/newsfirstlive-kannada/media/media_files/2025/09/09/darshan-6-2025-09-09-11-51-10.jpg)
ಆರೋಪಿ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ (Renukaswamy case) ಮತ್ತೆ ದರ್ಶನ್ ಜೈಲು ಸೇರಿದ್ದಾರೆ. ಕಳೆದ ಬಾರಿ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದ ಆರೋಪಿ, ಈ ಬಾರಿ ಪರಪ್ಪನ ಅಗ್ರಹಾರದಲ್ಲೇ ಮುದ್ದೆ ಮುರಿಯುತ್ತಿದ್ದಾರೆ. ಈ ನಡುವೆ ದರ್ಶನ್ ಜೈಲು ಸಿಬ್ಬಂದಿ ಮೇಲೆ ಸಾಲು ಸಾಲು ಆರೋಪ ಮಾಡಿದ್ದಾರೆ.
ಹಾಸಿಗೆ ದಿಂಬು ವಿಚಾರಕ್ಕೆ ಮತ್ತೆ ಮತ್ತೆ ಕೋರ್ಟ್ ಮೊರೆ ಹೋಗ್ತಿರುವ ದರ್ಶನ್​, ಸಲ್ಲಿಸಿರುವ ಅರ್ಜಿಯ ವಿಚಾರಣೆ ಇವತ್ತು ನಡೆಯಲಿದೆ. ಜೈಲಾಧಿಕಾರಿಗಳ ವಿರುದ್ಧ ಆರೋಪಿಸಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿಂದಿನ ವಿಚಾರಣೆ ವೇಳೆ ಕೋರ್ಟ್​ಗೆ ನೇರವಾಗಿ ಹಾಜರಾಗಲು ಜೈಲು ಸೂಪರಿಂಟೆಂಡೆಂಟ್​ಗೆ ಸೂಚಿಸಲಾಗಿತ್ತು.
ಇದನ್ನೂ ಓದಿ:ಮತ್ತೆ ಭರ್ಜರಿ ಗಿಫ್ಟ್ ಕೊಟ್ಟ ಬಿಸಿಸಿಐ.. ಹ್ಯಾಟ್ರಿಕ್ ಟ್ರೋಫಿ ಹೊಡೆದ ತಂಡಕ್ಕೆ ಸಿಕ್ಕಿದ್ದು ಒಟ್ಟು 204 ಕೋಟಿ..!
ನನಗೆ ನಡೆದಾಡೋಕು ಸರಿಯಾದ ವ್ಯವಸ್ಥೆ ಇಲ್ಲ. ಒಂದು ತಿಂಗಳಿನಿಂದ ಅದೇ ಬ್ಯಾರೆಕ್​ನಲ್ಲಿ ಇಟ್ಟಿದ್ದಾರೆ. ನಿಯಮ ಮೀರಿ ಕ್ವಾರಂಟೈನ್ ಬ್ಯಾರೆಕ್​ನಲ್ಲಿ ಇಡಲಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್​ ಮೂಲ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇಂದು ಕೊರ್ಟ್​ನಲ್ಲಿ ವಿಚಾರಣೆ ನಡೆಯಲಿದ್ದು, ಆದೇಶ ಹೊರ ಬೀಳುವ ಸಾಧ್ಯತೆ ಇದೆ. ದರ್ಶನ್ ಬೇರೆ ಬ್ಯಾರೆಕ್​ಗೆ ಶಿಫ್ಟ್ ಬಗ್ಗೆ ಆದೇಶ ಸಾಧ್ಯತೆ ಇದೆ. ಸದ್ಯ ಕ್ವಾರಂಟೈನ್ ಬ್ಯಾರೆಕ್​ನಲ್ಲಿ ದರ್ಶನ್ ಮತ್ತು ಅವರ ತಂಡ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ