/newsfirstlive-kannada/media/media_files/2025/08/16/leopard-safari-attack-2025-08-16-08-20-41.jpg)
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿರತೆ ಸಫಾರಿಯಲ್ಲಿ ಚಿರತೆ ಕಂಡು ಖುಷ್ ಆಗಿದ್ದ ಈ ಬಾಲಕನಿಗೆ ಅದೇ ಚಿರತೆ ಕೊನೆಗೆ ಕಣ್ಣೀರಿಡುವಂತೆ ಮಾಡಿದೆ. ಜೀಪ್​ ಮೇಲೆ ಎಗರಿದ್ದ ಚಿರತೆ ಪೋಷಕರ ಜೊತೆ ಜೀಪ್​ನಲ್ಲಿ ಕುಳಿತಿದ್ದ 13 ವರ್ಷದ ಬಾಲಕನ ಕೈ ಪರಚಿ ರಕ್ತ ಸುರಿಯುವಂತೆ ಮಾಡಿದೆ. ತಕ್ಷಣ ಬಾಲಕನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸಫಾರಿ ಸಿಬ್ಬಂದಿ ಚಿಕಿತ್ಸೆ ಕೊಡಿಸಲಾಗಿದೆ.
3 ದಿನಗಳ ಹಿಂದಷ್ಟೆ ಬಂಡೀಪುರದಲ್ಲಿ ಆನೆ ಡೆಡ್ಲಿ ಅಟ್ಯಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಅಟ್ಯಾಕ್​ ಒಂದು ಕಡೆಯಾದ್ರೆ ಕಳೆದ 3 ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರನ ಮೇಲೆ ಕಾಡಾನೆಯೊಂದು ಡೆಡ್ಲಿ ಅಟ್ಯಾಕ್ ಮಾಡಿದ ಘಟನೆ ನಡೆದಿತ್ತು. ಕಿರುಚಾಡಿ ಹುಚ್ಚಾಟವಾಡಿದವನ ಬೆನ್ನುಹತ್ತಿದ್ದ ಹಾನೆ ಅಟ್ಟಾಡಿಸಿ ರಸ್ತೆಯಲ್ಲೇ ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು.
ಇದನ್ನೂ ಓದಿ: ಧರ್ಮಸ್ಥಳ ಅನಾಮಿಕ ಯೂಟರ್ನ್; ಶ*ವ ಹೂತಿದ್ದು ನಾನೊಬ್ಬನೇ ಅಲ್ಲ.. ಸಂಚಲನ ಸೃಷ್ಟಿಸಿದ ಹೇಳಿಕೆ..!
/filters:format(webp)/newsfirstlive-kannada/media/media_files/2025/08/16/leopard-safari-attack-1-2025-08-16-08-22-30.jpg)
ಒಟ್ನಲ್ಲಿ ಇತ್ತೀಚೆಗೆ ವನ್ಯ ಮೃಗಗಳು ಹಾಗೂ ಮಾನವನ ಮಧ್ಯೆ ಸಂಘರ್ಷ ನಡೆಯೋದು ಸಾಮಾನ್ಯ ಆಗ್ಬಿಟ್ಟಿದೆ.. ವನ್ಯ ಮೃಗಗಳ ಮುಂದೆ ನಾವೂ ಮೃಗಗಳಂತೆ ವರ್ತಿಸಿ ಅವುಗಳನ್ನ ಸಿಟ್ಟಿಗೆಬ್ಬಿಸದೇ ಸುಮ್ಮನಿದ್ರೆ ಕೊಂಚ ಇಂತಹ ಘಟನೆಗಳಗೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ದರ್ಶನ್ ಸ್ಥಿತಿ ಕಂಡು ರಮ್ಯಾ ಬೇಸರ.. ಹಳೆಯ ದಿನ ಮೆಲುಕು ಹಾಕಿ ಅಚ್ಚರಿಯ ಹೇಳಿಕೆ
Leopard attacks 13-year-old at Bannerghatta National Park in Bengaluru during a safari ride.
— Vani Mehrotra (@vani_mehrotra) August 15, 2025
The incident happened this afternoon and the minor was immediately attended to by the park staff and was then taken to a hospital. He was discharged after treatment. pic.twitter.com/Oc7rEubsNH
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us