ರೋಹಿತ್​ಗೆ ಪದೇ ಪದೇ ಕಾಡ್ತಿದೆ ಆ ನೋವು.. ಮತ್ತೆ ಶಪಥ ಮಾಡಿದ ಹಿಟ್​​ಮ್ಯಾನ್..!

ರೋಹಿತ್ ಶರ್ಮಾ ಏಕದಿನ ವಿಶ್ವಕಪ್​ಗೂ ಮುನ್ನ ಶಪಥ ಮಾಡಿದ್ದಾರೆ. ಅಹ್ಮದಾಬಾದ್​ನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿತ್ತು. ಆದ್ರೀಗ ರೋಹಿತ್, ಆಫ್ರಿಕಾದಲ್ಲಿ ವಿಶ್ವಕಪ್ ಗೆಲುವಿನ ಕನಸು ಕಾಣ್ತಿದ್ದಾರೆ. ಅದಕ್ಕಾಗಿ ಕಠಿಣ ಅಭ್ಯಾಸ ನಡೆಸ್ತಿರುವ ಹಿಟ್​ಮ್ಯಾನ್ ಹಳೆ ನೋವನ್ನ ಮರೆಯಲು ಹೊರಟಿದ್ದಾರೆ.

author-image
Ganesh Kerekuli
ROHIT_SHARMA_1
Advertisment
  • 2 ವರ್ಷ ಕಳೆದ್ರೂ ರೋಹಿತ್​ಗೆ ಆ ನೋವನ್ನ ಮರೆಯಲು ಆಗ್ತಿಲ್ಲ..?
  • ಮುಂಬೈಕರ್ ಮುಂದಿನ ಗುರಿ 2027 ಏಕದಿನ ವಿಶ್ವಕಪ್ ಗೆಲುವು..!
  • ಏಕದಿನ ವಿಶ್ವಕಪ್​ಗೂ ಮುನ್ನ ಬಿಸಿಸಿಗೆ ರೋಹಿತ್ ಸಂದೇಶ ಏನು..?

2023ರ ಏಕದಿನ ವಿಶ್ವಕಪ್ ಯಾರ್ ತಾನೇ ಮರೆಯೋಕೆ ಸಾಧ್ಯ ಹೇಳಿ? ತವರಿನಲ್ಲಿ ನಡೆದ ಮೆಗಾ ಟೂರ್ನಿಯಲ್ಲಿ, ಟೀಮ್ ಇಂಡಿಯಾ ಪ್ರಶಸ್ತಿ ಗೆಲ್ಲೋ ಫೇವರಿಟ್ಸ್​ ಎನಿಸಿಕೊಂಡಿತ್ತು. ಲೀಗ್​ ಹಂತದಲ್ಲಿ ಒಂದೇ ಒಂದು ಸೋಲು ಕಾಣದ ಟೀಮ್ ಇಂಡಿಯಾ, ಫೈನಲ್​​ ಪಂದ್ಯದಲ್ಲಿ ಎಡಿತ್ತು. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಕನಸು ನುಚ್ಚು ನೂರು ಮಾಡಿತ್ತು. ಅಂದು ಇಡೀ ದೇಶವೇ, ಕಣ್ಣೀರಲ್ಲಿ ಮೊಳಗಿತ್ತು.

ರೋಹಿತ್​ಗೆ ಪದೇ ಪದೇ ಕಾಡ್ತಿರೋ ಆ ನೋವು ಯಾವುದು..?

2023ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಶರ್ಮಾ, ಅದ್ಭುತವಾಗಿ ತಂಡವನ್ನ ಮುನ್ನಡೆಸಿದ್ರು. ಆದ್ರೆ ಅಹ್ಮದಾಬಾದ್​ನಲ್ಲಿ ನಡೆದ ಫೈನಲ್​​​ ಪಂದ್ಯದಲ್ಲಿ ರೋಹಿತ್, ಎಡವಿದ್ರು. ಆಟಗಾರನಾಗಿ ಹಾಗೆ ನಾಯಕನಾಗಿ ರೋಹಿತ್, ಫೇಲ್ ಆದ್ರು. ವಿಶ್ವಕಪ್ ಫೈನಲ್ ಪಂದ್ಯದ ಸೋಲು, ರೋಹಿತ್​ರನ್ನ ಇಂದಿಗೂ ಪದೇ ಪದೇ ಕಾಡ್ತಿದೆ.

ಫೈನಲ್ ಪಂದ್ಯದಲ್ಲಿ ರೋಹಿತ್​​ ಶರ್ಮಾ, ದುರಾದೃಷ್ಟ ನಾಯಕನಾದ್ರು. ಪಂದ್ಯಕ್ಕೂ ಮುನ್ನವೆ ಟಾಸ್ ಸೋತು ಅರ್ಧ ಪಂದ್ಯ ಸೋತಿದ್ದ ರೋಹಿತ್​​​​ಗೆ, ನಂತರ ತಂಡದ ಪ್ರಮುಖ ಬ್ಯಾಟರ್​ಗಳು ಕೈಕೊಟ್ರು. ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಬ್ಯಾಟ್​ನಿಂದ ಕಾಂಟ್ರಿಬ್ಯೂಟ್ ಮಾಡಿದ್ರೆ, ಟೀಮ್ ಇಂಡಿಯಾ ಫೈಟಿಂಗ್ ಟಾರ್ಗೆಟ್ ಸೆಟ್ ಮಾಡಬಹುದಿತ್ತು. ಆದ್ರೆ ಹಾಗಗಲಿಲ್ಲ. ಆ ಸೋಲಿನ ನೋವನ್ನ ರೋಹಿತ್​ಗೆ ಮರೆಯಲು ಸಾಧ್ಯವಾಗ್ತಿಲ್ಲ. 

ಇದನ್ನೂ ಓದಿ: ಧಾರವಾಡ ಯುವಕ ಕೊರಿಯನ್ ಗೇಮ್ಸ್ ನಿಂದ ಆತ್ಮಹತ್ಯೆ!? ಪೊಲೀಸರಿಂದ ಮುಂದುವರಿದ ತನಿಖೆ

Abhishek nayar and rohit sharma (1)

ಇತ್ತೀಚಿಗೆ ಐಸಿಸಿ ಇವೆಂಟ್​ನಲ್ಲಿ ಮಾತನಾಡಿದ ರೋಹಿತ್ ಶರ್ಮಾ, ತಮ್ಮ ನೋವು ಮತ್ತು ಕನಸನ್ನ ಹೊರಹಾಕಿದ್ದಾರೆ. 2023ರಲ್ಲಿ ಏಕದಿನ ವಿಶ್ವಕಪ್ ಗೆಲ್ಲೋ ಅವಕಾಶ ನಮಗಿತ್ತು. ಆದ್ರೆ ನಾವು ಕೈ ಚೆಲ್ಲಿಕೊಂಡೆವು ಅಂತ, ಬೇಸರದಿಂದ ನುಡಿದಿದ್ರು. ಆದ್ರೆ ಮುಂದಿನ ಏಕದಿನ ವಿಶ್ವಕಪ್​ ಅನ್ನ ದೇಶಕ್ಕಾಗಿ ಗೆದ್ದೇ ಗೆಲ್ಲುತ್ತೇವೆ. ಇದು ನನ್ನ ಗುರಿ ಅಂತ ಮುಂಬೈಕರ್, ಭಾವನಾತ್ಮಕ ಹೇಳಿಕೆ ನೀಡಿದ್ದಾರೆ.  

ಹೌದು.. ನಾನು ಆಡಬೇಕು. ನನ್ನ ದೇಶಕ್ಕಾಗಿ ವಿಶ್ವಕಪ್​ ಗೆಲ್ಲಬೇಕು ಅನ್ನೋದು ನನ್ನ ಗುರಿ. 50 ಓವರ್​ ವಿಶ್ವಕಪ್ ನೋಡಿಯೇ ನಾನು ಬೆಳೆದಿದ್ದು. ನಾನು ಕ್ರಿಕೆಟ್ ಶುರುಮಾಡಿದಾಗ T20 ವರ್ಲ್ಡ್​​ಕಪ್ ಇರಲಿಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಇರಲಿಲ್ಲ. ಐಪಿಎಲ್ ಟೂರ್ನಿ ಸಹ ಇರಲಿಲ್ಲ. ಏಕದಿನ ವಿಶ್ವಕಪ್ ನೋಡು ನೋಡುತ್ತಾ ಬೆಳೆದಿದ್ದೇನೆ. 4 ವರ್ಷಕ್ಕೊಮ್ಮೆ ಬರುವ ವಿಶ್ವಕಪ್ ಇದು. ಈ ಒಂದು ಕಪ್​ಗೆ ಅಷ್ಟೊಂದು ಮಹತ್ವ ಇದೆ. ನನಗೆ ಆ ಟ್ರೋಫಿ ಬೇಕು. ನನ್ನ ಪವರ್, ಕೆಪಾಸಿಟಿ ಮತ್ತು ಹಾರ್ಡ್​​ವರ್ಕ್​ನಿಂದ ಎಲ್ಲಾ ಪ್ರಯತ್ನ ಮಾಡ್ತೀನಿ.
ರೋಹಿತ್ ಶರ್ಮಾ, ಬ್ಯಾಟ್ಸ್​ಮನ್​

ಟೆಸ್ಟ್ ಮತ್ತು ಟಿ-20 ಫಾರ್ಮೆಟ್​​ಗೆ ನಿವೃತ್ತಿ ಘೋಷಿಸಿದ ರೋಹಿತ್, ಸದ್ಯ ಏಕದಿನ ಕ್ರಿಕೆಟ್​ ಮಾತ್ರ ಆಡ್ತಿದ್ದಾರೆ. ಇತ್ತೀಚಿಗೆ ಬಿಸಿಸಿಐ ಬಿಡುಗಡೆ ಮಾಡಿದ ಪ್ಲೇಯರ್ಸ್ ಕಾಂಟ್ರ್ಯಾಕ್ಟ್ ಲಿಸ್ಟ್​ನಲ್ಲಿ ರೋಹಿತ್, ಎ+ ಗ್ರೇಡ್​​ನಿಂದ ಬಿ ಗ್ರೇಡ್​ಗೆ ಹಿಂಬಡ್ತಿ ಪಡೆದಿದ್ರು. ಮತ್ತೊಂದೆಡೆ 2027ರ ಏಕದಿನ ವಿಶ್ವಕಪ್​ ವೇಳೆಗೆ ರೋಹಿತ್, ಒಳ್ಳೆ ಶೇಪ್​ನಲ್ಲಿ ಇರ್ತಾರೋ ಇಲ್ವೋ ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ಆದ್ರೆ ರೋಹಿತ್, ವಿಶ್ವಕಪ್ ಗೆಲ್ಲೋ ಕನಸು ಹೊರಹಾಕಿ ಬಿಗ್​ಬಾಸ್​ಗಳಿಗೆ ತಾನು ರೆಡಿ ಅನ್ನೋ ಸಂದೇಶ ಕಳುಹಿಸಿದ್ದಾರೆ.  ​​

ರೋಹಿತ್ ಶರ್ಮಾ ಸದ್ಯ ಏಕೈಕ ಫಾರ್ಮೆಟ್​​ಗೆ ಸಿಕ್ಟ್ ಆನ್​ ಆಗಿದ್ದಾರೆ. ಏಕದಿನ ವಿಶ್ವಕಪ್​​ವರೆಗೂ ರೋಹಿತ್ ODI ಫಾರ್ಮೆಟ್ ಆಡ್ತಾರೆ. ವಿಶ್ವಕಪ್ ವೇಳಗೆ ರೋಹಿತ್ 40 ವರ್ಷ ಆಸುಪಾಸುವಿನಲ್ಲಿ ಇರ್ತಾರೆ. ಟೀಮ್ ಇಂಡಿಯಾ ವಿಶ್ವಕಪ್ ಗೆದ್ರೆ, ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್​​ಗೂ ಗುಡ್​ಬೈ ಹೇಳ್ತಾರೆ. ಇದು ಸದ್ಯ ರೋಹಿತ್ ಶರ್ಮಾರ ಫ್ಯೂಚರ್ ಪ್ಲಾನ್ ಆಗಿದೆ. 

ರೋಹಿತ್ ಹಳೆ ನೋವನ್ನ ಮರೆಯಬೇಕಾದ್ರೆ, 2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಇಲ್ದಿದ್ರೆ ಮುಂಬೈಕರ್ ವಿಶ್ವಕಪ್ ಸೋಲಿನ ನೋವು, ಶಾಶ್ವತವಾಗೇ ಉಳಿದುಕೊಳ್ಳೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಜಡೇಜಾಗೆ ಶಾಕ್ ಕೊಟ್ಟ ರಾಜಸ್ಥಾನ್; ಪರಾಗ್​ಗೆ ಪಟ್ಟ ಕಟ್ಟಿದ್ಯಾಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Rohit Sharma Rohith Sharma
Advertisment