/newsfirstlive-kannada/media/media_files/2025/11/25/bengaluru-2025-11-25-10-18-17.jpg)
ಒಂದೇ ಭಾರತ್​​ ಎಕ್ಸ್​​ಪ್ರೆಸ್​ ಟ್ರೈನ್​ ನಿನ್ನೆ ಮಧ್ಯಾಹ್ನ ಬೆಂಗಳೂರು ಟು ಬೆಳಗಾಮ್​ಗೆ ಹೊರಟಿತ್ತು.. ರೈಲು ಚಿಕ್ಕಬಾಣಾವಾರ ನಿಲ್ದಾಣಕ್ಕೆ ರೀಚ್​ ಆಗ್ತಿದ್ದಂತೆ.. ಇಬ್ಬರು ವಿದ್ಯಾರ್ಥಿಗಳು ರೈಲಿನ ಚಕ್ರಕ್ಕೆ ಸಿಲುಕಿ ಛಿದ್ರ ಛಿದ್ರಗೊಂಡಿದ್ದಾರೆ.. ತನಿಖೆ ನಡೆಸಿ ಸಿಸಿಟಿವಿ ಚೆಕ್​ ಮಾಡ್ದಾಗ ಅಸಲಿ ಸತ್ಯ ಗೊತ್ತಾಗಿದೆ.
ಒಂದೇ ಭಾರತ್​​ ಎಕ್ಸ್​​ಪ್ರೆಸ್​ ಟ್ರೈನ್.. ಬೆಂಗಳೂರು ಟು ಬೆಳಗಾಮ್​​ ಜರ್ನಿ ಸ್ಟಾರ್ಟ್​​ ಮಾಡಿತ್ತು.. ನಿನ್ನೆ ಮಧ್ಯಾಹ್ನ 2.30 ಸುಮಾರಿಗೆ ಚಿಕ್ಕಬಾಣಾವಾರ ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡ್ತಿದ್ದಂತೆ ಇವರಿಬ್ಬರು ದೇಹ ಛಿದ್ರ ಛಿದ್ರಗೊಂಡಿದೆ..
ಇದನ್ನೂ ಓದಿ: ಬೆಂಗಳೂರಿಗೆ ದೌಡಾಯಿಸಿದ ವೇಣುಗೋಪಾಲ್.. ಕುರ್ಚಿ ಕದನಕ್ಕೆ ಮತ್ತೊಂದು ಆಯಾಮ..!
ನರ್ಸಿಂಗ್​ ವಿದ್ಯಾರ್ಥಿಗಳಿಬ್ಬರು ಆತ್ಮ*ತ್ಯೆ​
ಸ್ಟೆರ್ಲಿನ್ ಎಲಿಜ ಶಾಜಿ.. 19 ವರ್ಷ.. ಮತ್ತಿವನು ಜಸ್ಟಿನ್ ಜೋಸೆಫ್ 20 ವರ್ಷ.. ಇವ್ನೇ ಟ್ರೈನ್​ ಚಕ್ರದಡಿ ಸಿಲುಕಿ ಜೀವ ಬಿಟ್ಟ ಮೃತರು..
- ಸ್ಟೆರ್ಲಿನ್ ಎಲಿಜ ಶಾಜಿ.. ಮತ್ತು ಜಸ್ಟಿನ್ ಜೋಸೆಫ್ ಇಬ್ರು ಸ್ನೇಹಿತರು
- ಕೇರಳದ ನಿವಾಸಿ, ಸಪ್ತಗಿರಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಾ ಇದ್ದರು
- ಚಿಕ್ಕಬಾಣಾವಾರ ರೈಲು ನಿಲ್ದಾಣ ಬಳಿ ಶವವಾಗಿ ಪತ್ತೆಯಾದ ಇಬ್ಬರು
- ಯಶವಂತಪುರ ರೇಲ್ವೇ ಪೊಲೀಸರಿಂದ ಪರಿಶೀಲನೆ, UDR ದಾಖಲು
- ಇಬ್ಬರು ಟ್ರ್ಯಾಕ್ ಮೇಲೆ ಹೋಗಲು ಮುಂದಾಗ ಅವಘಡ ಅಂತ ಶಂಕೆ
- ತನಿಖೆ ನಡೆಸಿ ಸಿಸಿಟಿವಿ ಚೆಕ್ ಮಾಡಿದಾಗ ಇದು ಆತ್ಮ*ತ್ಯೆ ಅಂತ ದೃಢ
ಸದ್ಯ ಗ್ರಾಮಾಂತರ ರೇಲ್ವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಸಾವಿಗೆ ಕಾರಣಗಳೇನು? ಅನ್ನೋದನ್ನ ತನಿಖೆ ನಡೆಸ್ತಿದ್ದಾರೆ.. ಏನೇ ಹೇಳಿ.. ಹುಟ್ಟು ಸಾವು.. ನಮ್ಮ ಕೈಯಲ್ಲಿ ಇರಲ್ಲ.. ಆದ್ರೆ ಈಗೀಗ ಯವಜನ್ರೇ ಹೆಚ್ಚಾಗಿ ಇಂಥ​ ಹಾದಿ ಹಿಡಿತೀರೋದು ನಿಜಕ್ಕೂ ದುರಂತ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us