/newsfirstlive-kannada/media/media_files/2025/09/09/darshan-6-2025-09-09-11-51-10.jpg)
ಆರೋಪಿ ದರ್ಶನ್
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊ* ಕೇಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ದರ್ಶನ್ಗೆ ಜೈಲಿನ ನಿಯಮಗಳ ಪ್ರಕಾರವೇ ಕನಿಷ್ಠ ಸೌಲಭ್ಯ ನೀಡುವಂತೆ 64ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡಿದೆ. ಬಳ್ಳಾರಿ ಜೈಲಿನಲ್ಲಿ ಕಠಿಣ ಕಾರಾಗೃಹ ವಾಸ ಕಂಡಿದ್ದ ದರ್ಶನ್ಗೆ, ಈಗ ಅರ್ಜಿ ವಜಾ ಮಾಡಿರೋದು ಬೀಸೋ ದೊಣ್ಣೆಯಿಂದ ಪಾರಾದಂತೆ ಆಗಿದೆ.
ಇವತ್ತು ಏನಾಗಲಿದೆ..?
ಇಂದು ಕೋರ್ಟ್ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲಿದೆ. ಈ ವಿಚಾರವಾಗಿ ಇವತ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ದರ್ಶನ್ನ ಜೈಲಿನೊಳಗೆ ಶಿಫ್ಟ್ ಮಾಡುವುದಾ? ಕ್ವಾರಂಟೈನ್ ಸೆಲ್ನಲ್ಲಿಯೇ ಇರಿಸೋದಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಬೆಡ್ಶೀಟ್ ಹಾಗೂ ದಿಂಬು ಕೊಡುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಿದ್ದಾರೆ.
ಇದನ್ನೂ ಓದಿ:ಜೈಲಿನಲ್ಲಿ ನಟ ದರ್ಶನ್ ನಂಥ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯ ನೀಡಬೇಕು? ಕಾರಾಗೃಹ ಕಾಯಿದೆಯಲ್ಲಿ ಇರೋದೇನು?
ಒಂದು ವೇಳೆ ಸೆಕ್ಯೂರಿಟಿ ಬ್ಯಾರಕ್ಗೆ ಶಿಫ್ಟ್ ಮಾಡಿದ್ರೆ ದರ್ಶನ್ ಇದ್ದಲ್ಲಿಗೆ ಹೆಚ್ಚು ಕೈದಿಗಳು ಜಮಾವಣೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕ್ವಾರಂಟೈನ್ ಸೆಲ್ನಲ್ಲೇ ಇರಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಮೈದಾನದಲ್ಲಿ ಅಥವಾ ಬ್ಯಾರಕ್ ಬಳಿಯ ಹೊರಾಂಗಣದಲ್ಲಿ ದರ್ಶನ್ಗೆ ವಾಕ್ ಮಾಡಲು ಅನುಮತಿ ನೀಡುವ ಸಾಧ್ಯತೆಯಿದೆ. ನ್ಯಾಯಾಧೀಶರ ಮುಂದೆ ತನಗೆ ಫಂಗಸ್ ಇದೆ ದರ್ಶನ್ ಹೇಳಿದ್ದಾರೆ. ಹೀಗಾಗಿ ನಿನ್ನೆ ರಾತ್ರಿ ಜೈಲಿನ ವೈದ್ಯರು ತಪಾಸಣೆ ಮಾಡಿದ್ದಾರೆ. ಮತ್ತೊಂದ್ಕಡೆ ಇವತ್ತು ದರ್ಶನ್ ಕುಟುಂಬಸ್ಥರು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಪಾ*ಸನ್ ಕೊಡಿ ಎಂದಿದ್ದ ದರ್ಶನ್ ಬಗ್ಗೆ ನಟ ರಾಜವರ್ಧನ್ ಹೇಳಿದ ಒಳ್ಳೆಯ ಮಾತುಗಳು ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ