Advertisment

ಬೆಂಗಳೂರಿಗೆ ದೌಡಾಯಿಸಿದ ವೇಣುಗೋಪಾಲ್.. ಕುರ್ಚಿ ಕದನಕ್ಕೆ ಮತ್ತೊಂದು ಆಯಾಮ..!

ರಾಜ್ಯದಲ್ಲಿ ಕುರ್ಚಿ ಕದನ ರೋಚಕ ಘಟ್ಟ ತಲುಪಿದೆ. ಖರ್ಗೆ ಬೆಂಗಳೂರಿಗೆ ಬಂದ್ರೂ ಪ್ರಹಸನ ಅಂತ್ಯ ಕಾಣಲಿಲ್ಲ. ಕುರ್ಚಿ ಬಿಕ್ಕಟ್ಟು ಸದ್ಯ ರಾಹುಲ್ ಗಾಂಧಿ ಅಂಗಳ ತಲುಪಿದ್ದು, ಮಾತುಕತೆಗೆ ಮುಹೂರ್ತ ಇಡಲಾಗಿದೆ. ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ.

author-image
Ganesh Kerekuli
CM SIDDU AND DKS WATCHING CHAIR
Advertisment
  • ಕುರ್ಚಿ ಕಾಳಗ.. ರಾಜ್ಯಕ್ಕೆ ವೇಣುಗೋಪಾಲ್​​ ದಿಢೀರ್​ ಎಂಟ್ರಿ
  • ಇಂದು ದಿಲ್ಲಿಗೆ ಖರ್ಗೆ.. ಅಭಿಪ್ರಾಯ ಸಂಗ್ರಹದ ವರದಿ ಸಲ್ಲಿಕೆ
  • ಡೆಲ್ಲಿಯಲ್ಲಿ ಡಿಕೆಶಿ ಜೊತೆ.. ಬೆಂಗಳೂರಲ್ಲಿ ಸಿಎಂ ಜೊತೆ ಚರ್ಚೆ

ರಾಜ್ಯದಲ್ಲಿ ಕುರ್ಚಿ ಕದನ ರೋಚಕ ಘಟ್ಟ ತಲುಪಿದೆ. ಖರ್ಗೆ ಬೆಂಗಳೂರಿಗೆ ಬಂದ್ರೂ ಪ್ರಹಸನ ಅಂತ್ಯ ಕಾಣಲಿಲ್ಲ. ಕುರ್ಚಿ ಬಿಕ್ಕಟ್ಟು ಸದ್ಯ ರಾಹುಲ್ ಗಾಂಧಿ ಅಂಗಳ ತಲುಪಿದ್ದು, ಮಾತುಕತೆಗೆ ಮುಹೂರ್ತ ಇಡಲಾಗಿದೆ. ಈ ಬೆಳವಣಿಗೆಗಳ ಮಧ್ಯೆ ಖರ್ಗೆ ದೆಹಲಿ ಫ್ಲೈಟ್ ಹತ್ತಲಿದ್ರೆ, ದೆಹಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವತ್ತು ಮಹತ್ವದ ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ..

Advertisment

ಸಿಎಂ ಸಿಂಹಾಸನಕ್ಕಾಗಿ ಬಣ ಬಡಿದಾಟ.. ರಾಜ್ಯ ಕಾಂಗ್ರೆಸ್​​ ಪಾಳಯದ ನಾಯಕತ್ವ ಸಂಗ್ರಾಮ ಘಳಿಗೆಗೊಂದು ತಿರುವು ಪಡೆದುಕೊಳ್ತಿದೆ.. ಸಿದ್ದರಾಮಯ್ಯ ಪಟ್ಟು ಪೆಟ್ಟಿನ ಅಖಾಡದಲ್ಲಿ ಡಿಕೆಶಿ ಕೂಡ ದಾಳ ಉರುಳಿಸ್ತಿದ್ದಾರೆ.. ಅಸ್ತ್ರ-ಶಸ್ತ್ರಗಳ ಪ್ರಯೋಗಕ್ಕೆ ವಿರಾಮ ಬಿದ್ದಿಲ್ಲ.. ಕುರ್ಚಿ ಬಿಕ್ಕಟ್ಟು ಹೈಕಮಾಂಡ್​ಗೆ ಇಕ್ಕಟ್ಟು ತಂದಿದ್ದು, ರಾಜ್ಯಕ್ಕೆ ಒಬ್ಬರ ಹಿಂದೆ ಇಬ್ಬರು ಹೈ ನಾಯಕರು ಭೇಟಿ ನೀಡ್ತಿರೋದು ಮತ್ತಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಧರ್ಮಧ್ವಜ ಸ್ಥಾಪನೆಗೆ ಅಯೋಧ್ಯೆ ಸಜ್ಜು.. ಇವತ್ತು ಮೋದಿಯಿಂದ ಕೇಸರಿಧ್ವಜ ಪ್ರತಿಷ್ಠಾಪನೆ..! PHOTOS

KC Venugopal

ರಾಜ್ಯ ಕಾಂಗ್ರೆಸ್​ನಲ್ಲಿ ಏನಾಗ್ತಿದೆ ಅಂತನೇ ಊಹಿಸೋಕಾಗ್ತಿಲ್ಲ. ಒಂದ್ಕಡೆ ಅಧಿಕಾರದ ಚಮತ್ಕಾರ ಭೇದಿಸಲು ಡಿಸಿಎಂ ಡಿಕೆಶಿ ದೆಹಲಿಯ ಹೈಕಮಾಂಡ್​ ಅಂಗಳದಲ್ಲಿ ಒತ್ತಡ ರಾಜಕೀಯ ನಡೆಸ್ತಿದ್ದಾರೆ.. ದಿಲ್ಲಿಯಲ್ಲೇ ಬಿಡಾರ ಹೂಡಿರೋ ಡಿಕೆ ಬಣ ಪವರ್ ಪಾಲಿಟಿಕ್ಸ್​​​ಗೆ ಕಡ್ಡಿ ಗೀರಿದೆ. ಇತ್ತ ಸಿದ್ದರಾಮಯ್ಯ ಅಧಿಕಾರದ ಶಿಖರದಿಂದ ಇಳಿಯಲೇಬಾರದೆಂದು ಛಲ ಪ್ರದರ್ಶನ ಮಾಡ್ತಿದ್ದಾರೆ.. ಇಡೀ ದೇಶದಲ್ಲೇ ನಿತ್ರಾಣವಾಗಿರೋ ಕಾಂಗ್ರೆಸ್​ ಹೈಕಮಾಂಡ್​​ಗೆ ಕರ್ನಾಟಕ ಒಂದೇ ಆಕ್ಸಿಜನ್ ಸೆಂಟರ್ ಆಗಿದ್ದು ಅಳೆದು, ತೂಗಿ ಲೆಕ್ಕಾಚಾರ ಹಾಕುವ ಇರಾದೆ ಹೈಕಮಾಂಡ್​ ಮರ್ಜಿಗಿದೆ.

Advertisment

ಈ ಮಧ್ಯೆ ಅಂತಿಮ ತೀರ್ಪು ಹೈಕಮಾಂಡ್ ಕೊಡುತ್ತೆ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ದೆಹಲಿಗೆ ವಾಪಸ್​ ಫ್ಲೈಟ್​ ಹತ್ತಲಿದ್ದರು. ಕಳೆದ 3 ದಿನಗಳಿಂದ ಬೆಂಗಳೂರಲ್ಲಿ ವಾಸ್ತವ್ಯ ಹೂಡಿದ್ದ ಖರ್ಗೆ, ಸಿಎಂ ಸಿದ್ದರಾಮಯ್ಯ-ಡಿಕೆಶಿ ಬಣದ ನಾನಾ-ನೀನಾ ಫೈಟ್​​ನ ವರದಿಯನ್ನ ಹೈಕಮಾಂಡ್​ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ

‘ಅಭಿಪ್ರಾಯ’ ರಾಜಕೀಯ! 

  • ಡೆಲ್ಲಿಯಲ್ಲಿ ಡಿಕೆಶಿ ಜೊತೆ.. ಬೆಂಗಳೂರಲ್ಲಿ ಸಿಎಂ ಜೊತೆ ಚರ್ಚೆ
  • ರಾಹುಲ್, ಸೋನಿಯಾಗೆ ಖರ್ಗೆ ವರದಿ ಕೊಡುವ ಸಾಧ್ಯತೆ
  • ಸಿಎಂ, ಡಿಸಿಎಂ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದ ಸಾಧ್ಯತೆ
  • ರಾಹುಲ್ ಗಾಂಧಿ ಬಳಿ ಅಭಿಪ್ರಾಯ ಸಂಗ್ರಹದ ವಿಷಯ ಮಂಡನೆ
  • ಇಬ್ಬರ ಅಭಿಪ್ರಾಯ ಹೈಕಮಾಂಡ್​ಗೆ ಮುಟ್ಟಿಸಲಿರುವ ಖರ್ಗೆ

ಇದನ್ನೂ ಓದಿ: ಟೀಮ್ ಇಂಡಿಯಾ 201 ರನ್​​ಗೆ ಆಲೌಟ್! ಬೃಹತ್ ಲೀಡ್​ ಸಾಧಿಸಿದ ದಕ್ಷಿಣ ಆಫ್ರಿಕಾ

Advertisment

CONGRESS MLA LOBBYING FOR DKS

ಬೆಂಗಳೂರಿಗೆ ಬಂದಿಳಿದ ಕೆ.ಸಿ.ವೇಣುಗೋಪಾಲ್

ಖರ್ಗೆ ದೆಹಲಿಗೆ ಹೊರಡುವ ಮುನ್ನ ತಡರಾತ್ರಿ ಮತ್ತೊಬ್ಬ ಹೈಕಮಾಂಡ್​​ ನಾಯಕ ರಾಜ್ಯಕ್ಕೆ ದಿಢೀರ್​ ಎಂಟ್ರಿಕೊಟ್ಟಿದ್ದಾರೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೊಚ್ಚಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಏರ್​​ಫೋರ್ಟ್​ ಬಳಿ ಇರೋ ತಾಜ್ ಹೋಟೆಲ್​​​ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಬೆಳಗ್ಗೆ ಇಲ್ಲಿಂದ ವಯನಾಡಿಗೆ ತೆರಳಲಿದ್ದಾರೆ. ಆದ್ರೆ ಕುರ್ಚಿ ಕದನದ ನಡುವೆ ವೇಣುಗೋಪಾಲ್​​ ಆಗಮನ ಕುತೂಹಲವನ್ನು ಹೆಚ್ಚಿಸಿದೆ. ಮತ್ತೊಂದು ಮೂಲಗಳ ಪ್ರಕಾರ ಕಳೆದ ರಾತ್ರಿ ಮನೆಯಿಂದ ಹೊರ ಹೋಗಿರುವ ಡಿಸಿಎಂ ಡಿಕೆಶಿ ಕೂಡ.. ಏರ್​ಪೋರ್ಟ್​ ಬಳಿಯ ತಾಜ್​​ ಹೋಟೆಲ್​ಗೆ ತೆರಳಿರುವ ಗುಮಾನಿಯೂ ಇದೆ. ಜೊತೆಗೆ ಡಿಕೆಶಿ ಕೂಡ ವಯನಾಡಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ಬಿ.ಕೆ.ಹರಿಪ್ರಸಾದ್ ರಿಂದ ರಾಹುಲ್ ಗಾಂಧಿಗೆ ರಿಪೋರ್ಟ್ ಸಲ್ಲಿಕೆ : ಬಿಜೆಪಿಯಿಂದ ಕುದುರೆ ವ್ಯಾಪಾರದ ಆರೋಪ

ಅತ್ತ ಡಿಸಿಎಂ ಡಿಕೆಶಿ ಕ್ಯಾಂಪ್​​​ ದೆಹಲಿಯಲ್ಲಿ ದಾಳ ಉರುಳಿಸ್ತಿದ್ರೆ ಇತ್ತ ಕೆಲ ಸಚಿವರು ಹಾಗೂ ಶಾಸಕರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.. ಸಚಿವ ಚೆಲುವರಾಯಸ್ವಾಮಿ, ಹೆಚ್.ಸಿ ಮಹದೇವಪ್ಪ, ಕೆ.ಎಚ್ ಮುನಿಯಪ್ಪ ಸೇರಿ ಹಲವರು ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ..

Advertisment

ಒಟ್ಟಾರೆ.. 3 ದಿನಗಳಿಂದ ರಾಜ್ಯದಲ್ಲಿ ಬೀಡುಬಿಟ್ಟಿದ್ದ ಖರ್ಗೆ ಸಾಹೇಬ್ರು ಇಂದು ದೆಹಲಿಗೆ ತೆರಳಲಿದ್ದಾರೆ.. ನಾಡಿದ್ದು, ರಾಹುಲ್ ಗಾಂಧಿ ದೆಹಲಿದೆ ವಾಪಸ್​​ ಬರ್ತಿದ್ದು, ರಾಹುಲ್​ ಸಮ್ಮುಖದಲ್ಲಿ ಕುರ್ಚಿ ಕದನದ ನಾಟಕ ಮಂಡಳಿ ಕ್ಲೈಮ್ಯಾಕ್ಸ್ ಕಾಣುತ್ತಾ, ಅನ್ನೋದನ್ನ ಕಾದು ನೋಡಬೇಕಿದೆ..

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar karnataka politics Power sharing KC Venugopal
Advertisment
Advertisment
Advertisment