Advertisment

ಇದು ಆಮೆ ಮೊಲದ ಕತೆ.. ಜಾಹ್ನವಿ ಬಗ್ಗೆ ಇಂಚಿಂಚು ಮಾಹಿತಿ ಹೊರಹಾಕಿದ ಅಶ್ವಿನಿ ಗೌಡ..! VIDEO

ಬಿಗ್​ಬಾಸ್ ಮನೆಯಲ್ಲಿ ನಡೆದ ಮೊಲ ಮತ್ತು ಆಮೆಯ ಕತೆಯ ಬಗ್ಗೆ ಅಶ್ವಿನಿ ಗೌಡ ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಹ್ನವಿ ಮೇಲಿನ ಕೋಪಕ್ಕೆ ಅಸಲಿ ಕಾರಣ ಇದೇ ಅಂತಲೂ ತಿಳಿಸಿದ್ದಾರೆ.

author-image
Ganesh Kerekuli
Jahnvi and Kavya
Advertisment

ಅಶ್ವಿನಿ ಗೌಡ ಮತ್ತು ಜಾಹ್ನವಿ ಬಿಗ್​ಬಾಸ್​ ಮನೆಯಲ್ಲಿ ಬಿಟ್ಟಿರಲಾಗದ ಕಿಚಿಕು ಗೆಳತಿಯರು ಎಂದು ಬಿಂಬಿತವಾಗಿತ್ತು. ಇದೀಗ ಜೀವದ ಗೆಳತಿಯರ ಮಧ್ಯೆ ಬಿರುಕು ಮೂಡಿದ್ದು ಒಬ್ಬರಿಗೊಬ್ಬರು ಕಿರುಚಾಡಿದ್ದಾರೆ. ಇವತ್ತಿನ ಎಪಿಸೋಡ್​ನ ಹೈಲೈಟ್ಸ್​ ಜಾಹ್ನವಿ vs ಅಶ್ವಿನಿ ಗೌಡ ಅವರ ಮುನಿಸಿನ ಕಹಾನಿಯಾಗಿದೆ.. 

Advertisment

ಗೆಳತಿ ಜಾಹ್ನವಿ ಮೇಲಿನ ಕೋಪಕ್ಕೆ ಸಂಬಂಧಿಸಿ ಅಶ್ವಿನಿ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ರಾಶಿಕಾ ಶೆಟ್ಟಿ ಜೊತೆ ಜಾಹ್ನವಿ ಬಗ್ಗೆ ಮನಬಿಚ್ಚಿ ಮಾತನ್ನಾಡಿದ್ದಾರೆ. ಆರಂಭದಲ್ಲಿ ಮಾತಿಗೆ ಎಳೆಯುವ ರಾಶಿಕಾ ಶೆಟ್ಟಿ.. ಇವಾಗ ನೀವು ಎಷ್ಟೆಲ್ಲ ಹೇಳಿಕೊಂಡು ಕೋಪ ಮಾಡಿಕೊಂಡ್ರಿ. ಭಿನ್ನಾಭಿಪ್ರಾಯ ಇದ್ದಾಗ ನೀವು ಕೂತ್ಕೊಂಡು ಬಗೆಹರಿಸಿಕೊಳ್ಳಬಹುದಿತ್ತು ಎಂದಿದ್ದಾರೆ. 

ಇದನ್ನೂ ಓದಿ: BIGG BOSS ಕಾಲೇಜ್​​ ಆರಂಭ.. ಇವನು ನನಗೆ ಇಷ್ಟ, ಸೂರಜ್​ ನೋಡಿ ಹೇಳಿದ್ರಾ ರಾಶಿಕಾ..?

JAHNAVI_ASHWINI

ಅದಕ್ಕೆ ಉತ್ತರಿಸುವ ಅಶ್ವಿನಿ ಗೌಡ.. ಹೌದು, ನಾನು ತುಂಬಾ ಸಲ ಹೇಳಿದ್ದೀನಿ. ಇವರು ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಯಾಕೋ ನನಗೆ ಇದು ಸರಿ ಬರುತ್ತಿಲ್ಲ. ಮೊದಲ ಬಾರಿಗೆ ಜಾಹ್ನವಿಯನ್ನ ಎಚ್ಚರಿಸಿದ್ದೇ ನಾನು. ಹೋಗಿ ಹೊರಗಡೆ ಬಂದು ಮಾತನ್ನಾಡಿ ಅಂತಾ. ಎಲ್ಲರೂ ಬಂದು ಒಂದು ರೀತಿ ಹೇಳಿದರೆ ಅವರು ಎಲ್ಲಿಯೂ ಕೂಡ ಸ್ಟ್ಯಾಂಡ್ ತೆಗೆದುಕೊಂಡಿರಲಿಲ್ಲ. 

Advertisment

ಅವಳಿಂದಾಗಿಯೇ ನಾನು ಮಾತನ್ನಾಡಿ, ಮತನ್ನಾಡಿ ಎಲ್ಲಾ ಜಂಟಿಗಳಿಂದಲೂ ದುಷ್ಮನಿ ಕಟ್ಟಿಕೊಂಡೆ. ಆದರೆ ನಂಗೆ ಗೊತ್ತಿಲ್ಲ. ಇವರೆಲ್ಲ, ನೀನು ಮುಂದೆ ಹೋಗು, ನಿನ್ನ ಹಳ್ಳವನ್ನು ನೀನೇ ತೋಡಿಕೋ. ನಿಧಾನಕ್ಕೆ ನಿನ್ನನ್ನು ಮನೆಯಿಂದ ಕಳುಹಿಸಿ, ನಾವು ರೇಸ್​ನಲ್ಲಿ ನಿಧಾನಕ್ಕೆ ಬರ್ತೀವಿ ಅಂತಾ ಅವರು ಕತೆ ಹೇಳಿದರು ಗೊತ್ತಾ? ಅವರು ಆಮೆ ಮತ್ತು ಮೊಲದ ಕತೆ ಹೇಳಿದರು. ಆಗಲೇ ನನಗೆ ಅರ್ಥವಾಯಿತು. ಅದರ ಅರ್ಥ ಏನು? 

ಇದನ್ನೂ ಓದಿ: ರಾಶಿಕಾರ ‘ಲವ್ ಬುಟ್ಟಿ’ಯಲ್ಲಿ ಸೂರಜ್ ಪರವಶ.. ಗೇಮ್​​ನಲ್ಲಿ ತಮಾಷೆಗೆ ಲೈನ್ ಹೊಡೆಯೋಕೂ ಬೇಕು ಪರ್ಮಿಷನ್..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Ashwini Gowda Bigg Boss Ashwini Gowda Jahnavi bigg boss jahnavi Bigg Boss Kannada 12 Bigg boss BBK12
Advertisment
Advertisment
Advertisment