BMTC ಬಸ್​ ಚಾಲಕರೇ ಎಚ್ಚರ.. ಅಪ್ಪಿತಪ್ಪಿ ಈ ತಪ್ಪುಗಳು ಮಾಡಿದ್ರೆ ವಜಾ ಗ್ಯಾರಂಟಿ; ಏನದು..?

ದಿನನಿತ್ಯ ಸಿಲಿಕಾನ್​ ಸಿಟಿಯಲ್ಲಿ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ. ಆದ್ರೆ, ಈಗಂತೂ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿ ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್​ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ.

author-image
Veenashree Gangani
Updated On
bmtc bus(1)
Advertisment

ದಿನನಿತ್ಯ ಸಿಲಿಕಾನ್​ ಸಿಟಿಯಲ್ಲಿ ಲಕ್ಷಾಂತರ ಪ್ರಯಾಣಿಕರು ಬಿಎಂಟಿಸಿಯಲ್ಲಿ ಪ್ರಯಾಣಿಸುತ್ತಾರೆ. ಆದ್ರೆ, ಈಗಂತೂ ಪ್ರಯಾಣಿಕರ ಜೀವಕ್ಕೆ ಗ್ಯಾರಂಟಿ ಇಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್​ಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಬಿಎಂಟಿಸಿ ಸರಣಿ ಅಪಘಾತಗಳಿಂದ ಆಗುತ್ತಿರುವುದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಕೆಲ ಪ್ರಯಾಣಿಕರು ಬಸ್ಸಿನಲ್ಲಿ ಸಂಚಾರ ಮಾಡೋದಕ್ಕೆ ಆತಂಕ ಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. 

ಇದನ್ನೂ ಓದಿ:ಫುಲ್​​ ಗ್ಲಾಮರ್​ ಲುಕ್​ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್

bmtc bus

ಅದರಲ್ಲೂ ಎಲೆಕ್ಟ್ರಿಕ್ ಬಸ್​ಗಳಲ್ಲಿ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುತ್ತಿದ್ದಾರೆ.  ಯಾವ ಸಮಯದಲ್ಲಿ ಏನಾಗುತ್ತೆ ಅಂತ ಹೇಳೋದಕ್ಕೆ ಆಗುತ್ತಿಲ್ಲ. ಕೇವಲ ಬಸ್​ನಲ್ಲಿ ಪ್ರಯಾಣಿಸುವವರಷ್ಟೇ ಅಲ್ಲದೇ, ಪಾದಚಾರಿಗಳು ಕೂಡ ಭಯದಿಂದ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಮುಖ್ಯ ಕಾರಣವೇ ಬಿಎಂಟಿಸಿ ಚಾಲಕರ ಅತಿವೇಗದ ಚಾಲನೆ. ಬೆಂಗಳೂರಿಗರ ಪಾಲಿಗೆ ಬಿಎಂಟಿಸಿ ಬಸ್​​ಗಳು ‘ಯಮ’ನಂತೆ ಕಾಣುತ್ತಿದೆ. ಒಂದು ತಿಂಗಳ ಅಂತರದಲ್ಲಿ ಬಿಎಂಟಿಸಿ ಅಪಘಾತದಲ್ಲಿ ಆರು ಮಂದಿ ಜೀವಬಿಟ್ಟಿದ್ದಾರೆ.

bmtc electric buses

ಹೌದು, ದಿನೇ ದಿನೇ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಕಿಲ್ಲರ್​ ಎಂದೇ ಅಪಖ್ಯಾತಿಗೆ ಒಳಗಾಗಿರೋ ಬಿಎಂಟಿಸಿ, ಸುರಕ್ಷತಾ ಚಾಲನೆಯತ್ತ ಗಮನವನ್ನು ಹರಿಸದ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಖಡಕ್​ ಸಂದೇಶ ರವಾನಿಸಿದೆ. ಚಾಲಕರು ಚಾಲನೆ ವೇಳೆ ಫೋನ್​ ಬಳಸಿದರೆ 15 ದಿನ ಅಮಾನತು, ಘಟಕದಿಂದ ವರ್ಗಾವಣೆ ಶಿಕ್ಷೆ ನೀಡಲಾಗುವುದು. ಈ ಬಗ್ಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್​ ರೆಡ್ಡಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಆರ್ ​ಅವರ ಅಧಕ್ಷತೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.

ಇದನ್ನೂ ಓದಿ: ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬ ಆಚರಿಸಿದ ಬಿಗ್​ಬಾಸ್​ ಖ್ಯಾತಿಯ ಧನರಾಜ್ ಆಚಾರ್ ದಂಪತಿ

bmtc bus(1)

ಶಿಕ್ಷೆ ಏನು..?

  • ಮೊದಲು ಮಾರಣಾಂತಿಕ ಅಪಘಾತಕ್ಕೆ ಕಾರಣವಾಗುವ ಚಾಲಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಬೇಕು. ಜೊತೆಗೆ ವೇತನ ಹೆಚ್ಚಳ ಕಡಿತಗೊಳಿಸುವುದು.
  • ಅಮಾನತು ಅವಧಿ ಮುಗಿದ ಬಳಿಕ ಅಪಘಾತಕ್ಕೆ ಕಾರಣವಾದ ಹಾಗೂ ಹಗೆ ಸಾಧಿಸುವ ಮುಂದಾದರೇ ಅವರನ್ನು ವಿಶೇಷ ತರಬೇತಿ ಪಡೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
  • ಇಷ್ಟಾದರೂ ಮತ್ತೆ ಚಾಲನೆಯತ್ತ ಗಮನ ಹರಿಸದೆ ಇದ್ದರೆ ಎರಡನೇ ಬಾರಿಗೆ ಮಾರಣಾಂತಿಕ ಅಪಘಾತವೆಸಗಿರುವುದು ಕಂಡು ಬಂದರೆ, ಅಂತಹ ಚಾಲಕರನ್ನು ಸೇವೆಯಿಂದಲೇ ವಜಾಗೊಳಿಸಲಾಗುವುದು.
  • ಕರ್ತವ್ಯದ ವೇಳೆ ಫೋನ್​ ಬಳಕೆ ಮಾಡುವುದು ಗೊತ್ತಾದರೇ ಅಂತಹ ಚಾಲಕರಿಗೆ 15 ದಿನಗಳು ಅಮಾನತು ಹಾಗೂ ಘಟಕ ವರ್ಗಾವಣೆ ಮಾಡಲಾಗುವುದು.
  • ಚಾಲಕರಿಗೆ ಮದ್ಯಪಾನ ತಪಾಸಣೆ ನಡೆಸಿದಾಗ ಮದ್ಯ ಸೇವಿಸಿರುವುದು ಖಚಿತವಾದರೇ ನೇರವಾಗಿ ಅವರನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರಿಗರಿಗೆ ಗುಡ್​ನ್ಯೂಸ್​​​​ ಕೊಟ್ಟ ಬಿಎಂಟಿಸಿ; ಬಸ್​ನಲ್ಲಿ ಓಡಾಡೋ ಜನ ಓದಲೇಬೇಕಾದ ಸ್ಟೋರಿ

ಚಾಲಕರಿಗೆ ನೀಡಿದ ಸೂಚನೆಗಳು ಏನು..?

  • ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು
  • ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು
  • ನಿಯಮಗಳನ್ನು ಪಾಲಿಸುವ ಮೂಲಕ ಅನಾನುಕೂಲತೆ ತಪ್ಪಿಸುವುದು
  • ಬಸ್​ನ  ಬ್ರೇಕ್​, ಹೆಡ್​ ಲೈಟ್, ವೈಪರ್​ಗಳು ಸುಸ್ಥಿತಿಯಲ್ಲಿ ಇರುವಂತೆ ಕ್ರಮ ವಹಿಸಿಬೇಕು
  • ರಸ್ತೆ ಉಬ್ಬು ಹಾಗೂ ಗುಂಡಿಗಳು ಇದ್ದಲ್ಲಿ ನಿಧಾನವಾಗಿ ಚಾಲನೆ ಮಾಡಬೇಕು
  • ಇಳಿಜಾರು, ತಿರುವುಗಳಲ್ಲಿ ಎಚ್ಚರಿಕೆಯಿಂದ ಬ್ರೇಕ್ ಒತ್ತುವುದು, ಇಂಡಿಕೇಟರ್​ ಹಾಗೂ ಪಾರ್ಕಿಂಗ್​ ಲೈಟ್​ ಉಪಯೋಗಿಸಬೇಕು
  • ರಾತ್ರಿ ವೇಳೆ ಸೂಕ್ತ ಎಚ್ಚರಿಕೆ ವಹಿಸಿ, ಸಂಜ್ಞೆಗಳಿಲ್ಲದೆ ನಿಂತ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಬೇಕು
  • ಚಾಲನೆ ವೇಳೆ ಫೋನ್​ ಬಳಸುವಂತಿಲ್ಲ
  • ನಿಗದಿತ ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರು ಹತ್ತುವಾಗ ಮತ್ತು ಇಳಿದ ನಂತರ ಬಾಗಿಲು ಮುಚ್ಚಬೇಕು
  • ರಸ್ತೆ ಮಧ್ಯೆ, ಸಿಗ್ನಲ್​ಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಅಥವಾ ಇಳಿಸುವುದು  ನಿಷೇಧಿಸಲಾಗಿದೆ
  • ಶಾಲೆ, ಆಸ್ಪತ್ರೆ, ತಿರುವುಮ ಏರು ರಸ್ತೆ ಹಾಗೂ ಜನರು ಇರುವ ಸ್ಥಳದಲ್ಲಿ ಎಚ್ಚರಿಕೆಯಿಂದ ಬಸ್​ ಚಾಲನೆ ಮಾಡಬೇಕು
  • ಮಳೆ, ಗಾಳಿ ಸಮಯದಲ್ಲಿ ವಾಹನವನ್ನು ನಿಗದಿತ ವೇಗದಲ್ಲಿ ಎಚ್ಚರಿಕೆಯಿಂದ ಚಲಾಯಿಸುವುದು.
  • ಏಕಮುಖ (ಒನ್​ ವೇ) ರಸ್ತೆಯಲ್ಲಿ ಸುರಕ್ಷಿತೆಯಿಂದ ಚಾಲನೆ ಮಾಡುವುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BMTC, BMTC BUS ACCIDENT, ಬೆಂಗಳೂರು
Advertisment