/newsfirstlive-kannada/media/media_files/2026/02/01/hubli-kims-1-2026-02-01-10-11-31.jpg)
ಉತ್ತರ ಕರ್ನಾಟಕದ ಜೀವನಾಡಿ, ರಾಜ್ಯದ ಎರಡನೇ ಅತೀ ದೊಡ್ಡ ನಗರ ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ (KIMS) ಆಸ್ಪತ್ರೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಹೈಟೆಕ್ ತಂತ್ರಜ್ಞಾನದ ಈ ಕಾಲದಲ್ಲಿ, ಅತೀ ದೊಡ್ಡ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ನಲ್ಲಿ ಕಂಡುಬಂದ ದೃಶ್ಯಗಳು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಏನಿದು ಘಟನೆ?
ಕಿಮ್ಸ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಕನಿಷ್ಠ ಸೌಲಭ್ಯಗಳೂ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಆವರಣದಲ್ಲಿ ರೋಗಿಗಳನ್ನು ಸ್ಟ್ರೆಚರ್ ಇಲ್ಲದೆ ಕುಟುಂಬಸ್ಥರೇ ಕೈಯಲ್ಲೇ ಎತ್ತಿಕೊಂಡು ಹೋಗುತ್ತಿರುವ ಅಮಾನವೀಯ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ವಯೋವೃದ್ಧ ರೋಗಿಗಳನ್ನು ಎತ್ತಿಕೊಂಡು ಅತ್ತಿತ್ತ ಅಲೆಯುತ್ತಿರುವ ದೃಶ್ಯಗಳು ಆಸ್ಪತ್ರೆಯ ವ್ಯವಸ್ಥೆಯನ್ನು ಅಣಕಿಸುವಂತಿದೆ.
/filters:format(webp)/newsfirstlive-kannada/media/media_files/2026/02/01/hubli-kims-2-2026-02-01-10-13-11.jpg)
ಕಿಮ್ಸ್ನಲ್ಲಿನ ಪ್ರಮುಖ ಸಮಸ್ಯೆಗಳು
ಸ್ಟ್ರೆಚರ್ಗಳ ಕೊರತೆ: ರೋಗಿಗಳನ್ನು ಸಾಗಿಸಲು ಅಗತ್ಯವಿರುವ ಸ್ಟ್ರೆಚರ್ಗಳು ಹಾಗೂ ವೀಲ್ ಚೇರ್ಗಳ ತೀವ್ರ ಅಭಾವ ಎದ್ದು ಕಾಣುತ್ತಿದೆ.
ಸಿಬ್ಬಂದಿ ನಿರ್ಲಕ್ಷ್ಯ: ವಾರ್ಡ್ ಬಾಯ್ ಹಾಗೂ ಆಯಾಗಳ ಕೊರತೆಯಿಂದಾಗಿ, ರೋಗಿಗಳ ಸಂಬಂಧಿಕರೇ ಸ್ಟ್ರೆಚರ್ಗಳನ್ನು ತಳ್ಳಿಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಹಲವರಿಗೆ ಸ್ಟ್ರೆಚರ್ ಹೇಗೆ ಬಳಸಬೇಕೆಂಬ ಅರಿವಿಲ್ಲದೆ ಪರದಾಡುತ್ತಿದ್ದಾರೆ. ಮೂಲಸೌಕರ್ಯದ ಕೊರತೆ: ಸ್ಕ್ಯಾನಿಂಗ್ ಅಥವಾ ಇತರ ತಪಾಸಣೆಗಾಗಿ ರೋಗಿಗಳನ್ನು ಬೇರೆಡೆಗೆ ಕರೆದುಕೊಂಡು ಹೋಗಲು ಆಸ್ಪತ್ರೆಯ ಆಂಬುಲೆನ್ಸ್ ಸಿಗುತ್ತಿಲ್ಲ. ಇದರಿಂದಾಗಿ ಬಡ ರೋಗಿಗಳು ಖಾಸಗಿ ಆಂಬುಲೆನ್ಸ್ಗಳಿಗೆ ಹಣ ತೆತ್ತು ಹೋಗುತ್ತಿದ್ದಾರೆ.
ಇದನ್ನೂ ಓದಿ: ಇಶಾನ್ ಕಿಶನ್ ಆರ್ಭಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್; 4-1 ಅಂತರದಲ್ಲಿ T20 ಸರಣಿ ಗೆದ್ದ ಸೂರ್ಯ..!
/filters:format(webp)/newsfirstlive-kannada/media/media_files/2026/02/01/hubli-kims-2026-02-01-10-12-55.jpg)
ಹೈಟೆಕ್ ನಗರದ ಪರಿಸ್ಥಿತಿ
ಯಾವುದೋ ಕುಗ್ರಾಮದ ಪುಟ್ಟ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದ್ದರೆ ಒಂದು ಮಾತು. ಆದರೆ, ದಿನಕ್ಕೆ ಸಾವಿರಾರು ರೋಗಿಗಳು ಬರುವ, ನೂರಾರು ವೈದ್ಯರಿರುವ ಹುಬ್ಬಳ್ಳಿ ಕಿಮ್ಸ್ನಲ್ಲಿ ಇಂತಹ ಸ್ಥಿತಿ ಬಂದಿರುವುದು ದುರದೃಷ್ಟಕರ. ಕೈಯಲ್ಲಿ ರೋಗಿಯನ್ನು ಎತ್ತಿಕೊಂಡು ರಸ್ತೆ ಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿರುವ ದೃಶ್ಯಗಳು ಆಸ್ಪತ್ರೆಯ ಆಡಳಿತ ಮಂಡಳಿಯ ವೈಫಲ್ಯಕ್ಕೆ ಸಾಕ್ಷಿಯಂತಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿಮ್ಸ್ ವೈದ್ಯಕೀಯ ಅಧೀಕ್ಷಕರು, "ನಮ್ಮಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಪ್ರತಿ ವಾರ್ಡ್ನಲ್ಲಿ ದಿನಕ್ಕೆ 7 ರಿಂದ 8 ಜನ ಆಯಾಗಳು ಹಾಗೂ ವಾರ್ಡ್ ಬಾಯ್ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆಯಬಾರದು, ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕೊನೆಯ ಮಾತು
ಅಧಿಕಾರಿಗಳು ಏನೇ ಸಮರ್ಥನೆ ನೀಡಿದರೂ, ರೋಗಿಗಳ ಪರದಾಟ ಮಾತ್ರ ನಿಂತಿಲ್ಲ. "ಉತ್ತರ ಕರ್ನಾಟಕದ ಏಮ್ಸ್" ಆಗಬೇಕೆಂದು ಕನಸು ಕಾಣುತ್ತಿರುವ ಕಿಮ್ಸ್, ಮೊದಲು ರೋಗಿಗಳಿಗೆ ಕನಿಷ್ಠ ಗೌರವ ಹಾಗೂ ಸೌಲಭ್ಯ ನೀಡುವತ್ತ ಗಮನ ಹರಿಸಬೇಕಿದೆ.
ಇದನ್ನೂ ಓದಿ: Union Budget: ಬಜೆಟ್ ಮಂಡನೆಗೆ ಕ್ಷಣಗಣನೆ.. ಕೇಂದ್ರದಿಂದ ಯಾರಿಗೆ ಗುಡ್​ನ್ಯೂಸ್..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us