ಧರ್ಮಸ್ಥಳದಲ್ಲಿ ಬುರುಡೆ ರಹಸ್ಯ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಒಂದ್ಕಡೆ ಎಸ್ಐಟಿ ಅಧಿಕಾರಿಗಳಿಂದಲೂ ತೀವ್ರ ವಿಚಾರಣೆ ನಡೀತಿದೆ.. ಮತ್ತೊಂದೆಡೆ ಬಂಗ್ಲೆಗುಡ್ಡದಲ್ಲಿ ಹೆ*ಣಗಳು ಸಿಕ್ಕಿದ್ವು ಅಂತ ಸೌಜನ್ಯ ಮಾವ ವಿಠಲ್ಗೌಡ ಸ್ಫೋಟಕ ಹೇಳಿಕೆ ನೀಡಿದ್ದು ಸಂಚಲನ ಸೃಷ್ಟಿಸಿದೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ಬಗ್ಗೆ ದೂರು ಕೊಟ್ಟಿದ್ದ ಚಿನ್ನಯ್ಯನನ್ನು ಕರೆದೊಯ್ದು 17 ಸ್ಪಾಟ್ಗಳಲ್ಲಿ ಎಸ್ಐಟಿ ಆಪರೇಷನ್ ನಡೆಸಿತ್ತು.. ಆದ್ರೆ, ಯಾವ ಬುರುಡೆಯೂ ಸಿಗದೇ ಸದ್ಯ ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲು ಸೇರಿದ್ದಾಗಿದೆ. ಇದೀಗ ಆ ಸ್ಥಾನದಲ್ಲಿ ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟ ಸೌಜನ್ಯ ಮಾವ ವಿಠಲಗೌಡನನ್ನು ಎಸ್ಐಟಿ ತೀವ್ರ ವಿಚಾರಣೆ ನಡೆಸುತ್ತಿದೆ. ವಿಠಲಗೌಡನನ್ನು ಕರೆದೊಯ್ದು ಸ್ಥಳ ಮಹಜರು ಕೂಡ ನಡೆಸಲಾಗಿದೆ.. ವಿಚಾರಣೆ ವೇಳೆಯೇ ಸ್ಫೋಟಕ ಮಾಹಿತಿಗಳು ಬಯಲಾಗಿವೆ.
ಸೌಜನ್ಯ ಮಾವ ವಿಠ್ಠಲ್ ಗೌಡನಿಂದ ಸ್ಫೋಟಕ ಹೇಳಿಕೆ
ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ಎಷ್ಟು ಹುಡುಕಿದ್ರೂ ಬುರುಡೆ ಮಾತ್ರ ಸಿಕ್ಕಿರಲಿಲ್ಲ. ಅತ್ತ ಎಸ್ಐಟಿ ಅಧಿಕಾರಿಗಳಿಂದ ಬುರುಡೆ ಗ್ಯಾಂಗ್ನ ತೀವ್ರ ವಿಚಾರಣೆ ನಡೀತಿದೆ.. ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಪ್ರದೀಪ್ಗೌಡ, ವಿಠಲ್ಗೌಡ ಸೇರಿ ಹಲವರಿಗೆ ವಿಚಾರಣೆಯ ಬಿಸಿ ತಟ್ಟಿದೆ. ನಿನ್ನೆ ಸೌಜನ್ಯ ಮಾವ ವಿಠಲ್ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಎಸ್ಐಟಿ ಸ್ಥಳ ಮಹಜರು ನಡೆಸಿತ್ತು.. ಈ ಬೆನ್ನಲ್ಲೇ ವಿಠಲ್ಗೌಡನ ವಿಡಿಯೋವೊಂದು ವೈರಲ್ ಆಗಿದ್ದು ಅದ್ರಲ್ಲಿ ವಿಠಲ್ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾನೆ.. ಬಂಗ್ಲೆಗುಡ್ಡದಲ್ಲಿ ಮಹಜರು ವೇಳೆ ಹೆಣಗಳ ರಾಶಿ ಸಿಕ್ಕಿದೆ ಅಂತ ಹೇಳಿದ್ದಾನೆ.
ಇದನ್ನೂ ಓದಿ:ಅಗಲಿದ ನಿರ್ದೇಶಕ ಎಸ್ ಎಸ್ ಡೇವಿಡ್ ಗೆ ಸ್ನೇಹಿತರಿಂದ ಶ್ರದ್ಧಾಂಜಲಿ ಜೊತೆ ಅನ್ನಂಸಂತರ್ಪಣೆ
ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಡೌಟೇ ಇಲ್ಲ ಅಂತ ವಿಠಲ್ಗೌಡ ಹೇಳಿದ್ದಾನೆ. ಚಿನ್ನಯ್ಯ, ತಾನ್ಸಿ, ರಂಗ, ಸುಬ್ರಹ್ಮಣ್ಯ ಎಲ್ಲರೂ ಹೇಳಿದ್ದಾರೆ, ಅವರ ಮಾಹಿತಿ ಪ್ರಕಾರ ನಾನು ಮೃತದೇಹ ತೋರಿಸುವೆ, ಮಧ್ಯರಾತ್ರಿ 1 ಗಂಟೆಗೆ ಕರೆದರೂ ತನಿಖೆಗೆ ಬರುತ್ತೇನೆ ಅಂತ ಎಂದಿದ್ದಾನೆ.
ಒಟ್ಟಾರೆ, ಚಿನ್ನಯ್ಯನನ್ನು ಕರೆದೊಯ್ದು ಎಸ್ಐಟಿ ಅಧಿಕಾರಿಗಳು ತಳಾತಳ ಹುಡುಕಿದ್ರೂ ಬುರುಡೆಗಳು ಮಾತ್ರ ಸಿಕ್ಕಿರಲಿಲ್ಲ. ವಿಠಲ್ಗೌಡ ಹೇಳಿಕೆಯಿಂದ ಎಸ್ಐಟಿ ತನಿಖೆಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ. ಚಿನ್ನಯ್ಯನಂತೆ ವಿಠಲ್ಗೌಡನನ್ನು ಕೂಡ ಕರೆದೊಯ್ದು ಎಸ್ಐಟಿ ಮತ್ತೊಮ್ಮೆ ಬುರುಡೆ ಆಪರೇಷನ್ ನಡೆಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ