ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಶನಿವಾರ ಚೆನ್ನೈ ಕಿಂಗ್ಸ್, ಬೆಂಗಳೂರು ಟೀಮ್ ಮಧ್ಯೆ ರೋಚಕ ಪಂದ್ಯ..!
ಚೆನ್ನೈ ಟೀಮ್ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಇದ್ದಾರೆ ಮಿಸೈಲ್ ಮ್ಯಾನ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್ಗೆ ಹೋಗಿವೆ. ಉಳಿದ 2 ಸ್ಥಾನಗಳಿಗಾಗಿ ಐದು ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಮೇ 18ಕ್ಕೆ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್ಸಿಬಿ ತಂಡಗಳು ಎದುರು ನೋಡುತ್ತಿವೆ.
ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್ ಕ್ಯಾನ್ಸಲ್ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಮಾತಾಡೋಕೆ ಶುರು ಮಾಡಿದ್ದಾರೆ.
ಮೇ 18ಕ್ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ನಡೆಯಲಿರೋ ಕೊನೆ ಲೀಗ್ ಪಂದ್ಯ ಆರ್ಸಿಬಿ ಪ್ಲೇಆಫ್ ಸ್ಥಾನ ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿಯನ್ನು ಎದುರಿಸಲು ನಮ್ಮ ಬಳಿ ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರಹಮಾನ್, ತುಷಾರ್ ದೇಶಪಾಂಡೆ ಇದ್ದಾರೆ ಎಂದು ಬೀಗುತ್ತಿದೆ.
ಇನ್ನೊಂದೆಡೆ ಚೆನ್ನೈ ಬೌಲಿಂಗ್ಗೆ ಆರ್ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್ ಬೆವರಿಳಿಸಲು ಆರ್ಸಿಬಿ ರಜತ್ ಪಾಟಿದಾರ್ ಸಜ್ಜಾಗಿದ್ದಾರೆ. ಕಳೆದ ಐದು ಪಂದ್ಯಗಳಲ್ಲೂ ರಜತ್ ಸ್ಪಿನ್ನರ್ಸ್ ಎದುರು ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.
ಇದನ್ನೂ ಓದಿ: ಶನಿವಾರ ಚೆನ್ನೈ, ಬೆಂಗಳೂರು ಮಧ್ಯೆ ರೋಚಕ ಪಂದ್ಯ.. ಆರ್ಸಿಬಿಗೆ ಗುಡ್ನ್ಯೂಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಶನಿವಾರ ಚೆನ್ನೈ ಕಿಂಗ್ಸ್, ಬೆಂಗಳೂರು ಟೀಮ್ ಮಧ್ಯೆ ರೋಚಕ ಪಂದ್ಯ..!
ಚೆನ್ನೈ ಟೀಮ್ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಇದ್ದಾರೆ ಮಿಸೈಲ್ ಮ್ಯಾನ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ತಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್ಗೆ ಹೋಗಿವೆ. ಉಳಿದ 2 ಸ್ಥಾನಗಳಿಗಾಗಿ ಐದು ತಂಡಗಳ ಮಧ್ಯೆ ಭಾರೀ ಪೈಪೋಟಿ ನಡೆಯುತ್ತಿದೆ. ಮೇ 18ಕ್ಕೆ ಹೇಗಾದ್ರೂ ಮಾಡಿ ಗೆದ್ದು ಪ್ಲೇ ಆಫ್ ಪ್ರವೇಶ ಮಾಡಲೇಬೇಕು ಎಂದು ಚೆನ್ನೈ, ಆರ್ಸಿಬಿ ತಂಡಗಳು ಎದುರು ನೋಡುತ್ತಿವೆ.
ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್ ಕ್ಯಾನ್ಸಲ್ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಮಾತಾಡೋಕೆ ಶುರು ಮಾಡಿದ್ದಾರೆ.
ಮೇ 18ಕ್ಕೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ನಡೆಯಲಿರೋ ಕೊನೆ ಲೀಗ್ ಪಂದ್ಯ ಆರ್ಸಿಬಿ ಪ್ಲೇಆಫ್ ಸ್ಥಾನ ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿಯನ್ನು ಎದುರಿಸಲು ನಮ್ಮ ಬಳಿ ಡೆರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರಹಮಾನ್, ತುಷಾರ್ ದೇಶಪಾಂಡೆ ಇದ್ದಾರೆ ಎಂದು ಬೀಗುತ್ತಿದೆ.
ಇನ್ನೊಂದೆಡೆ ಚೆನ್ನೈ ಬೌಲಿಂಗ್ಗೆ ಆರ್ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್ ಬೆವರಿಳಿಸಲು ಆರ್ಸಿಬಿ ರಜತ್ ಪಾಟಿದಾರ್ ಸಜ್ಜಾಗಿದ್ದಾರೆ. ಕಳೆದ ಐದು ಪಂದ್ಯಗಳಲ್ಲೂ ರಜತ್ ಸ್ಪಿನ್ನರ್ಸ್ ಎದುರು ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.
ಇದನ್ನೂ ಓದಿ: ಶನಿವಾರ ಚೆನ್ನೈ, ಬೆಂಗಳೂರು ಮಧ್ಯೆ ರೋಚಕ ಪಂದ್ಯ.. ಆರ್ಸಿಬಿಗೆ ಗುಡ್ನ್ಯೂಸ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್