ನಾಳೆ BMTC, KSRTC ರಸ್ತೆಗೆ ಇಳಿಯೋದು ಡೌಟು.. ಕುತೂಹಲ ಮೂಡಿಸಿದ ಸಿಎಂ ಸಭೆ

ಸಾರಿಗೆ ನೌಕರರು ನಾಳೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ 4 ನಿಗಮಗಳಿಗೆ ಕೋಟಿ ಕೋಟಿ ನಷ್ಟವಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ನೌಕರರ ಒಕ್ಕೂಟ ಹಾಗೂ ಇಲಾಖೆಯ ಜೊತೆ ಮಹತ್ವದ ಸಭೆ ನಡೆಸ್ತಿದ್ದಾರೆ.

author-image
Ganesh
bmtc strike
Advertisment

ಬೆಂಗಳೂರು: ಸಾರಿಗೆ ನೌಕರರು ನಾಳೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ 4 ನಿಗಮಗಳಿಗೆ ಕೋಟಿ ಕೋಟಿ ನಷ್ಟವಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ನೌಕರರ ಒಕ್ಕೂಟ ಹಾಗೂ ಇಲಾಖೆಯ ಜೊತೆ ಮಹತ್ವದ ಸಭೆ ನಡೆಸ್ತಿದ್ದಾರೆ. ಹೀಗಾಗಿ ನಾಳೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​​ಗಳು ರಸ್ತೆಗೆ ಇಳಿಯುತ್ವಾ? ಇಲ್ವಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ​.. ಸುದೀಪ್​ ಹೊಸ ಲುಕ್​ನ ಸಿಕ್ರೇಟ್ ಏನು..?

ಸರ್ಕಾರದ ಸಾಧ್ಯತೆ ನಿರ್ಧಾರಗಳೇನು?

  • ಬೇಡಿಕೆ ಈಡೇರಿಕೆಗೂ ಮುನ್ನ ನೌಕರರ ಮನವೊಲಿಕೆಗೆ ಮುಂದಾಗುವ ಸಾಧ್ಯತೆ
  • ಸ್ವಲ್ಪ ಸಮಯವಕಾಶ ಕೇಳುವ ಸಾಧ್ಯತೆ
  • ಕನಿಷ್ಠ ಸಮಯಾವಕಾಶಕ್ಕೆ ಮನವಿ ಮಾಡಬಹುದು
  • ಹಂತ ಹಂತವಾಗಿ ಅರಿಯರ್ಸ್ ಬಿಡುಗಡೆ ಮಾಡುವುದಾಗಿ ಭರವಸೆ ನೀಡಬಹುದು
  • ಅರಿಯರ್ಸ್ ಬದಲಾಗಿ ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಬಹುದು.
  • ವಜಾಗೊಂಡಿರುವ ನೌಕರರ ಮರುನೇಮಕಕ್ಕೆ ಸೂಚನೆ ನೀಡುವ ಸಾಧ್ಯತೆ
  • ಸದ್ಯಕ್ಕೆ ಬೀಸೋದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಸಾಧ್ಯತೆ.

ಸಾರಿಗೆ ನೌಕರರ ಬೇಡಿಕೆಗಳು?

  • 38 ತಿಂಗಳ ವೇತನದ ಅರಿಯರ್ಸ್ ಬಾಕಿ ಹಣ ನೀಡಬೇಕು
  • ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು
  • ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು
  • ನಗದು ರಹಿತ ವೈದ್ಯಕೀಯ ಸೌಲಭ್ಯ
  • ನಮ್ಮ ಹಕ್ಕಿನ ರಜೆ
  • 1-1-2024 ರಿಂದ ವೇತನ ಜಾರಿಗೊಳಿಸುವುದು
  • ಉತ್ತಮ ಕ್ಯಾಂಟೀನ್ ವ್ಯವಸ್ಥೆ
  • ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ
  • ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು
  • ಸಾರಿಗೆ ನಿಗಮದ ವಿದ್ಯುತ್‌ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು
  • ಈ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ದತಿ ಕೈಬಿಡಬೇಕು


ಇದನ್ನೂ ಓದಿ:ಧರ್ಮಸ್ಥಳ ಬುರುಡೆ ರಹಸ್ಯ ತಿಳಿಯಲು SIT ಒಂದು ದಿನಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಿದೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾರಿಗೆ ನೌಕರರ ಪ್ರತಿಭಟನೆ
Advertisment