Advertisment

ದರ್ಶನ್ ಬಳ್ಳಾರಿ ಜೈಲು ಭವಿಷ್ಯ.. ಇವತ್ತು ಮಹತ್ವದ ತೀರ್ಪು ನಿರೀಕ್ಷೆ

ರೇಣುಕಾಸ್ವಾಮಿ ಕೇಸ್ ಸಂಬಂಧಿಸಿದಂತೆ ಆರೋಪಿ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಬಗ್ಗೆ ಇಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದಿದ್ದು, ಇಂದು ತೀರ್ಪು ಹೊರಬೀಳುವ ಸಾಧ್ಯತೆ ಇದೆ.

author-image
Ganesh Kerekuli
Darshan in jail
Advertisment

ರೇಣುಕಾಸ್ವಾಮಿ ಕೇಸ್ ಸಂಬಂಧಿಸಿದಂತೆ ಆರೋಪಿ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಬಗ್ಗೆ ಇಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದಿದ್ದು, ಇಂದು ತೀರ್ಪು ಹೊರಬೀಳುವ ಸಾಧ್ಯತೆ ಇದೆ. 

Advertisment

ದರ್ಶನ್ ಪರ ಹಿರಿಯ ವಕೀಲ ಸಂದೇಶ್ ಚೌಟ ತಮ್ಮ ವಾದವನ್ನು ಈಗಾಗ್ಲೆ ಮಂಡಿಸಿದ್ದಾರೆ. ಅತ್ತ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಕೋರ್ಟ್‌ನಲ್ಲಿ ಪ್ರತಿವಾದ ಮುಗಿದಿದೆ. ನ್ಯಾಯಾಲಯವು ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ್ದು, ಇಂದು ಅಂತಿಮ ಆದೇಶ ಪ್ರಕಟಿಸಲಿದೆ.

ಇದನ್ನೂ ಓದಿ:ಕರ್ನಾಟಕಕ್ಕೆ ಜಾಕ್​ಪಾಟ್​​! ಈ ಜಿಲ್ಲೆಯಲ್ಲಿ ಟನ್​ ಗಟ್ಟಲೇ ಚಿನ್ನದ ನಿಕ್ಷೇಪ ಪತ್ತೆ..!

ಇನ್ನು, ದರ್ಶನ್​ನನ್ನು ಬಳ್ಳಾರಿಗೆ ಜೈಲಿಗೆ ಶಿಫ್ಟ್​ ಮಾಡುವಂತೆ ಎಸ್​ಪಿಪಿ ಪ್ರಸನ್ನ ಕುಮಾರ್​ ವಾದಿಸಿದ್ರೆ.. ದರ್ಶನ್​ ಪರ ವಕೀಲರಾದ ಚೌಟಾ ಶಿಫ್ಟ್​ ಮಾಡದಂತೆ ಮನವಿ ಮಾಡಿದ್ದಾರೆ. 

Advertisment

ಸುನಿಲ್​, ದರ್ಶನ್​ ಪರ ವಕೀಲ

ಮೈ ಲಾರ್ಡ್​ ದರ್ಶನ್​ ಸೆಲೆಬ್ರೆಟಿಯಾಗಿರೋದ್ರಿಂದ ಮಿಸ್ಯೂಸ್ ಹಾಗೂ ಕೋರ್ಟ್​ನ ಮಿಸ್ಲೀಡ್ ಮಾಡ್ತಿದ್ದಾರೆ. ಭದ್ರತೆ ಮತ್ತು ಆಡಳಿತ ದೃಷ್ಟಿಯಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್​ ಮಾಡುವಂತೆ ಉಲ್ಲೇಖಿಸಿದ್ದಾರೆ. ಅದೂ ಜೈಲು ಸೇರಿ ಎರಡೇ ದಿನಗಳಲ್ಲಿ.. ಶಿಸ್ತು ಕ್ರಮ ಮತ್ತು ಆಡಳಿತ ಭದ್ರತೆ ನೆಪದಲ್ಲಿ ಜೈಲಾಧಿಕಾರಿಗಳು ಆಶ್ರಯ ಪಡೆಯುತ್ತಿದ್ದಾರೆ. ಜೈಲೊಳಗೆ ಸಿಗರೇಟ್ ಹೇಗೆ ಬಂತು? ಚೇರ್ ಹೇಗೆ ಬಂತು? ಇವರೇ ಎಲ್ಲಾ ಒಳಗೆ ಬಿಡ್ತಾರೆ. ಈಗ ಶಿಫ್ಟ್ ನಾಟಕವಾಡ್ತಿದ್ದಾರೆ. ಜೈಲಾಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಈ ರೀತಿ ಮಾಡ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಬಹುದು, ಹಾಜರುಪಡಿಸಬಹುದು ಎಂದು ಎಸ್​ಪಿಪಿ ಹೇಳ್ತಾರೆ. ಆದ್ರೆ ಕೇಸ್​ನ ಟ್ರಯಲ್​ ಬೆಂಗಳೂರಿನಲ್ಲಿ ನಡೆಯುತ್ತೆ.. ಬಳ್ಳಾರಿಯಲ್ಲಿ ಅಲ್ಲ. ಟ್ರಯಲ್ ವೇಳೆ ಎಲ್ಲಾ ಆರೋಪಿಗಳನ್ನ ಹಾಜರುಪಡಿಸಬೇಕು. ಆ ಸಂದರ್ಭದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಕ್ರಾಸ್ ಎಕ್ಸಾಮಿನೇಷನ್ ಆಗುತ್ತೆ. ನಾವು ಸಾಕಷ್ಟು ವಿಚಾರಗಳನ್ನ ಕ್ರಾಸ್ ಮಾಡ್ತೇವೆ. ಆಗ ಎರಡು ನಿಮಿಷವಿರಿ ಸ್ವಾಮಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಳ್ತೀವಿ ಅನ್ನೋಕೆ ಆಗುತ್ತಾ? ಇದು ಪ್ರಾಕ್ಟಿಕಲಿ ಆಗೋ ಕೆಲಸ ಅಲ್ಲ. ಟ್ರಯಲ್​ನಲ್ಲಿ ನಾವು ನೇರವಾಗಿ ಹಾಜರುಪಡಿಸಿದ್ರೆ ಅದು ಸರಿಯಾಗುತ್ತೆ. ಆದ್ರೆ ಇಲ್ಲಿ‌ ಉದ್ದೇಶ ಪೂರ್ವಕವಾಗಿ ನಡೀತಿವೆ. ಹೀಗಾಗಿ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಬಾರದು ಮೈ ಲಾರ್ಡ್.​

ಇದನ್ನೂ ಓದಿ:ದರ್ಶನ್ ಬಳ್ಳಾರಿ ಜೈಲ್ ಭವಿಷ್ಯ.. ತೀರ್ಪು ಕಾಯ್ದಿರಿಸಿದ ಕೋರ್ಟ್..!


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Darshan in jail Sudeep Darshan friendship
Advertisment
Advertisment
Advertisment