Advertisment

ಒಂದೇ ವಿಚಾರ.. ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್​ ಮಧ್ಯೆ ಬಿಗ್ ಫೈಟ್​..!

ಐಪಿಎಲ್ ಸೀಸನ್-19ಕ್ಕೂ ಮುನ್ನ ಫ್ರಾಂಚೈಸಿಗಳ ಫೈಟ್ ಶುರುವಾಗಿದೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್​. ಈ ಎರಡು ಫ್ರಾಂಚೈಸಿಗಳ ಫೈಟ್​​ಗೆ ಕಾರಣವೇನು? ಐಪಿಎಲ್​​ಗೂ ಮುನ್ನ ಫ್ರಾಂಚೈಸಿಗಳು ಅಖಾಡಕ್ಕೆ ಇಳಿದಿರೋದ್ಯಾಕೆ? ಸ್ಪೆಷಲ್ ರಿಪೋರ್ಟ್​.

author-image
Ganesh Kerekuli
RCB vs RR
Advertisment
  • ಡಿಸೆಂಬರ್​​ ಆಕ್ಷನ್​​ವರೆಗೂ ಆರ್​ಸಿಬಿ ಕಾದುನೋಡುವ ತಂತ್ರ
  • ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಗೂ ಆರ್​ಸಿಬಿ ಪ್ಲಾನ್ ಗೊತ್ತಿಲ್ಲ
  • ಚಿನ್ನಸ್ವಾಮಿಯಲ್ಲೇ ಐಪಿಎಲ್ ಆಡಲು ಆರ್​ಸಿಬಿ ಬಯಕೆ

ಐಪಿಎಲ್ ಸೀಸನ್-19ಕ್ಕೂ ಮುನ್ನ ಫ್ರಾಂಚೈಸಿಗಳ ಫೈಟ್ ಶುರುವಾಗಿದೆ. ಒಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್​. ಈ ಎರಡು ಫ್ರಾಂಚೈಸಿಗಳ ಫೈಟ್​​ಗೆ ಕಾರಣವೇನು? ಐಪಿಎಲ್​​ಗೂ ಮುನ್ನ ಫ್ರಾಂಚೈಸಿಗಳು ಅಖಾಡಕ್ಕೆ ಇಳಿದಿರೋದ್ಯಾಕೆ? ಸ್ಪೆಷಲ್ ರಿಪೋರ್ಟ್​.

Advertisment

ಜೂನ್ 4, 2025! ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು ಮತ್ತು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದುರ್ಘಟನೆ ಬಳಿಕ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಇದೀಗ ಬೆಂಗಳೂರು ಐಪಿಎಲ್ ಆತಿಥ್ಯವನ್ನೂ ಕಳೆದುಕೊಳ್ಳುವ ಭೀತಿಯಲ್ಲಿದೆ. ಆರ್​ಸಿಬಿ ಫ್ರಾಂಚೈಸಿ ಹೊಸ ಹೋಂ ಗ್ರೌಂಡ್ ಹುಡುಕಲು ಆರಂಭಿಸಿದೆ.

ಪುಣೆಗಾಗಿ ಫೈಟ್

ಆರ್​ಸಿಬಿ ಮುಂದಿರೋ ಫಸ್ಟ್ ಚಾಯ್ಸ್​ ಗ್ರೌಂಡ್ ಅಂದ್ರೆ ಅದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಪುಣೆ ಸ್ಟೇಡಿಯಂ. ಪುಣೆಯಲ್ಲಿ ಆರ್​ಸಿಬಿ ಪಂದ್ಯಗಳನ್ನ ನಡೆಸಿದ್ರೆ ತಂಡಕ್ಕೆ ದೊಡ್ಡ ಲಾಭವಾಗಲಿದೆ. ಆರ್​ಸಿಬಿ ಪಂದ್ಯಗಳನ್ನ ನೋಡಲು ಸುತ್ತಮುತ್ತಲಿನ ರಾಜ್ಯಗಳ ಅಭಿಮಾನಿಗಳು ಪುಣೆಗೆ ಆಗಮಿಸ್ತಾರೆ ಅನ್ನೋದು ಆರ್​ಸಿಬಿ ಫ್ರಾಂಚೈಸಿ ಮಾಲೀಕರ ಲೆಕ್ಕಾಚಾರ. ಚಿನ್ನಸ್ವಾಮಿಗೆ ಹೋಲಿಸಿದ್ರೆ ಪುಣೆ ಸ್ಟೇಡಿಯಮ್​ನಲ್ಲಿ ಇನ್ನೂ 11 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಸಿಗಲಿದೆ. ಹಾಗಾಗಿ ಪುಣೆ ಬೆಸ್ಟ್ ಚಾಯ್ಸ್ ಅನ್ನೋದು ಆರ್​ಸಿಬಿ ಮಾಲೀಕರ ಅಭಿಪ್ರಾಯ.

ಇದನ್ನೂ ಓದಿ: ಅನುಭವಿ KL ರಾಹುಲ್​​ಗೆ ಮಹತ್ವದ ಜವಾಬ್ದಾರಿ.. ODI ಸಿರೀಸ್​ಗೆ ಬಲಿಷ್ಠ ತಂಡ ಪ್ರಕಟ..!

Advertisment

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘೋರ ದುರಂತ; RCB ಫ್ಯಾನ್ಸ್‌ ನೂಕು ನುಗ್ಗಲಿಗೆ ಸಾವಿನ ಸಂಖ್ಯೆ ಏರಿಕೆ

ಆರ್​ಸಿಬಿ ಪುಣೆ ಬಗ್ಗೆ ಆಸಕ್ತಿ ತೋರಿದ ಬೆನ್ನಲೆ ರಾಜಸ್ಥಾನ್ ರಾಯಲ್ಸ್ ಸಹ ಪುಣೆಯಲ್ಲಿ ಪಂದ್ಯಗಳನ್ನ ಆಯೋಜಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈಗಾಗಲೇ ಆರ್​ಆರ್ ಫ್ರಾಂಚೈಸಿ ಮಾಲೀಕರು, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪುಣೆಯಲ್ಲಿ ಪಂದ್ಯಗಳನ್ನ ಆಯೋಜಿಸುವ ಉತ್ಸಾಹ ತೋರಿದ್ದಾರೆ. ಆದ್ರೆ ಎಂಸಿಎ ಅಧಿಕಾರಿಗಳು, ಆರ್​ಸಿಬಿ ಅಥವಾ ಆರ್​ಆರ್​​​​ ಫ್ರಾಂಚೈಸಿಗಳಿಗೆ ಗ್ರೀನ್ ಸಿಗ್ನಲ್ ನೀಡಿಲ್ಲ.

ಆರ್​ಸಿಬಿ ಕಾದುನೋಡುವ ತಂತ್ರ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎಂಸಿಎ ಅಧಿಕಾರಿಗಳ ಜೊತೆ ತಿಂಗಳ ಹಿಂದೆಯೇ ಚರ್ಚೆ ನಡೆಸಿದೆ. ಡಿಸೆಂಬರ್​​ನಲ್ಲಿ ನಡೆಯಲಿರೋ ಆಟಗಾರರ ಹರಾಜಿನ ನಂತರ ಫೈನಲ್ ಡಿಸಿಷನ್ ತಿಳಿಸೋದಾಗಿ ಹೇಳಿದೆ. ಆರ್​ಸಿಬಿ ಫ್ರಾಂಚೈಸಿ ಮಾಲೀಕರು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿರೋದ್ರಿಂದ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳಿಗೂ ಆರ್​ಸಿಬಿ ಪ್ಲಾನ್ ಏನು ಅಂತ ಗೊತ್ತಿಲ್ಲದೆ ಗೊಂದಲದಲ್ಲಿದೆ. 

ಬೆಂಗಳೂರಿನಲ್ಲಿ ಆರ್​ಸಿಬಿ ತಂಡಕ್ಕೆ ಲಾಯಲ್ ಫ್ಯಾನ್ಸ್ ಇದ್ದಾರೆ. ಹೀಗಿರುವಾಗ ಆರ್​ಸಿಬಿಗೆ, ಚಿನ್ನಸ್ವಾಮಿ ಬಿಟ್ಟು ಬೇರೆ ಕಡೆ ಪಂದ್ಯ ಆಯೋಜಿಸುವ ಆಸಕ್ತಿ ಇಲ್ಲ. ಆರ್​ಸಿಬಿ ಫ್ರಾಂಚೈಸಿ ಮೇಲೆ ಕಾಲ್ತುಳಿದ ಗಂಭೀರ ಆರೋಪವಿದೆ. ಕಾಲ್ತುಳಿತಕ್ಕೆ ಆರ್​ಸಿಬಿ ಫ್ರಾಂಚೈಸಿಯೇ ನೇರ ಹೊಣೆ ಅಂತಾನೂ ವರದಿ ಬಂದಿದೆ. ಹೀಗಿರುವಾಗ ಆರ್​ಸಿಬಿ ಫ್ರಾಂಚೈಸಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನ ಆಯೋಜಿಸೋದು ಹೇಗೆ ಎಂದು ದಾರಿ ಹುಡುಕುತ್ತಿದೆ. ಆರ್​ಸಿಬಿ ಪ್ಲಾನ್ ವರ್ಕ್​ಔಟ್ ಅಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಪ್ರಯತ್ನವಂತೂ ಮಾಡ್ತಿದೆ.

Advertisment

ಇದನ್ನೂ ಓದಿ: ಟೀಮ್ ಇಂಡಿಯಾ 201 ರನ್​​ಗೆ ಆಲೌಟ್! ಬೃಹತ್ ಲೀಡ್​ ಸಾಧಿಸಿದ ದಕ್ಷಿಣ ಆಫ್ರಿಕಾ

ಕಳೆದ ಐಪಿಎಲ್ ಸೀಸನ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಜಸ್ಥಾನ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಯ್ತು. ಟಿಕೆಟ್ ವಿಚಾರದಲ್ಲಿ ಆರ್​ಆರ್​ ಮತ್ತು ಆರ್​ಸಿಎ ಅಧಿಕಾರಿಗಳು, ನೇರಾನೇರಾ ಕೆಸರೆರಚಾಟ ಎಲ್ಲರಿಗೂ ಗೊತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್​, ಜೈಪುರದಿಂದ ಹೊರ ನಡೆಯಲು ತೀರ್ಮಾನಿಸಿದೆ. ಸದ್ಯ ಪುಣೆ ಮೇಲೆ ಕಣ್ಣಿಟ್ಟಿರುವ ಆರ್​ಆರ್​, ಸೂಕ್ತ ಕ್ಲಾರಿಟಿ ಇಲ್ಲದೇ ಸ್ಥಳ ಹುಡುಕುತ್ತಿದೆ. 

2022ರಲ್ಲಿ ಪುಣೆ ಐಪಿಎಲ್ ಪಂದ್ಯಗಳ ಆತಿಥ್ಯವಹಿಸಿಕೊಂಡಿತ್ತು. ಕಳೆದ ಮೂರು ವರ್ಷಗಳಲ್ಲಿ ಪುಣೆಯಲ್ಲಿ, ಒಂದೇ ಒಂದು ಐಪಿಎಲ್ ಪಂದ್ಯ ನಡೆದಿಲ್ಲ. ಹೀಗಿರುವಾಗ ಪುಣೆ, ಐಪಿಎಲ್ ಆತಿಥ್ಯಕ್ಕಾಗಿ ಕಾದು ಕುಳಿತಿದೆ. ಮಿಲಿಯನ್ ಡಾಲರ್ ಟೂರ್ನಿಯ ಪಂದ್ಯಗಳನ್ನ ಆಯೋಜಿಸುವ ತವಕದಲ್ಲಿದೆ. ಐಪಿಎಲ್​ನ ಎರಡು ಹೈಪ್ರೊಫೈಲ್ ಫ್ರಾಂಚೈಸಿಗಳು, ಪುಣೆ ಆತಿಥ್ಯಕ್ಕೆ ಫೈಟ್ ಮಾಡುತ್ತಿದೆ. ಮುಂದೆ ಪುಣೆ ಮೈದಾನ ಯಾವ ಫ್ರಾಂಚೈಸಿ ಪಾಲಾಗುತ್ತದೆ ಅನ್ನೋದನ್ನ ನೋಡೋಣ.

Advertisment

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Royal Challengers Bengaluru IPL RCB IPL 2026 auction rajasthan royals
Advertisment
Advertisment
Advertisment