/newsfirstlive-kannada/media/media_files/2025/12/25/chitradurga-bus-accident-2025-12-25-08-28-04.jpg)
ಚಿತ್ರದುರ್ಗದ ಹಿರಿಯೂರು ಬಳಿ ಬಸ್​​ಗೆ ಬೆಂಕಿ ತಗುಲಿ ಘೋರ ದುರಂತ ಸಂಭವಿಸಿದೆ. ಕರಾಳ ಘಟನೆಯಲ್ಲಿ ಐವರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ನಾಲ್ವರು ಹಾಗೂ ಲಾರಿ ಚಾಲಕ ಸೇರಿ ಒಟ್ಟು ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರಂತದಲ್ಲಿ ಸೀಬರ್ಡ್​ ಬಸ್ ಚಾಲಕ ಮೊಹ್ಮದ್ ರಫೀಕ್ ಬದುಕುಳಿದಿದ್ದಾರೆ. ಇದೀಗ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಫೀಕ್, ನಾನು ಬಸ್ ಚಾಲನೆ ಮಾಡುವಾಗ ವೇಗವಾಗಿ ಲಾರಿ ಬಂತು. ಅದನ್ನ ತಪ್ಪಿಸಲು ನಾನು ಹೋದಾಗ ಪಕ್ಕದಲ್ಲಿ ಇನ್ನೊಂದು ಬಸ್ ಬಂತು. ಲಾರಿಯವನ ಡಿಸೇಲ್ ಟ್ಯಾಂಕ್​ಗೆ ಬಂದು ಗುದ್ದಿದ್ದಾನೆ. ನನಗೆ ಆ ಕ್ಷಣದಲ್ಲಿ ಏನು ಆಯ್ತು ಅಂತ ಗೊತ್ತಾಗಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಹಿರಿಯೂರಿನಲ್ಲಿ ಬಸ್ ದುರಂತ ಹೇಗಾಯಿತು? ಕಂಪ್ಲೀಟ್​ ಮಾಹಿತಿ ನೀಡಿದ ಐಜಿಪಿ ರವಿಕಾಂತೇಗೌಡ
/filters:format(webp)/newsfirstlive-kannada/media/media_files/2025/12/25/chitradurga-district-between-hiriyuru-sira-seabird-bus-accident_massive-bus-tragedy_bus-cleaner-2025-12-25-07-46-08.png)
ಬಸ್ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯೆ
ಅಫಘಾತವಾದ ಸೀಬರ್ಡ್ ಬಸ್ ನ ಕ್ಲೀನರ್ ಮೊಹಮ್ಮದ್ ಸಲೀಂ ಪ್ರತಿಕ್ರಿಯಿಸಿ.. ನಾನು ಮಲಗಿದ್ದೆ, ಬಸ್ ಅಪಘಾತವಾದ ರಭಸಕ್ಕೆ ಗ್ಲಾಸ್ ಒಡೆದು ಹೊರಗೆ ಬಿದ್ದಿದ್ದೆ. ಏನಾಗಿದೆ ಅಂತ ಗೊತ್ತಾಗಲಿಲ್ಲ. ನನಗೆ ಕೈಗೆ ಅಷ್ಟೇ ಗಾಯವಾಗಿದೆ. ಅಪಘಾತದಲ್ಲಿ ನಾನು ಬಸ್​ನಿಂದ ಹೊರಗೆ ಬಿದ್ದಿದ್ದೆ ಎಂದು ಮೊಹಮ್ಮದ್ ಸಲೀಂ ಹೇಳಿದ್ದಾರೆ.
ಇದನ್ನೂ ಓದಿ: Bus tragedy Updates LIVE : ಶಿರಾ-ಹಿರಿಯೂರು ಹೆದ್ದಾರಿಯಲ್ಲಿ ಭೀಕರ ಬಸ್ ದುರಂತ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us