‘ನಾನು ಸತ್ತರೆ ಹೆಂಡತಿ ಗತಿ ಏನು?’ ಎಂದು ಪತ್ನಿಯ ಜೀವ ತೆಗೆದ ಇಸ್ರೋ ನಿವೃತ್ತ ಅಧಿಕಾರಿ..!

‘ನಾನು ಸತ್ತ ಮೇಲೆ ನನ್ನ ಹೆಂಡತಿಯನ್ನು ನೋಡಿಕೊಳ್ಳುವವರು ಯಾರು? ಅವಳು ಅನಾಥವಾಗಬಾರದು’ ಹೀಗೊಂದು ವಿಚಿತ್ರ ಹಾಗೂ ಆಘಾತಕಾರಿ ಕಾರಣ ನೀಡಿ ನಿವೃತ್ತ ಇಸ್ರೋ (ISRO) ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನೇ ಉಸಿರುಗಟ್ಟಿಸಿ ಕೊ* ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

author-image
Ganesh Kerekuli
Retired ISRO Officer
Advertisment

ಬೆಂಗಳೂರು: ‘ನಾನು ಸತ್ತ ಮೇಲೆ ನನ್ನ ಹೆಂಡತಿಯನ್ನು ನೋಡಿಕೊಳ್ಳುವವರು ಯಾರು? ಅವಳು ಅನಾಥವಾಗಬಾರದು’ ಹೀಗೊಂದು ವಿಚಿತ್ರ ಹಾಗೂ ಆಘಾತಕಾರಿ ಕಾರಣ ನೀಡಿ ನಿವೃತ್ತ ಇಸ್ರೋ (ISRO) ಅಧಿಕಾರಿಯೊಬ್ಬರು ತಮ್ಮ ಪತ್ನಿಯನ್ನೇ ಉಸಿರುಗಟ್ಟಿಸಿ ಕೊ* ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯ ವಿವರ

ಬಂಧಿತ ಆರೋಪಿಯನ್ನು ನಾಗೇಶ್ವರ್ ರಾವ್ (65) ಎಂದು ಗುರುತಿಸಲಾಗಿದೆ. ಇವರು ಇಸ್ರೋದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬೊಮ್ಮನಹಳ್ಳಿ ಸಮೀಪದ ಆವಲಹಳ್ಳಿ ವ್ಯಾಪ್ತಿಯ ‘ವರ್ಚುಸೋ’ (Virtuso) ಅಪಾರ್ಟ್ಮೆಂಟ್‌ನಲ್ಲಿ ನಾಗೇಶ್ವರ್ ರಾವ್ ಮತ್ತು ಪತ್ನಿ ಸಂಧ್ಯಾ ವಾಸವಾಗಿದ್ದರು. ಬುಧವಾರ ಬೆಳಗ್ಗೆ (ಅಥವಾ ಮಂಗಳವಾರ ರಾತ್ರಿ) ಮನೆಯಲ್ಲಿದ್ದ ಟವೆಲ್‌ನಿಂದ ಪತ್ನಿ ಸಂಧ್ಯಾ ಅವರ ಕುತ್ತಿಗೆ ಬಿಗಿದು ನಾಗೇಶ್ವರ್ ರಾವ್ ಜೀವ ತೆಗೆದಿದ್ದಾನೆ. 

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ರುದ್ರ ಮಾಸ್ಟರ್.. ಹಳದಿ ಶಾಸ್ತ್ರದ ವಿಡಿಯೋ ವೈರಲ್..!

ಕಾರಣವೇನು?

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಶ್ವರ್ ರಾವ್ ಮಾನಸಿಕ ಖಿನ್ನತೆಯಿಂದ (Depression) ಬಳಲುತ್ತಿರುವುದು ಕಂಡುಬಂದಿದೆ. ನಮಗೆ ವಯಸ್ಸಾಗಿದೆ, ಮಗಳು ಅಮೆರಿಕದಲ್ಲಿದ್ದಾಳೆ. ಇಲ್ಲಿ ನಮ್ಮನ್ನು ನೋಡಿಕೊಳ್ಳಲು ಹತ್ತಿರದ ಸಂಬಂಧಿಗಳೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಒಂಟಿಯಾಗುತ್ತಾಳೆ, ಅವಳ ಪಾಡು ಏನಾಗಬಹುದು ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ಹಾಗಾಗಿ ಅವಳನ್ನು ಕೊಂದು, ನಾನು ಕೂಡ ಆತ್ಮ*ತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆದರೆ, ಪತ್ನಿಯನ್ನು ಕೊಂದ ಬಳಿಕ ಭಯಗೊಂಡ ನಾಗೇಶ್ವರ್ ರಾವ್, ತಾವು ಆತ್ಮ*ತ್ಯೆ ಮಾಡಿಕೊಳ್ಳುವ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ. 

ಅಮೆರಿಕದಲ್ಲಿರುವ ಮಗಳು

ದಂಪತಿಗೆ ಒಬ್ಬಳೇ ಮಗಳಿದ್ದು, ಆಕೆ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ. ವಯೋಸಹಜ ಆತಂಕ ಮತ್ತು ಒಂಟಿತನದಿಂದ ಮನನೊಂದಿದ್ದ ಆರೋಪಿ, ವಿಪರೀತ ನಿರ್ಧಾರಕ್ಕೆ ಬಂದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆವಲಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮೃತ ಸಂಧ್ಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯ ಮಾನಸಿಕ ಸ್ಥಿತಿಗತಿ ಹಾಗೂ ಘಟನೆಯ ಸತ್ಯಾಸತ್ಯತೆ ತಿಳಿಯಲು ಪೊಲೀಸರು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಹಾಗೂ ಕುಟುಂಬಸ್ಥರ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ಕೆಲವೇ ಹೊತ್ತಲ್ಲಿ ಡಚ್ಚರ ವಿರುದ್ಧ ಕಾಳಗ.. ಸೂರ್ಯಪಡೆಯ ಲೆಕ್ಕಾಚಾರ ಹೆಂಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Crime Retired ISRO Officer
Advertisment