7 ಕೋಟಿ ದರೋಡೆ ಕೇಸ್​.. ಈಗ ಕಾಡ್ತಿರುವ ಅನುಮಾನಗಳು ಏನು..?

ಬೆಂಗಳೂರಿನಲ್ಲಿ ಏಳು ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ CMS ಸಿಬ್ಬಂದಿ ಮೇಲೆ ಹಲವು ಅನುಮಾನಗಳು ಮೂಡಿದೆ. ಇದೀಗ CMS ಮ್ಯಾನೇಜರ್ ವಿನೋದ್ ಚಂದ್ರಾರ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

author-image
Ganesh Kerekuli
robbary (1)
Advertisment

ಬೆಂಗಳೂರಿನಲ್ಲಿ ಏಳು ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ CMS ಸಿಬ್ಬಂದಿ ಮೇಲೆ ಹಲವು ಅನುಮಾನಗಳು ಮೂಡಿದೆ. 

ದರೋಡೆಕೋರರು ಆರ್.ಬಿ.ಐ ಅಧಿಕಾರಿಗಳ ಸೋಗಿನಲ್ಲಿ ಕಾರು ಅಡ್ಡಗಟ್ಟಿ ಕಸ್ಟೋಡಿಯನ್ ಅಫ್ತಾಬ್, ಗನ್ ಮ್ಯಾನ್​ಗಳಾದ ರಾಜಣ್ಣ, ತಮ್ಮಯ್ಯರನ್ನ ಇನೋವಾ ಕಾರಿನಲ್ಲಿ ಕೂರಿಸಿಕೊಂಡ್ರು. ಹಣವಿದ್ದ ವಾಹನವನ್ನ ಚಾಲಕನಿಗೆ ಹಿಂಬಾಲಿಸುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ:ಲಕ್​​ನಿಂದ ಉಳಿದುಕೊಂಡವ್ರಿಗೆ ಈ ವಾರ ವರ್ಕ್ ಆಗಲ್ಲ.. ಡೇಂಜರ್​ ಝೋನ್​ನಲ್ಲಿ 3 ಸ್ಪರ್ಧಿಗಳು..!

robbary (4)

ನಂತರ ಅಫ್ತಾಬ್, ರಾಜಣ್ಣ, ತಮ್ಮಯ್ಯರನ್ನ ಎಲ್ಲಿ ಇಳಿಸಿದ್ರು ಗೊತ್ತಿಲ್ಲ. ಆದರೂ, ದರೋಡೆಕೋರರು ಕಾರು ಅಡ್ಡಗಟ್ಟಿದಾಗಲೇ ಸಿಬ್ಬಂದಿ ತಮ್ಮ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತರಲಿಲ್ಲ. ಚಾಲಕ ಕೂಡ CMS ಸಿಬ್ಬಂದಿಗೆ ಕರೆ ಮಾಡಿಲ್ಲ. 

ಸಾರ್ವಜನಿಕರ ಪೋನ್ ಪಡೆದು CMS ಸಿಬ್ಬಂದಿಗಾಗಲೀ ಪೋಲಿಸರರಿಗಾಗಲಿ ಮಾಹಿತಿ ನೀಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೀಗ CMS ಮ್ಯಾನೇಜರ್ ವಿನೋದ್ ಚಂದ್ರಾರ್ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಪತ್ನಿ ನಯನತಾರಗೆ 10 ಕೋಟಿ ಮೌಲ್ಯದ ಕಾರು ಗಿಫ್ಟ್ ಕೊಟ್ಟ ವಿಗ್ನೇಶ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 crore Robbery Robbery in Bangalore Robbery
Advertisment