸನ್ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಇಬ್ಬರು ಹಗ್ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದ್ರು. ಹೀಗಾಗಿ ಇಂದಿನ ಮುಖಾಮುಖಿಯಲ್ಲಿ ಏನ್ ಆಗುತ್ತೆ ಅನ್ನೋ ಸಹಜವಾದ ಕುತೂಹಲವಿದೆ.
ಇದನ್ನೂ ಓದಿ: ಕಿಂಗ್ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್ನಲ್ಲಿ ವಿರಾಟ್ ವಿಶ್ವರೂಪದ ರೆಕಾರ್ಡ್ ಹೇಗಿದೆ?
Knight & Day!
Dressed in green for our first day game. We’re ready for the #KKR Challenge. 🏰
Watch it live on @JioCinema 📺#PlayBold #ನಮ್ಮRCB #IPL2024 #KKRvRCB pic.twitter.com/3YWbpuRsCm
— Royal Challengers Bengaluru (@RCBTweets) April 21, 2024
2019ಕ್ಕೆ ಕೊನೆ.. ಈಡನ್ ಗಾರ್ಡನ್ನಲ್ಲಿ ಗೆದ್ದಿಲ್ಲ RCB.!
ಈವರೆಗೆ ಈಡನ್ ಗಾರ್ಡನ್ನಲ್ಲಿ 11 ಬಾರಿ ಆರ್ಸಿಬಿ -ಕೆಕೆಆರ್ ಮುಖಾಮುಖಿಯಾಗಿವೆ. ಈ ಪೈಕಿ ಆರ್ಸಿಬಿ ಗೆದ್ದಿರೋದು 4 ಬಾರಿ ಮಾತ್ರ. 7 ಪಂದ್ಯಗಳಲ್ಲಿ ಸೋಲುಂಡಿದೆ. 2019ರ ಬಳಿಕವಂತೂ ಈಡನ್ ಗಾರ್ಡನ್ನಲ್ಲಿ ಗೆಲುವು ಅನ್ನೋದನ್ನ ಆರ್ಸಿಬಿ ನೋಡೆ ಇಲ್ಲ.
ಬದಲಾಗಲಿದೆ ಜೆರ್ಸಿ.. ಅದೃಷ್ಟ ಖುಲಾಯಿಸುತ್ತಾ.?
ಇಂದಿನ ಪಂದ್ಯದಲ್ಲಿ ಆರ್ಸಿಬಿ ಹೊಸ ಜೆರ್ಸಿ ತೊಟ್ಟು ಕಣಕ್ಕಿಳಿಯಲು ಸಜ್ಜಾಗಿದೆ. ಗೋ ಗ್ರೀನ್ ಅಭಿಯಾನದಡಿಯಲ್ಲಿ ಗ್ರೀನ್ ಜೆರ್ಸಿ ತೊಟ್ಟು ಆರ್ಸಿಬಿ ಕಣಕ್ಕಿಳಿಯಲಿದೆ. ಬದಲಾದ ಜೆರ್ಸಿಯಿಂದ ಅದೃಷ್ಟ ಖುಲಾಯಿಸಿ ಸೋಲಿನ ಸರಪಳಿಗೆ ಫುಲ್ ಸ್ಟಾಫ್ ಬೀಳುತ್ತಾ ಎಂಬ ಕುತೂಹಲ ಅಭಿಮಾನಿಗಳ ವಲಯದಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ