Advertisment

ಕೆಎಸ್‌ಸಿಎಗೆ ವೆಂಕಿ ನೂತನ ಸಾರಥಿ.. ಎಲೆಕ್ಷನ್‌ ಗೆದ್ದ ಬೆನ್ನಲ್ಲೇ ಸ್ಫೋಟಕ ಹೇಳಿಕೆ..!‌

ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ ಚುನಾವಣೆಯಲ್ಲಿ ವೆಂಕಟೇಶ್​​ ಪ್ರಸಾದ್​ ಬಣಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಗೆದ್ದ ಬೆನ್ನಲ್ಲೇ ವೆಂಕಟೇಶ್‌ ಪ್ರಸಾದ್‌ ಅವರು ಸಂಚಲನಕಾರಿ ಹೇಳಿಕೆ ನೀಡಿದ್ದು, ಹಿಂದಿನ ಆಡಳಿತ ಮಂಡಳಿ ವಿರುದ್ಧ ಹೊಸ ಬಾಂಬ್‌ ಸಿಡಿಸಿದ್ದಾರೆ. ಇದು ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

author-image
Ganesh Kerekuli
venkatesh prasad
Advertisment

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಯ ನೂತನ ಅಧ್ಯಕ್ಷರಾಗಿ ವೆಂಕಟೇಶ್‌ ಪ್ರಸಾದ್‌ ಆಯ್ಕೆ ಆಗಿದ್ದಾರೆ. ಇವತ್ತು ನಡೆದ ಕೆಎಸ್‌ಸಿಎ ಚುನಾವಣೆಯಲ್ಲಿ ವೆಂಕಟೇಶ್​​ ಪ್ರಸಾದ್​ ಬಣ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. 

Advertisment

ಇದನ್ನೂ ಓದಿ:ಐಪಿಎಲ್​​ಗೂ ಮುನ್ನವೇ RCB ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಡಿಕೆ ಶಿವಕುಮಾರ್ - VIDEO

ನೂತನ ಅಧ್ಯಕ್ಷ  ವೆಂಕಟೇಶ್​ ಪ್ರಸಾದ್​ ಪರ 749 ಮತಗಳು, ಎದುರಾಳಿ ಶಾಂತಕುಮಾರ್​ ಪರ 558 ಮತಗಳು ಚಲಾವಣೆ ಆಗಿದ್ದವು. ವೆಂಕಟೇಶ್‌ ಪ್ರಸಾದ್‌, 191 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇನ್ನು, ಉಪಾಧ್ಯಕ್ಷರಾಗಿ ಸುಜಿತ್​ ಸೋಮಸುಂದರ್ ಜಯಗಳಿಸಿದರೆ, ಕಾರ್ಯದರ್ಶಿಯಾಗಿ ಸಂತೋಷ್​ ಮೆನನ್​ಗೆ ಗೆಲುವು ಪಡೆದುಕೊಂಡರು. ಜಂಟಿ ಕಾರ್ಯದರ್ಶಿಯಾಗಿ BK ರವಿಗೆ ಜಯಗಳಿಸಿದರು. 

ವೆಂಕಟೇಶ್ ಪ್ರಸಾದ್ ಹೇಳಿದ್ದೇನು? 

ಫಲಿತಾಂಶ ಬೆನ್ನಲ್ಲೇ ಮಾತನ್ನಾಡಿರುವ ವೆಂಕಟೇಶ್‌ ಪ್ರಸಾದ್..‌ ಈ ಗೆಲುವಿಗೆ ಕಾರಣ ನಮ್ಮ ಸದಸ್ಯರು ಇಟ್ಟಿರುವ ನಂಬಿಕೆ. ಕಳೆದ 3 ವರ್ಷಗಳಲ್ಲಾದ ಅನಾಹುತಗಳಿಂದ ಬೇಸರದಲ್ಲಿದ್ರು. ಕಾಲ್ತುಳಿತ ಮಾತ್ರವಲ್ಲ,  ಕ್ರಿಕೆಟ್​​ನಲ್ಲಿ ಅನಾಹುತಗಳಾದ್ವು. ಪ್ಲ್ಯಾನಿಂಗ್, ಸ್ಟೇಡಿಯಂ, ಅಕಾಡೆಮಿ ಸರಿಯಾಗಿರಲಿಲ್ಲ. ಸದಸ್ಯರು ಹೊಸ ಭರವಸೆಗಾಗಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಈ ವಿಕ್ಟರಿ ಕ್ರಿಕೆಟ್​ಗೋಸ್ಕರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ವಾಪಸ್ ಬರಬೇಕು. ಯಾವುದೇ ಕಾರಣಕ್ಕೂ IPL​ ಪಂದ್ಯಗಳನ್ನ ಬಿಡಲು ಸಾಧ್ಯವಿಲ್ಲ. ಸರ್ಕಾರ, BCCI ಜೊತೆಗೂ ಮಾತನಾಡಬೇಕಿದೆ. ಬೆಂಬಲ ಕೊಟ್ಟ ಲೆಜೆಂಡರಿ ಕ್ರಿಕೆಟರ್ಸ್ ನಮ್ಮ​ ಜೊತೆಗಿರುತ್ತಾರೆ. ರಾಜ್ಯ ಸರ್ಕಾರ ಕೂಡ KSCAಯಲ್ಲಿ ಬದಲಾವಣೆ ಬಯಸಿತ್ತು ಎಂದರು.  

Advertisment

ಇದನ್ನೂ ಓದಿ: ಐಪಿಎಲ್ ಮಿನಿ ಹರಾಜು - ಈ 5 ಆಟಗಾರರಿಗೆ ಭಾರೀ ಡಿಮ್ಯಾಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KN Shanthakumar KSCA Venkatesh Prasad
Advertisment
Advertisment
Advertisment