/newsfirstlive-kannada/media/media_files/2025/08/26/dharmasthala-chennayya-2025-08-26-15-39-12.jpg)
ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸ್ತಿರುವ SIT ಅಧಿಕಾರಿಗಳು ಇವತ್ತು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಆರೋಪಿ ಚೆನ್ನ ಕೊಟ್ಟ ಮಾಹಿತಿ ಆಧರಿಸಿ ಎಸ್ಐಟಿ ಅಧಿಕಾರಿಗಳು ಆತನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸ್ತಿದ್ದಾರೆ.
ಚೆನ್ನನಿಗೆ ಆಶ್ರಯ ಕೊಟ್ಟವರ ಮನೆ ಶೋಧಕ್ಕೆ ಎಸ್ಐಟಿ ಅಧಿಕಾರಿಗಳು ಈಗಾಗಲೇ ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಅಂತೆಯೇ ಮನೆಯಲ್ಲಿ ಮೊಬೈಲ್,ಕ್ಯಾಮರಾ, ಬಟ್ಟೆ ಸೇರಿದಂತೆ ಚಿನ್ನಯ್ಯನಿಗೆ ಸೇರಿದ ವಸ್ತುಗಳನ್ನ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ಫುಡ್, ಟೆಕ್ಸ್ ಟೈಲ್ಸ್, ಸಿಮೆಂಟ್ ಮೇಲಿನ ಜಿಎಸ್ಟಿ ಇಳಿಕೆ ನಿಶ್ಚಿತ, ಎಸಿ, ಟಿವಿ ಬೆಲೆ ಕೂಡ ಇಳಿಕೆ ಗ್ಯಾರಂಟಿ
ಎಸ್ಐಟಿ ಅಧಿಕಾರಿಗಳು ಚೆನ್ನನಿಗೆ ಸೇರಿದ ಒಂದು Andriod ಮೊಬೈಲ್ನನ್ನು ವಶಕ್ಕೆ ಪಡೆದಿದ್ದಾರೆ. ದೂರುದಾರ ಚೆನ್ನನನ್ನು ಇರಿಸಲಾಗಿದ್ದ ರೂಮ್ನಲ್ಲಿ SIT ಶೋಧ ನಡೆಸಿದ್ದು, ಚೆನ್ನನ ವಸ್ತುಗಳನ್ನು SIT ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. SIT ಅಧಿಕಾರಿಗಳು ಮಹೇಶ್ ಶೆಟ್ಡಿ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಕೂಡಾ ವಶಕ್ಕೆ ಪಡೆದಿದ್ದಾರೆ. ಮನೆಯಲ್ಲಿ ಮಹೇಶ್ ಶೆಟ್ಟಿ ಇಲ್ಲ ಎನ್ನಲಾಗ್ತಿದ್ದು ಮನೆಯಲ್ಲಿ ಪತ್ನಿ ಮತ್ತು ಪುತ್ರಿ ಮಾತ್ರ ಇರುವ ಮಾಹಿತಿ ಲಭ್ಯವಾಗಿದೆ.
ಈ ವೇಳೆ ಎಸ್ಐಟಿ ಅಧಿಕಾರಿಗಳು ಚೆನ್ನನ ಕುರಿತ ತಿಮರೋಡಿ ಮನೆಯವರನ್ನೂ ವಿಚಾರಣೆ ನಡೆಸಿದ್ದಾರೆ. ಎಷ್ಟು ದಿನಗಳ ಮೊದಲು ಚಿನ್ನಯ್ಯ ನಿಮ್ಮ ಮನೆಗೆ ಬಂದಿದ್ದ? ಚಿನ್ನಯ್ಯನ ಜೊತೆಯಲ್ಲಿ ಇನ್ನೂ ಯಾಱರು ಮನೆಗೆ ಬರ್ತಿದ್ರು? ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: KL ರಾಹುಲ್, ಪ್ರಸಿದ್ಧ್ ಕೃಷ್ಣ, ಸಿರಾಜ್ಗೆ 2 ತಿಂಗಳು ಸುದೀರ್ಘ ವಿಶ್ರಾಂತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ