/newsfirstlive-kannada/media/media_files/2025/09/18/bigg-boss-ranjith-kumar-1-2025-09-18-14-31-23.jpg)
ಅಕ್ಕ-ತಮ್ಮನ ಜಗಳದಿಂದಾಗಿ ಬಿಗ್ಬಾಸ್ ಖ್ಯಾತಿಯ ರಂಜಿತ್ ಕುಮಾರ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾರಣ ಇಷ್ಟೇ, ತಂದೆಯವರ ಫ್ಲಾಟ್ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ನೀಡಿದ್ದಾರೆ.
ಇದನ್ನೂ ಓದಿ:ಚಂದನಾ ಅನಂತಕೃಷ್ಣ ಮತ್ತೊಂದು ಪ್ರಯತ್ನ.. ಅಭಿಮಾನಿಗಳು ಫಿದಾ..!
ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಎನ್ಸಿಆರ್ ದಾಖಲು ಮಾಡಿ ಕಳುಹಿಸಿದ್ದಾರೆ. ಇದು ಫ್ಲಾಟ್ ವಿಚಾರ (ಸಿವಿಲ್ ವ್ಯಾಜ್ಯ). ಹೀಗಾಗಿ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಹಿಂದೆ ಇಡೀ ಕುಟುಂಬ ಅದೇ ಫ್ಲಾಟ್ನಲ್ಲಿ ವಾಸವಿತ್ತು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರಿಗೂ ಬುದ್ಧಿ ಹೇಳಿ ಕೋರ್ಟ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ರಂಜಿತ್ ಬಾವ ನೀಡಿದ ದೂರಿನಲ್ಲಿ ಏನಿದೆ..?
ರಂಜಿತ್ ಬಾಮೈದ ಜಗದೀಶ್ ನೀಡಿದ ದೂರಿನ ಪ್ರಕಾರ.. 2018 ರಿಂದಲೂ ನಾನು ನನ್ನ ಹೆಂಡತಿ ಮತ್ತು ಮಗಳೊಂದಿಗೆ ಆ ಫ್ಲಾಟ್ನಲ್ಲಿ ವಾಸಿಸುತ್ತಿರುತ್ತೇನೆ. ನಂತರ 2025 ರ ಜುಲೈ ತಿಂಗಳಿಂದ ನನ್ನ ಬಾಮೈದನಾದ ರಂಜಿತ್ನು ನಮ್ಮ ಜೊತೆ ವಾಸಿಸುತ್ತಿದ್ದು, ಈಗ ಆತ ಮನೆ ನನಗೆ ಸೇರಿದೆ. ಈ ಮನೆಯನ್ನ ನೀವು ಬಿಡಬೇಕು ಎಂದು ನನಗೆ ಹಾಗೂ ನನ್ನ ಕುಟುಂಬದವರಿಗೆ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ. ಅಲ್ಲದೇ ಮನೆ ಬಿಡಲಿಲ್ಲ ಅಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಆರೋಪಿಸಿದ್ದಾರೆ. ಆದ್ದರಿಂದ ಸದರಿ ರಂಜಿತ್ನ ವಿರುದ್ಧ NO-166/2025 50-352,351 (2) BNS 0:3 ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಅಕ್ಕ-ತಮ್ಮನ ಜಗಳ! ಠಾಣೆ ಮೆಟ್ಟಿಲೇರಿದ ಬಿಗ್ಬಾಸ್ ಖ್ಯಾತಿಯ ರಂಜಿತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ