/newsfirstlive-kannada/media/media_files/2025/09/16/ninagagi-serial-1-2025-09-16-14-24-40.jpg)
ಬಿಗ್ಬಾಸ್ ಸೀಸನ್ 12ಕ್ಕೆ ಕೌಂಡೌನ್ ಶುರುವಾಗಿದೆ. ಈ ನಡುವೆ 3 ಧಾರಾವಾಹಿಗಳು ಮುಕ್ತಾಯವಾಗ್ತಿವೆ. ರಾಮಾಚಾರಿ ಹಾಗೂ ದೃಷ್ಟಿಬೊಟ್ಟು ಮುಕ್ತಾಯ ಪಕ್ಕಾಗಿದೆ. ದೃಷ್ಟಿಬೊಟ್ಟು ತನ್ನ ಕೊನೆಯ ಸಂಚಿಕೆಗಳ ಶೂಟಿಂಗ್ ಮುಗಿಸಿದೆ. ಅಂತಿಮವಾಗಿ ಎಲ್ಲಾ ಕಲಾವಿದರಿಗೆ ವಿದಾಯ ಹೇಳಿದ್ದಾರೆ ನಿರ್ಮಾಪಕರಾದ ನಟ ರಕ್ಷ್ ಹಾಗೂ ಅವ್ರ ಪತ್ನಿ ಅನುಷಾ.
ದೃಷ್ಟಿಬೊಟ್ಟು ಇದೇ ಸೆಪ್ಟಂಬರ್ 21 ರಂದು ತನ್ನ ಕೊನೆ ಸಂಚಿಕೆ ಪ್ರಸಾರ ಆಗಲಿದೆ. ಇನ್ನು ಸೀರಿಯಲ್ನಿಂದ ಹೊರಬಂದ ವಿಜಯ್ ಸೂರ್ಯ ಬಿಗ್ಬಾಸ್ಗೆ ಕಾಲಿಡ್ತಿದ್ದಾರೆ ಎಂಬ ಮಾತು ಜೋರಾಗಿದೆ. ಇನ್ನು ರಾಮಾಚಾರಿ ಧಾರಾವಾಹಿ ಅಂತಿಮ ಹಂತ ತಲುಪಿದ್ದು, ಇನ್ನು ಬಿಗ್ಬಾಸ್ ಶುರುವಾದ ನಂತರವೂ ಧಾರಾವಾಹಿ ಮೂಡಿಬರಲಿದೆ. ಸಾವಿರದ ಗಡಿ ದಾಟಿದ ನಂತರ ರಾಮಾಚಾರಿಗೆ ವಿದಾಯ ಹೇಳಲಿದ್ದಾರೆ. ಅಂದರೆ ಇನ್ನು, ಸುಮಾರು 60 ಸಂಚಿಕೆಗಳು ಪ್ರಾಸಾರವಾಗಲಿವೆ.
ಇದನ್ನೂ ಓದಿ:‘ಲಕ್ಷ್ಮಿ ನಿವಾಸ’ದ ಬಗ್ಗೆ ಬೇಸರ ಹೊರ ಹಾಕಿದ ನಟಿ ಅಂಜಲಿ..! ಅಸಲಿಗೆ ಆಗಿದ್ದೇನು?
/filters:format(webp)/newsfirstlive-kannada/media/media_files/2025/09/16/divya-uruduga-2025-09-16-14-26-27.jpg)
ಆ ಮೂರನೇ ಧಾರಾವಾಹಿ ಯಾವುದು ಎಂಬುದಕ್ಕೆ ಉತ್ತರ ಸಿಕ್ಕಿದ್ದು, ನಿನಗಾಗಿ ಎನ್ನಲಾಗ್ತಿದೆ. ಹೌದು, ಸಮ್ಪೃಥ್ವಿ ನಿರ್ದೇಶನದ ದಿವ್ಯಾ ಉರುಡುಗ ಹಾಗೂ ರಿತ್ವಿಕ್ ಮಠದ್ ಮುಖ್ಯಭೂಮಿಕೆಯಲ್ಲಿರೋ ನಿನಗಾಗಿ ಕಳೆದ ವರ್ಷ ಅದ್ಧೂರಿಯಾಗಿಯೇ ಲಾಂಚ್ ಆಗಿತ್ತು. ಹಲವು ತಿರುವುಗಳ ಜೊತೆ ವೀಕ್ಷಕರನ್ನ ರಂಜಿಸಿತ್ತು. ಸದ್ಯ ಮುಕ್ತಾಯದ ಸೂಚನೆ ಸಿಗ್ತಿದೆ.
ಧಾರಾವಾಹಿ ಕಥೆ ವೇಗ ಪಡೆದುಕೊಂಡಿದ್ದು, ದೇವಿ ಸತ್ಯ ಬಯಲು ಮಾಡಿದ್ದಾಳೆ ರಚನಾ. ಅತ್ತ ಬ್ಯುಸಿನೆಸ್ನಲ್ಲಿ ನಡೀತಿರೋ ಅನ್ಯಾಯದ ಸುಳಿವು ಜೀವಾಗೆ ಸಿಕ್ಕಿದೆ. ಈ ನಡುವೆ ದುಷ್ಟ ಕಪಿಲ್ ಹಂತಹಂತವಾಗಿ ಬದಲಾಗ್ತಿದ್ದಾನೆ. ಈ ಎಲ್ಲಾ ಬೆಳವಣಿಗೆಗಳು ಸೀರಿಯಲ್ ವಿದಾಯ ಹೇಳ್ತಿರೋದು ಪಕ್ಕಾ ಎನ್ನುವಂತಿದೆ. ಒಟ್ನಲ್ಲಿ ಸದ್ಯದಲ್ಲೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬರಲಿದ್ದು, ರಾಮಾಚಾರಿ, ದೃಷ್ಟಿಬೊಟ್ಟು ಹಾಗೂ ನಿನಗಾಗಿ ಮುಕ್ತಾಯಕ್ಕೆ ಸಜ್ಜಾಗಿವೆ.
ಇದನ್ನೂ ಓದಿ:ಬೆಳ್ಳಿ ಗೊಂಬೆಯಾದ ಮಾನ್ಸಿ ಜೋಶಿ.. ಮಿರಮಿರ ಮಿಂಚಿದ ಚೆಂದುಳ್ಳಿ -Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ