ಬಿಬಿಎಂಪಿಗೆ ಚುನಾವಣೆ ನಡೆದು 9 ವರ್ಷಗಳು ಆಗಿದೆ
ದೇಶದ ಬೃಹತ್ ಪಾಲಿಕೆಗಳಲ್ಲಿ ಬಿಬಿಎಂಪಿ ಕೂಡ ಒಂದು
ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ-ಅಶೋಕ್
ಬಿಬಿಎಂಪಿ.. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ. ದೇಶದ ಬೃಹತ್ ಪಾಲಿಕೆಗಳಲ್ಲಿ ಒಂದು. ನಗರದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉತ್ತರದಾಯಿ. ರಾಜಧಾನಿಯ ಉಸ್ತುವಾರಿ ನಿರ್ವಹಿಸಬೇಕಿದ್ದ ಬಿಬಿಎಂಪಿಗೆ ಕಳೆದ 4 ವರ್ಷಗಳಿಂದ ಎಲೆಕ್ಷನ್ ಇಲ್ಲದೆ ಗ್ರಹಣ ಕವಿದಿದೆ. ಇಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳದ್ದೇ ದರ್ಬಾರ್ ಇದೆ. ಇದೀಗ ಬಿಬಿಎಂಪಿಗೆ ಕವಿದ ಗ್ರಹಣ ಮೋಕ್ಷಕ್ಕಾಗಿ ಎಲೆಕ್ಷನ್ ಹೋಮ ಹವನಕ್ಕೆ ಸಿದ್ಧತೆ ಶುರುವಾಗಿದೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ಗ್ಯಾರಂಟಿಯ ಲಾಭ ಪಡೆಯಲು ಕಾಂಗ್ರೆಸ್ ಶಾಸಕರ ಸಿದ್ಧತೆ!
2020 ಸೆಪ್ಟೆಂಬರ್ನಲ್ಲೇ ಬಿಬಿಎಂಪಿ ಸದಸ್ಯರುಗಳ ಅವಧಿ ಅಂತ್ಯ ಆಗಿದೆ.. ಇನ್ನೊಂದು ವರ್ಷ ಕಳೆದ್ರೆ ಎಲೆಕ್ಷನ್ ಅವಧಿಯೇ ಕಳೆದಂತೆ. ಸದ್ಯ ಎಲೆಕ್ಷನ್ಗೆ ಒಲವು ತೋರಿಸಿದ ರಾಜ್ಯ ಸರ್ಕಾರ, ಪೂರ್ವ ಸಿದ್ಧತೆ ಶುರು ಮಾಡಿದೆ.. ಲೋಕಸಭಾ ಫಲಿತಾಂಶದ ಬೆನ್ನಿಗೆ ಹೈವೋಲ್ಟೇಜ್ ಮೀಟಿಂಗ್ ಅರೆಂಜ್ ಆಗಿದೆ. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದ್ದು, ಬಹುತೇಕ ದಸರಾ ವೇಳೆಗೆ ಎಲೆಕ್ಷನ್ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಯಾವತ್ತೋ ನಡೀಬೇಕಿದ್ದ ಎಲೆಕ್ಷನ್ಗೆ ವಾರ್ಡ್ಗಳ ಮರು ವಿಂಗಡಣೆ, ಮೀಸಲಾತಿ, ಕೋರ್ಟ್ ವ್ಯಾಜ್ಯಗಳು, ವಿಧಾನಸಭೆ, ಲೋಕಸಭೆ ಎಲೆಕ್ಷನ್ ಕಾರಣಕ್ಕೆ ಬಿಬಿಎಂಪಿ ಎಲೆಕ್ಷನ್ನನ್ನ ಬಹುತೇಕರು ಮರೆತೇ ಬಿಟ್ಟಿದ್ದಾರೆ. ಅಂದ್ಹಾಗೆ ಈಗ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಬೆಂಗಳೂರಿನ ಕಾಂಗ್ರೆಸ್ ಸಚಿವರು, ಶಾಸಕರು ಈ ಬಿಬಿಎಂಪಿ ಎಲೆಕ್ಷನ್ಗಾಗಿ ದುಂಬಾಲು ಬಿದ್ದಿದ್ದಾರೆ. ಸರ್ಕಾರ ಸಹ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಪ್ಲಾನ್ ಮಾಡ್ತಿದೆ.
ಬಿಬಿಎಂಪಿ ಮಂತ್ರ.. ಕಾಂಗ್ರೆಸ್ ತಂತ್ರ!
ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆಯ ಸುದ್ದಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರಿನಲ್ಲಿ ಯಾವಾಗಲೇ ಚುನಾವಣೆ ಬಂದ್ರೂ ನಾವು ಎದುರಿಸಲು ಸಿದ್ಧ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಬಾಯ್ ಫ್ರೆಂಡ್ಗೆ ದುಬಾರಿ ಗಿಫ್ಟ್ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!
‘ಯಾವಾಗ ಎಲೆಕ್ಷನ್ ಬಂದ್ರೂ ಸಿದ್ಧ’
ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ. ಬೆಂಗಳೂರಲ್ಲಿ ನಮ್ಮದೇ 3 ಜನ ಸಂಸದರು ಇದ್ದಾರೆ. 16 ಜನ ಶಾಸಕರು ನಾವಿದ್ದೇವೆ. ಡಿ.ಕೆ ಶಿವಕುಮಾರ್ ಇಂನ್ಚಾರ್ಜ್ ಮಿನಿಸ್ಟರ್ ಆದ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ಒಂದೊಂದು ಮನೆ ಕಟ್ಟಬೇಕಾದರೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಲಂಚ ಕೊಡಬೇಕು. ಈ ಎಲೆಕ್ಷನ್ ಬಂದರೆ ಲಂಚ ತಗೊಂಡಿದ್ದಾರಲ್ಲ, ಅದಕ್ಕೆ ಜನ ಸರಿಯಾದ ಪಾಠ ಕಲಿಸುತ್ತಾರೆ.
ಆರ್.ಅಶೋಕ್, ವಿಪಕ್ಷ ನಾಯಕ
ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ 4 ವರ್ಷ ಕಳೆದಿದೆ. ಪ್ರತಿ ಮಳೆಗಾಲ, ಬೇಸಿಗೆಯಲ್ಲೂ ತತ್ತರಿಸ್ತಿರುವ ಸಿಲಿಕಾನ್ ಸಿಟಿ ಬ್ರ್ಯಾಂಡ್ಗೆ ಧಕ್ಕೆ ಆಗ್ತಿದೆ. ಸಾಕಷ್ಟು ಅಭಿವೃದ್ಧಿ ಪರ, ಜನಪರ ಯೋಜನೆಗಳು ಪಾತಾಳ ಸೇರಿವೆ. ಹೀಗಾಗಿ ಬಿಬಿಎಂಪಿ ಎಲೆಕ್ಷನ್ ಅತ್ಯವಶ್ಯ ಅಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಬಿಎಂಪಿಗೆ ಚುನಾವಣೆ ನಡೆದು 9 ವರ್ಷಗಳು ಆಗಿದೆ
ದೇಶದ ಬೃಹತ್ ಪಾಲಿಕೆಗಳಲ್ಲಿ ಬಿಬಿಎಂಪಿ ಕೂಡ ಒಂದು
ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ-ಅಶೋಕ್
ಬಿಬಿಎಂಪಿ.. ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ. ದೇಶದ ಬೃಹತ್ ಪಾಲಿಕೆಗಳಲ್ಲಿ ಒಂದು. ನಗರದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ಉತ್ತರದಾಯಿ. ರಾಜಧಾನಿಯ ಉಸ್ತುವಾರಿ ನಿರ್ವಹಿಸಬೇಕಿದ್ದ ಬಿಬಿಎಂಪಿಗೆ ಕಳೆದ 4 ವರ್ಷಗಳಿಂದ ಎಲೆಕ್ಷನ್ ಇಲ್ಲದೆ ಗ್ರಹಣ ಕವಿದಿದೆ. ಇಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರಿಗಳದ್ದೇ ದರ್ಬಾರ್ ಇದೆ. ಇದೀಗ ಬಿಬಿಎಂಪಿಗೆ ಕವಿದ ಗ್ರಹಣ ಮೋಕ್ಷಕ್ಕಾಗಿ ಎಲೆಕ್ಷನ್ ಹೋಮ ಹವನಕ್ಕೆ ಸಿದ್ಧತೆ ಶುರುವಾಗಿದೆ.
ಇದನ್ನೂ ಓದಿ: ಅಂಬಾರಿ ಅರ್ಜುನನ್ನ ಎಲ್ರೂ ಮರೆತರೂ ಜಾಲೆಂಜಿಂಗ್ ಸ್ಟಾರ್ ಮರೆಯಲಿಲ್ಲ.. ದರ್ಶನ್ ಏನು ಮಾಡಿದ್ರು ಗೊತ್ತಾ?
ಗ್ಯಾರಂಟಿಯ ಲಾಭ ಪಡೆಯಲು ಕಾಂಗ್ರೆಸ್ ಶಾಸಕರ ಸಿದ್ಧತೆ!
2020 ಸೆಪ್ಟೆಂಬರ್ನಲ್ಲೇ ಬಿಬಿಎಂಪಿ ಸದಸ್ಯರುಗಳ ಅವಧಿ ಅಂತ್ಯ ಆಗಿದೆ.. ಇನ್ನೊಂದು ವರ್ಷ ಕಳೆದ್ರೆ ಎಲೆಕ್ಷನ್ ಅವಧಿಯೇ ಕಳೆದಂತೆ. ಸದ್ಯ ಎಲೆಕ್ಷನ್ಗೆ ಒಲವು ತೋರಿಸಿದ ರಾಜ್ಯ ಸರ್ಕಾರ, ಪೂರ್ವ ಸಿದ್ಧತೆ ಶುರು ಮಾಡಿದೆ.. ಲೋಕಸಭಾ ಫಲಿತಾಂಶದ ಬೆನ್ನಿಗೆ ಹೈವೋಲ್ಟೇಜ್ ಮೀಟಿಂಗ್ ಅರೆಂಜ್ ಆಗಿದೆ. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರು ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದ್ದು, ಬಹುತೇಕ ದಸರಾ ವೇಳೆಗೆ ಎಲೆಕ್ಷನ್ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಯಾವತ್ತೋ ನಡೀಬೇಕಿದ್ದ ಎಲೆಕ್ಷನ್ಗೆ ವಾರ್ಡ್ಗಳ ಮರು ವಿಂಗಡಣೆ, ಮೀಸಲಾತಿ, ಕೋರ್ಟ್ ವ್ಯಾಜ್ಯಗಳು, ವಿಧಾನಸಭೆ, ಲೋಕಸಭೆ ಎಲೆಕ್ಷನ್ ಕಾರಣಕ್ಕೆ ಬಿಬಿಎಂಪಿ ಎಲೆಕ್ಷನ್ನನ್ನ ಬಹುತೇಕರು ಮರೆತೇ ಬಿಟ್ಟಿದ್ದಾರೆ. ಅಂದ್ಹಾಗೆ ಈಗ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಬೆಂಗಳೂರಿನ ಕಾಂಗ್ರೆಸ್ ಸಚಿವರು, ಶಾಸಕರು ಈ ಬಿಬಿಎಂಪಿ ಎಲೆಕ್ಷನ್ಗಾಗಿ ದುಂಬಾಲು ಬಿದ್ದಿದ್ದಾರೆ. ಸರ್ಕಾರ ಸಹ ಏಕಾಏಕಿ ಬಿಬಿಎಂಪಿ ಮೇಲೆ ನಿಗಾವಹಿಸಲು ಪ್ಲಾನ್ ಮಾಡ್ತಿದೆ.
ಬಿಬಿಎಂಪಿ ಮಂತ್ರ.. ಕಾಂಗ್ರೆಸ್ ತಂತ್ರ!
ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆಯ ಸುದ್ದಿಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರಿನಲ್ಲಿ ಯಾವಾಗಲೇ ಚುನಾವಣೆ ಬಂದ್ರೂ ನಾವು ಎದುರಿಸಲು ಸಿದ್ಧ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಬಾಯ್ ಫ್ರೆಂಡ್ಗೆ ದುಬಾರಿ ಗಿಫ್ಟ್ ಕೊಡಿಸಲು ಮನೆ ಮಾಲಕಿಯನ್ನೇ ಕೊಂದ ಸುಂದರಿ.. ಸಿಕ್ಕಿಬಿದ್ದಿದ್ದೇ ರೋಚಕ!
‘ಯಾವಾಗ ಎಲೆಕ್ಷನ್ ಬಂದ್ರೂ ಸಿದ್ಧ’
ಯಾವುದೇ ಚುನಾವಣೆ ಬಂದರೂ ನಾವು ರೆಡಿ ಇದ್ದೇವೆ. ಬೆಂಗಳೂರಲ್ಲಿ ನಮ್ಮದೇ 3 ಜನ ಸಂಸದರು ಇದ್ದಾರೆ. 16 ಜನ ಶಾಸಕರು ನಾವಿದ್ದೇವೆ. ಡಿ.ಕೆ ಶಿವಕುಮಾರ್ ಇಂನ್ಚಾರ್ಜ್ ಮಿನಿಸ್ಟರ್ ಆದ ಮೇಲೆ ಟ್ಯಾಕ್ಸ್ ಹಾಕಿದ್ದಾರೆ. ಒಂದೊಂದು ಮನೆ ಕಟ್ಟಬೇಕಾದರೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಲಂಚ ಕೊಡಬೇಕು. ಈ ಎಲೆಕ್ಷನ್ ಬಂದರೆ ಲಂಚ ತಗೊಂಡಿದ್ದಾರಲ್ಲ, ಅದಕ್ಕೆ ಜನ ಸರಿಯಾದ ಪಾಠ ಕಲಿಸುತ್ತಾರೆ.
ಆರ್.ಅಶೋಕ್, ವಿಪಕ್ಷ ನಾಯಕ
ಬಿಬಿಎಂಪಿಯಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿ ಇಲ್ಲದೇ 4 ವರ್ಷ ಕಳೆದಿದೆ. ಪ್ರತಿ ಮಳೆಗಾಲ, ಬೇಸಿಗೆಯಲ್ಲೂ ತತ್ತರಿಸ್ತಿರುವ ಸಿಲಿಕಾನ್ ಸಿಟಿ ಬ್ರ್ಯಾಂಡ್ಗೆ ಧಕ್ಕೆ ಆಗ್ತಿದೆ. ಸಾಕಷ್ಟು ಅಭಿವೃದ್ಧಿ ಪರ, ಜನಪರ ಯೋಜನೆಗಳು ಪಾತಾಳ ಸೇರಿವೆ. ಹೀಗಾಗಿ ಬಿಬಿಎಂಪಿ ಎಲೆಕ್ಷನ್ ಅತ್ಯವಶ್ಯ ಅಷ್ಟೇ ಅಲ್ಲ, ಅನಿವಾರ್ಯವೂ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ