/newsfirstlive-kannada/media/media_files/2025/09/03/darshan-and-dayanada-2025-09-03-18-01-54.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ 64ನೇ ಸೆಷನ್ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಇವತ್ತು ಕೂಡ ವಾದ-ಪ್ರತಿವಾದ ನಡೆದಿದೆ.
ಈ ವೇಳೆ ಜೈಲು ಅಧಿಕಾರಿಗಳು ದರ್ಶನ್ ಅವರಿಗೆ ಕನಿಷ್ಠ ಸೌಲಭ್ಯ ನೀಡಬೇಕು. ಬಟ್ಟೆ, ಆಹಾರ, ಹಾಸಿಗೆ, ದಿಂಬುಗಳು ಸೇರಿ ಬೆಸಿಕ್ ಸೌಲಭ್ಯಗಳನ್ನ ಸ್ವಂತವಾಗಿ ಪಡೆಯಲು ಅವಕಾಶ ನೀಡಬೇಕು ಎಂಬ ಮನವಿ ದರ್ಶನ್ ಕಡೆಯಿಂದ ಇದೆ. ಇದೇ ವಿಚಾರ ಸಂಬಂಧ ಇವತ್ತು ಕೋರ್ಟ್ನಲ್ಲಿ ದರ್ಶನ್ ಪರ ವಕೀಲ ಸುನಿಲ್ ಗಂಭಿರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ರಾಧಿಕಾ ಕುಮಾರಸ್ವಾಮಿ ವಿಚಾರಣೆ ಹಿಂದಿನ ಸಿಕ್ರೇಟ್ ಹೇಳಿದ ಜಮೀರ್..!
ಕಾರಾಗೃಹ ಡಿಜಿ ದಯಾನಂದ್ ಅವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ದಯಾನಂದ್ ಬೇರೆ ಅಧಿಕಾರಿಗಳ ಬಳಿ ಹೇಳಿದ್ದಾರೆ. ದರ್ಶನ್ ಸೆಲೆಬ್ರೆಟಿ ಸ್ಟೇಟಸ್ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ. ನಾನು ನಿಮಗೆ ಏನ್ ಪ್ರಶಸ್ತಿ ಬೇಕೋ ಅದನ್ನು ಕೊಡಿಸ್ತೀನಿ ಎಂದು ಸಿಬ್ಬಂದಿಗೆ ಹೇಳಿದ್ದಾರೆ’.
‘ಕೇಸ್ ಆದಗಲೂ ಕೂಡ ಅವರು ಪೊಲೀಸ್ ಆಯುಕ್ತರಾಗಿದ್ದರು. ಈಗ ಕಾರಾಗೃಹ ಮುಖ್ಯಸ್ಥರಾಗಿದ್ದಾರೆ. ಅವರೇ ಈ ರೀತಿ ಸ್ಟ್ರಿಕ್ಟ್ ಮಾಡ್ತಿದ್ದಾರೆ. ದರ್ಶನ್ ಸೆಲೆಬ್ರಿಟಿಯಾದರೇನು? ಅವನಿಗೆ ಜೈಲು ಅಂದ್ರೆ ಏನು ಎಂದು ಗೊತ್ತಾಗಬೇಕು ಎಂದು ಹಾಗೆ ಮಾಡ್ತಿದ್ದಾರೆ. ಒಳಗಡೆ ಸೆಲೆಬ್ರಿಟಿ ಅನ್ನೋದನ್ನ ಮರೆತು ಹೋಗಬೇಕು, ಆ ರೀತಿ ನೋಡಿಕೊಳ್ಳಿ ಎಂದು ಜೈಲಾಧಿಕಾರಿಗಳಿಗೆ ದಯಾನಂದ ಹೇಳಿದ್ದಾರೆ’.
ಇದನ್ನೂ ಓದಿ:ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್ಫ್ರೆಂಡ್ ಎಂಟ್ರಿ.. ಯಾರು ಈ ಸುಂದರಿ?
ದಯಾನಂದ್ ಯಾಕೆ ಈ ರೀತಿ ಮಾಡ್ತಿದ್ದಾರೆ? ಯಾವ ಉದ್ದೇಶಕ್ಕೆ ದರ್ಶನ್ ವಿರುದ್ಧ ಹೀಗೆ ಮಾಡಲಾಗ್ತಿದೆ. ಹಾಗಾದರೆ ದರ್ಶನ್ ಎಲ್ಲಿರಬೇಕು? ಒಳಗಡೆ ಓರ್ವ ಆರೋಪಿಯನ್ನ ಹೇಗೆ ನಡೆಸಿಕೊಳ್ಳಬೇಕು ಅದನ್ನ ನಡೆಸಲಿ. ಒಳಗಡೆ ಆರೋಪಿಗಳನ್ನ ಸರಿಯಾಗಿ ನೋಡಿಕೊಳ್ಳಬೇಕು. ಯಾವ ಜೈಲಾದರೂ ಕೂಡ ಅಲ್ಲಿ ಆಡಳಿತ ಮಾಡಬೇಕು. ಈ ಪ್ರಕರಣದಲ್ಲಿ ಕೆಲವು ಕೆಲಸಗಳು ಉದ್ದೇಶ ಪೂರ್ವಕವಾಗಿ ನಡೀತಿವೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:RCB ವಿಜಯೋತ್ಸವ ದುರಂತ ಆಯಿತು.. ಮೌನ ಮುರಿದ ವಿರಾಟ್ ಕೊಹ್ಲಿ, ಫ್ಯಾನ್ಸ್ಗೆ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ