Advertisment

ಬೀಸೋ ದೊಣ್ಣೆಯಿಂದ ದರ್ಶನ್ ಜಸ್ಟ್ ಮಿಸ್.. ಇವತ್ತು ಏನೆಲ್ಲ ಆಗುತ್ತೆ..?

ರೇಣುಕಾಸ್ವಾಮಿ ಕೊ* ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ನಟನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. ಇದರ ಬೆನ್ನಲ್ಲೇ ಜೈಲಾಧಿಕಾರಿಗಳ ಮುಂದಿನ ನಡೆ ಹೇಗಿರಲಿದೆ ಅನ್ನೋದ್ರ ವಿವರ ಇಲ್ಲಿದೆ.

author-image
Ganesh Kerekuli
Darshan (6)

ಆರೋಪಿ ದರ್ಶನ್

Advertisment

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊ* ಕೇಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ದರ್ಶನ್​ಗೆ ಜೈಲಿನ ನಿಯಮಗಳ ಪ್ರಕಾರವೇ ಕನಿಷ್ಠ ಸೌಲಭ್ಯ ನೀಡುವಂತೆ 64ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡಿದೆ. ಬಳ್ಳಾರಿ ಜೈಲಿನಲ್ಲಿ ಕಠಿಣ ಕಾರಾಗೃಹ ವಾಸ ಕಂಡಿದ್ದ ದರ್ಶನ್​ಗೆ, ಈಗ ಅರ್ಜಿ ವಜಾ ಮಾಡಿರೋದು ಬೀಸೋ ದೊಣ್ಣೆಯಿಂದ ಪಾರಾದಂತೆ ಆಗಿದೆ.  

Advertisment

ಇವತ್ತು ಏನಾಗಲಿದೆ..? 

ಇಂದು ಕೋರ್ಟ್ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲಿದೆ. ಈ ವಿಚಾರವಾಗಿ ಇವತ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ದರ್ಶನ್​ನ ಜೈಲಿನೊಳಗೆ ಶಿಫ್ಟ್  ಮಾಡುವುದಾ? ಕ್ವಾರಂಟೈನ್ ಸೆಲ್​​​ನಲ್ಲಿಯೇ ಇರಿಸೋದಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಬೆಡ್​ಶೀಟ್ ಹಾಗೂ ದಿಂಬು ಕೊಡುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಿದ್ದಾರೆ. 

ಇದನ್ನೂ ಓದಿ:ಜೈಲಿನಲ್ಲಿ ನಟ ದರ್ಶನ್ ನಂಥ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯ ನೀಡಬೇಕು? ಕಾರಾಗೃಹ ಕಾಯಿದೆಯಲ್ಲಿ ಇರೋದೇನು?

actor darshan pavithra photos

ಒಂದು ವೇಳೆ ಸೆಕ್ಯೂರಿಟಿ ಬ್ಯಾರಕ್​​ಗೆ ಶಿಫ್ಟ್​ ಮಾಡಿದ್ರೆ ದರ್ಶನ್ ಇದ್ದಲ್ಲಿಗೆ ಹೆಚ್ಚು ಕೈದಿಗಳು ಜಮಾವಣೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕ್ವಾರಂಟೈನ್ ಸೆಲ್​​ನಲ್ಲೇ ಇರಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಮೈದಾನದಲ್ಲಿ ಅಥವಾ ಬ್ಯಾರಕ್ ಬಳಿಯ ಹೊರಾಂಗಣದಲ್ಲಿ ದರ್ಶನ್​ಗೆ ವಾಕ್ ಮಾಡಲು ಅನುಮತಿ ನೀಡುವ ಸಾಧ್ಯತೆಯಿದೆ. ನ್ಯಾಯಾಧೀಶರ ಮುಂದೆ ತನಗೆ ಫಂಗಸ್ ಇದೆ ದರ್ಶನ್ ಹೇಳಿದ್ದಾರೆ. ಹೀಗಾಗಿ ನಿನ್ನೆ ರಾತ್ರಿ ಜೈಲಿನ ವೈದ್ಯರು ತಪಾಸಣೆ ಮಾಡಿದ್ದಾರೆ. ಮತ್ತೊಂದ್ಕಡೆ ಇವತ್ತು ದರ್ಶನ್ ಕುಟುಂಬಸ್ಥರು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. 

Advertisment

ಇದನ್ನೂ ಓದಿ:ಪಾ*ಸನ್ ಕೊಡಿ ಎಂದಿದ್ದ ದರ್ಶನ್​ ಬಗ್ಗೆ ನಟ ರಾಜವರ್ಧನ್ ಹೇಳಿದ ಒಳ್ಳೆಯ ಮಾತುಗಳು ಇಲ್ಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Darshan in jail Sudeep Darshan friendship Actor Darshan
Advertisment
Advertisment
Advertisment