ದರ್ಶನ್ ಸ್ಥಿತಿ ಕಂಡು ರಮ್ಯಾ ಬೇಸರ.. ಹಳೆಯ ದಿನ ಮೆಲುಕು ಹಾಕಿ ಅಚ್ಚರಿಯ ಹೇಳಿಕೆ

ದರ್ಶನ್ ಪರಪ್ಪನ ಅಗ್ರಹಾರದ ಅತಿಥಿಯಾಗಿದ್ದಾರೆ. ಕಂಬಿಯೇ ಕೈಲಾಸ, ನಾಲ್ಕು ಗೋಡೆ ನವರಸ, ಸೊಳ್ಳೆಗಳೇ ಸಹಪಾಠಿ ಅದ್ಕೊಂಡು ಮತ್ತೆ ಜೈಲಿನ ದಿನಚರಿ ಆರಂಭಿಸಿದ್ದಾರೆ. ಇತ್ತ ದರ್ಶನ್ ಫ್ಯಾನ್ಸ್​ ವಿರುದ್ಧ ಸಮರ ಸಾರಿದ್ದ ನಟಿ ರಮ್ಯಾ ಆಡಿರೋ ಮಾತು ಅಚ್ಚರಿ ಮೂಡಿಸಿದೆ.

author-image
Ganesh Kerekuli
ಮತ್ತೆ ನಟ ದರ್ಶನ್​ ವಿರುದ್ಧ ರಮ್ಯಾ ಕಿಡಿ; ಈ ಬಾರಿ ಮೋಹಕತಾರೆ ಹೇಳಿದ್ದೇನು?
Advertisment

ಗುರುವಾರ ಅಂದ್ರೆ ಆಗಸ್ಟ್​​ 13.. ನಟ ದರ್ಶನ್​ ಬಾಳಲ್ಲಿ ಮತ್ತೊಂದು ಬಿರುಗಾಳಿ ಬೀಸಿದ ದಿನ. ಸುಪ್ರೀಂ ಕೋರ್ಟ್​ ದರ್ಶನ್​ ಬೇಲ್​ಗೆ ಬ್ರೇಕ್ ಹಾಕ್ತಿದ್ದಂತೆ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್​ಗೆ​ ಮತ್ತೆ ಪರಪ್ಪನ ಅಗ್ರಹಾರದ ದರ್ಶನ ಮಾಡಿಸಿದ್ರು. ಇಂದಿಗೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಭರ್ತಿ ಎರಡು ರಾತ್ರಿ ಕಳೆದಂತಾಗಿದೆ. ಮತ್ತದೇ ಮೌನಗಾನ, ಮನೆಯ ಧ್ಯಾನ ದರ್ಶನ್​ನ ಕಾಡಿದೆ.

ಅಂದು ಡಿ ಫ್ಯಾನ್ಸ್​ ವಿರುದ್ಧ ವಾರ್​.. ಇಂದು ದರ್ಶನ್ ಸ್ಥಿತಿಗೆ ಮರುಕ!

ನಟ ದರ್ಶನ್​ ಮತ್ತೆ ಪರಪ್ಪನ ಅಗ್ರಹಾರ ಪಾಲಾದ ಬಗ್ಗೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದರ್ಶನ್​ ಫ್ಯಾನ್ಸ್​​ ವಿರುದ್ಧ ಸಮರ ಸಾರಿದ್ದ ಸ್ಯಾಂಡಲ್​ವುಡ್​ ಕ್ವೀನ್ ದರ್ಶನ್​ ಜೊತೆಗಿನ ಹಳೇ ನೆನಪುಗಳನ್ನ ಮೆಲುಕು ಹಾಕಿ ಅವರಿಗೆ ಈ ಸ್ಥಿತಿ ಬರ್ಬಾದಿತ್ತು ಎಂದಿದ್ದಾರೆ.

ಇದನ್ನೂ ಓದಿ: ನಟ ದರ್ಶನ್‌ಗೆ ಜೀವಾವಧಿ ಶಿಕ್ಷೆ ಗ್ಯಾರಂಟಿ?. ಜೀವಾವಧಿ ಶಿಕ್ಷೆಯಾದ್ರೆ ದರ್ಶನ್‌ ಕಥೆ ಏನು?

darshan(4)

ದರ್ಶನ್ ಜೈಲು ಸೇರಿದ್ದು ಬೇಸರ!

ಜಡ್ಜ್​ಮೆಂಟ್​ ಕೇಳಿದಾಗ ನನಗೆ ಮಿಕ್ಸ್​ ರಿಯಾಕ್ಷನ್​ ಇತ್ತು. ಒಂದು ಕಡೆ ನನಗೆ ಸ್ವಲ್ಪ ಬೇಜಾರು ಆಯ್ತು.. ದರ್ಶನ್ ಅವರ ಜೊತೆ ನಾನು ಕೆಲಸ ಮಾಡಿದೀನಿ, ಅವರು ಗೊತ್ತಿರೋರು. ಸೋ ಎಲ್ಲೋ ಒಂದು ಕಡೆ ನನಗೆ ಬೇಜಾರು ಏನಂದ್ರೆ ಅವರ ಜೀವನ ಹಾಳು ಮಾಡಿಕೊಂಡ್ರು. ಯಾಕಂದ್ರೆ ನಾವು ಶೂಟ್​ ಮಾಡುವಾಗ ಕೆಲವೊಂದು ವಿಚಾರವನ್ನು ಅವರು ಹಂಚಿಕೊಂಡಿದ್ರು. ತಾವು ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದ್ರು  ಅನ್ನೋದ್ರ ಬಗ್ಗೆ ಹೇಳಿದ್ದರು.  ಏನು ಇಲ್ಲದವ್ರು ಕಷ್ಟಪಟ್ಟು ಇಂಡಸ್ಟ್ರಿಗೆ ಬಂದು.. ಲೈಟ್​ ಬಾಯ್ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದಾರೆ ಅಂತ ಎಲ್ಲೋ ಒಂದು ಕಡೆ ಹೆಮ್ಮೆನೂ ಇತ್ತು.
 ರಮ್ಯಾ, ನಟಿ

ಪರಪ್ಪನ ಅಗ್ರಹಾರದ ಪವಿತ್ರಾ ಬಗ್ಗೆಯೂ ರಮ್ಯಾ ಬೇಸರ!

ಮತ್ತೆ ಪರಪ್ಪನ ಅಗ್ರಹಾರದ ಪಾಲಾಗಿರೋ ದರ್ಶನ್​ ಗೆಳತಿ ಪವಿತ್ರಾ ಗೌಡ ಬಗ್ಗೆಯೂ ರಮ್ಯಾ ಬೇಸರ ಹೊರಹಾಕಿದ್ದಾರೆ. ಆಕೆಯೂ ಒಬ್ಬ ತಾಯಿ, ಹೀಗಾಗಬಾರದಿತ್ತು ಎಂದಿದ್ದಾರೆ.

ಆ್ಯಕ್ಚುಲಿ ನನಗೆ ಪವಿತ್ರಾ ಗೌಡ ಅಂದ್ರೆ ಯಾರು ಅಂತನೇ ಗೊತ್ತಿರಲಿಲ್ಲ. ಈ ರೇಣುಕಾಸ್ವಾಮಿ ಕೇಸ್ ಆದಮೇಲೆಯೇ ನನಗೆ ಗೊತ್ತಾಗಿದ್ದು. ಒಂದು ಕಡೆ ಬೇಜಾರಾಗುತ್ತೆ ಯಾಕಂದ್ರೆ, ಆಕೆಯೂ ಒಬ್ಬಳು ತಾಯಿ.. ಒಬ್ಬಳು ಮಗಳಿದ್ದಾರೆ. ಈ ರೇಣುಕಾಸ್ವಾಮಿ ಅವರ ಫ್ಯಾಮಿಲಿ.. ಯಾಕಂದ್ರೆ ಅವರು ಬಡವರು.. ಆ ಈಗ ಅವರ ಈ ಅವರ ಪತ್ನಿ ಸಹ ಮಗುವನ್ನ ಹೊಂದಿದ್ದಾರೆ. ಸೋ ಅವರಿಗೆ ಎಲ್ಲೋ ಒಂದು ಕಡೆ ಜಸ್ಟೀಸ್​ ಸಿಕ್ಕಿದೆ ಅಂತ ನಾನು ಅನ್ಕೋತಿನಿ
ಮ್ಯಾ, ನಟಿ

ಒಟ್ನಲ್ಲಿ ನೀರಿನ ಮೊರೆತಕ್ಕೆ ಬಂಡೆಯೂ ಕರಗುತ್ತೆ ಅನ್ನೋ ಹಾಗೆ ಬ್ಯಾಕ್​ ಟು ಬ್ಯಾಕ್​ ದರ್ಶನ್​ಗೆ ಸಂಕಷ್ಟ ಎದುರಾಗ್ತಿರೋದು ಸದ್ಯ ನಟಿ ರಮ್ಯಾರಿಗೂ ಬೇಸರ ಬರುವಂತೆ ಮಾಡಿದೆ. ದರ್ಶನ್ ಮತ್ತು ದರ್ಶನ್ ಫ್ಯಾನ್ಸ್​ ವಿರುದ್ಧ ರಣಚಂಡಿಯಾಗಿದ್ದ ರಮ್ಯಾ ಏಕಾಏಕಿ ಇಷ್ಟು ಸಾಫ್ಟ್​ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

ಇದನ್ನೂ ಓದಿ:ನಟ ದರ್ಶನ್, ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮಾನಸಿಕ ಖಿನ್ನತೆ: ಸ್ವಾತಂತ್ರ್ಯ ದಿನಾಚರಣೆಯಿಂದ ದೂರ ದೂರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actress Ramya Actor Darshan Darshan bail cancelled
Advertisment