/newsfirstlive-kannada/media/media_files/2025/11/08/gambhir-and-surya-kumara-yadav-2025-11-08-17-42-02.jpg)
ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 5ನೇ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆ ಮೂಲಕ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಇದು ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡಕ್ಕೆ ಸತತ ಐದನೇ ಟಿ20ಐ ಸರಣಿ ಗೆಲುವಾಗಿದೆ.
ಗೌತಮ್ ಗಂಭೀರ್ ಮತ್ತು ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಸತತ ಐದನೇ ಟಿ20 ಸರಣಿ ಗೆಲುವನ್ನು ಖಚಿತಪಡಿಸಿಕೊಂಡಿದೆ. ಇದು ಇಡೀ ಭಾರತಕ್ಕೆ ಸಂತೋಷದ ಕ್ಷಣವಾಗಿದೆ. 2024 ರ ಟಿ20 ವಿಶ್ವಕಪ್ ನಂತರ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಿಸಲಾಯಿತು.
ಇದನ್ನೂ ಓದಿ: ರಕ್ಷಿತಾ ನಿಜವಾಗಿಯೂ ಕಲಾವಿದರಿಗೆ ಚಪ್ಪಲಿ ತೋರಿಸಿದ್ರಾ? ಮತ್ತೊಮ್ಮೆ ಅಶ್ವಿನಿ ಗೌಡರ ಮುಖವಾಡ ಕಳಚಿದ ಸುದೀಪ್..! VIDEO
ವಿಶ್ವಕಪ್ ಗೆಲುವಿನ ನಂತರ ರೋಹಿತ್ ಶರ್ಮಾ ಟಿ20 ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದಾರೆ. ರೋಹಿತ್ ನಿವೃತ್ತಿ ಬೆನ್ನಲ್ಲೇ ಸೂರ್ಯನನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಲಾಯಿತು. ಟಿ-20 ಮಾದರಿಯಲ್ಲಿ ಈ ಜೋಡಿ ಯಶಸ್ವಿಯಾಗಿದೆ.
ಸೂರ್ಯ-ಗಂಭೀರ್ ಜೋಡಿ ಗೆದ್ದ ಸರಣಿ
- ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿ ಸರಣಿ ಗೆದ್ದಿದೆ (2024)
- ಬಾಂಗ್ಲಾದೇಶವನ್ನು 3-0 ಅಂತರದಿಂದ ಸೋಲಿಸಿ ಸೋಲಿಸಿ ಸರಣಿ ಗೆದ್ದಿದೆ (2024)
- ದಕ್ಷಿಣ ಆಫ್ರಿಕಾವನ್ನು 3-1 ಅಂತರದಿಂದ ಸೋಲಿಸಿ ಸೋಲಿಸಿ ಸರಣಿ ಗೆದ್ದಿದೆ (2024)
- ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಗೆಲುವು (2025)
- ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿ ಸೋಲಿಸಿ ಸರಣಿ ಗೆದ್ದಿದೆ (2025)
ಇದನ್ನೂ ಓದಿ: RCB ಟೀಮ್ ಮಾರಾಟದ ಹಿಂದೆ ಸ್ಫೋಟಕ ಸತ್ಯ.. ಕಿಂಗ್ ಕೊಹ್ಲಿನೇ ಕಾರಣನಾ..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us