Advertisment

4 ಆಯಾಮಾದಲ್ಲಿ ವಿಚಾರಣೆ.. 7 ಕೋಟಿ ರಾಬರಿ ಕೇಸ್ ತನಿಖೆ ಎಲ್ಲಿವರೆಗೆ ಬಂತು..?

7 ಕೋಟಿ ರಾಬರಿ ಕೇಸ್​ನ ದರೋಡೆಕೋರರಿಗಾಗಿ ಕರ್ನಾಟಕ ಗಡಿ ಭಾಗಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ. ಸಿಸಿಬಿ ಪೊಲೀಸರೂ ಸೇರಿ ಸುಮಾರು 50ಕ್ಕೂ ಹೆಚ್ಚು ಪೊಲೀಸರಿಂದ ತಲಾಶ್ ನಡೆಸಲಾಗ್ತಿದೆ.

author-image
Ganesh Kerekuli
bengaluru robbery
Advertisment

7 ಕೋಟಿ ರಾಬರಿ ಕೇಸ್​ನ ದರೋಡೆಕೋರರಿಗಾಗಿ ಕರ್ನಾಟಕ ಗಡಿ ಭಾಗಗಳಲ್ಲಿ ತೀವ್ರ ಶೋಧ ನಡೆಯುತ್ತಿದೆ. ಸಿಸಿಬಿ ಪೊಲೀಸರೂ ಸೇರಿ ಸುಮಾರು 50ಕ್ಕೂ ಹೆಚ್ಚು ಪೊಲೀಸರಿಂದ ತಲಾಶ್ ನಡೆಸಲಾಗ್ತಿದೆ. 

Advertisment

ದರೋಡೆಕೋರರ ಗ್ಯಾಂಗ್ ಎರಡು ತಂಡಗಳಾಗಿ ರಾಬರಿ ಮಾಡಿದ್ದು, ಒಂದು ಕಾರಿನಲ್ಲಿ ಸೆಕ್ಯೂರಿಟಿ, ಸಿಬ್ಬಂದಿಯನ್ನ ಗ್ಯಾಂಗ್​ ಕರೆದೊಯ್ದಿತ್ತು. ಮತ್ತೊಂದು ಗ್ಯಾಂಗ್​ ಹಣ ತುಂಬಿಕೊಂಡು ಎಸ್ಕೇಪ್ ಆಗಿತ್ತು ಎನ್ನಲಾಗ್ತಿದೆ. ಕಾರಿಗೆ ನಕಲಿ ನಂಬರ್ ಪ್ಲೇಟ್ ಬಳಸಿದ್ರಿಂದ ಕಾರು ಪತ್ತೆಯೇ ಸಾವಾಲಾಗಿದ್ದು, ಸಿಸಿಟಿವಿ ಆಧಾರಿಸಿ ಕಾರಿಗಾಗಿ ತೀವ್ರ ಹುಡುಕಾಟ ನಡೆದಿದೆ.

ಇದನ್ನೂ ಓದಿ: ಪ್ರೀತಿಯ ಪತ್ನಿ ನಯನತಾರಗೆ 10 ಕೋಟಿ ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಗ್ನೇಶ್..!

robbary (1)

ಇನ್ನು, ಪೊಲೀಸರು ನಾಲ್ಕು ತಂಡಗಳಾಗಿ ನಾಲ್ಕು ಆಯಾಮದಲ್ಲಿ ತನಿಖೆ ನಡೆಸ್ತಿದ್ದಾರೆ. ಆರೋಪಿಗಳು ಮಾಲೂರಿನಿಂದ ಎಡಕ್ಕೋದ್ರಾ? ಬಲಕ್ಕೋದ್ರಾ.? ಎಂಬುವುದು ತಿಳಿದುಬಂದಿಲ್ಲ. ಹೀಗಾಗಿ ಆರೋಪಿಗಳು ಏಳು ಕೋಟಿ ಹಣದ ಸಮೇತ ಕುಪ್ಪಂ ಕಡೆ ಹೋದ್ರಾ? ಅಥವಾ ಹೊಸೂರು ಕಡೆಗಾ ಅಂತ ಇನ್ನೂ ತಿಳಿದು ಬಂದಿಲ್ಲ. 

Advertisment

ಈ ಹಿನ್ನೆಲೆ ಸಿಸಿಬಿಯ ಆರ್ಗನೈಸ್ಡ್​​ ಕ್ರೈಂ ವಿಂಗ್ ಟೀಮ್ ತಮಿಳುನಾಡಿಗೆ ಹಾಗೂ ದಕ್ಷಿಣ ವಿಭಾಗದ ಪೊಲೀಸ್ ಟೀಮ್ ಆಂಧ್ರಪ್ರದೇಶಕ್ಕೆ ತೆರಳಿ ತನಿಖೆ ನಡೆಸ್ತಿದ್ದಾರೆ. ಡಿಸಿಪಿ ಲೋಕೇಶ್ ಟೀಂನಿಂದ CMS ಏಜೆನ್ಸಿಯ ಸಿಬ್ಬಂದಿ ವಿಚಾರಣೆ ನಡೆಯುತ್ತಿದ್ದು, ಸಿಸಿಬಿ ಸ್ಪೆಷಲ್ ಎನ್​​​ಕ್ವೇರಿ ಟೀಂ ಟೆಕ್ನಿಕಲ್ CDR ಹಾಗೂ ಇತರೆ ಆಯಾಮದಲ್ಲಿ ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: 7 ಕೋಟಿ ದರೋಡೆ ಕೇಸ್​.. ಈಗ ಕಾಡ್ತಿರುವ ಅನುಮಾನಗಳು ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robbery in Bangalore 7 crore Robbery Robbery
Advertisment
Advertisment
Advertisment