/newsfirstlive-kannada/media/media_files/2025/12/14/anajli-nimbalkar-2025-12-14-14-27-38.jpg)
ಮಾಜಿ ಶಾಸಕಿ, ವೈದ್ಯೆ ಅಂಜಲಿ ನಿಂಬಾಳ್ಕರ್ (Anjali Nimbalkar) ಅವರ ಈ ಮಾನವೀಯತೆ ಸೇವೆಗೆ ನೀವು ಸೆಲ್ಯೂಟ್ ಹೊಡೆಯಲೇಬೇಕು. ವಿಮಾನ ಹಾರಾಟದ ಅವಧಿಯಲ್ಲಿ, ಆಕಾಶಮಧ್ಯದಲ್ಲಿ ಪ್ರಾಣ ಸಂಕಷ್ಟಕ್ಕೆ ಸಿಲುಕಿದ್ದ ವಿದೇಶಿ ಮಹಿಳೆಯೊಬ್ಬರ ಜೀವ ಉಳಿಸಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಅಂಜಲಿ ನಿಂಬಾಳ್ಕರ್​ ಅವರ ಈ ಪುಣ್ಯದ ಕೆಲಸಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಗಿದ್ದೇನು..?
ಕಾಂಗ್ರೆಸ್​ ಇವತ್ತು ದೆಹಲಿಯಲ್ಲಿ ‘ವೋಟ್ ಚೋರಿ’ ವಿರುದ್ಧ ಪ್ರತಿಭಟನೆ ನಡೆಸ್ತಿದೆ. ಈ ಪ್ರತಿಭಟನೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಅಂಜಲಿ ನಿಂಬಾಳ್ಕರ್ ನಿನ್ನೆ ಗೋವಾ ದಿಂದ ದೆಹಲಿಗೆ ಪ್ರಯಾಣಿಸಿದ್ದರು. ವಿಮಾನವು ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ ಅಮೆರಿಕನ್ ಜೆನ್ನಿ ಎಂಬ ಮಹಿಳೆ ಒಬ್ಬರು ಏಕಾಏಕಿ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಇತರೆ ಪ್ರಯಾಣಿಕರು, ಗಾಬರಿಯಾಗಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಅಂಜಲಿ ನಿಂಬಾಳ್ಕರ್, ತಮ್ಮ ಜಾಗದಿಂದ ಅಲ್ಲಿಗೆ ದೌಡಾಯಿಸಿ ತೀವ್ರ ಅಸ್ವಸ್ಥಗೊಂಡಿದ್ದ ರೋಗಿಗೆ ಕಾರ್ಡಿಯೋಪಲ್ಮನರಿ ರೆಸಸ್ಸಿಟೇಶನ್ (CPR) ಮಾಡಿದ್ದಾರೆ.
ಇದನ್ನೂ ಓದಿ: ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!
/filters:format(webp)/newsfirstlive-kannada/media/media_files/2025/12/14/anajli-nimbalkar-2-2025-12-14-14-29-45.jpg)
ಆಗ ಅಮೆರಿಕನ್ ಮಹಿಳೆ ಕೊಂಚ ಚೇತರಿಸಿಕೊಂಡಿದ್ದಾರೆ. ಆಗ ಸೀಟಿನಲ್ಲಿ ಒರಗಿಸಿ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ನಿಂಬಾಳ್ಕರ್​, ಅವರ ಪಕ್ಕದಲ್ಲೇ ನಿಂತು, ಅವರಿಗೆ ಬೇಕಾಗಿರುವ ವೈದ್ಯಕೀಯ ಅಗತ್ಯಗಳ ಕಡೆಗೆ ನಿರಂತರ ಗಮನ ಹರಿಸಿ ಧೈರ್ಯ ತುಂಬಿದ್ದಾರೆ. ಆದರೂ ಮತ್ತೆ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.
ಕೊನೆಗೆ ಮತ್ತೆ ಸಿಪಿಆರ್​ ಮಾಡಿ ಜೆನ್ನಿ ಜೀವ ಉಳಿಸಿದ್ದಾರೆ. ಅಷ್ಟೇ ಅಲ್ಲದೇ, ವಿಮಾನವು ನಿಲ್ದಾಣ ಪ್ರವೇಶ ಮಾಡುವಷ್ಟರಲ್ಲೇ, ಸಿಬ್ಬಂದಿ ಜೊತೆಗೆ ಸಮನ್ವಯ ಸಾಧಿಸಿ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿಸಿದ್ದರು. ವಿಮಾವು ಲ್ಯಾಂಡ್ ಆಗುತ್ತಿದ್ದಂತೆಯೇ, ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸುವಂತೆ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಕೊಲ್ಹಾಪುರಿ ಚಪ್ಪಲಿ’ಗಳಿಗೆ ಗ್ಲೋಬಲ್ ಟಚ್.. ಈಗ ಒಂದು ಜೋಡಿಗೆ 84,000 ರೂಪಾಯಿ..!
/filters:format(webp)/newsfirstlive-kannada/media/media_files/2025/12/14/anajli-nimbalkar-1-2025-12-14-14-30-17.jpg)
ನಿರ್ಜಲೀಕರಣ, ಆಹಾರ ಸಮಸ್ಯೆ ಅಥವಾ ಯಾವುದೋ ಮಾತ್ರೆ ಸೇವಿಸಿದಾಗ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ಕೆಲವೇ ಸೆಕೆಂಡ್ಗಳಲ್ಲಿ ತುರ್ತು ಚಿಕಿತ್ಸೆ ಸಿಗದಿದ್ದರೆ, ಹೃದಯ ಬಡಿತ ನಿಂತು ಹೋಗುತ್ತದೆ. ವೈದ್ಯ ಸಲಕರಣೆಗಳು ಇದ್ದಾಗಲೂ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ. ಇಂಥ ತುರ್ತು ಸಂದರ್ಭಗಳಲ್ಲಿ ವಿಮಾನಗಳಲ್ಲಿ ಕನಿಷ್ಠ ಸೌಲಭ್ಯ ಇರಬೇಕು.
ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕಿ
ನಿಂಬಾಳ್ಕರ್ ಅವರ ಈ ಮಾನವೀಯ ಕೆಲಸಕ್ಕೆ ವಿಮಾನದಲ್ಲಿನ ಸಿಬ್ಬಂದಿ ಧನ್ಯವಾದ ತಿಳಿಸಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಿಂಬಾಳ್ಕರ್ ಅವರನ್ನು ಶ್ಲಾಘಿಸಿದ್ದಾರೆ.
Deeply moved and incredibly proud to hear about the remarkable presence of mind and compassion shown by former Khanapur MLA Dr. Anjali Nimbalkar during a Goa–New Delhi flight. When an American woman suffered a medical emergency mid-air, Dr. Anjali instantly rose to the occasion… pic.twitter.com/CE65RVxl0Q
— Siddaramaiah (@siddaramaiah) December 14, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us