/newsfirstlive-kannada/media/media_files/2025/09/25/kl-rahul-10-2025-09-25-12-44-53.jpg)
ಮುಂಬರುವ ರಣಜಿ ಟ್ರೋಫಿ ಟೂರ್ನಿಗೆ ಕರ್ನಾಟಕ ಸಂಭಾವ್ಯ ಆಟಗಾರರ ಪಟ್ಟಿ ಬಿಡುಗಡೆಯಾಗಿದೆ. ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ಕೆ.ಎಲ್​.ರಾಹುಲ್​ ಸೇರಿದಂತೆ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಒಟ್ಟು 37 ಆಟಗಾರರು ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ಬಳಿಕ ರಾಹುಲ್​ ರಣಜಿ ಟೂರ್ನಿಯನ್ನ ಆಡೋ ಸಾಧ್ಯತೆಯಿದೆ. ರಾಹುಲ್​ ಜೊತೆಗೆ ಮಯಾಂಕ್​ ಅಗರ್​ವಾಲ್​, ಕರುಣ್​ ನಾಯರ್​​, ದೇವದತ್ತ್​ ಪಡಿಕ್ಕಲ್​, ಪ್ರಸಿದ್ಧ್​​ ಕೃಷ್ಣ ಸ್ಥಾನ ಪಡೆದ ಪ್ರಮುಖರಾಗಿದ್ದಾರೆ.
ಇದನ್ನೂ ಓದಿ:ತಾವೇ ತೋಡಿದ್ದ ಹಳ್ಳಕ್ಕೆ ಮತ್ತೆ ಬಿದ್ದ ಅಯ್ಯರ್​.. ಏನಿದು ಹೈಡ್ರಾಮಾ..?
ಇನ್ನು ಮನೀಷ್ ಪಾಂಡೆ ಕ್ರಿಕೆಟ್​ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​​ ರಣಜಿ ಟೂರ್ನಿಯ ಸಂಭವನೀಯ ತಂಡದಿಂದ ಮನೀಷ್​ ಪಾಂಡೆ ಹೆಸರನ್ನ ಕೈ ಬಿಡಲಾಗಿದೆ. ಮನೀಷ್​ ಪಾಂಡೆಯನ್ನ ವಿಜಯ್​ ಹಜಾರೆ ಟೂರ್ನಿಯ ತಂಡದಿಂದಲೂ ಡ್ರಾಪ್​ ಮಾಡಲಾಗಿತ್ತು. ಇದೀಗ ರಣಜಿ ತಂಡದಲ್ಲೂ ಸ್ಥಾನ ನಿರಾಕರಿಸಲಾಗಿದ್ದು ಮನೀಷ್​ ಪಾಂಡೆ ಬೇರೊಂದು ತಂಡಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ.
ಇದನ್ನೂ ಓದಿ:ಹ್ಯಾರಿಸ್ ರೌಫ್, ಫರ್ಹಾನ್​​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..! ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.