Advertisment

‘ಬೇಜಾರು ಏನೆಂದರೆ..’ ಮನೆಯಿಂದ ಆಚೆ ಬಂದು ಕಿಚ್ಚನ ಎದುರು RJ ಅಮಿತ್ ಮಾತು..!

ಬಿಗ್​ಬಾಸ್​ ಮನೆಯಿಂದ ಔಟ್ ಆಗ್ತಿದ್ದಂತೆ ಕಿಚ್ಚ ಸುದೀಪ್, ಅವರನ್ನ ವೇದಿಕೆಗೆ ಕರೆದರು. ಈ ವೇಳೆ ಆರ್​ಜೆ ಅಮಿತ್​ಗೆ ಏನಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಅಮಿತ್ ನೀಡಿದ ಉತ್ತರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
RJ Amith
Advertisment

‘ಬಿಗ್ ಬಾಸ್ ಕನ್ನಡ 12’ (Bigg Boss) ಶೋನ ಮೊದಲ ವಾರದಲ್ಲೇ ಎರಡು ವಿಕೆಟ್ ಪತನವಾಗಿದೆ. ಜಂಟಿಯಾಗಿ ದೊಡ್ಮನೆ ಪ್ರವೇಶ ಮಾಡಿದ್ದ ಆರ್‌ಜೆ ಅಮಿತ್ ಮತ್ತು ಕರಿಬಸಪ್ಪ  (RJ Amith and Karibasappa)ಔಟ್ ಆಗಿದ್ದಾರೆ. 

Advertisment

ಬಿಗ್​ಬಾಸ್​ ಮನೆಯಿಂದ ಔಟ್ ಆಗ್ತಿದ್ದಂತೆ ಕಿಚ್ಚ ಸುದೀಪ್ (kiccha sudeep), ಅವರನ್ನ ವೇದಿಕೆಗೆ ಕರೆದರು. ಈ ವೇಳೆ ಆರ್​ಜೆ ಅಮಿತ್​ಗೆ ಏನಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್.. ಈ ಒಂದು ಮಿಂಚಿನ ಓಟದಲ್ಲಿ ನಾನಿನ್ನೂ ರೆಡಿಯಾಗಿರಲಿಲ್ಲ. ಯಾವುದೇ ಹೊಸ ಜಾಗಕ್ಕೆ ಹೋದರೆ ಅಡ್ಜಸ್ಟ್ ಆಗಲು 2 -3 ದಿನ ಟೈಮ್ ತಗೋತಿನಿ. ನಾನು ಈಗ ತಾನೇ ಎಲ್ಲರೊಂದಿಗೆ ಬೆರೆಯುವುದಕ್ಕೆ ಶುರು ಮಾಡಿದ್ದೆ. ಸದ್ಯ ನನಗೆ ಹೆಮ್ಮೆಯ ವಿಚಾರ ಏನೆಂದರೆ, ಸುದೀಪ್ ಅವರೊಂದಿಗೆ ಈ ವೇದಿಕೆಯನ್ನು ಶೇರ್ ಮಾಡುವ ಅವಕಾಶ ಸಿಕ್ಕಿರುವುದು ಎಂದರು. 

ಇದನ್ನೂ ಓದಿ: RJ ಅಮಿತ್​ಗೆ ಮಾತಲ್ಲೇ ಚಾಟಿ ಏಟು ಕೊಟ್ಟ ಕಿಚ್ಚ ಸುದೀಪ್..!

ಬೇಜಾರು ಏನೆಂದರೆ unexplored potential ತುಂಬಾನೇ ಇತ್ತು. ನಾನಿನ್ನೂ ಕೊಡಲು ಇತ್ತು. ಸ್ಟಾರ್ಟಿಂಗ್ ಅಬ್ಸರ್ವೇಶನ್, ಆಮೇಲೆ ಎಕ್ಸ್​ಪೆರಿಮೆಂಟಲ್. ಅಲ್ಲಿ ಆಗಿರುವ ವಿಳಂಬದಿಂದಾಗಿ ನಾನು ಮನೆಯಿಂದ ಔಟ್ ಆಗಿರಬಹುದು ಅನಿಸುತ್ತದೆ. ಸಿಕ್ಕಾಪಟ್ಟೆ ಹೆಮ್ಮೆಯ ವಿಷಯ ಏನೆಂದರೆ ನಿಮ್ಮ ಜೊತೆ ದೊಡ್ಡ ವೇದಿಕೆ ಶೇರ್ ಮಾಡುವ ಅವಕಾಶ ಸಿಕ್ಕಿರೋದು ಎಂದರು.

ಇದನ್ನೂ ಓದಿ: ಬಿಗ್​ಬಾಸ್​ ಶೋನಿಂದ ಹೊರಬಿದ್ದ ಇಬ್ಬರು ಸ್ಪರ್ಧಿಗಳು; ಒಂದೇ ವಾರಕ್ಕೆ ಜರ್ನಿ ಅಂತ್ಯ..!

Advertisment

ಆಗ ಸುದೀಪ್ ಮಾತನ್ನಾಡಿ.. ನನಗೆ ವೈಯಕ್ತಿಕವಾಗಿ ಗೊತ್ತಿರೋ ಪ್ರಕಾರ, ನಿಮ್ಮಲ್ಲಿ ಇನ್ನೂ ಸಾಮರ್ಥ್ಯ ಇದೆ. ನಾನು ನಿಮ್ಮನ್ನು ಬರೀ ಬಿಗ್​ಬಾಸ್​ನಲ್ಲಿ ಮಾತ್ರ ಬೆರೆತಿಲ್ಲ. ಹೊರಗಡೆಯೂ ನೋಡಿದ್ದೀನಿ. ನಿಮ್ಮಲ್ಲಿ ಕೆಲವು ಹ್ಯೂಮರ್ ಇದೆ. ಯೋಚನಾ ಶಕ್ತಿ ಇದೆ. ಅದನ್ನೆಲ್ಲ ಡೆವಲಪ್ ಮಾಡಿಕೊಳ್ಳಿ ಎಂದು ಹಾರೈಸಿದರು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Bigg Boss Kannada 12 BBK12 Karibasappa RJ Amith
Advertisment
Advertisment
Advertisment